ಬಣ್ಣಗಳ ಓಕುಳಿಯಿಂದೆದ್ದ ರಂಜಕ ವಾಸ್ತವ – ಗುಲಾಲ್
(ಅನುರಾಗ್ ಕಶ್ಯಪ್ ನಿರ್ದೇಶನದ ‘ಗುಲಾಲ್’ ಚಿತ್ರ ಕುರಿತು ಕೆಲವು ಮಾತು)
- ಬಿ.ಸುರೇಶ
ಭಾರತೀಯ ಜನಪ್ರಿಯ ಚಿತ್ರಗಳಲ್ಲಿ ಸಮಕಾಲೀನ ರಾಜಕೀಯವನ್ನು ಅದರ ಯಥಾಸ್ಥಿತಿಯಲ್ಲಿ ಹಿಡಿಯುವ ಪ್ರಯತ್ನ ಮಾಡಿದ ಚಿತ್ರಗಳ ಸಂಖ್ಯೆ ತೀರಾ ಕಡಿಮೆ. ರಾಜಕೀಯ ಸಿನಿಮಾಗಳು ಎಂಬ ಹಣೆಪಟ್ಟಿ ಹೊತ್ತು ಬಂದಂತಹ ಚಿತ್ರಗಳು ಬಹುಪಾಲು ಕನ್ನಡದ ‘ಅಂತ’ದ ಮಾದರಿಯದು. ಅಲ್ಲಿ ರಾಜಕಾರಣಿ ಖಳನಾಗಿರುತ್ತಾನೆ. ನಾಯಕ ಆತನನ್ನು ಗುಂಡಿಟ್ಟು ಕೊಲ್ಲುತ್ತಾನೆ. ಅಷ್ಟೆ. ಹಳೆಯ ನಾಯಕ ಪ್ರಧಾನ ಕತೆಗೆ ರಾಜಕಾರಣದ ಪೋಷಾಕು ತೊಡಿಸಿದ ಕತೆಗಳವು. ಅವುಗಳನ್ನು ರಾಜಕೀಯ ಚಿತ್ರಗಳೆಂದು ಕರೆಯಲಾಗದು. ಆದರೆ ಹೊಸಅಲೆಯ ಪ್ರಭಾವದಿಂದಲೇ ಹುಟ್ಟಿದ ‘ಅಂಕುರ್’, ‘ಅರ್ಧಸತ್ಯ’ ಮುಂತಾದ ಚಿತ್ರಗಳು ಇಂತಹವಲ್ಲ. ಅವು ಸಮಕಾಲೀನ ಪರಿಸ್ಥಿತಿಯನ್ನು ವಿವರಿಸಿ, ಇವುಗಳಲ್ಲಿ ಸಿಕ್ಕಿ ನರಳುವ ಶ್ರೀಸಾಮಾನ್ಯನ ಕತೆಯನ್ನು ಹೇಳುತ್ತವೆ. ಹೀಗಾಗಿಯೇ ಇಂತಹ ಕೆಲವು ಚಿತ್ರಗಳು ಬಹುಕಾಲ ಜನಮಾನಸದೊಳಗೆ ಶಾಶ್ವತ ಸ್ಥಾನ ಪಡೆಯುತ್ತವೆ. ಇಂತಹ ನೆನಪಲ್ಲುಳಿಯುವ ಚಿತ್ರಗಳ ಸಾಲಿಗೆ ಸೇರಬಹುದಾದ ಮತ್ತೊಂದು ಸಿನಿಮಾ ಅನುರಾಗ್ ಕಶ್ಯಪ್ ಅವರ ನಿರ್ದೇಶನದ ‘ಗುಲಾಲ್’.
Archive for the 'ಚಿತ್ರ ವಿಮರ್ಷೆ' Category
ಬಣ್ಣಗಳ ಓಕುಳಿಯಿಂದೆದ್ದ ರಂಜಕ ವಾಸ್ತವ – ಗುಲಾಲ್ (ಅನುರಾಗ್ ಕಶ್ಯಪ್ ನಿರ್ದೇಶನದ ‘ಗುಲಾಲ್’ ಚಿತ್ರ ಕುರಿತು ಕೆಲವು ಮಾತು)
Published February 12, 2011 ಚಿತ್ರ ವಿಮರ್ಷೆ Leave a CommentTags: ಚಿತ್ರವಿಮರ್ಶೆ
ಸಿನಿಮಾದೊಳಗೊಂದು ಸಿನಿಮಾ ಕೊಟ್ಟ ಅಪರೂಪದ ಅನುಭವ
Published July 25, 2010 ಚಲನಚಿತ್ರ , ಚಿತ್ರ ವಿಮರ್ಷೆ 2 Comments(ಅತನು ಘೋಷ್ ನಿರ್ದೇಶನದ ಬೆಂಗಾಲಿ ಸಿನಿಮಾ ‘ಅಂಗ್ಷುಮನರ್ ಚೋಬಿ’ ಕುರಿತ ಬರಹ -ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕಕ್ಕೆ ಎಂದು ಬರೆದದ್ದು)
ಕನ್ನಡ ಚಿತ್ರರಂಗದೊಳಗೆ ಆಗುತ್ತಿರುವ ಪ್ರಯೋಗಗಳಿಗಿಂತ ಭಿನ್ನ ಪ್ರಯೋಗಗಳು ಮಲೆಯಾಳ ಮತ್ತು ಬಂಗಾಳಿ ಸಿನಿಮಾಗಳಲ್ಲಿ ಆಗುತ್ತಿರುವುದಕ್ಕೆ ಹೊಸ ತಲೆಮಾರಿನವರ ಆಗಮನ ಮತ್ತು ಅವರ ಹಿನ್ನೆಲೆ ಕಾರಣ. ಈಗ ನಿಮ್ಮೆದುರಿಗೆ ನಾನು ಚರ್ಚಿಸಲು ಹೊರಟಿರುವ ‘ಅಂಗ್ಷುಮನರ್ ಚೋಬಿ’ ಸಹ ಅಂತಹುದೇ ಕಾರಣಕ್ಕಾಗಿ ವಿಶಿಷ್ಟ ಸಿನಿಮಾ ಆಗಿದೆ. ಈ ಸಿನಿಮಾದ ನಿರ್ದೇಶಕ ‘ಅತನು ಘೋಷ್’. ಇದು ಆತನ ಮೊದಲ ಪೂರ್ಣಪ್ರಮಾಣದ ಕಥಾಚಿತ್ರ. ಇದಕ್ಕೆ ಮುನ್ನ ಆತ ಜಾಹೀರಾತು ಚಿತ್ರಗಳಿಗೆ ಮತ್ತು ಸಾಕ್ಷ್ಯ ಚಿತ್ರಗಳಿಗೆ ಕೆಲಸ ಮಾಡುತ್ತಿದ್ದ. ಇಂತಹ ಹಿನ್ನೆಲೆಯಿಂದಾಗಿಯೇ ಸಿನಿಮಾ ಕಟ್ಟುವ ಭಾಷೆ ಮತ್ತು ಸಿನಿಮಾದ ಬಣ್ಣಗಳ ಬಳಕೆಯಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ. ಆ ಬದಲಾವಣೆಯ ಪರಿಣಾಮವನ್ನು ಈ ಸಿನಿಮಾದಲ್ಲಿ ನೀವೂ ನೋಡಬಹುದು.
ಒಂದು ವಿಶ್ಲೇಷಣೆ ಮತ್ತು ಆತ್ಮವಿಮರ್ಶೆಗೆ ಆಹ್ವಾನ
Published March 22, 2010 ಇಂದಿನ ಚಿಂತೆ! , ಚಿತ್ರ ವಿಮರ್ಷೆ 2 CommentsTags: ಚಲನಚಿತ್ರ, ಚಿತ್ರ ವಿಮರ್ಶೆ, ಸಿನಿಮಾ
ಟಾಂ ಟ್ವೈಕರ್ ನಿರ್ದೇಶನದ ‘ರನ್ ಲೋಲಾ ರನ್’ ಕುರಿತು ಲೇಖನ
(‘ಸಾಂಗತ್ಯ’ ಪತ್ರಿಕೆಗಾಗಿ ಬರೆದ ಲೇಖನ)
ಆ ಸಿನಿಮಾದ ಅವಧಿ ೮೧ ನಿಮಿಷ (ಆರಂಭಿಕ ಮತ್ತು ಕಡೆಯ ಶೀರ್ಷಿಕೆಗಳನ್ನು ಬಿಟ್ಟು) ಅದರಲ್ಲಿ ೧೫೮೧ ಛೇದಗಳು (ಷಾಟ್ಗಳು), ಕಟ್ಸ್, ಡಿಸಾಲ್ವ್, ಫೇಡ್, ವೈಪ್ ಎಲ್ಲವೂ ಸೇರಿ. ಪ್ರತೀ ಷಾಟ್ನ ಅವಧಿ ಸರಿಸುಮಾರು ೨ ಸೆಕೆಂಡುಗಳು. ಅಂದರೆ ನೋಡುಗನ ಎದುರಿಗೆ ನಿರಂತರ ದೃಶ್ಯ ಬದಲಾವಣೆಯ ಚಮತ್ಕಾರ. ಇಂತಹದೊಂದು ಅನೇಕ ಷಾಟ್ಗಳ ಸಿನಿಮಾ ಸಮಕಾಲೀನ ದಿನಗಳಲ್ಲಿ ಅಪರೂಪವಲ್ಲ. ಆದರೆ ೧೯೯೯ರಲ್ಲಿ ಇದು ಹೊಸ ಪ್ರಯೋಗ. ಆಗ ಜಾಹೀರಾತು ಚಿತ್ರಗಳಲ್ಲಿಯೂ ೩೦ ಸೆಕೆಂಡಿಗೆ ೧೫ ಷಾಟ್ ಬಳಸುತ್ತಾ ಇರಲಿಲ್ಲ. ಪ್ರತೀ ಷಾಟ್ನ ಅವಧಿ ದೊಡ್ಡದಿರಬೇಕು ಎಂಬ ಅಲಿಖಿತ ನಿಯಮವೊಂದು ಆಗಿನ ಸಿನಿಮಾ ನಿರ್ಮಿತಿಯಲ್ಲಿ ಇತ್ತು. ಈಗ ಅದು ೩೦ ಸೆಕೆಂಡಿನ ಜಾಹೀರಾತಿಗೆ ೫೦ ಚಿತ್ರಿಕೆಯಾದರೂ ಸಾಲದು ಎನ್ನುವವರೆಗೆ ಬೆಳೆದಿದೆ. ಅಮೇರಿಕನ್ ಜನಪ್ರಿಯ ಸಿನಿಮಾಗಳಲ್ಲಿ ಮತ್ತು ಟೆಲಿವಿಷನ್ ಜಾಹೀರಾತಿನಲ್ಲಿ ಹೀಗೆ ಅನೇಕ ಷಾಟ್ಗಳನ್ನ ಬಳಸಿ ಸಿನಿಮಾದ ‘ಗತಿ’ಯನ್ನು ಹೆಚ್ಚಿಸುವ ಅಭ್ಯಾಸ ಚಾಲ್ತಿಗೆ ಬಂದಿತ್ತು. ವಿಶೇಷವಾಗಿ ಮ್ಯೂಸಿಕ್ ವಿಡಿಯೋ ಪ್ರಾಕರದಲ್ಲಿ ಈ ಪ್ರಯೋಗಗಳು ಮೊದಲು ಆದವು. ಆದರೆ ಯೂರೋಪಿಯನ್ ಮತ್ತು ಇತರ ದೇಶಗಳ ಸಿನಿಮಾಗಳಲ್ಲಿ ಇಂತಹ ’ವೇಗ’ವರ್ಧಕ ಬಳಸುವ ಅಭ್ಯಾಸ ಇರಲಿಲ್ಲ. ಇಂತಹ ಪ್ರಯೋಗವನ್ನು ಮೊದಲಬಾರಿಗೆ ಜರ್ಮನ್ ಸಿನಿಮಾದಲ್ಲಿ ಮಾಡಿದವನು ಟಾಂ ಟ್ವೈಕರ್. ‘ರನ್ ಲೋಲಾ ರನ್’ ಸಿನಿಮಾದಿಂದಾಗಿ ಈತ ಜರ್ಮನಿಯ ಪ್ರಖ್ಯಾತ ಸಿನಿಮಾ ನಿರ್ದೇಶಕರ ಪಟ್ಟಿಗೆ ಸೇರಿದ. “ಈತನ ಇನ್ನಿತರ ಚಿತ್ರಗಳು ಹೇಗಿದ್ದವು? ಅವುಗಳ ‘ಗತಿ’ ಏನು?” ಎಂದು ಆ ವ್ಯಕ್ತಿಯ ಚಾರಿತ್ರಿಕ ಮತ್ತು ಸೃಜನಾತ್ಮಕ ಮೌಲ್ಯಮಾಪನ ಮಾಡಲು ಈ ಲೇಖನ ನಾನು ಬರೆಯುತ್ತಿಲ್ಲ. ಹಾಗಾಗಿ ‘ರನ್ ಲೋಲಾ ರನ್’ ಸಿನಿಮಾಗೆ ಮಾತ್ರ ಸೀಮಿತವಾಗಿ ನಿಮ್ಮೆದುರು ಒಂದು ಚರ್ಚೆಯನ್ನು ಇಡುತ್ತಾ ಇದ್ದೇನೆ. ಆ ಮೂಲಕ ದೃಶ್ಯ ಭಾಷೆಯನ್ನು ಕಟ್ಟುವವರ ಎದುರಿಗೆ ಇರುವ ಸವಾಲುಗಳು ಮತ್ತು ಅದನ್ನು ಗ್ರಹಿಸುವವರ ಎದುರಿಗೆ ಇರುವ ಆಯ್ಕೆಗಳನ್ನು ಕುರಿತು ಮಾತಾಡುವ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಈ ಚಿತ್ರದ ಹಿನ್ನೆಲೆಯಲ್ಲಿ ನಮ್ಮ ಕನ್ನಡ ಚಿತ್ರರಂಗದ ಎದುರಿಗೆ ಇರುವ ಸಮಕಾಲೀನ ಆಯ್ಕೆಗಳನ್ನು ಕುರಿತು ಚರ್ಚಿಸುತ್ತೇನೆ.
Continue reading ‘ಒಂದು ವಿಶ್ಲೇಷಣೆ ಮತ್ತು ಆತ್ಮವಿಮರ್ಶೆಗೆ ಆಹ್ವಾನ’
ಸಿನಿಮಾ ಎಂಬುದು ಪ್ರತಿಮೆಗಳ (ಇಮೇಜಸ್) ಸಮುದ್ರ. ಪ್ರತಿಕ್ಷಣವೂ ಕಣ್ಣ ಮುಂದೆ ಸುಳಿಯುವ ದೃಶ್ಯವು ಮಿದುಳಿಗೆ ರವಾನಿಸುವ ವಿವರಗಳು, ಅದರೊಂದಿಗೆ ತಲುಪುವ ಶ್ರವ್ಯ ವಿವರಗಳೂ ಸೇರಿ, ಚಲನಚಿತ್ರದ ಪ್ರತಿ ‘ಪ್ರತಿಮೆ’ಯು ಮೂಡಿಸುವ ಅರ್ಥ ವಿನ್ಯಾಸವೂ ಸಹ ದೊಡ್ಡದು. ಈ ಹಿನ್ನೆಲೆಯಲ್ಲಿಯೇ ಪ್ರತೀ ಚಿತ್ರ ನಿರ್ದೇಶಕನೂ ಚಿತ್ರಗಳನ್ನ ಕಟ್ಟುತ್ತಾನೆ. ಪ್ರತಿ ಚಿತ್ರಿಕೆಯು ಅನುಭವವಾಗಿ ನೋಡುಗನ ಮನಸ್ಸಿನಲ್ಲಿ ಇಳಿಯುತ್ತಾ ಸಾಗಿದಂತೆ ಚಿತ್ರ ಕಟ್ಟುವವನ ಮತ್ತು ಚಿತ್ರ ನೋಡುವವನ ನಡುವೆ ಒಂದು ಅವಿನಾಭಾವ ಸಂಬಂಧ ಉಂಟಾಗುತ್ತದೆ. ಈ ಸಂಬಂಧ ಕಣ್ಣಿಗೆ ಕಾಣದ್ದು. ಆದರೆ ಮನಸ್ಸಿಗೆ ತಿಳಿಯುವಂತಹದು. ಆದ್ದರಿಂದಲೇ ನಾವು ನೋಡುವ ಪ್ರತಿ ಚಿತ್ರವನ್ನೂ ಇದು ಇಂತಹವರದು ಎಂದು ಗುರುತಿಸಿಕೊಳ್ಳುವ ಶಕ್ತಿ ಪಡೆಯುತ್ತೇವೆ. ಹಾಗೆಯೇ ನಮಗೆ ‘ಇದು ವ್ಯಾನ್ಗೋದು’, ‘ಇದು ಡಾಲಿಯದು’, ‘ಇದು ರವಿವರ್ಮನದು’, ‘ಇದು ವಾಸುದೇವ್ದು’ ಎಂಬುದು ತಿಳಿಯುತ್ತದೆ. ಇದನ್ನ ಸಿಗ್ನೆಚರ್ ಆಫ್ ದ ಆರ್ಟಿಸ್ಟ್ ಎಂದು ಹೇಳುತ್ತಾ ನಮ್ಮ ಚಲನಚಿತ್ರಗಳನ್ನು ನೋಡುವುದಾದರೆ, ನಮ್ಮ ಕನ್ನಡದ ಸಂದರ್ಭದಲ್ಲಿ ಗಿರೀಶ್ ಕಾಸರವಳ್ಳಿಯವರ ಸಿನಿಮಾಗಳನ್ನ ಅವರು ಸೃಷ್ಟಿಸುವ ಪ್ರತಿಮೆಯನ್ನ ನೋಡಿದ ಕೂಡಲೇ ಗುರುತಿಸಬಹುದು. ಮನೆಯ ಬಾಗಿಲು ಹಿಡಿದು ಯಾವುದೋ ಕಾತುರದಲ್ಲಿ ನಿಂತ ಹೆಣ್ಣು, ಅವಳ ಪಕ್ಕದಲ್ಲಿ ಒಬ್ಬ ಕುತೂಹಲದ ಕಣ್ಣಿನ ಬಾಲಕನ ಪ್ರತಿಮೆ ‘ಘಟಶ್ರಾದ್ಧ’ವನ್ನು ನೆನಪಿಸುತ್ತದೆ. ದೈನೇಸಿಯಂತೆ ಅಂಗಲಾಚುವ ಮುದುಕನ ಪ್ರತಿಮೆ ‘ತಬರನಕಥೆ’ಯ ನೆನಪನ್ನು ತರುತ್ತದೆ. ದೋಣಿಯನ್ನ ತಾನೇ ನಡೆಸುವ ಹೆಣ್ಣಿನ ಚಿತ್ರ ‘ದ್ವೀಪ’ವನ್ನ, ಮನೆಯ ಬಾಗಿಲಿಗೆ ಹಾಕಿದ ತೆರೆಯನ್ನ ಹಿಡಿದು ಯಾವುದೋ ಆತಂಕದಲ್ಲಿ ನೋಡುತ್ತಿರುವ ಹೆಣ್ಣು ‘ಹಸೀನಾ’ವನ್ನ… ಹೀಗೆ ಗಿರೀಶರು ಒಂದು ಪ್ರತಿಮೆಯ ಮೂಲಕ ಒಂದು ಅನುಭವವನ್ನ ನೋಡುಗನ ಕಪಾಟಿನಲ್ಲಿ ಇರಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಈಚೆಗಿನ ಅವರ ಚಿತ್ರ ‘ಗುಲಾಬಿಟಾಕೀಸು’ ಕೂಡ ಅಂಥಾದ್ದೇ ಒಂದು ಗಿರೀಶ್ ಚಿತ್ರ ಎಂದು ಗುರುತಿಸಬಹುದಾದ್ದು. ತಗಡಿನ ಟ್ರಂಕಿನ ಮೇಲೆ ಭದ್ರವಾಗಿ ಭೂಮಿಗೆ ಬೇರಿಳಿಸುತ್ತಾ ಇದ್ದೇನೆ ಎಂಬಂತೆ ಕೂತಿರುವ ಹೆಂಗಸು ‘ಗುಲಾಬಿ’ ಯಾಗಿ ನೋಡುಗನ ಮನಸ್ಸಲ್ಲಿ ಉಳಿಯುತ್ತಾಳೆ. ಪ್ರಾಯಶಃ ಹೋರಾಟ ಮಾಡುವ ಎಲ್ಲಾ ಹೆಂಗಸರಿಗೆ ಸೂಚಿಯಾಗಿ ಇದನ್ನೇ ಮುಂದೊಮ್ಮೆ ಬಳಸಬಹುದೇನೋ?
ಇತ್ತೀಚಿನ ಪ್ರತಿಕ್ರಿಯೆಗಳು…