<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	xmlns:georss="http://www.georss.org/georss" xmlns:geo="http://www.w3.org/2003/01/geo/wgs84_pos#" xmlns:media="http://search.yahoo.com/mrss/"
	>

<channel>
	<title>ಬಿ. ಸುರೇಶ ಹೇಳಿದಂತೆ...</title>
	<atom:link href="http://bsuresha.wordpress.com/feed/" rel="self" type="application/rss+xml" />
	<link>http://bsuresha.wordpress.com</link>
	<description>ಬೀಸೋ ದೊಣ್ಣೆ... ಬೀಸ್ತಾ ಇದೆ...</description>
	<lastBuildDate>Thu, 03 Nov 2011 19:46:01 +0000</lastBuildDate>
	<language>en</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.com/</generator>
<cloud domain='bsuresha.wordpress.com' port='80' path='/?rsscloud=notify' registerProcedure='' protocol='http-post' />
<image>
		<url>http://s2.wp.com/i/buttonw-com.png</url>
		<title>ಬಿ. ಸುರೇಶ ಹೇಳಿದಂತೆ...</title>
		<link>http://bsuresha.wordpress.com</link>
	</image>
	<atom:link rel="search" type="application/opensearchdescription+xml" href="http://bsuresha.wordpress.com/osd.xml" title="ಬಿ. ಸುರೇಶ ಹೇಳಿದಂತೆ..." />
	<atom:link rel='hub' href='http://bsuresha.wordpress.com/?pushpress=hub'/>
		<item>
		<title>ನಾಟಕವಾಗುವ ದಾರಿಯಲ್ಲಿ&#8230; &#8216;ಕಳೆದುಹೋದವರು&#8217;</title>
		<link>http://bsuresha.wordpress.com/2011/10/31/%e0%b2%a8%e0%b2%be%e0%b2%9f%e0%b2%95%e0%b2%b5%e0%b2%be%e0%b2%97%e0%b3%81%e0%b2%b5-%e0%b2%a6%e0%b2%be%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%b3%e0%b3%86/</link>
		<comments>http://bsuresha.wordpress.com/2011/10/31/%e0%b2%a8%e0%b2%be%e0%b2%9f%e0%b2%95%e0%b2%b5%e0%b2%be%e0%b2%97%e0%b3%81%e0%b2%b5-%e0%b2%a6%e0%b2%be%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%b3%e0%b3%86/#comments</comments>
		<pubDate>Mon, 31 Oct 2011 05:36:30 +0000</pubDate>
		<dc:creator>bsuresha</dc:creator>
				<category><![CDATA[ನಾಟಕ ವಿಮರ್ಶೆ]]></category>
		<category><![CDATA[ರಂಗಭೂಮಿ]]></category>

		<guid isPermaLink="false">http://bsuresha.wordpress.com/?p=231</guid>
		<description><![CDATA[(ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಕುರಿತ ಐತಿಹಾಸಿಕ ನಾಟಕ, ಲೇಖಕರು: ಡಿ.ಎ.ಶಂಕರ್. ಪ್ರಕಾಶಕರು: ಸಂವಹನ ಪ್ರಕಾಶನ, ೧೨/೧ಎ, ಈವ್ನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು &#8211; ೫೭೦೦೦೧, ಡೆಮಿ ಅಷ್ಟದಳ/ ಮೊದಲ ಮುದ್ರಣ:೨೦೧೧/ ೮೦ ಪುಟ/ಬೆಲೆ- ೫೦ರೂ.) (ಈ ಲೇಖನವು ಪ್ರಜಾವಾಣಿಯ ಸಾಪ್ತಾಹಿಕ ಪುರವಣೆಯಲ್ಲಿ ೩೦ ಅಕ್ಟೋಬರ್ ೨೦೧೧ರಂದು ಪ್ರಕಟವಾಗಿದೆ) ಐತಿಹಾಸಿಕ ನಾಟಕವೊಂದನ್ನು ರಚಿಸುವುದು ಯಾವತ್ತಿಗೂ ಕಷ್ಟದ ಕೆಲಸ. ಯಾವ ದೃಷ್ಟಿಕೋನದಿಂದ ಒಂದು ಕಾಲಘಟ್ಟದ ಇತಿಹಾಸವನ್ನು ನೊಡಬೇಕು ಎಂಬುದೇ ನಾಟಕಕಾರನ ಮುಂದೆ ದೊಡ್ಡ ಸವಾಲಾಗಿ ಬಿಡುತ್ತದೆ. ಹೀಗಾಗಿಯೇ ಸಮಕಾಲೀನ ಕಾಲಘಟ್ಟದಲ್ಲಿ ಐತಿಹಾಸಿಕ ವಸ್ತುವನ್ನು [...]<img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=231&amp;subd=bsuresha&amp;ref=&amp;feed=1" width="1" height="1" />]]></description>
			<content:encoded><![CDATA[<p>(ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಕುರಿತ ಐತಿಹಾಸಿಕ ನಾಟಕ, ಲೇಖಕರು: ಡಿ.ಎ.ಶಂಕರ್. ಪ್ರಕಾಶಕರು: ಸಂವಹನ ಪ್ರಕಾಶನ, ೧೨/೧ಎ, ಈವ್ನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು &#8211; ೫೭೦೦೦೧, ಡೆಮಿ ಅಷ್ಟದಳ/ ಮೊದಲ ಮುದ್ರಣ:೨೦೧೧/ ೮೦ ಪುಟ/ಬೆಲೆ- ೫೦ರೂ.)</p>
<p>(ಈ ಲೇಖನವು ಪ್ರಜಾವಾಣಿಯ ಸಾಪ್ತಾಹಿಕ ಪುರವಣೆಯಲ್ಲಿ ೩೦ ಅಕ್ಟೋಬರ್ ೨೦೧೧ರಂದು ಪ್ರಕಟವಾಗಿದೆ)</p>
<p>ಐತಿಹಾಸಿಕ ನಾಟಕವೊಂದನ್ನು ರಚಿಸುವುದು ಯಾವತ್ತಿಗೂ ಕಷ್ಟದ ಕೆಲಸ. ಯಾವ ದೃಷ್ಟಿಕೋನದಿಂದ ಒಂದು ಕಾಲಘಟ್ಟದ ಇತಿಹಾಸವನ್ನು ನೊಡಬೇಕು ಎಂಬುದೇ ನಾಟಕಕಾರನ ಮುಂದೆ ದೊಡ್ಡ ಸವಾಲಾಗಿ ಬಿಡುತ್ತದೆ. ಹೀಗಾಗಿಯೇ ಸಮಕಾಲೀನ ಕಾಲಘಟ್ಟದಲ್ಲಿ ಐತಿಹಾಸಿಕ ವಸ್ತುವನ್ನು ನಾಟಕವಾಗಿಸಿದವರ ಸಂಖ್ಯೆ ಕಡಿಮೆ. ಇದಕ್ಕೆ ಒಂದು ಕಾಲದಲ್ಲಿ ಆಗಿಹೋದ ಘಟನೆಯನ್ನು ಇಂದು ನಮ್ಮೆದುರಿಗೆ ಇರುವ ಅನೇಕ ರಾಜಕೀಯ ಹಾಗೂ ತತ್ವಗಳ ಮೂಸೆಯಲ್ಲಿ ಇಟ್ಟು ನೋಡಿದಾಗ, ಐತಿಹಾಸಿಕ ವಿವರಗಳ ನಡುವೆ ಯಾರು ನಾಯಕರಾಗಬೇಕು, ಪ್ರತಿನಾಯಕರಾರು ಎಂಬ ಪ್ರಶ್ನೆಗೆ ಉತ್ತರಿಸುವುದೇ ನಾಟಕಕಾರರಿಗೆ ಬೃಹದಾಕಾರದ ಸಮಸ್ಯೆ ಆಗಿಬಿಡುವುದು ಪ್ರಧಾನ ಕಾರಣ. ಇದರಾಚೆಗೆ ಐತಿಹಾಸಿಕ ವಿವರವೊಂದರ ಒಳಗಿರುವ ನಾಟಕೀಯ ಹೂರಣವನ್ನು ಕಟ್ಟಿಕೊಡುವಾಗ ಇತಿಹಾಸಕ್ಕೆ ಬದ್ಧವಾಗಬೇಕೋ ನಾಟಕೀಯ ಗುಣಗಳಿಗೆ ಬದ್ಧವಾಗಬೇಕೋ ಎಂಬ ದ್ವಂದ್ವವೂ ಸಹ ನಾಟಕಕಾರರನ್ನು ಕಾಡುತ್ತದೆ. ಈ ಕಾರಣಗಳಿಂದಾಗಿಯೇ ಕನ್ನಡದಲ್ಲಿ ಬಂದಿರುವ ಐತಿಹಾಸಿಕ ನಾಟಕಗಳಲ್ಲಿ ಗಿರೀಶರ ‘ತುಘಲಕ್’ ‘ತಲೆದಂಡ’, ಲಂಕೇಶರ ‘ಗುಣಮುಖ’ಗಳಂತೆ ಇನ್ನುಳಿದ ಐತಿಹಾಸಿಕ ನಾಟಕಗಳು ಸಾರ್ವಕಾಲಿಕ ಎಂಬಂತೆ ಜನಮಾನಸದ ನೆನಪಲ್ಲಿ ಉಳಿದಿಲ್ಲ. ಇನ್ನು ಕೆಲವು ಐತಿಹಾಸಿಕ ನಾಟಕಗಳು ತಮ್ಮ ವಾಚಾಳಿತನದಿಂದಾಗಿ ಮಾತ್ರ ನೆನಪಲ್ಲಿ ಉಳಿದಿರುವುದನ್ನು ಗಮನಿಸಬಹುದು. ಈ ಎಲ್ಲಾ ವಿವರಗಳ ಹಿನ್ನೆಲೆಯಲ್ಲಿ ಮೈಸೂರಿನ ಅರಸುಕುಲದ ಟಿಪ್ಪು ಸುಲ್ತಾನ್ ನಂತರದ ಕಾಲಘಟ್ಟವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜೀವನದ ಸುತ್ತ ಹೆಣೆದ ವಿವರವನ್ನು ಕನ್ನಡದ ಪ್ರಸಿದ್ಧ ಚಿಂತಕ ಹಾಗೂ ಸಾಹಿತಿಗಳಾದ ಡಿ.ಎ.ಶಂಕರ್ ಅವರು <strong>‘ಕಳೆದುಹೋದವರು’</strong> ಎಂಬ ಹೆಸರಿನಲ್ಲಿ ನಾಟಕವಾಗಿಸಿರುವುದು ಸ್ತುತ್ಯರ್ಹ ಪ್ರಯತ್ನ.</p>
<p>ಮೈಸೂರಿನ ಇತಿಹಾಸವನ್ನು ಕುರಿತಂತೆ ಅನೇಕ ನಾಟಕಗಳು ಕನ್ನಡದಲ್ಲಿ ಬಂದಿವೆ. ಸಂಸರು ಬಹುತೇಕ ಇದೇ ವಿಷಯವನ್ನು ವಸ್ತುವಾಗಿಸಿ ಕನ್ನಡದ ಸಂದರ್ಭದಲ್ಲಿ ಅಪರೂಪ ಎನ್ನಿಸುವ ಅನೇಕ ನಾಟಕಗಳನ್ನು ನೀಡಿದ್ದಾರೆ. ಲಿಂಗದೇವರು ಹಳೆಮನೆಯವರು ಸಹ ಮೈಸೂರಿನ ಇತಿಹಾಸವನ್ನು ಹಿನ್ನೆಲೆಯಾಗಿರಿಸಿಕೊಂಡು ಕೆಲವು ನಾಟಕ ಬರೆದಿದ್ದಾರೆ. ಈಗ ಇದೇ ಮೈಸೂರಿನ ಇತಿಹಾಸವನ್ನು ಡಿ.ಎ.ಶಂಕರ್ ಅವರು ತಮ್ಮ <strong>‘ಕಳೆದುಹೋದವರು’</strong> ನಾಟಕದಲ್ಲಿ ಇರಿಸಿದ್ದಾರೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಹದಿನಾಲ್ಕು ವರ್ಷದವರಿದ್ದಾಗ ಸಿಂಹಾಸನದ ಮೇಲೆ ಕೂತವರು. ನಂತರ ಬ್ರಿಟಿಷರ ಪರೋಕ್ಷ ಆಳ್ವಿಕೆಯ ಸಂಕಟಗಳ ಜೊತೆಗೆ, ದಿವಾನರಾಗಿದ್ದ ಪೂರ್ಣಯ್ಯನವರ ಅಧಿಕಾರಿ ಧೋರಣೆಯನ್ನು ಅನುಭವಿಸುತ್ತಾ ಬೆಳೆದವರು. ಇದೇ ಕಾಲಘಟ್ಟದಲ್ಲಿ ಬ್ರಿಟಿಷರನ್ನು ವಿರೋಧಿಸುತ್ತಿದ್ದ, ಟಿಪ್ಪುಸುಲ್ತಾನನೇ ತಮ್ಮ ಅರಸ ಎಂದುಕೊಂಡಿದ್ದ, ದಾಸ್ಯದಿಂದ ಮುಕ್ತಿ ಬೇಕು ಎಂದು ಬಯಸುತ್ತಿದ್ದ ದೋಂಡಿಯಾ ವಾಘ್ ಮತ್ತು ತರೀಕೆರೆ ಪಾಳೇಗಾರರ ಮನಸ್ಸುಗಳು ಮೈಸೂರಿನ ಕೈಗೊಂಬೆ ಸರಕಾರವನ್ನು ವಿರೋಧಿಸುತ್ತಿದ್ದವು. ಇವುಗಳ ಜೊತೆಗೆ ಮುಮ್ಮಡಿ ಕೃಷ್ಣರಾಜರಿಗೆ ಇದ್ದ ಅನೇಕ ಆಸಕ್ತಿಗಳು ಸೇರಿ ಈ ಕಾಲಘಟ್ಟದ ಇತಿಹಾಸದಲ್ಲಿ ಅನೇಕ ರೋಚಕ ಹಾಗೂ ನಾಟಕೀಯ ವಿವರಗಳು ಸಿಗುತ್ತವೆ. ಈ ವಿವರಗಳನ್ನು ಡಿ.ಎ.ಶಂಕರ್ ಅವರು ೧೦ ದೃಶ್ಯಗಳ ನಾಟಕವಾಗಿಸಿದ್ದಾರೆ.</p>
<p>ಡಿ.ಎ.ಶಂಕರ್ ಅವರು ಇಂಗ್ಲೀಷ್ ಹಾಗೂ ಕನ್ನಡಗಳಲ್ಲಿ ಅನೇಕ ಕೃತಿಗಳನ್ನು ರಚಿಸಿರುವ ಸವ್ಯಸಾಚಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದವರು. ತಮ್ಮ ಬಹುಬಗೆಯ ಓದುಗಳ ಲಾಭವನ್ನು ಸಂಪುಷ್ಟವಾಗಿ ಇಂತಹ ನಾಟಕವೊಂದರಲ್ಲಿ ಬಳಸುವುದು ಅವರಿಗೆ ಸಾಧ್ಯವಾಗಿದೆ. ಹಾಗಾಗಿಯೇ ಈ ನಾಟಕದಲ್ಲಿ ಮುಮ್ಮಡಿಯವರ ಕಾಲದ ಎಲ್ಲಾ ಮಗ್ಗುಲುಗಳನ್ನು ಯಾವುದೇ ಪಕ್ಷ ವಹಿಸದೆ ಪ್ರೇಕ್ಷಕರ ಎದುರಿಗೆ ಇರಿಸುವ ಪ್ರಯತ್ನವನ್ನು ಲೇಖಕರು ಮಾಡುತ್ತಾರೆ. ಈ ವಿವರಗಳನ್ನು ಕುರಿತಂತೆ ನಾಟಕಕ್ಕೆ ಮುನ್ನುಡಿ ಬರೆದಿರುವ ದೇ.ಜ.ಗೌ. ಸಹ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.</p>
<p>ಆದರೆ ಈ ವಸ್ತುವಿಗೆ ಇರುವ ಶಕ್ತಿ ನಾಟಕಕೃತಿಗೆ ದಕ್ಕಿಲ್ಲ. ಇದು ನಾಟಕದ ಆಕೃತಿಯಲ್ಲೇ ಮೂಡಿರುವ ಸಮಸ್ಯೆ. ನಾಟಕಕಾರರು ಅತ್ಯಂತ ಕಿರುದೃಶ್ಯಗಳನ್ನು ಬರೆದಿರುವುದು ಸಹ ಪಾತ್ರಗಳ ಭಾವವಲಯದ ಅನಾವರಣಕ್ಕೆ ಸಹಾಯ ಮಾಡುವುದಿಲ್ಲ. ಹೀಗಾಗಿ ಐತಿಹಾಸಿಕ ವಿವರದ ಪರಿಚಯ ಸಿಗುತ್ತದೆ. ಆ ವಿವರದೊಳಗಿನ ನಾಟಕೀಯತೆ ಅನಾವರಣಗೊಳ್ಳದೆ ಉಳಿಯುತ್ತದೆ. ಇದರಿಂದಾಗಿ ಈ ನಾಟಕದ ಪ್ರಮುಖ ಪಾತ್ರಗಳಾಗಿರುವ ಮುಮ್ಮಡಿಯಾಗಲೀ ಪೂರ್ಣಯ್ಯ ಆಗಲಿ ಪಾತ್ರವಾಗಿ ತೆರೆದುಕೊಳ್ಳದೆ ಕೇವಲ ಐತಿಹಾಸಿಕ ಸತ್ಯಗಳಾಗಿ ಮಾತ್ರ ಗೋಚರಿಸುತ್ತಾರೆ. ನಾಟಕದ ಕಟ್ಟಡ ನಿರ್ಮಿತಿಯನ್ನು ಮಾಡಿಕೊಳ್ಳವಲ್ಲಿ ಲೇಖಕರು ಐತಿಹಾಸಿಕ ವಿವರಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿ, ಆ ವಸ್ತುವಿನ ಒಳಗಿನ ನಾಟಕ ಶಕ್ತಿಯತ್ತ ಗಮನ ಕೊಡದೆ ಇರುವುದು ‘ಕಳೆದುಹೋದವರು’ವಿನ ಪ್ರಮುಖ ಕೊರತೆಯಾಗಿ ಕಾಣುತ್ತದೆ.</p>
<p>ನಾಟಕದ ಹತ್ತೂ ದೃಶ್ಯಗಳಿಗೆ ಸೇತುಬಂಧ ಸೃಷ್ಟಿಸಲು ಹಾಡುಗಳನ್ನು ಬಳಸಲಾಗಿದೆ. ಪುರಂದರದಾಸರ, ವಚನಕಾರರ, ಲಾವಣಿಕಾರರ ಪದ್ಯಗಳಲ್ಲದೆ ಲೇಖಕರೇ ಬರೆದಿರುವ ಕೆಲವು ಹಾಡುಗಳು ಸಹ ಇಲ್ಲಿವೆ. ಇವು ಮುಂದೆ ಮೂಡಲಿರುವ ದೃಶ್ಯಕ್ಕೆ ಸಂವಾದಿಯಾಗಬೇಕೆಂದು ಬಳಸಿರುವಂತಹದು. ಆದರೆ ಈ ಹಾಡನ್ನು ಮೇಳದವರು ಹಾಡಬೇಕೋ ಅಥವಾ ಹಿನ್ನೆಲೆಯಲ್ಲಿ ದೃಶ್ಯ ಬದಲಾಗುವ ಅವಧಿಗೆ ಎಂದು ಹಾಡಬೇಕೋ ಎಂಬುದನ್ನು ಲೇಖಕರು ಸೂಚಿಸುವುದಿಲ್ಲ. ಪ್ರಾಯಶಃ ಶಕ್ತಿಯುತವಾಗಿ ನಾಟಕ ಕಟ್ಟಬಲ್ಲ ರಂಗನಿರ್ದೇಶಕರು ತಾವೇ ಈ ಹಾಡುಗಳನ್ನು ದೃಶ್ಯೀಕರಿಸುವ ಕುರಿತು ಯೋಚಿಸಬೇಕಾಗುತ್ತದೆ. ನಾಟಕವೊಂದನ್ನು ಕಟ್ಟುವ ಲೇಖಕನಿಗೆ ರಂಗಸಾಧ್ಯತೆಗಳ ಅನುಭವ ಗಟ್ಟಿಯಾದ್ದಾಗಿಲ್ಲದೆ ಇದ್ದಾಗ ಇಂತಹದು ಆಗುತ್ತದೆ. ಆದರೆ ಡಿ.ಎ.ಶಂಕರ್ ಅವರಿಗೆ ಇಂಗ್ಲೀಷ್ ನಾಟಕಗಳ ಪರಿಚಯ ಹಾಗೂ ಪ್ರದರ್ಶನ ಸಾಧ್ಯತೆಯ ಪರಿಚಯವಿದೆ ಎಂಬುದಂತೂ ಸತ್ಯ. ಆದರೂ ಈ ನಾಟಕದಲ್ಲಿ ಅವರು ರಂಗಸಾಧ್ಯತೆಗಳನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಮಾಡದಿರುವುದು ಸೋಜಿಗ. ಐದನೆಯ ದೃಶ್ಯದಲ್ಲಿ ರೆಸಿಡೆಂಟ್ ಆಫೀಸರ್‌ನನ್ನು ಪೂರ್ಣಯ್ಯ ಭೇಟಿ ಮಾಡುವಾಗಲೇ ಅಲ್ಲಿಗೆ ಬರುವ ಮಹಾರಾಣಿ ಲಕ್ಷ್ಮಿಯ ಪಾತ್ರ ಪ್ರವೇಶದ ಸನ್ನಿವೇಶವೊಂದು ಮಾತ್ರ ಉಳಿದೆಲ್ಲಾ ದೃಶ್ಯಗಳಿಗಿಂತ ಭಿನ್ನವಾಗಿ ನಾಟಕೀಯವಾಗಿ ಅನಾವರಣಗೊಳ್ಳುತ್ತದೆ.</p>
<p>ನಾಟಕದಲ್ಲಿ ಬಳಸಲಾಗಿರುವ ಮಾತುಗಳು ಗಮನಿಸಬೇಕಾದಂತಹದು. ದೃಶ್ಯ ೧ರಲ್ಲಿ ಪೂರ್ಣಯ್ಯನು ‘ಕುದುರೆ ನಡೆಸಲು ಕಲಿತರೆ ರಾಜ್ಯ ನಿಭಾಯಿಸಲು ಕಲಿತ ಹಾಗೆ’ ಎನ್ನುವುದು, ಅದೇ ದೃಶ್ಯದಲ್ಲಿ ‘ದೊರೆತನ ಎಂಬುದೇ ದೊಡ್ಡ ತುಂಟ ಕುದುರೆ. ಅದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದೆಂದರೆ ಘಟವಾಣಿ ಸ್ತ್ರೀಯರನ್ನು ಹತೋಟಿಯಲ್ಲಿ ಇಟ್ಟುಕೊಂಡ ಹಾಗೆ’ ಎನ್ನುವುದು, ದೃಶ್ಯ ೩ ರಲ್ಲಿ ಬರುವ ‘ರಾಜ್ಯಭಾರವೆಂದರೆ ರಾಗಿ ಬೀಸುವಷ್ಟೇ ಕಷ್ಟ’ ಎನ್ನುವುದು, ದೃಶ್ಯ ೯ರಲ್ಲಿ ಅನೇಕ ಧ್ವನಿಗಳು ಮುಮ್ಮಡಿಯ ಜೊತೆಗೆ ಮಾತಾಡುವಾಗ ಬಳಸಲಾಗಿರುವ ಸಾಲುಗಳು&#8230; ಹೀಗೆ ಈ ನಾಟಕದುದ್ದಕ್ಕೂ ಬಹುಕಾಲ ನೆನಪಲ್ಲಿ ಉಳಿಯುವಂತಹ ಮಾತುಗಳನ್ನು ಕಟ್ಟಲಾಗಿದೆ. ಇದು ಲೇಖಕರ ಜೀವನಾನುಭವಕ್ಕೆ ನೇರ ಸಾಕ್ಷಿ.</p>
<p>ನಾಟಕದ ಅಂತ್ಯದಲ್ಲಿ ಮುಮ್ಮಡಿಯ ಪಾತ್ರವು ತನ್ನ ಸೋಲುಗಳನ್ನು ನೆನೆಯುತ್ತಾ ಅದೇ ಕಾಲಘಟ್ಟದಲ್ಲಿ ಆಗುತ್ತಿದ್ದ ಭಾರತದ ಸ್ವಾತಂತ್ರ ಚಳುವಳಿಗೆ ಮೈಸೂರು ಸಂಸ್ಥಾನವು ಪ್ರತಿಕ್ರಿಯಿಸದೆ ಉಳಿದುದಕ್ಕೆ ಹೀಗೆ ಹೇಳುತ್ತಾನೆ, ‘ನಮ್ಮ ಪಾಲಿಗೆ ಎರಡು ದಾಸ್ಯವಿತ್ತು. ಒಂದು, ದೇಶದೆಲ್ಲೆಡೆ ಇದ್ದದ್ದು. ಮತ್ತೊಂದು ನಮ್ಮ ರಾಜ್ಯವನ್ನೇ ನಾವು ಕಳೆದುಕೊಂಡು, ಅದರ ವಾಪಸಾತಿಗೆ ಚಾತಕ ಪಕ್ಷಿಯಂತೆ ಕಾಯುತ್ತಾ ಇದ್ದದ್ದು&#8230; &#8230;ನಾವು ಪುರುಷತ್ವ ಕಳೆದುಕೊಂಡು, ಗಾಡಿಗೆ ಹೂಡಿದ ಎತ್ತುಗಳಾಗಿದ್ದೆವು. ಕ್ಷುದ್ರ ಆಶೆಯಿಂದ ಕಾಲ ನಡೆಸಿದ ಹಾಗೆ ನಡೆದುಬಿಟ್ಟೆವು.’ ಈ ಮಾತುಗಳೇ ನಾಟಕದ ಹೂರಣ. ಆದರೆ ಇವು ನಾಟಕದಲ್ಲಿ ದೃಶ್ಯವಾಗಿ ಅನಾವರಣಗೊಳುತ್ತಿಲ್ಲ ಎಂಬುದೊಂದೇ ಕೊರತೆ. ಪ್ರಾಯಶಃ ಉತ್ತಮ ರಂಗನಿರ್ದೇಶಕರು ಇಂತಹ ಪಠ್ಯವೊಂದನ್ನು ದೃಶ್ಯವಾಗಿ ಕಟ್ಟಿದಾಗ ಈ ಎಲ್ಲಾ ಕೊರೆಗಳೂ ಮುಚ್ಚಿ, ಇದು ಅಪರೂಪದ ರಂಗಕೃತಿಯಾಗಬಹುದು.</p>
<p>ಒಟ್ಟಾರೆಯಾಗಿ ‘ಕಳೆದುಹೋದವರು’ ನಾಟಕವು ಕನ್ನಡಕ್ಕೆ ದೊರೆತ ಮತ್ತೊಂದು ಐತಿಹಾಸಿಕ ನಾಟಕ. ಇಂತಹ ನಾಟಕಗಳು ರಂಗಕೃತಿಯಾಗಿ ಹೇಗೆ ಅರಳಿಯಾವು ಎಂಬ ಕುತೂಹಲವಂತೂ ಇದ್ದೇ ಇರುತ್ತದೆ. ಈ ವಸ್ತವನ್ನು ಕನ್ನಡಿಗರಿಗೆ ಪರಿಚಯಿಸುವ ಪ್ರಯತ್ನ ಮಾಡಿರುವ ಲೇಖಕರ ಪ್ರಯತ್ನವನ್ನಂತೂ ಮೆಚ್ಚಲೇಬೇಕು.</p>
<p>* * *</p>
<p><strong> </strong></p>
<p>&nbsp;</p>
<br />Filed under: <a href='http://bsuresha.wordpress.com/category/%e0%b2%b0%e0%b2%82%e0%b2%97%e0%b2%ad%e0%b3%82%e0%b2%ae%e0%b2%bf/%e0%b2%a8%e0%b2%be%e0%b2%9f%e0%b2%95-%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/'>ನಾಟಕ ವಿಮರ್ಶೆ</a>, <a href='http://bsuresha.wordpress.com/category/%e0%b2%b0%e0%b2%82%e0%b2%97%e0%b2%ad%e0%b3%82%e0%b2%ae%e0%b2%bf/'>ರಂಗಭೂಮಿ</a>  <a rel="nofollow" href="http://feeds.wordpress.com/1.0/gocomments/bsuresha.wordpress.com/231/"><img alt="" border="0" src="http://feeds.wordpress.com/1.0/comments/bsuresha.wordpress.com/231/" /></a> <a rel="nofollow" href="http://feeds.wordpress.com/1.0/godelicious/bsuresha.wordpress.com/231/"><img alt="" border="0" src="http://feeds.wordpress.com/1.0/delicious/bsuresha.wordpress.com/231/" /></a> <a rel="nofollow" href="http://feeds.wordpress.com/1.0/gofacebook/bsuresha.wordpress.com/231/"><img alt="" border="0" src="http://feeds.wordpress.com/1.0/facebook/bsuresha.wordpress.com/231/" /></a> <a rel="nofollow" href="http://feeds.wordpress.com/1.0/gotwitter/bsuresha.wordpress.com/231/"><img alt="" border="0" src="http://feeds.wordpress.com/1.0/twitter/bsuresha.wordpress.com/231/" /></a> <a rel="nofollow" href="http://feeds.wordpress.com/1.0/gostumble/bsuresha.wordpress.com/231/"><img alt="" border="0" src="http://feeds.wordpress.com/1.0/stumble/bsuresha.wordpress.com/231/" /></a> <a rel="nofollow" href="http://feeds.wordpress.com/1.0/godigg/bsuresha.wordpress.com/231/"><img alt="" border="0" src="http://feeds.wordpress.com/1.0/digg/bsuresha.wordpress.com/231/" /></a> <a rel="nofollow" href="http://feeds.wordpress.com/1.0/goreddit/bsuresha.wordpress.com/231/"><img alt="" border="0" src="http://feeds.wordpress.com/1.0/reddit/bsuresha.wordpress.com/231/" /></a> <img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=231&amp;subd=bsuresha&amp;ref=&amp;feed=1" width="1" height="1" />]]></content:encoded>
			<wfw:commentRss>http://bsuresha.wordpress.com/2011/10/31/%e0%b2%a8%e0%b2%be%e0%b2%9f%e0%b2%95%e0%b2%b5%e0%b2%be%e0%b2%97%e0%b3%81%e0%b2%b5-%e0%b2%a6%e0%b2%be%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%b3%e0%b3%86/feed/</wfw:commentRss>
		<slash:comments>0</slash:comments>
	
		<media:content url="" medium="image">
			<media:title type="html">bsuresha</media:title>
		</media:content>
	</item>
		<item>
		<title>ಸಿನಿಮಾ ಮತ್ತು ಕಿರುತೆರೆ &#8211; ಕನ್ನಡತನದ ಮಿತಿಗಳು</title>
		<link>http://bsuresha.wordpress.com/2011/09/24/%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%95%e0%b2%bf%e0%b2%b0%e0%b3%81%e0%b2%a4%e0%b3%86%e0%b2%b0%e0%b3%86-%e0%b2%95%e0%b2%a8/</link>
		<comments>http://bsuresha.wordpress.com/2011/09/24/%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%95%e0%b2%bf%e0%b2%b0%e0%b3%81%e0%b2%a4%e0%b3%86%e0%b2%b0%e0%b3%86-%e0%b2%95%e0%b2%a8/#comments</comments>
		<pubDate>Sat, 24 Sep 2011 05:48:24 +0000</pubDate>
		<dc:creator>bsuresha</dc:creator>
				<category><![CDATA[ಇಂದಿನ ಚಿಂತೆ!]]></category>
		<category><![CDATA[ಚಲನಚಿತ್ರ]]></category>
		<category><![CDATA[ಟೆಲಿವಿಷನ್]]></category>

		<guid isPermaLink="false">http://bsuresha.wordpress.com/?p=214</guid>
		<description><![CDATA[(ವಿಜಯಕರ್ನಾಟಕದ ೨೦೧೧ರ ದೀಪಾವಳಿ ಸಂಚಿಕೆಗಾಗಿ ಬರೆದ ಲೇಖನ) ‘ಕನ್ನಡ ಎಂಬುದೊಂದು ಅಸ್ಮಿತೆ. ಕನ್ನಡ ಎಂಬುದೊಂದು ಸಂಸ್ಕೃತಿ. ಕನ್ನಡತನವೆಂಬುದು ಒಂದು ನಾಡಿನ ಬದುಕಿನ ಕ್ರಮ.’ &#8211; ಹೀಗೆಲ್ಲಾ ನಾವು ಮಾತಾಡುತ್ತಾ ಇದ್ದೇವೆ. ಆದರೆ ನಮ್ಮ ಪ್ರಧಾನ ಮಾಧ್ಯಮಗಳಾದ ಸಿನಿಮಾ ಮತ್ತು ಕಿರುತೆರೆಗಳಲ್ಲಿ ಈ ನಮ್ಮ ಕನ್ನಡತನವು ಯಾವ ಕ್ರಮದಲ್ಲಿದೆ ಎಂದು ಗಮನಿಸುವ, ಆ ಮೂಲಕ ನಾವಾಡುವ ಮಾತಿಗೂ ನಮ್ಮದೇ ಕೃತಿಗಳಿಗೂ ಇರುವ ಅಂತರವನ್ನು ವಿಶ್ಲೇಷಿಸುವುದು ಸಹ ಇಂದಿನ ಅಗತ್ಯವಾಗಿದೆ. ಇಂತಹ ಮೌಲ್ಯಮಾಪನಗಳು ಆಗಿಂದಾಗ್ಗೇ ಆಗಬೇಕು. ಹಾಗಾದಾಗ ಮಾತ್ರ ನಾವು [...]<img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=214&amp;subd=bsuresha&amp;ref=&amp;feed=1" width="1" height="1" />]]></description>
			<content:encoded><![CDATA[<p>(ವಿಜಯಕರ್ನಾಟಕದ ೨೦೧೧ರ ದೀಪಾವಳಿ ಸಂಚಿಕೆಗಾಗಿ ಬರೆದ ಲೇಖನ)<br />
‘ಕನ್ನಡ ಎಂಬುದೊಂದು ಅಸ್ಮಿತೆ. ಕನ್ನಡ ಎಂಬುದೊಂದು ಸಂಸ್ಕೃತಿ. ಕನ್ನಡತನವೆಂಬುದು ಒಂದು ನಾಡಿನ ಬದುಕಿನ ಕ್ರಮ.’ &#8211; ಹೀಗೆಲ್ಲಾ ನಾವು ಮಾತಾಡುತ್ತಾ ಇದ್ದೇವೆ. ಆದರೆ ನಮ್ಮ ಪ್ರಧಾನ ಮಾಧ್ಯಮಗಳಾದ ಸಿನಿಮಾ ಮತ್ತು ಕಿರುತೆರೆಗಳಲ್ಲಿ ಈ ನಮ್ಮ ಕನ್ನಡತನವು ಯಾವ ಕ್ರಮದಲ್ಲಿದೆ ಎಂದು ಗಮನಿಸುವ, ಆ ಮೂಲಕ ನಾವಾಡುವ ಮಾತಿಗೂ ನಮ್ಮದೇ ಕೃತಿಗಳಿಗೂ ಇರುವ ಅಂತರವನ್ನು ವಿಶ್ಲೇಷಿಸುವುದು ಸಹ ಇಂದಿನ ಅಗತ್ಯವಾಗಿದೆ. ಇಂತಹ ಮೌಲ್ಯಮಾಪನಗಳು ಆಗಿಂದಾಗ್ಗೇ ಆಗಬೇಕು. ಹಾಗಾದಾಗ ಮಾತ್ರ ನಾವು ನಡೆಯುತ್ತಿರುವ ದಾರಿಯ ಒಳಗಿನ ಕೃತ್ರಿಮಗಳನ್ನು ತಿಳಿದುಕೊಳ್ಳುವುದು ಸಾಧ್ಯವಾಗಬಹುದು.<br />
ಮಾಧ್ಯಮ ಎಂಬ ಆಧುನಿಕ ಭೂತ<br />
ಸಿನಿಮಾ ಎಂಬುದು ಆರಂಭವಾದಾಗ ಇದ್ದ ಸ್ವರೂಪವನ್ನು ಬದಲಿಸಿಕೊಂಡು ಜಾಗತಿಕ ಮನರಂಜನಾ ಮಾಧ್ಯಮವಾಗಿದ್ದು ಕಳೆದ ನೂರು ವರ್ಷಗಳಲ್ಲಿ ನಡೆದ ಇತಿಹಾಸ. ಆದರೆ ಆ ಸಿನಿಮಾ ಎಂಬುದು ಕನ್ನಡದ ಜಗತ್ತಿನೊಳಗೆ ಪ್ರವೇಶಿಸಿ ಕನ್ನಡವನ್ನು ಈಗಿನ ಸ್ವರೂಪಕ್ಕೆ ತಂದುದು ಬಹುಮುಖಿ ಸಂಸ್ಕೃತಿಯನ್ನ ಏಕತ್ರಗೊಳಿಸಿದ್ದು ಬಂಡವಾಳಶಾಹಿ ಪ್ರಣೀತ ಸಂಸ್ಕೃತಿಯೇ ತಂದಿತ್ತ ದುರಂತ. ಕನ್ನಡದ ಜನಮಾನಸಕ್ಕೆ ಅನೇಕ ಅಸ್ಮಿತೆಗಳಿದ್ದವು. ಅವೆಲ್ಲವನ್ನೂ ಪ್ರಮಾಣಿಕೃತ ಒಂದೇ ಭಾಷೆಯ ನೆಲೆಗೆ ತಂದಿಟ್ಟು, ಇಂದು ನಾವು ನಮ್ಮಗಳ ನಡುವೆಯೇ ಸಂವಹನ ಮಾಡಲು ಒಂದು ಏಕರೂಪಿ ಭಾಷೆಯನ್ನು ಸೃಷ್ಟಿಸಿಕೊಂಡೆವಲ್ಲಾ, ಇದು ಭಾಷೆಯ ಮೇಲಾದ ವ್ಯವಸ್ಥಿತ ಆಕ್ರಮಣ. ಭಾಷೆಗಳ ಒಳಗಣ ಸೊಗಡುಗಳನ್ನು ನಾವು ಕಳಕೊಂಡಿದ್ದೇವೆ. ಪ್ರತೀ ಸೊಗಡಿಗೆ ಇದ್ದ ಸಾಂಸ್ಕೃತಿಕ ಶ್ರೀಮಂತಿಕೆ ಇಂದು ಪಳೆಯುಳಿಕೆಗಳ ಸ್ಥಿತಿಯನ್ನು ತಲುಪಿದೆ. ಇಷ್ಟೆಲ್ಲಾ ಭಾಷಾಕ್ರಮಣದ ಜೊತೆಗೆ ಸಿನಿಮಾ ಎಂಬ ತಂತ್ರಭಾಷೆಯನ್ನು ನಾವು ಶ್ರೀಮಂತಗೊಳಿಸಿದ್ದೆವೆಯೇ ಅಂದರೆ ಅಲ್ಲಿಯೂ ನಮಗೆ ಸಿಗುವುದು ಬರೀ ಹಳವಂಡಗಳೇ!<br />
ಕಿರುತೆರೆ ಎಂಬ ವಿಶ್ವರೂಪಿ<br />
ಸಿನಿಮಾ ಎಂಬುದು ಮಾಧ್ಯಮವಾಗಿ ಹೆಮ್ಮರವಾಗುತ್ತಿದ್ದ ಹಂತದಲ್ಲಿಯೇ ನಮ್ಮ ನಡುವೆ ಹುಟ್ಟಿಕೊಂಡ ಹೊಸ ಮಾಧ್ಯಮ ಕಿರುತೆರೆ. ಮೂಲತಃ ಸಾರ್ವಜನಿಕರಿಗೆ ಮಾಹಿತಿ ಮತ್ತು ಸಂಪರ್ಕ ಸಾಧನವಾಗಿ ಬಳಕೆಯಾಗಲು ಹುಟ್ಟಿದ ಈ ಮಾಧ್ಯಮವು ಇಂದು ಆ ಮೂಲ ಉದ್ದೇಶದಿಂದಲೇ ದೂರ ಸರಿದು ಕೇವಲ ಮನರಂಜನೆಯಷ್ಟೇ ಪ್ರಧಾನವಾಗಿಸಿಕೊಂಡಿರುವುದನ್ನು ಸಹ ನಾವು ಕಾಣುತ್ತಾ ಇದ್ದೇವೆ. ಒಂದೊಮ್ಮೆ ಒಂದೇ ಕನ್ನಡ ವಾಹಿನಿಯಿದ್ದ ಕಾಲದಿಂದ ಇಂದು ಹನ್ನೆರಡು ಪೂರ್ಣಾವಧಿ ಕನ್ನಡ ವಾಹಿನಿಗಳು ಇರುವ ಕಾಲಕ್ಕೆ ನಾವು ಬಂದಿದ್ದೇವೆ. ಈ ಮಾರ್ಪಾಡುಗಳಿಂದ ಅನೇಕರ ಉದರಂಭರಣ ಆಗುತ್ತಿದೆ ಎಂಬುದನ್ನು ಒಪ್ಪುತ್ತಲೇ ಇವೇ ಮಾರ್ಪಾಡುಗಳು ಸಾರ್ವಜನಿಕರ ಮೇಲೆ ಹೇರುತ್ತಾ ಇರುವ ಹೊಸ ಒತ್ತಡಗಳನ್ನು ಗಮನಿಸಬೇಕಿದೆ. ಈ ಒತ್ತಡಗಳಿಂದ ಭಾಷೆಗೆ ಆಗಿರುವ ಹೊಡೆತಗಳನ್ನು ಕೂಡ ನಾವು ಗುರುತಿಸಬೇಕಿದೆ.<br />
ಈಚೆಗಿನ ಉದಾಹರಣೆಯನ್ನು ಗಮನಿಸಿ. ಚಿತ್ರನಟನೊಬ್ಬ ಪತಿಪೀಡಕನಾಗಿದ್ದನ್ನು ಮಾಧ್ಯಮಗಳು ದಿನದ ೨೪ಗಂಟೆಯೂ ಎಡಬಿಡದೆ ಚರ್ಚಿಸಿದವು. ಸಾರ್ವಜನಿಕರ ಮೇಲೆ ಸುದ್ದಿಯೊಂದನ್ನಷ್ಟೇ ಅಲ್ಲದೆ, ಅಭಿಪ್ರಾಯವನ್ನು ಸಹ ‘ಹ್ಯಾಮರ್’ ಮಾಡಲಾಯಿತು. ಆ ಮೂಲಕ ಒಂದು ಕುಟುಂಬದ ಒಳಗಿನ ವಿವರವನ್ನು ಸಾರ್ವತ್ರಿಕ ಚರ್ಚೆಗೆ ತರುವ ಪ್ರಯತ್ನವಾಯಿತು. ಕೆಲವೇ ದಿನಗಳ ಹಿಂದೆ ಅದೇ ನಟನನ್ನ ದೇವರು ಎಂಬಂತೆ ಚಿತ್ರಿಸಿದ್ದ ಮಾಧ್ಯಮವೇ ಈಗ ಆತನನ್ನು ಖಳನಾಯಕ ಮಾಡಿತ್ತು. ಈ ಪ್ರಕರಣದಲ್ಲಿ ಆ ನಟ ಮಾಡಿದ ತಪ್ಪನ್ನು ಈ ನಾಡು ಬೆಂಬಲಿಸಬೇಕಿಲ್ಲ. ಆದರೆ ಇಂತಹ ವಿಷಯದ ಚರ್ಚೆಯ ಭರಾಟೆಯಲ್ಲಿ ನಿರ್ಮಾಪಕರ ಸಂಘ ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆಯು ಸರ್ವಾಧಿಕಾರಿಯಂತಹ ನಿಲುವು ತೆಗೆದುಕೊಳ್ಳುವುದಕ್ಕೂ ಇವೇ ಮಾಧ್ಯಮಗಳು ದಾರಿ ಮಾಡಿಕೊಟ್ಟಿದ್ದವು. ನಂತರ ಇವೇ ಮಾಧ್ಯಮಗಳು ಹೇರಿದ ಒತ್ತಡಕ್ಕೆ ಮಣಿದು ಅದೇ ಸಂಘವು ತನ್ನ ನಿರ್ಧಾರ ಬದಲಿಸಿದ್ದನ್ನು ಸಹ ನಾವು ಕಂಡಿದ್ದೇವೆ.<br />
ಇವೆಲ್ಲವನ್ನೂ ಈಗ ಮತ್ತೆ ನೆನೆಸುವುದಕ್ಕೆ ಕಾರಣ ಮಾಧ್ಯಮಗಳು ಹೇಗೆ ಒಂದು ಸರ್ವಾತ್ರಿಕ ಒಪ್ಪಿಗೆಯನ್ನು ತಮ್ಮ ಮೂಗಿನ ನೇರಕ್ಕೆ ರೂಪಿಸಿಬಿಡುತ್ತವೆ ಎಂದು ನಿರೂಪಿಸುವುದೇ ಆಗಿದೆ. ಈ ಬಗ್ಗೆ ನೋಮ್ ಚಾಮ್‌ಸ್ಕಿ ತನ್ನ ‘ಮ್ಯಾನುಫ್ಯಾಕ್ಚರಿಂಗ್ ಕನ್‌ಸೆಂಟ್’ ಎಂಬ ಪುಸ್ತಕದಲ್ಲಿ ಸಾಕಷ್ಟು ವಿಸ್ತೃತವಾಗಿಯೇ ಚರ್ಚಿಸುತ್ತಾನೆ. ಅಮೇರಿಕಾದಂತಹ ಅಭಿವೃದ್ಧಿಗೊಂಡ ರಾಷ್ಟ್ರದಲ್ಲಿ ಜನಾಭಿಪ್ರಾಯ ರೂಪಿಸಲು ವಿಭಿನ್ನ ಕಂಪೆನಿಗಳು ಹೇಗೆ ಮಾಧ್ಯಮವನ್ನು ಬಳಸಿಕೊಳ್ಳುತ್ತವೆ ಎಂದು ಉದಾಹರಣೆಗಳ ಸಹಿತ ಆತ ನಿರೂಪಿಸುತ್ತಾನೆ. ಇದೇ ಮಾದರಿಯ ಪ್ರಯತ್ನಗಳು ಈ ನಾಡಿನಲ್ಲಿ ಆದುದಕ್ಕೆ ‘ಅಣ್ಣಾ ಹಜಾರೆ’ ಸತ್ಯಾಗ್ರಹಕ್ಕೆ ಸಿಕ್ಕ ಪ್ರಚಾರ, ರಾಮ್‌ದೇವ್ ತರಹದ ಕಾವಿಧಾರಿಗಳನ್ನು ಕುರಿತಂತೆ ಮೂಡಿದ ಅಭಿಪ್ರಾಯ, ನಿತ್ಯಾನಂದ ಪ್ರಕರಣದ ವೈಭವೀಕರಣ ಇತ್ಯಾದಿಗಳನ್ನು ಗಮನಿಸಬಹುದು. ಇದೆಲ್ಲವೂ ವಿಭಿನ್ನ ಪ್ರಕರಣಗಳಿಗೆ ಸಂಬಂಧಿಸಿದ ಹಾಗೂ ಸಾರ್ವಜನಿಕ ಜೀವನಕ್ಕೆ ಬೃಹತ್ ಪಲ್ಲಟ ಉಂಟು ಮಾಡದಂತಹವು. ಆದರೆ ರಾಷ್ಟ್ರದ ಒಟ್ಟು ಚಿಂತನೆಯನ್ನು ಬದಲಿಸಬಹುದಾದ ಅನೇಕ ವಿಷಯಗಳನ್ನು ಸಹ ಇವೇ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೆ ನಿರೂಪಿಸಿರುವುದನ್ನು ನಾವು ನೋಡಿದ್ದೇವೆ. ಅದಕ್ಕೆ ಉದಾಹರಣೆಯಾಗಿ ಮುಂಬೈನ ಮೇಲೆ ಉಗ್ರರ ದಾಳಿಯಾದಾಗ ಈ ಮಾಧ್ಯಮಗಳು ಅದನ್ನು ಚರ್ಚಿಸಿದ ಕ್ರಮವನ್ನು ಹಾಗೂ ಐಪಿಎಲ್‌ನಂತಹ ವ್ಯಾಪಾರೀ ಕ್ರಿಕೆಟ್ಟನ್ನು ‘ಯುದ್ಧ’ ಎಂಬಂತೆ ಇವೇ ಮಾಧ್ಯಮಗಳು ಪ್ರಚಾರ ನೀಡಿದ್ದನ್ನು ನಾವು ನೆನೆಯಬಹುದು. ಒಂದೆಡೆಗೆ ಶಾಂತಿದೂತರು ಎಂಬ ನಿಲುವು ಪ್ರಕಟಿಸುತ್ತಲೇ ಮತ್ತೊಂದೆಡೆ ಇವೇ ಸುದ್ದಿ ಮಾಧ್ಯಮಗಳು ಯುದ್ಧ ಮನೋಭಾವವನ್ನು ರೂಢಿಸ ಹೊರಡುವುದೇ ಇಲ್ಲಿನ ವೈರುಧ್ಯ.<br />
ಇಂತಹ ಸುದ್ದಿವಾಹಿನಿಗಳ ಪೈಪೋಟಿಯ ನಡುವೆ ಕನ್ನಡ ಎಂಬ ಭಾಷೆಯ ಮೇಲೆ ಆಗುತ್ತಿರುವ ಆಕ್ರಮಣ ವಿಭಿನ್ನ ಬಗೆಯದು. ಸುದ್ದಿವಾಚಕರು ದೂರದರ್ಶನದ ಕಾಲಘಟ್ಟದಿಂದ ಇಂದಿಗೆ ಬದಲಾಗಿರುವ ಕ್ರಮವನ್ನು ಗಮನಿಸಿದರೆ ಕಾಣುವುದು ಸ್ಪಷ್ಟ ವಾಕ್ಯ ರಚನೆಯ ಓದಿನ ಕ್ರಮದಿಂದ ಬಿಡುಬೀಸಾದ ಮಾತಿನ ಕ್ರಮ. ಅದರೊಂದಿಗೆ ಸುದ್ದಿಯೊಂದಕ್ಕೆ ಇದ್ದ ತೂಕವೂ ಕಡಿಮೆಯಾಗಿದೆ. ಸುದ್ದಿಯೊಂದರಿಂದ ದೊರೆಯಬೇಕಿದ್ದ ಮಾಹಿತಿಗಿಂತ ರಂಜನೆಯ ಅಂಶಗಳೇ ಪ್ರಧಾನವಾಗಿದೆ. ಹೀಗೆ ಮಾಹಿತಿ, ಸಂಪರ್ಕ, ರಂಜನೆ ಎಂಬ ಪ್ರಧಾನ ಮೂರು ಅಂಶಗಳಿಗಾಗಿ ಆರಂಭವಾದ ಮಾಧ್ಯಮವು ಕೇವಲ ರಂಜನೆಯೇ ಪ್ರಧಾನವಾಗುವಂತೆ ಉಳಿದಿದೆ. ಇದರ ಪರಿಣಾಮವನ್ನು ಒಟ್ಟು ಸಮಾಜವು ಸುದ್ದಿಯನ್ನು ಗ್ರಹಿಸುವ ಕ್ರಮವೇ ಬದಲಾಗಿದೆ. ಅದನ್ನು ಸುದ್ದಿಯೊಂದರ ಬಗ್ಗೆ ಸಾಮಾನ್ಯ ಜನ ನೋಡುವ, ಗ್ರಹಿಸುವ ಕ್ರಮದಲ್ಲಿಯೇ ಗುರುತಿಸಬಹುದು.<br />
ಧಾರಾವಾಹಿ ದುನಿಯಾ<br />
ಇನ್ನು ಕಿರುತೆರೆಯಲ್ಲಿಯೇ ಬರುವ ಕಥಾಚಿತ್ರಗಳು ಮತ್ತು ದೈನಿಕ ಧಾರಾವಾಹಿಗಳ ವಿಷಯಕ್ಕೆ ಬರೋಣ. ಇಲ್ಲಿಯೂ ಕತೆಗಿಂತ ಆ ದಿನ ನೋಡುಗನಲ್ಲಿ ಮೂಡಿಸುವ ರೋಚಕತೆ ಮಾತ್ರ ಪ್ರಧಾನವಾಗಿದೆ. ಒಂದು ಧಾರಾವಾಹಿಗೆ ಆತ್ಮವಾದ ಕತೆ ಗೌಣವಾಗಿ ಅದರ ಸುತ್ತಲ ತಿರುವು ಮತ್ತು ಬೆರಗಿನಲಂಕಾರವೇ ಪ್ರಧಾನವಾಗಿದೆ. ಹೀಗಾಗಿ ಇಂದು ಕಥನ ಕಾರ್ಯಕ್ರಮಗಳನ್ನು ಕಿರುತೆರೆಯಲ್ಲಿ ನೋಡುವವರು ಆ ಕತೆಯ ಹೂರಣಕ್ಕಿಂತ ಆವರಣವನ್ನು ಮಾತ್ರ ಗಮನಿಸುವ ಸ್ಥಿತಿಗೆ ಬಂದಿದ್ದಾರೆ. ಇದೂ ಕೂಡ ಮಾರುಕಟ್ಟೆ ಪ್ರಣೀತ ಸೂತ್ರದನ್ವಯ ಆಗಿರುವ ಬದಲಾವಣೆ. ಒಂದು ನಾಡಿನ ಸಂಸ್ಕೃತಿಯೇ ರೂಪಿಸಿದ ಶ್ರೇಷ್ಟ ಕಾದಂಬರಿಯೊಂದು ಕಿರುತೆರೆಯಲ್ಲಿ ಮೂಡುವುದಕ್ಕಿಂತ ಮಾರುಕಟ್ಟೆಯು ತಾನು ನಿರ್ಮಿಸಿರುವ ಸಾಮಗ್ರಿಗಳನ್ನು ಮಾರುವುದನ್ನೇ ಪ್ರಧಾನ ಅಂಶವನ್ನಾಗಿಸಿಕೊಂಡು ಕತೆಗಳನ್ನು ಕಟ್ಟುತ್ತಾ ಇದೆ. ಹೀಗಾಗಿ ಪಾತ್ರದ ರಚನೆ ಮತ್ತು ಮೈವಳಿಕೆಗಳು ಕೃತ್ರಿಮತೆಯ ಪರಾಕಾಷ್ಟೆಯನ್ನು ತಲುಪಿವೆ. ಎಲ್ಲಾ ವಯೋಮಾನದ ಹೆಣ್ಣು ಪಾತ್ರಗಳೂ ಸಹ ಈಗಷ್ಟೇ ಬ್ಯೂಟಿಪಾರ್ಲರ್‌ನಿಂದ ಬಂದಿವೆ ಎಂಬಂತೆ ಕಾಣುವುದು ಒಂದೆಡೆಯಾದರೆ, ಆ ಪಾತ್ರಧಾರಿಗಳಿಗೆ ತಮ್ಮ ಹೊರ ಅಲಂಕಾರ ಮತ್ತು ವಸ್ತ್ರದ ವಿವರಗಳು ಮುಖ್ಯವಾಗಿ ಮುಖಭಾವ ಮತ್ತು ನಟನೆಗೆ ಅಗತ್ಯವಾದ ರಸೋತ್ಪತ್ತಿ ಎನ್ನುವುದು ಬಹುತೇಕ ಇಲ್ಲವಾಗಿದೆ. ಇದರ ಪರಿಣಾಮವಾಗಿ ಇಂದು ಕಿರುತೆರೆಯಲ್ಲಿರುವ ಬಹುತೇಕರು ಕಲಾವಿದರು ಎನ್ನುವುದಕ್ಕಿಂತ ಬಣ್ಣಬಳಿದುಕೊಂಡ ಜೀವಗಳ ಹಾಗೆ ಕಾಣುತ್ತಾ ಇದ್ದಾರೆ. ಇಂತಹ ಜನ ಕಟ್ಟಿಕೊಡುವ ಭಾಷೆಯೂ ಸಹ ಆ ಸಂಸ್ಕೃತಿಯನ್ನು ಕಟ್ಟುವ ದಾರಿಗೆ ಹೋಗದೆ ಇಡಿಯಾಗಿ ಜನಮನವನ್ನು ಕೃತ್ರಿಮಗೊಳಿಸುತ್ತಿದೆ. ಒಂದು ವಾಕ್ಯದಲ್ಲಿ ಪೂರ್ಣವಿರಾಮ ಇರುವ ಹಂತದಲ್ಲಿ ಉಸಿರು ಸ್ವೀಕರಿಸಿ ಮುಂದಿನ ವಾಕ್ಯಕ್ಕೆ ಹೋಗಬೇಕು ಎಂಬ ನಟನೆಯ ಆರಂಭಿಕ ಪಾಠವನ್ನು ಸಹ ಬಿಟ್ಟುಕೊಟ್ಟವರಂತೆ, ವಾಕ್ಯವೊಂದರಲ್ಲಿಯೇ ಮೂರು ನಾಲ್ಕು ತುಂಡುಗಳನ್ನು ಮಾಡಿಕೊಂಡು ಮಾತಾಡುವ ಕಲಾವಿದರು ಹೆಚ್ಚಾಗಿದ್ದಾರೆ. ಈ ಲೇಖನ ಬರೆಯುವ ಹೊತ್ತಿಗೆ ಕನ್ನಡದಲ್ಲಿ ದೈನಿಕ ಧಾರಾವಾಹಿಗಳಾಗಿ ೬೫ ಕಾರ್ಯಕ್ರಮಗಳು ಬರುತ್ತಿವೆ. ಅವುಗಳಲ್ಲಿ ನಾಲ್ಕು ಅಥವಾ ಐದು ಮಾತ್ರ ಮೂಲ ಕನ್ನಡ ಕತೆಗಳನ್ನು ಹೊಂದಿವೆ. ಉಳಿದವು ಇನ್ಯಾವುದೋ ಭಾಷೆಯಿಂದ ಎರವಲು ತಂದ ಕಥಾಹಂದರಗಳು ಅಥವಾ ಪುನರವತರಣಿಕೆಗಳು. ಹೀಗಿದ್ದಾಗ ಭಾಷೆಯನ್ನು ಅಥವಾ ಸಂಸ್ಕೃತಿಯನ್ನು ಕಟ್ಟುವ ಕೆಲಸ ಇಂತಹ ಮಾಧ್ಯಮದಿಂದ ಆದೀತೇ ಎಂಬುದೇ ದೊಡ್ಡ ಪ್ರಶ್ನೆ.<br />
ಈ ಪರಿಸ್ಥಿತಿಗೆ ಕಾರಣಗಳು ಅನೇಕ. ಮೊದಲ ಮತ್ತು ಬಹುಮುಖ್ಯ ಕಾರಣ ನಮ್ಮಲ್ಲಿನ ಬಹುತೇಕ ಟೆಲಿವಿಷನ್ ವಾಹಿನಿಗಳನ್ನು ನಡೆಸುತ್ತಾ ಇರುವವರು ಕನ್ನಡಿಗರಲ್ಲ. ಹೀಗಾಗಿ ಆಯಾ ವಾಹಿನಿಯಲ್ಲಿ ಕೆಲಸ ಮಾಡುತ್ತಾ ಇರುವ ಅನೇಕ ಕನ್ನಡಿಗರಿದ್ದರೂ ಆ ವಾಹಿನಿಗಳಲ್ಲಿ ಕನ್ನಡದ ಅಗತ್ಯ ಪೂರೈಸುವ ಚಟುವಟಿಕೆಗಿಂತ ಆಯಾ ವಾಹಿನಿಯ ಮಾಲೀಕನನ್ನು ಮೆಚ್ಚಿಸುವ ಕೆಲಸ ಆಗುತ್ತಿದೆ. ಇದರೊಂದಿಗೆ ಬಹುತೇಕ ವಾಹಿನಿಗಳಿಗೆ ಕಾರ್ಪೋರೇಟ್ ಅಧಿಕಾರಶಾಹಿ ವ್ಯವಸ್ಥೆಯಿದೆ. ಇಂತಲ್ಲಿ ಪ್ರಸಾರವಾಗುವ ಕಾರ್ಯಕ್ರಮ ವಾರಾಂತ್ಯದಲ್ಲಿ ನೀಡುವ ಜನಪ್ರಿಯತೆಯ ಸಂಖ್ಯೆ ಮಾತ್ರ ಮುಖ್ಯವಾಗುತ್ತದೆ. ಇನ್ನೆಲ್ಲ ವಿವರಗಳು ನಗಣ್ಯವಾಗಿ ಬಿಡುತ್ತವೆ. ಇದರಿಂದಾಗಿ ಬಹುತೇಕ ಕನ್ನಡ ಟೆಲಿವಿಷನ್ ವಾಹಿನಿಗಳಲ್ಲಿ ಕನ್ನಡವನ್ನು ಭಾಷೆಯಾಗಿ ಉಳಿಸುವ ಕೆಲಸ ಆಗುವುದಕ್ಕೆ ಬದಲಾಗಿ ಜಾಹೀರಾತು ಮಾರುಕಟ್ಟೆಯನ್ನು ಒಲಿಸಿಕೊಳ್ಳುವ ಕೆಲಸ ಮಾತ್ರ ಆಗುತ್ತಿದೆ.<br />
ಸಿನಿಮಾ ಎಂಬ ನಾಯಕಮಣಿಗಳ ಜಗತ್ತು<br />
ಇದೇ ಕಾಲಘಟ್ಟದ ಸಿನಿಮಾ ಅಥವಾ ಹಿರಿತೆರೆಯ ಜನಪ್ರಿಯಧಾರೆಯನ್ನು ಗಮನಿಸಿದರೆ ಪರಿಸ್ಥಿತಿ ಭಿನ್ನವಾಗಿಲ್ಲ. ಕನ್ನಡ ಸಿನಿಮಾ ಲೋಕದ ಪ್ರಖ್ಯಾತ ನಿರ್ದೇಶಕರೊಬ್ಬರು ಹೇಳುವ ಪ್ರಕಾರ, ‘ಇಂದು ಸಿನಿಮಾಗೆ ಕತೆಯೇ ಬೇಕಾಗಿಲ್ಲ. ಘಟನೆಯಿಂದ ಘಟನೆಗೆ ಎಂಬಂತೆ ಪಾತ್ರಗಳನ್ನು ನಡೆಸುತ್ತಾ, ಆ ಘಟನೆಯಲ್ಲಿನ ಹಾಸ್ಯವನ್ನು ಅಥವಾ ದುಃಖವನ್ನು ಕಟ್ಟಿಕೊಟ್ಟರೆ ಸಾಕು.’ ಈ ಮಾತಿನ ಹೂರಣವು ಅದಾಗಲೇ ಕಿರುತೆರೆಯ ಬಗ್ಗೆ ಆಡಿದ ವಿವರಗಳಂತೆಯೇ ಇದೆ. ಹೀಗಾಗಿ ಕೇವಲ ಎರಡು ದಶಕಗಳ ಹಿಂದೆ ಇದ್ದಂತಹ ಕತೆಯನ್ನು ಕಟ್ಟಿಕೊಡುತ್ತಿದ್ದ ಸಿನಿಮಾಗಳು ಇಂದು ನೋಡುಗನನ್ನು ಆ ನಿಮಿಷದ ಮನರಂಜನೆಯಲ್ಲಿ ಮುಳುಗಿಸಲು ನಿಟ್ಟುಸಿರು ಬಿಡುತ್ತಿವೆ. ಈ ಪರಿಸ್ಥಿತಿಯಲ್ಲಿ ಹೊಸದಾಗಿ ಕತೆ ಹೆಣೆಯುವ ಸರ್ಕಸ್ ಬೇಡವೆಂದು ಬಹುತೇಕ ನಿರ್ಮಾಪಕರು ಪುನರವತರಣಿಕೆಗಳನ್ನು ಮಾಡುತ್ತಾ ಇದ್ದಾರೆ. ಇದು ಸೃಜನಶೀಲ ಶಕ್ತಿಗಳನ್ನು ಮೂಲೆಗುಂಪು ಮಾಡಿದೆ. ಇಂದು ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗಳ ಮಹಾಪೂರವೇ ಇದ್ದರೂ ಅವರಿಗೆ ಸರಿಯಾದ ವೇದಿಕೆಯೇ ದೊರಕುತ್ತಿಲ್ಲ ಎಂಬುದು ನಿಚ್ಚಳ ಸತ್ಯ. ಆದರೆ ಕನ್ನಡ ಚಿತ್ರ ನಿರ್ಮಾಪಕರು ಮಾತ್ರ ‘ನಮ್ಮಲ್ಲಿ ಕತೆಗಾರರಿಲ್ಲ, ಕತೆ ಇಲ್ಲ’ ಎಂದು ಅಸಡ್ಡಾಳ ಮಾತುಗಳನ್ನಾಡುತ್ತಾ ಇರುವುದನ್ನು ಕಾಣುತ್ತಾ ಇದ್ದೇವೆ.<br />
ಇದರೊಂದಿಗೆ ಈ ದೇಶದ ಬಹುತೇಕ ಚಿತ್ರೋದ್ಯಮಗಳಂತೆಯೇ ನಮ್ಮ ಕನ್ನಡ ಚಿತ್ರೋದ್ಯಮವೂ ಸಹ ಕಳೆದ ನಾಲ್ಕೈದು ದಶಕಗಳಿಂದ ನಾಯಕರನ್ನು ಪೋಷಿಸುತ್ತಾ ತನ್ನ ಅನ್ನ ಹುಟ್ಟಿಸಿಕೊಳ್ಳುತ್ತಿದೆ. ನಾಯಕನ ಜನಪ್ರಿಯತೆಯೇ ಸಿನಿಮಾದ ಮೂಲ ಬಂಡವಾಳ ಎಂಬಂತಹ ಪರಿಸ್ಥಿತಿಯನ್ನು ಚಿತ್ರೋದ್ಯಮ ತಾನೇ ನಿರ್ಮಿಸಿಕೊಂಡಿದೆ. ಹೀಗಾಗಿ ನಾಯಕನ ಆಯ್ಕೆಯೇ ನಿರ್ಮಾಪಕನ ಆಯ್ಕೆಯೂ ಆಗಿರುವಂತಹ ಪರಿಸ್ಥಿತಿ ಇದೆ. ಅನೇಕ ಬಾರಿ ಕತೆ ಮತ್ತು ನಿರ್ದೇಶಕ ಆಯ್ಕೆಯಾಗುವುದಕ್ಕೂ ಮುನ್ನ ನಾಯಕನ ಆಯ್ಕೆಯಾಗಿರುತ್ತದೆ. ಆಯಾ ನಾಯಕನಿಗಾಗಿ ಕತೆ ಹೆಣೆಯುವ, ಆತನ ವರ್ಚಸ್ಸಿಗೆ ತಕ್ಕಂತೆ ಕಥನ ರೂಪಿಸುವ ಕೆಲಸ ನಡೆಯುತ್ತಾ ಇರುತ್ತದೆ. ಈ ನಾಯಕ ಮಣಿಗಳಲ್ಲಿ ಬಹುತೇಕರಿಗೆ ಕನ್ನಡ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಇಲ್ಲ ಎಂಬುದು ಮತ್ತೊಂದು ಕಠೋರ ಸತ್ಯ. ಹೀಗಾಗಿ ಈ ನಾಯಕರು ಆಯ್ದುಕೊಳ್ಳುವ ಕತೆಗೆ ಅವರವರ ಅಭಿಮಾನಿಗಳನ್ನು ವೃದ್ಧಿಸುವ ಗುಣವಿರುತ್ತದೆಯಷ್ಟೆ. ಇಂತಹ ಕತೆಗಳಲ್ಲಿ ಭಾಷೆ ಎಂಬ ಸಂಸ್ಕೃತಿಯ ಮೂಲಬೇರನ್ನು ರೂಢಿಸುವ ಸಣ್ಣ ಪ್ರಯತ್ನವೂ ಇರುವುದಿಲ್ಲ. ಅಕಸ್ಮಾತ್ ಭಾಷೆಯ ಕುರಿತ ಚರ್ಚೆ ಕಂಡಲ್ಲಿ ಅದು ಆಯಾ ಸಿನಿಮಾದ ಮೊದಲರ್ಧದಲ್ಲಿ ಅದೇ ನಾಯಕನನ್ನು ಬಳಸಿ ಮಾಡಿದ ಒಂದು ಕನ್ನಡ ಕುರಿತ ಹಾಡಿಗೆ ಮಾತ್ರ ಸೀಮಿತವಾಗಿರುತ್ತದೆಯಷ್ಟೆ.<br />
ಇವುಗಳಾಚೆಗೆ ಇಂತಹ ಸಿನಿಮ ಸಂಸ್ಕೃತಿಯಲ್ಲಿ ಅಭಿನಯದ ಸಾವು ಸಹ ನಿರಂತರವಾಗಿ ಆಗುತ್ತಿದೆ ಎಂಬುದನ್ನು ಗಮನಿಸಬೇಕು. ನಮ್ಮಲ್ಲಿನ ನಾಯಕರಿಗೆ ತಮ್ಮ ಪಾತ್ರವಷ್ಟೇ ಮುಖ್ಯವಾಗಿ, ಆ ಪಾತ್ರದ ಆಸುಪಾಸಿನಲ್ಲಿ ಇರುವ ಇನ್ನಿತರ ಪೋಷಕ ಪಾತ್ರಗಳನ್ನು ಸುಪುಷ್ಟವಾಗಿಸುವ ಆಸಕ್ತಿ ಇರುವುದಿಲ್ಲ. ಹೀಗಾಗಿ ಕನ್ನಡ ಚಿತ್ರೋದ್ಯಮದ ಬಹುತೇಕ ಪೋಷಕ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಇಲ್ಲವೆಂದು ಕೊರಗುವುದನ್ನು ಕಂಡಿದ್ದೇವೆ. ಈ ಮಾತಿಗೆ ಅಪವಾದಗಳಿವೆ. ಆದರೆ ಅಂತಹ ಸಿನಿಮಾಗಳ ಸಂಖ್ಯೆ ತೀರಾ ಗೌಣವೆನಿಸುವಷ್ಟಿದೆ. ಇದನ್ನು ಸಮಕಾಲೀನ ಚಲನಚಿತ್ರ ಚರಿತ್ರೆಯ ದುರಂತ ಎನ್ನಬಹುದು.<br />
ಕಲಾತ್ಮಕ ಚಿತ್ರಗಳು ಇಂತಹ ಮೌಢ್ಯಗಳಿಂದ ದೂರ ಉಳಿದಿವೆ. ಆದರೆ ಅವುಗಳನ್ನು ಪ್ರದರ್ಶಿಸಲು ಇರುವ ಅವಕಾಶಗಳು ಕಡಿಮೆಯಾಗಿರುವುದರಿಂದ ಉತ್ತಮ ಪ್ರಯೋಗಗಳು ಕನ್ನಡ ಜನಮಾನಸದ ಕಣ್ಣಿಗೆ ತಾಗುತ್ತಿಲ್ಲ. ಇದರಿಂದಾಗಿ ಗಿರೀಶರ ‘ಕನಸೆಂಬೋ ಕುದುರೆಯನೇರಿ’ಯಂತಹ ಸಿನಿಮಾದಲ್ಲಿ ಬಿರಾದರ್ ಅಂತಹ ಕಲಾವಿದ ಅಪರೂಪ ಎನಿಸುವ ನಟನೆಯನ್ನು ಮಾಡಿದ್ದರು, ಅದನ್ನು ನೋಡಿ, ಆನಂದಿಸಿ, ಬೆನ್ನು ತಟ್ಟಿದ ಕನ್ನಡಿಗರ ಸಂಖ್ಯೆ ಕಡಿಮೆ. ಇದೇ ಮಾತನ್ನು ಕನ್ನಡದ ಇನ್ನೂ ಅನೇಕ ಚಿತ್ರಗಳನ್ನು ಕುರಿತು ಹೇಳಬಹುದು. ನಾಯಕ ಪ್ರಣೀತವಲ್ಲದ್ದು ಬಾಳುವುದಿಲ್ಲ ಎಂಬಂತಹ ವಾತಾವರಣವನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಹೀಗಾಗಿ ಒಳ್ಳೆಯದು ಎಂದು ಗುರುತಿಸಬಹುದಾದ್ದು ಪ್ರೇಕ್ಷಕರ ಬಳಿಗೆ ತಲುಪುತ್ತಿಲ್ಲ. ತಲುಪುತ್ತಾ ಇರುವುದು ನಾಡಿಗೆ ಮತ್ತು ಭಾಷೆಗೆ ಒಳ್ಳೆಯದನ್ನು ಮಾಡುತ್ತಿಲ್ಲ ಎಂಬ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದ್ದೇವೆ.<br />
ಇಂತಹ ಸಂದರ್ಭದಲ್ಲಿ ನಾಡಿನ ಒಂದು ಬಣ ಇತರೆ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ಮಾತಿನ ಮರುಲೇಪನ ಮಾಡುವುದೇ ಉತ್ತಮ ಎಂಬ ಮಾತನ್ನೂ ಆಡುತ್ತಿದೆ. ಇದು ಆ ಮಾತಾಡುತ್ತಾ ಇರುವವರ ತಪ್ಪಲ್ಲ. ನಮ್ಮಲ್ಲಿ ತಯಾರಾಗುತ್ತಿರುವ ‘ಜನಪ್ರಿಯ ಸರಕು’ ಹುಳುಕು ಹಿಡಿದಿದೆ. ಹಾಗಾಗಿ ಕನ್ನಡ ನೋಡುಗ ಉತ್ತಮವಾದುದನ್ನು ಕನ್ನಡದಲ್ಲಿ ನೋಡಬೇಕೆಂಬ ಆಸೆಯಿಂದಲೇ ಇತರೆ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಬಿಡುಗಡೆಗೊಳಿಸಿ ಅನ್ನುತ್ತಾ ಇದ್ದಾನೆ. ಆದರೆ ಇದು ಇನ್ನೂ ದೊಡ್ಡ ಅಪಾಯಕ್ಕೆ ಕನ್ನಡವನ್ನು ತಳ್ಳಿದಂತಾಗುತ್ತದೆ. ಮೊದಲಿಗೆ ಕಳೆದ ಐದು ದಶಕಗಳಿಂದ ದೂರ ಇಟ್ಟಿದ್ದ ಖಾಯಿಲೆಯೊಂದನ್ನು ನಾವೇ ಮನೆಗೆ ಆಹ್ವಾನಿಸದಂತಾಗುತ್ತದೆ. ನಂತರ; ಈ ಡಬ್ಬಿಂಗ್ ಪಿಡುಗಿನಿಂದಾಗಿ ನಾವು ತುಟಿಚಲನೆಗಾಗಿ ಜೋಡಿಸುವ ಮಾತಿನ ಸರಣಿಯ ಕೃತ್ರಿಮತೆಯು ಅದೇ ಸ್ವರೂಪದಲ್ಲಿ ನಮ್ಮ ಮುಂದಿನ ತಲೆಮಾರುಗಳಿಗೆ ತಲುಪಿ, ಭಾಷೆಯ ಅಂದವನ್ನೇ ನಾಶ ಮಾಡುತ್ತದೆ. ಮೂಲ ಭಾಷೆಯ ವಾಕ್ಯ ರಚನಾ ಕ್ರಮದಲ್ಲಿ ಮೂಡುವ ಪ ವರ್ಗದ ಮಾತುಗಳಿಗೆ ಹೊಂದುವ ಹಾಗೆ ಕನ್ನಡದ ಮಾತನ್ನು ಕಟ್ಟಿ, ತುಟಿ ಚಲನೆಗೆ ತಕ್ಕಂತೆ ಕನ್ನಡಿಗರಿಂದ ಆ ಮಾತಾಡಿಸುವುದರಿಂದಾಗಿ ನಮ್ಮ ಭಾಷೆಯ ಮಾತು ಕಟ್ಟುವ ಕ್ರಮ ದಿಕ್ಕಾಪಾಲಾಗುತ್ತದೆ. ಉದಾಹರಣೆಗೆ ಎಂದು ಗಮನಿಸಿ ‘ಮೇ ತುಝೇ ಪ್ಯಾರ್ ಕರ್‌ತಾ ಹೂಂ’ ಎಂಬ ಹಿಂದಿ ನುಡಿಗಟ್ಟನ್ನು, ‘ಐ ಸ್ಲೆಪ್ಟ್ ವಿತ್ ಮೈ ಬಾಯ್‌ಫ್ರೆಂಡ್ ಮಮ್ಮಿ!’ ಎಂಬ ಇಂಗ್ಲೀಷ್ ನುಡಿಕಟ್ಟನ್ನು ಕನ್ನಡಕ್ಕೆ ಪವರ್ಗದಲ್ಲಿ ಪವರ್ಗದ ಕನ್ನಡ ಶಬ್ದ ಹುಟ್ಟುವಂತೆ ತರ್ಜುಮೆ ಮಾಡಿ ನೋಡಿ. ಡಬ್ಬಿಂಗ್ ಪಿಡುಗು ಎಂತಹ ಅವಗಢ ಸೃಷ್ಟಿಸಬಲ್ಲದು ಎಂಬುದು ತಕ್ಷಣವೇ ತಿಳಿಯುತ್ತದೆ. ಇದನ್ನರಿಯದ ಜನ, ನಮ್ಮಲ್ಲಿ ತಯಾರಾಗುತ್ತಿರುವ ಜನಪ್ರಿಯ ಸರಕನ್ನು ಬೈಯ್ಯಲೆಂಬಂತೆ ಡಬ್ಬಿಂಗ್ ಬರಲಿ ಎನ್ನುತ್ತಾ ಇದ್ದಾರೆ. ಆದರೆ ಆ ಪಿಡುಗು ಕನ್ನಡಕ್ಕೆ ಮರಳಿ ಬರುವುದು ಎಂದರೆ ತಾಯಿಬೇರಿಗೆ ಕೊಡಲಿ ಹಾಕಿದಂತಾಗುತ್ತದೆ.<br />
ಈ ಎಲ್ಲಾ ಹಿನ್ನೆಲೆಯಲ್ಲಿ ಗಮನಿಸಿದಾಗ ಇಂದು ಮಾಧ್ಯಮ ಎಂಬುದು, ವಿಶೇಷವಾಗಿ ದೃಶ್ಯ ಮಾಧ್ಯಮ ಮತ್ತು ಶ್ರವ್ಯ ಮಾಧ್ಯಮಗಳು ನಮ್ಮ ಭಾಷೆಯನ್ನು ಕಟ್ಟುವ ಕೆಲಸ ಮಾಡುವುದಕ್ಕಿಂತ ಹೆಚ್ಚು ಭಾಷಾವಿನಾಶದ ಕೆಲಸ ಮಾಡುತ್ತಿವೆ. ನಾವು ನಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಈ ಮಾಧ್ಯಮಗಳ ಮೂಲಕವೇ ಮುಂದಿನ ತಲೆಮಾರಿಗೆ ದಾಟಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಮಾಧ್ಯಮಗಳನ್ನು ಪುನರ್‌ನಿರ್ಮಾಣಕ್ಕೆ ಒಡ್ಡಬೇಕಿದೆ. ಕನ್ನಡ ದೃಶ್ಯ ಮಾಧ್ಯಮಗಳಿಗಾಗಿ ಪ್ರತ್ಯೇಕ ಸಂಹಿತೆಯೊಂದನ್ನು ಸಿದ್ಧಪಡಿಸಿಕೊಳ್ಳಬೇಕಿದೆ. ಕನ್ನಡ ಪ್ರೀತಿಯ ಜೊತೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಲಾಭ ಎನ್ನುವುದು ವಾರಂತ್ಯದಲ್ಲಿ ದೊರೆಯುವ ಸಂಖ್ಯೆಯಿಂದ ಬರುವ ತೈಲಿಯಲ್ಲ ಅದು ಭಾಷೆಯ ಮೇಲೆ ಆಗುವ ಪರಿಣಾಮ ಎಂಬುದರ ಅರಿವಿನೊಂದಿಗೆ ಕನ್ನಡದ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಈ ಮಾಧ್ಯಮದಲ್ಲಿ ದುಡಿಯುತ್ತಿರುವ ಎಲ್ಲಾ ಕನ್ನಡ ಮನಸ್ಸುಗಳೂ ಆಲೋಚಿಸಬೇಕಿದೆ.<br />
- ಬಿ.ಸುರೇಶ<br />
೨೩ ಸೆಪ್ಟಂಬರ್ ೨೦೧೧<br />
ಬೆಂಗಳೂರು</p>
<br />Filed under: <a href='http://bsuresha.wordpress.com/category/%e0%b2%87%e0%b2%82%e0%b2%a6%e0%b2%bf%e0%b2%a8-%e0%b2%9a%e0%b2%bf%e0%b2%82%e0%b2%a4%e0%b3%86/'>ಇಂದಿನ ಚಿಂತೆ!</a>, <a href='http://bsuresha.wordpress.com/category/%e0%b2%9a%e0%b2%b2%e0%b2%a8%e0%b2%9a%e0%b2%bf%e0%b2%a4%e0%b3%8d%e0%b2%b0/'>ಚಲನಚಿತ್ರ</a>, <a href='http://bsuresha.wordpress.com/category/%e0%b2%9f%e0%b3%86%e0%b2%b2%e0%b2%bf%e0%b2%b5%e0%b2%bf%e0%b2%b7%e0%b2%a8%e0%b3%8d/'>ಟೆಲಿವಿಷನ್</a>  <a rel="nofollow" href="http://feeds.wordpress.com/1.0/gocomments/bsuresha.wordpress.com/214/"><img alt="" border="0" src="http://feeds.wordpress.com/1.0/comments/bsuresha.wordpress.com/214/" /></a> <a rel="nofollow" href="http://feeds.wordpress.com/1.0/godelicious/bsuresha.wordpress.com/214/"><img alt="" border="0" src="http://feeds.wordpress.com/1.0/delicious/bsuresha.wordpress.com/214/" /></a> <a rel="nofollow" href="http://feeds.wordpress.com/1.0/gofacebook/bsuresha.wordpress.com/214/"><img alt="" border="0" src="http://feeds.wordpress.com/1.0/facebook/bsuresha.wordpress.com/214/" /></a> <a rel="nofollow" href="http://feeds.wordpress.com/1.0/gotwitter/bsuresha.wordpress.com/214/"><img alt="" border="0" src="http://feeds.wordpress.com/1.0/twitter/bsuresha.wordpress.com/214/" /></a> <a rel="nofollow" href="http://feeds.wordpress.com/1.0/gostumble/bsuresha.wordpress.com/214/"><img alt="" border="0" src="http://feeds.wordpress.com/1.0/stumble/bsuresha.wordpress.com/214/" /></a> <a rel="nofollow" href="http://feeds.wordpress.com/1.0/godigg/bsuresha.wordpress.com/214/"><img alt="" border="0" src="http://feeds.wordpress.com/1.0/digg/bsuresha.wordpress.com/214/" /></a> <a rel="nofollow" href="http://feeds.wordpress.com/1.0/goreddit/bsuresha.wordpress.com/214/"><img alt="" border="0" src="http://feeds.wordpress.com/1.0/reddit/bsuresha.wordpress.com/214/" /></a> <img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=214&amp;subd=bsuresha&amp;ref=&amp;feed=1" width="1" height="1" />]]></content:encoded>
			<wfw:commentRss>http://bsuresha.wordpress.com/2011/09/24/%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%95%e0%b2%bf%e0%b2%b0%e0%b3%81%e0%b2%a4%e0%b3%86%e0%b2%b0%e0%b3%86-%e0%b2%95%e0%b2%a8/feed/</wfw:commentRss>
		<slash:comments>2</slash:comments>
	
		<media:content url="" medium="image">
			<media:title type="html">bsuresha</media:title>
		</media:content>
	</item>
		<item>
		<title>ಏರುತ್ತ್ತಿರುವ ಬೆಲೆಗಳು ಮತ್ತು ಅಷ್ಟೇ ಇರುವ ಕೂಲಿ! (ಟಿವಿಠೀವಿ ಪತ್ರಿಕೆಯ ‘ಸಂಘಸುಖ’ ಕಾಲಂಗಾಗಿ &#8211; ಆಗಸ್ಟ್ ೨೦೧೧)</title>
		<link>http://bsuresha.wordpress.com/2011/08/13/%e0%b2%8f%e0%b2%b0%e0%b3%81%e0%b2%a4%e0%b3%8d%e0%b2%a4%e0%b3%8d%e0%b2%a4%e0%b2%bf%e0%b2%b0%e0%b3%81%e0%b2%b5-%e0%b2%ac%e0%b3%86%e0%b2%b2%e0%b3%86%e0%b2%97%e0%b2%b3%e0%b3%81-%e0%b2%ae%e0%b2%a4%e0%b3%8d/</link>
		<comments>http://bsuresha.wordpress.com/2011/08/13/%e0%b2%8f%e0%b2%b0%e0%b3%81%e0%b2%a4%e0%b3%8d%e0%b2%a4%e0%b3%8d%e0%b2%a4%e0%b2%bf%e0%b2%b0%e0%b3%81%e0%b2%b5-%e0%b2%ac%e0%b3%86%e0%b2%b2%e0%b3%86%e0%b2%97%e0%b2%b3%e0%b3%81-%e0%b2%ae%e0%b2%a4%e0%b3%8d/#comments</comments>
		<pubDate>Sat, 13 Aug 2011 15:32:04 +0000</pubDate>
		<dc:creator>bsuresha</dc:creator>
				<category><![CDATA[ಸಂಘ ಸುಖ]]></category>
		<category><![CDATA[ಕನಿಷ್ಟ ವೇತನ]]></category>
		<category><![CDATA[ಕಾರ್ಮಿಕ ಇಲಾಖೆ]]></category>
		<category><![CDATA[ಟೆಲಿವಿಷನ್ ಉದ್ಯಮ]]></category>

		<guid isPermaLink="false">http://bsuresha.wordpress.com/?p=222</guid>
		<description><![CDATA[ಕನಿಷ್ಟ ವೇತನ ನಿಷ್ಕರ್ಷೆ ಆಗಬೇಕಿದೆ ಚಿನ್ನದ ಬೆಲೆ ೨೭ ಸಾವಿರ ಮುಟ್ಟಿದೆ. ಪೆಟ್ರೋಲಂತೂ ಲೀಟರಿಗೆ ೭೦/- ಆಗಿದೆ. ಇನ್ನೇನೂ ಅದು ನೂರರ ಗಡಿ ಮುಟ್ಟಲಿದೆ ಎಂಬ ಮಾತೂ ಕೇಳುತ್ತಿದೆ. ಇದೇ ಹೊತ್ತಿಗೆ ನಾಡಿಗೆ ಶ್ರಾವಣದ ಸಂಭ್ರಮ. ಹಬ್ಬಗಳ ಸಾಲು ಒಂದರ ಹಿಂದೆ ಒಂದರಂತೆ ಬರುತ್ತಿದೆ. ಹೀಗಿರುವಾಗ ನಮ್ಮ ಉದ್ಯಮದಲ್ಲಿ ದುಡಿಯುತ್ತಾ ಇರುವವರಿಗೆ ಸಿಗುತ್ತಿರುವ ಕೂಲಿ ಮಾತ್ರ ನಾಲ್ಕು ವರ್ಷದ ಹಿಂದಿನ ಒಪ್ಪಂದದಂತೆಯೇ ಇಂದಿಗೂ ನಡೆಯುತ್ತಿದೆ. ಅದರಲ್ಲಿ ಕೆಲವು ನಿರ್ಮಾಪಕರಂತೂ ತಮ್ಮಲ್ಲಿ ಕೆಲಸ ಮಾಡುವವರನ್ನು ಇನ್ನೂ ಹಳೆಯ ಜಮೀನ್ದಾರೀ [...]<img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=222&amp;subd=bsuresha&amp;ref=&amp;feed=1" width="1" height="1" />]]></description>
			<content:encoded><![CDATA[<p><strong><span style="text-decoration:underline;">ಕನಿಷ್ಟ ವೇತನ ನಿಷ್ಕರ್ಷೆ ಆಗಬೇಕಿದೆ</span></strong></p>
<p>ಚಿನ್ನದ ಬೆಲೆ ೨೭ ಸಾವಿರ ಮುಟ್ಟಿದೆ. ಪೆಟ್ರೋಲಂತೂ ಲೀಟರಿಗೆ ೭೦/- ಆಗಿದೆ. ಇನ್ನೇನೂ ಅದು ನೂರರ ಗಡಿ ಮುಟ್ಟಲಿದೆ ಎಂಬ ಮಾತೂ ಕೇಳುತ್ತಿದೆ. ಇದೇ ಹೊತ್ತಿಗೆ ನಾಡಿಗೆ ಶ್ರಾವಣದ ಸಂಭ್ರಮ. ಹಬ್ಬಗಳ ಸಾಲು ಒಂದರ ಹಿಂದೆ ಒಂದರಂತೆ ಬರುತ್ತಿದೆ. ಹೀಗಿರುವಾಗ ನಮ್ಮ ಉದ್ಯಮದಲ್ಲಿ ದುಡಿಯುತ್ತಾ ಇರುವವರಿಗೆ ಸಿಗುತ್ತಿರುವ ಕೂಲಿ ಮಾತ್ರ ನಾಲ್ಕು ವರ್ಷದ ಹಿಂದಿನ ಒಪ್ಪಂದದಂತೆಯೇ ಇಂದಿಗೂ ನಡೆಯುತ್ತಿದೆ. ಅದರಲ್ಲಿ ಕೆಲವು ನಿರ್ಮಾಪಕರಂತೂ ತಮ್ಮಲ್ಲಿ ಕೆಲಸ ಮಾಡುವವರನ್ನು ಇನ್ನೂ ಹಳೆಯ ಜಮೀನ್ದಾರೀ ಪದ್ಧತಿಯಂತೆಯೇ ನಡೆಸಿಕೊಳ್ಳುತ್ತಾ ಇದ್ದಾರೆ. ಹೀಗಾಗಿ ನಮ್ಮ ಉದ್ಯಮದಲ್ಲಿ ದಿನಗೂಲಿಗಾಗಿ ಕೆಲಸ ಮಾಡುತ್ತಿರುವ ಪಾಡು ಅಸಹನೀಯವಾಗುತ್ತಿದೆ. ನಮ್ಮಲ್ಲಿನ ಕಲಾವಿದರ ಪರಿಸ್ಥಿತಿ ಹೀಗೇನಿಲ್ಲ. ಕಲಾವಿದರು ತಮ್ಮ ಸಂಬಳವನ್ನು ದಿನವೊಂದಕ್ಕೆ ಕನಿಷ್ಟ ಎರಡು ಸಾವಿರದಿಂದ ಐದು ಸಾವಿರದವರೆಗೆ ಹೆಚ್ಚು ಮಾಡಿಕೊಂಡಿದ್ದಾರೆ. ತಂತ್ರಜ್ಞರು ಸಹ ತಮ್ಮ ಅಳವಿಗೆ ಆಗುವಷ್ಟು ಸಂಬಳ ಹೆಚ್ಚಿಸಿಕೊಂಡಿದ್ದಾರೆ. ಆದರೆ ಹೀಗೆ ಕೂಲಿ ಏರಿಸಿಕೊಳ್ಳುವ ಸೌಲಭ್ಯ ಮಾತ್ರ ನಮ್ಮ ದಿನಗೂಲಿ ಕಾರ್ಮಿಕರಿಗೆ ಇಲ್ಲ ಎಂಬುದು ಖೇದದ ಸಂಗತಿ. ಆ ಜನಕ್ಕೆ ಒಗ್ಗೂಡಿ ಹೋರಾಡುವ ಅವಕಾಶವೂ ಇಲ್ಲದಂತೆ ನಮ್ಮಲ್ಲಿನ ಬಹುತೇಕ ನಿರ್ಮಾಪಕರು ಎರಡನೆಯ ಭಾನುವಾರವೂ ಚಿತ್ರೀಕರಣ ಇಟ್ಟುಕೊಳ್ಳುತ್ತಾರೆ. ದಿನಗೂಲಿ ಕಾರ್ಮಿಕರು ಒಗ್ಗೂಡಿ, ಒಂದೆಡೆ ಸೇರಿ ತಮ್ಮ ಸಮಸ್ಯೆಯನ್ನು ಮಾತಾಡಿಕೊಳ್ಳುವುದಕ್ಕೆ ಬೇಕಾದ ಬಿಡುವೇ ಸಿಗದಂತಹ ಪರಿಸ್ಥಿತಿಯಿದೆ.</p>
<p>ಈ ಸಮಸ್ಯೆಯನ್ನು ದಾಟಿಕೊಳ್ಳುವುದಕ್ಕೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿಯು ಸ್ವತಃ ಮುಂದಾಗಬೇಕಿದೆ. ಈ ಉದ್ಯಮದ ದಿನಭತ್ಯೆ ಕಾರ್ಮಿಕರ ಸಮಾವೇಶವೊಂದನ್ನು ನಿಗದಿಪಡಿಸಿ, ಆ ದಿನ ಎಲ್ಲಾ ಕಾರ್ಮಿಕರು ಸೇರುವಂತೆ ಮಾಡಿ, ಸಮಸ್ಯೆಗಳನ್ನು ಚರ್ಚಿಸುವುದಲ್ಲದೆ, ದಿನಗೂಲಿ ಹೆಚ್ಚಿಸಲು ಕಾರ್ಮಿಕ ಮುಖಂಡರ ಮತ್ತು ಹಾಗೂ ನಿರ್ಮಾಪಕರ ಪ್ರತಿನಿಧಿಗಳ ಸಭೆಯನ್ನು ನಡೆಸಿ, ಹೊಸ ಒಪ್ಪಂದ ಮಾಡಬೇಕಿದೆ.</p>
<p>ಈ ಮಾತನ್ನು ಇಲ್ಲಿ ಆಡುತ್ತಿರುವುದಕ್ಕೆ ಕಾರಣವಿದೆ. ಈಚೆಗೆ ರಾಷ್ಟ್ರ ಮಟ್ಟದಲ್ಲಿ ನೀಡ್ ಬೇಸ್ಡ್ ಮಿನಿಮಮ್ ವೇಜಸ್ ಜಾರಿಗೆ ತರುವ ಪ್ರಯತ್ನವಾಗುತ್ತಾ ಇದೆ. ಇಂತಹದೊಂದು ವರದಿಯ ಪ್ರಕಾರ  ದುಡಿಯುವ ವ್ಯಕ್ತಿಗೆ ಅವನ ಅಗತ್ಯಗಳನ್ನಾಧರಿಸಿ ಕೂಲಿಯನ್ನು ನಿಷ್ಕರ್ಷೆ ಮಾಡಲಾಗುತ್ತದೆ. ಹೀಗೆ ಮಾಡಲಾದಲ್ಲಿ ಬೆಂಗಳೂರು ನಗರಿಯಲ್ಲಿ ದುಡಿವ ಕಾರ್ಮಿಕನೊಬ್ಬನಿಗೆ ತಿಂಗಳಿಗೆ ಕನಿಷ್ಟ ಹನ್ನೆರಡರಿಂದ ಹದಿಮೂರು ಸಾವಿರ ರೂಪಾಯಿಗಳ ವೇತನ ಸಿಗುತ್ತದೆ. ಈ ವರದಿಯು ಮಾರ್ಚ್ ೨೦೧೧ರದು. ಇಂದಿನ ಲೆಕ್ಕ ಹಾಕುವುದಾದರೆ ಈ ಮಿತಿಯೂ ಇನ್ನೂ ಒಂದೆರಡು ಸಾವಿರಗಳಷ್ಟು ವ್ಯತ್ಯಾಸವಾಗುತ್ತದೆ. ಈ ವರದಿಯ ಆಧಾರದಲ್ಲಿ ಗಮನಿಸುವುದಾದರೆ ನಮ್ಮ ಉದ್ಯಮದಲ್ಲಿ ದುಡಿಯುವ ಕನಿಷ್ಟ ವೇತನದ ದಿನಭತ್ಯೆಯ ಕಾರ್ಮಿಕನಿಗೆ (ಆತ ತಿಂಗಳಲ್ಲಿ ೨೦ ದಿನ ಮಾತ್ರ ಕೆಲಸ ಮಾಡಬಹುದು ಎಂಬ ಅಂದಾಜಿನೊಂದಿಗೆ) ಎಂಟು ಗಂಟೆಗಳ ಕೆಲಸಕ್ಕೆ ಕನಿಷ್ಟ ರೂ. ೫೦೦/- ಸಿಗಬೇಕಾಗುತ್ತದೆ. ಇದು ನಿರ್ಮಾಣ ಸಹಾಯಕರಿಗೆ ಸಿಗುವ ಹಣವಾದರೆ ಇನ್ನುಳಿದ ಆತನಿಗೂ ಮೇಲ್ಮಟ್ಟದ ಕಾರ್ಮಿಕರಿಗೆ ಇನ್ನೂ ಹೆಚ್ಚು ಹಣ ಸಿಗಬಹುದು. ಆ ಮಟ್ಟದ ಹಣ ಸಿಕ್ಕಾಗ ಮಾತ್ರ ನಮ್ಮ ಕಾರ್ಮಿಕರ ಮನೆಗಳಲ್ಲೂ ನೆಮ್ಮದಿ ಮೂಡಬಹುದು. ಇದಕಾಗುವುದಕ್ಕೆ ನಿರ್ಮಾಪಕರ ಹಾಗೂ ಕಾರ್ಮಿಕ ನಾಯಕರ ಜಂಟಿ ಸಭೆ ಆಗಬೇಕು. ಅದಾಗುವುದಕ್ಕೆ ಕಾರ್ಮಿಕರನ್ನು ಒಂದುಗೂಡಿಸುವ ಸಭೆ ಆಗುವುದು ಅಗತ್ಯವಿದೆ.</p>
<p><strong><span style="text-decoration:underline;">ಕಾರ್ಮಿಕ ಸ್ವಾಸ್ಥ್ಯ ಬಿಮಾ ಯೋಜನಾ</span></strong><strong></strong></p>
<p>ಇದಲ್ಲದೆ ಈಚೆಗೆ ಕೇಂದ್ರದ ಕಾರ್ಮಿಕ ಸಚಿವರನ್ನು ಖುದ್ದಾಗಿ ಕಾಣುವ ಅವಕಾಶ ದೊರಕಿತ್ತು. ಅವರೊಂದಿಗೆ ಟೆಲಿವಿಷನ್ ಉದ್ಯಮದ ಕಾರ್ಮಿಕರ ಕಷ್ಟಗಳನ್ನು ಕುರಿತು ಮಾತಾಡುವ ಸಮಯವೂ ದೊರೆಯಿತು. ಟೆಲಿವಿಷನ್ ಉದ್ಯಮದ ಕಾರ್ಮಿಕರು ಮಾತ್ರವೇ ಅಲ್ಲದೆ ಎಲ್ಲಾ ಅಸಂಘಟಿತ ವಲಯಗಳ ಕಾರ್ಮಿಕರು ಸಹ ಕಾರ್ಮಿಕ ಸ್ವಾಸ್ಥ್ಯ ಬಿಮಾ ಯೋಜನಾ ಎಂಬ ಕೇಂದ್ರ ಸರ್ಕಾರದ ಹೊಸ ಯೋಜನೆಯ ಲಾಭವನ್ನು ಪಡೆಯಬಹುದು. ಇದರಿಂದಾಗಿ ಸರ್ಕಾರವು ಗುರುತಿಸಿರುವ ಆಸ್ಪತ್ರೆಗಳಲ್ಲಿ ಕೇವಲ ಆಯಾ ಕಾರ್ಮಿಕರು ಮಾತ್ರವೇ ಅಲ್ಲದೆ ಅವರ ಕುಟುಂಬ ವರ್ಗದ (ಕನಿಷ್ಟ ನಾಲ್ಕು ಮಂದಿಯಂತೆ) ಎಲ್ಲರೂ ಸಹ ಗರಿಷ್ಟ ರೂ. ಮೂವತ್ತು ಸಾವಿರ ತಗಲುವ ವೈದ್ಯಕೀಯ ಸೌಲಭ್ಯ ಪಡೆಯಬಹುದು ಮತ್ತು ಯಾವುದೇ ದೊಡ್ಡ ಆಪರೇಷನ್ನಿನ ಅಗತ್ಯವಿದ್ದಲ್ಲಿ ಸರಿಸುಮಾರು ಒಂದು ಲಕ್ಷ ರೂಪಾಯಿಯ ಸೌಲಭ್ಯವನ್ನು ಪಡೆಯಬಹುದು. ಇದಕ್ಕಾಗಿ ಪ್ರತೀ ಕಾರ್ಮಿಕನು ತಾನು ದುಡಿಯುವ ದಿನವೊಂದಕ್ಕೆ ರೂ.೧/-ರಂತೆ ಸಂಘದ ಮೂಲಕ ಸರ್ಕಾರಕ್ಕೆ ಹಣ ಕಟ್ಟಬೇಕಾಗುತ್ತದೆ. ಇಂತಹದೊಂದು ಸೌಲಭ್ಯ ನಮ್ಮ ಉದ್ಯಮದ ಎಲ್ಲಾ ಕಾರ್ಮಿಕರಿಗೆ ದೊರೆಯುವಂತಾಗಬೇಕು. ಅದರಿಂದಾಗುವ ಲಾಭಗಳು ದೊಡ್ಡದು. ಇಂತಹದೊಂದು ಯೋಜನೆಯನ್ನು ಅಸಂಗಟಿತ ಕಾರ್ಮಿಕರಿಗಾಗಿಯೇ ಮಾಡಿರುವ ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಅವರು ಅತ್ಯಂತ ತಾಳ್ಮೆಯಿಂದ ನಾನು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟರು. ಪಾರ್ಲಿಮೆಂಟ್ ಅಧಿವೇಶನ ನಡೆಯುತ್ತಿರುವ ಕಾಲದಲ್ಲಿ ಸಚಿವರೊಬ್ಬರು ತೋರಿದ ಈ ತಾಳ್ಮೆಯನ್ನು ಮೆಚ್ಚಲೇಬೇಕು.</p>
<p>ನಮ್ಮ ಕಾರ್ಮಿಕ ಬಂಧುಗಳು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ನಿನ ಸಹಕಾರದಿಂದ ಈ ಯೋಜನೆಯ ಲಾಭ ಪಡೆಯುವ ದಿನಕ್ಕಾಗಿ ಕಾಯುತ್ತಾ ಇದ್ದೇನೆ. ಉದ್ಯಮದಲ್ಲಿನ ಎಲ್ಲಾ ಬಂಧುಗಳೂ ನೆಮ್ಮದಿಯಾಗಿ ಬದುಕಿದಾಗ ಮಾತ್ರ ಇಂತಹದೊಂದು ಸಂಘ ಕಟ್ಟಿದ್ದು ಸಾರ್ಥಕವಾದೀತು ಎಂದು ನನ್ನ ಭಾವನೆ.</p>
<p>ಎಲ್ಲರಿಗೂ ಬರಲಿರುವ ಅನೇಕ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವಂತಾಗಲಿ ಎಂದು ಹಾರೈಸುತ್ತೇನೆ.</p>
<p><strong>- ಬಿ.ಸುರೇಶ</strong></p>
<p>೧೩ ಆಗಸ್ಟ್ ೨೦೧೧</p>
<p>ಬೆಂಗಳೂರು</p>
<br />Filed under: <a href='http://bsuresha.wordpress.com/category/%e0%b2%b8%e0%b2%82%e0%b2%98-%e0%b2%b8%e0%b3%81%e0%b2%96/'>ಸಂಘ ಸುಖ</a>  <a rel="nofollow" href="http://feeds.wordpress.com/1.0/gocomments/bsuresha.wordpress.com/222/"><img alt="" border="0" src="http://feeds.wordpress.com/1.0/comments/bsuresha.wordpress.com/222/" /></a> <a rel="nofollow" href="http://feeds.wordpress.com/1.0/godelicious/bsuresha.wordpress.com/222/"><img alt="" border="0" src="http://feeds.wordpress.com/1.0/delicious/bsuresha.wordpress.com/222/" /></a> <a rel="nofollow" href="http://feeds.wordpress.com/1.0/gofacebook/bsuresha.wordpress.com/222/"><img alt="" border="0" src="http://feeds.wordpress.com/1.0/facebook/bsuresha.wordpress.com/222/" /></a> <a rel="nofollow" href="http://feeds.wordpress.com/1.0/gotwitter/bsuresha.wordpress.com/222/"><img alt="" border="0" src="http://feeds.wordpress.com/1.0/twitter/bsuresha.wordpress.com/222/" /></a> <a rel="nofollow" href="http://feeds.wordpress.com/1.0/gostumble/bsuresha.wordpress.com/222/"><img alt="" border="0" src="http://feeds.wordpress.com/1.0/stumble/bsuresha.wordpress.com/222/" /></a> <a rel="nofollow" href="http://feeds.wordpress.com/1.0/godigg/bsuresha.wordpress.com/222/"><img alt="" border="0" src="http://feeds.wordpress.com/1.0/digg/bsuresha.wordpress.com/222/" /></a> <a rel="nofollow" href="http://feeds.wordpress.com/1.0/goreddit/bsuresha.wordpress.com/222/"><img alt="" border="0" src="http://feeds.wordpress.com/1.0/reddit/bsuresha.wordpress.com/222/" /></a> <img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=222&amp;subd=bsuresha&amp;ref=&amp;feed=1" width="1" height="1" />]]></content:encoded>
			<wfw:commentRss>http://bsuresha.wordpress.com/2011/08/13/%e0%b2%8f%e0%b2%b0%e0%b3%81%e0%b2%a4%e0%b3%8d%e0%b2%a4%e0%b3%8d%e0%b2%a4%e0%b2%bf%e0%b2%b0%e0%b3%81%e0%b2%b5-%e0%b2%ac%e0%b3%86%e0%b2%b2%e0%b3%86%e0%b2%97%e0%b2%b3%e0%b3%81-%e0%b2%ae%e0%b2%a4%e0%b3%8d/feed/</wfw:commentRss>
		<slash:comments>0</slash:comments>
	
		<media:content url="" medium="image">
			<media:title type="html">bsuresha</media:title>
		</media:content>
	</item>
		<item>
		<title>ನಾವು ನಿಜವಾಗಿ ಸ್ವತಂತ್ರರೇ?  &#8211; ಬಿ.ಸುರೇಶ (ವಿಜಯ ನೆಕ್ಸ್ಟ್‌ ಪತ್ರಿಕೆಗಾಗಿ ಬರೆದ ಲೇಖನ)</title>
		<link>http://bsuresha.wordpress.com/2011/08/12/%e0%b2%a8%e0%b2%be%e0%b2%b5%e0%b3%81-%e0%b2%a8%e0%b2%bf%e0%b2%9c%e0%b2%b5%e0%b2%be%e0%b2%97%e0%b2%bf-%e0%b2%b8%e0%b3%8d%e0%b2%b5%e0%b2%a4%e0%b2%82%e0%b2%a4%e0%b3%8d%e0%b2%b0%e0%b2%b0%e0%b3%87/</link>
		<comments>http://bsuresha.wordpress.com/2011/08/12/%e0%b2%a8%e0%b2%be%e0%b2%b5%e0%b3%81-%e0%b2%a8%e0%b2%bf%e0%b2%9c%e0%b2%b5%e0%b2%be%e0%b2%97%e0%b2%bf-%e0%b2%b8%e0%b3%8d%e0%b2%b5%e0%b2%a4%e0%b2%82%e0%b2%a4%e0%b3%8d%e0%b2%b0%e0%b2%b0%e0%b3%87/#comments</comments>
		<pubDate>Fri, 12 Aug 2011 06:11:48 +0000</pubDate>
		<dc:creator>bsuresha</dc:creator>
				<category><![CDATA[ಇಂದಿನ ಚಿಂತೆ!]]></category>
		<category><![CDATA[ಟೆಲಿವಿಷನ್]]></category>
		<category><![CDATA[ಮಾಧ್ಯಮ]]></category>
		<category><![CDATA[ಸಿನಿಮಾ]]></category>

		<guid isPermaLink="false">http://bsuresha.wordpress.com/?p=219</guid>
		<description><![CDATA[ಸ್ವಾತಂತ್ರ್ಯ ಎಂಬುದೊಂದು ವಿಶಿಷ್ಟ ಕಲ್ಪನೆ. ಆ ಸ್ವಾತಂತ್ರ್ಯದಲ್ಲೂ ಅನೇಕ ಬಗೆಗಳಿವೆ. ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ವೀಕಾರ ಸ್ವಾತಂತ್ರ್ಯ, ವಿಸರ್ಜನಾ ಸ್ವಾತಂತ್ರ್ಯ, ಅಡಿಗೆ ಸ್ವಾತಂತ್ರ್ಯ, ಬದುಕುವ ಸ್ವಾತಂತ್ರ್ಯ, ಮದುವೆಯ ಸ್ವಾತಂತ್ರ್ಯ... ಹೀಗೆ ಹತ್ತು ಹಲವು ಸ್ವಾತಂತ್ರ್ಯಗಳನ್ನು ಕುರಿತು ನಿರಂತರವಾಗಿ ಚರ್ಚೆಗಳಾಗುತ್ತಲೇ ಇರುತ್ತದೆ. ಇವುಗಳ ನಡುವೆ ಪ್ರತೀವರ್ಷ ಆಗಸ್ಟ್ ೧೫ರಂದು ಸ್ವಾತಂತ್ರ್ಯವನ್ನು ಸಂಭ್ರಮಿಸುವ ಅಭ್ಯಾಸವೂ ನಮ್ಮ ದೇಶದಲ್ಲಿ ಬಂದಿದೆ. ಈ ಅಭ್ಯಾಸಕ್ಕೀಗ ೬೪ ವಸಂತ. ಪ್ರಾಯಶಃ ಅರಳು-ಮರಳಿನ ಆರಂಭಕಾಲ ಎನ್ನಬಹುದು. ಈ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಎಂದರೆ ಏನು ಎಂದು ನಿರ್ವಚಿಸಿಕೊಳ್ಳಬೇಕಾದ ಅಗತ್ಯವೂ ಇದೆ.<img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=219&amp;subd=bsuresha&amp;ref=&amp;feed=1" width="1" height="1" />]]></description>
			<content:encoded><![CDATA[<p>ಸ್ವಾತಂತ್ರ್ಯ ಎಂಬುದೊಂದು ವಿಶಿಷ್ಟ ಕಲ್ಪನೆ. ಆ ಸ್ವಾತಂತ್ರ್ಯದಲ್ಲೂ ಅನೇಕ ಬಗೆಗಳಿವೆ. ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ವೀಕಾರ ಸ್ವಾತಂತ್ರ್ಯ, ವಿಸರ್ಜನಾ ಸ್ವಾತಂತ್ರ್ಯ, ಅಡಿಗೆ ಸ್ವಾತಂತ್ರ್ಯ, ಬದುಕುವ ಸ್ವಾತಂತ್ರ್ಯ, ಮದುವೆಯ ಸ್ವಾತಂತ್ರ್ಯ&#8230; ಹೀಗೆ ಹತ್ತು ಹಲವು ಸ್ವಾತಂತ್ರ್ಯಗಳನ್ನು ಕುರಿತು ನಿರಂತರವಾಗಿ ಚರ್ಚೆಗಳಾಗುತ್ತಲೇ ಇರುತ್ತದೆ. ಇವುಗಳ ನಡುವೆ ಪ್ರತೀವರ್ಷ ಆಗಸ್ಟ್ ೧೫ರಂದು ಸ್ವಾತಂತ್ರ್ಯವನ್ನು ಸಂಭ್ರಮಿಸುವ ಅಭ್ಯಾಸವೂ ನಮ್ಮ ದೇಶದಲ್ಲಿ ಬಂದಿದೆ. ಈ ಅಭ್ಯಾಸಕ್ಕೀಗ ೬೪ ವಸಂತ. ಪ್ರಾಯಶಃ ಅರಳು-ಮರಳಿನ ಆರಂಭಕಾಲ ಎನ್ನಬಹುದು. ಈ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಎಂದರೆ ಏನು ಎಂದು ನಿರ್ವಚಿಸಿಕೊಳ್ಳಬೇಕಾದ ಅಗತ್ಯವೂ ಇದೆ.</p>
<p>ಸ್ವಾತಂತ್ರ್ಯ ಎಂಬ ಕಲ್ಪನೆಯೇ ನಾವು ಮತ್ತಾರದೋ ಅಧೀನದಲ್ಲಿ ಇದ್ದೇವೆ, ಅದರಿಂದ ಬಿಡುಗಡೆ ದೊರೆಯಬೇಕಿದೆ ಎಂಬುದರಿಂದ ಬಂದಿರುವಂತಹದು. ಹೀಗೆ ಬಿಡುಗಡೆ ಪಡೆಯುವ ಕ್ರಮದಲ್ಲಿಯೇ ಹೊಸ ಸಂಕೋಲೆಗಳು ನಮ್ಮನ್ನು ಸುತ್ತುವರೆಯುತ್ತಲೇ ಇರುತ್ತವೆ ಎಂಬುದನ್ನರಿತೂ ನಾವು ಸ್ವಾತಂತ್ರ್ಯವನ್ನು ಬಯಸುತ್ತೇವೆ. ‘ಬಿಡುಗಡೆಯ ಬಯಸಿ’ ಎಂಬ ಪದಗುಚ್ಛವಂತೂ ನಮ್ಮ ಬಹುತೇಕ ಮಾತುಗಳಲ್ಲಿ/ ಕವನಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಯಾವುದರಿಂದ ಬಿಡುಗಡೆ? ಯಾವುದರಿಂದ ಸ್ವತಂತ್ರರಾಗಬೇಕಿದೆ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ?</p>
<p>ಈ ಸ್ವಾತಂತ್ರ್ಯದ ವಾದಗಳನ್ನು ‘ಭಾರತದ ಸ್ವಾತಂತ್ರ್ಯ ಹಬ್ಬದ ದಿನ’ವೇ ನೆನೆಯುವುದಕ್ಕೆ ಕಾರಣವಿದೆ. ನಮ್ಮ ಬದುಕುಗಳು ಕಳೆದ ಎರಡು ದಶಕಗಳಲ್ಲಿ ಮಾರ್ಕೆಟ್ ಎಕಾನಮಿ ಎಂಬ ದೊಡ್ಡ ಪುಗ್ಗಾವನ್ನು ಊದಿಕೊಂಡಿದೆ. ಈ ಪುಗ್ಗದ ಒಳಗಿನ ಭ್ರಮೆಯು ನಮ್ಮೆಲ್ಲರನ್ನು ಕೊಳ್ಳುಬಾಕರನ್ನಾಗಿಸಿ, ‘ಕೊಳ್ಳುವ ಸ್ವಾತಂತ್ರ್ಯ’ ಎಂಬ ಹೊಸದೊಂದು ಸ್ವಾತಂತ್ರ್ಯವನ್ನು ನಮ್ಮೆಲ್ಲರಿಗೆ ಒದಗಿಸಿದೆ. ಈ ಹೊಸ ಸ್ವಾತಂತ್ರ್ಯದ ಪರಿಣಾಮವಾಗಿ ನಮ್ಮ ಬದುಕಿನಲ್ಲಿ ಆಗುತ್ತಿರುವ ತಲ್ಲಣಗಳು ಅನೇಕ. ಉದಾಹರಣೆಗೆಂದು ಹೇಳುವುದಾದರೆ, ಮನೆಗಳ ಒಳಗೆ ಕೊಳ್ಳುವ ಹುಕಿಗೆ ಸಿಕ್ಕವರು ಕೊಳ್ಳಬಲ್ಲವರ ತೆಕ್ಕೆ ಜೋತು ಬೀಳುತ್ತಾರೆ. ಹೀಗಾಗಿ ಕೊಳ್ಳುವ ಆಸೆಯುಳ್ಳವರು ಬಯಸುವ ಸ್ವಾತಂತ್ರ್ಯ ಒಂದು ಬಗೆಯದಾದರೆ, ಕೊಡಿಸುವ ಶಕ್ತಿ ಉಳ್ಳವರು ಈ ಜೋತು ಬೀಳುವವರಿಂದ ಬಿಡುಗಡೆ ಹೇಗೆ ಎಂಬ ಸ್ವಾತಂತ್ರ್ಯದ ಚಿಂತೆಗೆ ಸಿಕ್ಕಿಕೊಳ್ಳುತ್ತಾರೆ. ಇದೆ ಚಿಂತನೆಯ ಮುಂದುವರಿಕೆಯಾಗಿ ನೊಡುಗರಿಗೆ ಕೊಳ್ಳುವ ಆಸೆಯನ್ನು ಮುಡಿಸುವುದೇ ಪ್ರಧಾನ ಕಾರಣ ಎಂಬಂತೆ ಕತೆ ಹೆಣೆಯುವ ಟೆಲಿವಿಷನ್ ಉದ್ಯಮವೂ ಇದೆ. ಟಿವಿ ಮಾಧ್ಯಮ ಬಳಸಿ ಕತೆ ಹೇಳುವ ಪ್ರತಿಯೊಬ್ಬನೂ, ತನ್ನ ಕಾರ್ಯಕ್ರಮದ ನೋಡುಗನಿಗೆ ಜಾಹೀರಾತುಗಳ ಮೂಲಕ ಕೊಳ್ಳುವ ಬಯಕೆಯನ್ನು ಮೂಡಿಸಬೇಕಾಗುತ್ತದೆ. ಹೀಗಾಗಿ ಆತನ ಕಥನದ ಆವರಣ ಒಂದು ಸ್ಪಷ್ಟ ಬಂಧನದ ಒಳಗಡೆಯೇ ಕಟ್ಟಿಕೊಳ್ಳುತ್ತದೆ. ಇಲ್ಲಿ ಸೃಜನಶೀಲ ಸ್ವಾತಂತ್ರ್ಯದ ಮಾತಾಡುವುದು ಕೂಡ ಕಷ್ಟ. ಹಾಗಾದರೆ ಈ ಜನ ಸ್ವತಂತ್ರರೇ&#8230; ‘ಹೌದು ಎನ್ನುವುದು ಅನಿವಾರ್ಯ! ಅಲ್ಲ ಎನ್ನುವುದು ಸತ್ಯ!’ ಇಂತಹ ಅಡಕತ್ತಿನಲ್ಲಿ ಟೆಲಿವಿಷನ್ ಉದ್ಯಮದ ಸೃಜನಶೀಲ ಸ್ವಾತಂತ್ರ್ಯ ಉಸಿರಾಡುತ್ತದೆ.</p>
<p>ಇದೇ ರೀತಿ ನಮ್ಮ ಸಿನಿಮಾ ಉದ್ಯಮದೊಳಗೂ ಸಹ ನೋಡುಗನನ್ನು ಭ್ರಮಾಧೀನಗೊಳಿಸಲೆಂದೇ ಕತೆ ಹೆಣೆಯುವ ಅನಿವಾರ್ಯ ಸೂತ್ರವೊಂದನ್ನು ರೂಢಿಸಿಕೊಳ್ಳಲಾಗಿದೆ. ಇಲ್ಲಿಯೂ ಸೃಜನಶೀಲತೆ ಎನ್ನುವುದು ವಿತ್ತೀಯ ಪ್ರತಿಭೆಗಳ ಬಂಧನಕ್ಕೆ ಒಳಗಾಗಿರುತ್ತದೆ. ಹೀಗಾಗಿಯೇ ಕತೆ ಹೆಣೆಯುವುದು ಬಿಡುಗಡೆಯ ಭಾವ ಹುಟ್ಟಿಸುವುದಕ್ಕಿಂತ ‘ಖಜಾನೆ ಭಯ’ದ ಸ್ವರೂಪವನ್ನು ಪಡೆದುಕೊಳ್ಳುವುದನ್ನು ಕಾಣುತ್ತೇವೆ. ಇಲ್ಲಿ ಹಣ ಹೂಡಿದವನಿಗೆ ಮರಳಿ ಪಡೆವ ಹುಕಿಯಾದರೆ, ಕತೆ ಹೆಣೆಯುವವನಿಗೆ ಹೂಡಿಕೆದಾರನ ಇಚ್ಛೆ ಪೂರೈಸುವ ಬಂಧನವಿರುತ್ತದೆ. ಹೀಗಾಗಿ ಇಲ್ಲಿಯೂ ಸ್ವಾತಂತ್ರ್ಯ ಎಂದರೆ ‘ಬೆಟ್ಟದ ಜೀವ’ದಲ್ಲಿನ ವೃದ್ಧನ ಮಾತಿನಂತೆ ‘ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ’</p>
<p>ಈ ಹಿನ್ನೆಲೆಯಲ್ಲಿ ‘ಅರಿದೆನೆಂಬುದು ತಾ ಬಯಲು/ ಅರಿಯೆನೆಂಬುದು ತಾ ಬಯಲು/ ಅರುಹಿನ ಕುರುಹಿನ ಮರಹಿನೊಳಗೆ/ ಗುಹೇಶ್ವರನೆಂಬುದು ತಾ ಬಯಲು’ ಎಂಬ ಅಲ್ಲಮನ ವಚನದಂತೆ ಸ್ವಾತಂತ್ರ್ಯವನ್ನು ಬಯಸುತ್ತಾ, ಬಂಧನದೊಳಗೆ ಇದ್ದೂ, ಸ್ವತಂತ್ರರು ಎಂದುಕೊಳ್ಳುವುದೇ ಬಿಡುಗಡೆಯ ಭಾವ ಎನ್ನಬಹುದು. ಈ ಸಾಲು ಓದಿ ನಿಮ್ಮ ಮುಖದ ಮೇಲೆ ತಿಳಿ ನಗು ಮುಡಿತೋ, ಗೊಂದಲವಾಯಿತೋ ಅರಿಯೇ. ಆದರೆ, ಹೀಗೊಂದು ಅಸಂಗತ ಸಾಲು ಕಟ್ಟುವ ಪರಿಸ್ಥಿತಿಯಲ್ಲಿರುವಾಗ ‘ಸ್ವಾತಂತ್ರ್ಯ ಎಂದರೆ’ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳುವುದೇ ಅಸಂಗತವಾಗಿ ಕಾಣಬಹುದಲ್ಲವೇ?</p>
<p align="center">* * *</p>
<p><strong> </strong></p>
<br />Filed under: <a href='http://bsuresha.wordpress.com/category/%e0%b2%87%e0%b2%82%e0%b2%a6%e0%b2%bf%e0%b2%a8-%e0%b2%9a%e0%b2%bf%e0%b2%82%e0%b2%a4%e0%b3%86/'>ಇಂದಿನ ಚಿಂತೆ!</a>, <a href='http://bsuresha.wordpress.com/category/%e0%b2%9f%e0%b3%86%e0%b2%b2%e0%b2%bf%e0%b2%b5%e0%b2%bf%e0%b2%b7%e0%b2%a8%e0%b3%8d/'>ಟೆಲಿವಿಷನ್</a>  <a rel="nofollow" href="http://feeds.wordpress.com/1.0/gocomments/bsuresha.wordpress.com/219/"><img alt="" border="0" src="http://feeds.wordpress.com/1.0/comments/bsuresha.wordpress.com/219/" /></a> <a rel="nofollow" href="http://feeds.wordpress.com/1.0/godelicious/bsuresha.wordpress.com/219/"><img alt="" border="0" src="http://feeds.wordpress.com/1.0/delicious/bsuresha.wordpress.com/219/" /></a> <a rel="nofollow" href="http://feeds.wordpress.com/1.0/gofacebook/bsuresha.wordpress.com/219/"><img alt="" border="0" src="http://feeds.wordpress.com/1.0/facebook/bsuresha.wordpress.com/219/" /></a> <a rel="nofollow" href="http://feeds.wordpress.com/1.0/gotwitter/bsuresha.wordpress.com/219/"><img alt="" border="0" src="http://feeds.wordpress.com/1.0/twitter/bsuresha.wordpress.com/219/" /></a> <a rel="nofollow" href="http://feeds.wordpress.com/1.0/gostumble/bsuresha.wordpress.com/219/"><img alt="" border="0" src="http://feeds.wordpress.com/1.0/stumble/bsuresha.wordpress.com/219/" /></a> <a rel="nofollow" href="http://feeds.wordpress.com/1.0/godigg/bsuresha.wordpress.com/219/"><img alt="" border="0" src="http://feeds.wordpress.com/1.0/digg/bsuresha.wordpress.com/219/" /></a> <a rel="nofollow" href="http://feeds.wordpress.com/1.0/goreddit/bsuresha.wordpress.com/219/"><img alt="" border="0" src="http://feeds.wordpress.com/1.0/reddit/bsuresha.wordpress.com/219/" /></a> <img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=219&amp;subd=bsuresha&amp;ref=&amp;feed=1" width="1" height="1" />]]></content:encoded>
			<wfw:commentRss>http://bsuresha.wordpress.com/2011/08/12/%e0%b2%a8%e0%b2%be%e0%b2%b5%e0%b3%81-%e0%b2%a8%e0%b2%bf%e0%b2%9c%e0%b2%b5%e0%b2%be%e0%b2%97%e0%b2%bf-%e0%b2%b8%e0%b3%8d%e0%b2%b5%e0%b2%a4%e0%b2%82%e0%b2%a4%e0%b3%8d%e0%b2%b0%e0%b2%b0%e0%b3%87/feed/</wfw:commentRss>
		<slash:comments>0</slash:comments>
	
		<media:content url="" medium="image">
			<media:title type="html">bsuresha</media:title>
		</media:content>
	</item>
		<item>
		<title>ಟೆಲಿವಿಷನ್ ಎಂಬ ಅದ್ಭುತವೂ ಮತ್ತು&#8230;</title>
		<link>http://bsuresha.wordpress.com/2011/08/10/%e0%b2%9f%e0%b3%86%e0%b2%b2%e0%b2%bf%e0%b2%b5%e0%b2%bf%e0%b2%b7%e0%b2%a8%e0%b3%8d-%e0%b2%8e%e0%b2%82%e0%b2%ac-%e0%b2%85%e0%b2%a6%e0%b3%8d%e0%b2%ad%e0%b3%81%e0%b2%a4%e0%b2%b5%e0%b3%82-%e0%b2%ae/</link>
		<comments>http://bsuresha.wordpress.com/2011/08/10/%e0%b2%9f%e0%b3%86%e0%b2%b2%e0%b2%bf%e0%b2%b5%e0%b2%bf%e0%b2%b7%e0%b2%a8%e0%b3%8d-%e0%b2%8e%e0%b2%82%e0%b2%ac-%e0%b2%85%e0%b2%a6%e0%b3%8d%e0%b2%ad%e0%b3%81%e0%b2%a4%e0%b2%b5%e0%b3%82-%e0%b2%ae/#comments</comments>
		<pubDate>Wed, 10 Aug 2011 11:11:43 +0000</pubDate>
		<dc:creator>bsuresha</dc:creator>
				<category><![CDATA[ಟೆಲಿವಿಷನ್]]></category>
		<category><![CDATA[ಕೇಬಲ್ ದಿನ]]></category>
		<category><![CDATA[ಮಾಧ್ಯಮ ಕುರಿತು]]></category>

		<guid isPermaLink="false">http://bsuresha.wordpress.com/?p=210</guid>
		<description><![CDATA[(ಕೇಬಲ್ ದಿನದ ಅಂಗವಾಗಿ ಪ್ರಕಟವಾಗುತ್ತಿರುವ ಸ್ಮರಣ ಸಂಚಿಕೆಗೆ ಬರೆದ ಲೇಖನ)

ಟೆಲಿವಿಷನ್ ಇಂದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಧ್ಯಮವರ್ಗಿಗಳನ್ನು ಏಕಕಾಲಕ್ಕೆ ಕೊಳ್ಳುಬಾಕ ಸಂಸ್ಕೃತಿಗೆ ತಳ್ಳುತ್ತಾ, ಮತ್ತೊಂದೆಡೆ ಅವರನ್ನು ಇಡಿಯ ಜಗತ್ತಿನ ತುಂಬಾ ಅಪರಾಧಿಗಳು, ಕೊಲೆಪಾತಕಿಗಳೇ ಇದ್ದಾರೇನೋ ಎಂಬಂತಹ ಆತಂಕಕ್ಕೆ ದೂಡುತ್ತಾ ಬದುಕುವ ಈ ಮಾಧ್ಯಮ ಎಂಬುದು ಮೂಲತಃ ಆರಂಭವಾದ ಕಾರಣಗಳನ್ನು ಬಿಟ್ಟು ಇಂದು ಬೇರೆಯದೇ ಸ್ವರೂಪ ಪಡೆದುಕೊಂಡಿದೆ. ಅದಕ್ಕೆ ಕಾರಣಗಳೇನು ಎಂದು ಅರ್ಥ ಮಾಡಿಕೊಳ್ಳುವ ಪ್ರಯತ್ನವಾಗಿ ಈ ಅಕ್ಷರಗಳು ಪ್ರಯತ್ನಿಸಿವೆ.<img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=210&amp;subd=bsuresha&amp;ref=&amp;feed=1" width="1" height="1" />]]></description>
			<content:encoded><![CDATA[<p>(ಕೇಬಲ್ ದಿನದ ಅಂಗವಾಗಿ ಪ್ರಕಟವಾಗುತ್ತಿರುವ ಸ್ಮರಣ ಸಂಚಿಕೆಗೆ ಬರೆದ ಲೇಖನ)</p>
<p>ಟೆಲಿವಿಷನ್ ಇಂದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಧ್ಯಮವರ್ಗಿಗಳನ್ನು ಏಕಕಾಲಕ್ಕೆ ಕೊಳ್ಳುಬಾಕ ಸಂಸ್ಕೃತಿಗೆ ತಳ್ಳುತ್ತಾ, ಮತ್ತೊಂದೆಡೆ ಅವರನ್ನು ಇಡಿಯ ಜಗತ್ತಿನ ತುಂಬಾ ಅಪರಾಧಿಗಳು, ಕೊಲೆಪಾತಕಿಗಳೇ ಇದ್ದಾರೇನೋ ಎಂಬಂತಹ ಆತಂಕಕ್ಕೆ ದೂಡುತ್ತಾ ಬದುಕುವ ಈ ಮಾಧ್ಯಮ ಎಂಬುದು ಮೂಲತಃ ಆರಂಭವಾದ ಕಾರಣಗಳನ್ನು ಬಿಟ್ಟು ಇಂದು ಬೇರೆಯದೇ ಸ್ವರೂಪ ಪಡೆದುಕೊಂಡಿದೆ. ಅದಕ್ಕೆ ಕಾರಣಗಳೇನು ಎಂದು ಅರ್ಥ ಮಾಡಿಕೊಳ್ಳುವ ಪ್ರಯತ್ನವಾಗಿ ಈ ಅಕ್ಷರಗಳು ಪ್ರಯತ್ನಿಸಿವೆ.<br />
ಕನ್ನಡಕ್ಕೆ ಟೆಲಿವಿಷನ್ ಬಂದುದು 1983ರಲ್ಲಿ. ಅದೂ ಮದರಾಸು ದೂರದರ್ಶನವು ಪ್ರಸಾರ ಮಾಡುತ್ತಿದ್ದ ಅರ್ಧ ಗಂಟೆಯ ಕನ್ನಡದ ಕಾರ್ಯಕ್ರಮಗಳಿಗಾಗಿ ಇನ್ನೆರಡು ತಾಸು ತಮಿಳಿನ ಕಾರ್ಯಕ್ರಮವನ್ನೂ ಕನ್ನಡಿಗರು ನೋಡುತ್ತಾ ಇದ್ದರು. ಆ ಕಾಲದ ಬಾಲಕರಾದ ನನ್ನಂಥವರಿಗೆ `ಒಳಿಯುಂ ಒಳಿಯುಂ&#8217; ಮೂಲಕವೇ ತಮಿಳು ಭಾಷೆಯ ಪರಿಚಯವಾಗಿತ್ತು. ನಂತರ 1985ರಲ್ಲಿ ಬೆಂಗಳೂರಿನಲ್ಲಿಯೇ ಒಂದು ಸ್ಟುಡಿಯೋ ಸ್ಥಾಪನೆಯಾಗಿ ದಿನಕ್ಕೆ ಎರಡು ಗಂಟೆಗಳ ಕನ್ನಡ ಕಾರ್ಯಕ್ರಮ ನೋಡುವಂತಾಯಿತು. ಆಗ ಕಪ್ಪುಬಿಳುಪು ಟಿವಿಗಳು ಮನೆಗಳ ಅಂಗಳದಲ್ಲಿ ಪ್ರತಿಷ್ಠಾಪಿತ ವಾಗತೊಡಗಿದವು. ಟಿವಿ ಇರುವ ಮನೆಗಳವರಿಗೆ ಮನೆಯ ನೆತ್ತಿಯ ಮೇಲೆ ಆಂಟೆನಾ ಕೂಡಿಸುವುದೇ ಒಂದು ಸಂಭ್ರಮ. ಆ ಸಂಭ್ರಮದ ಜೊತೆಗೆ ಟಿವಿ ಇಲ್ಲದವರಿಗೆ ನಮ್ಮ ಮನೆಗೂ ಅಂತಹದೊಂದು ಬರಬೇಕೆಂಬ ವಾಂಛೆ. ಇವೆಲ್ಲವುಗಳ ನಡುವೆ ಪ್ರಸಾರವಾಗುತ್ತಿದ್ದ ಅನೇಕ ಕಾರ್ಯಕ್ರಮಗಳನ್ನು ನೋಡುತ್ತಾ ಕನ್ನಡದ ಜೊತೆಗೆ ಹಿಂದಿಯನ್ನೂ ನಮ್ಮವರು ಕಲಿತದ್ದು ಸತ್ಯ. ಇದಾಗಿ ಎರಡು ವರ್ಷಗಳಲ್ಲಿ ಸ್ಯಾಟಿಲೈಟ್ ಪ್ರಸಾರವು ಕ್ರಾಂತಿಕಾರಕವಾಗಿ ಬೆಳೆದು, ದೂರದರ್ಶನ ಎಂಬ ಒಂದು ವಾಹಿನಿಯ ಜೊತೆಗೆ ಇನ್ನಷ್ಟು ವಾಹಿನಿಗಳು ಸೇರ್ಪಡೆಯಾದವು. 1990ರ ಹೊತ್ತಿಗೆ ಕನ್ನಡದ ಪ್ರಥಮ ಖಾಸಗಿ ವಾಹಿನಿಯಾಗಿ ಉದಯ ಕೂಡ ಆರಂಭವಾಗಿತ್ತು. ಅಲ್ಲಿಂದಾಚೆಗೆ ಟೆಲಿವಿಷನ್ ಎಂಬುದು ಸಂಭ್ರಮದ ಸಂಕೇತವಾಗಿ ಉಳಿಯದೆ ಪ್ರತೀ ಮನೆಯ ಸಿರಿವಂತಿಕೆಯ ಸಂಕೇತವಾಗಿ, ನಂತರ ಸ್ಟೈಲ್ನ ಸಂಕೇತವಾಗಿ, ನಿಧಾನವಾಗಿ ನಿತ್ಯ ಬಳಕೆಯ ಗೃಹೋಪಯೋಗಿ ವಸ್ತುವಾಗಿ ಹೋದದ್ದು ಈಗ ಇತಿಹಾಸ.<br />
ಇದೇ ಕಾಲಘಟ್ಟದಲ್ಲಿ ಒಂದೇ ಟಿವಿಯಲ್ಲಿ ಹತ್ತೂ ಹದಿನೈದು ಚಾನೆಲ್ಗಳನ್ನು ನೋಡುವ ಅವಕಾಶ ಕಲ್ಪಿಸಲು ಬಂದದ್ದು ಕೇಬಲ್ ಜಾಲ. ಪ್ರತಿ ಬಡಾವಣೆಯಲ್ಲೂ ಯುವಕರು ಡಿಶ್ ಆಂಟೆನಾ ಕಟ್ಟಿ ನೂರಾರು ಮನೆಗಳಿಗೆ ವಾಹಿನಿಗಳನ್ನು ರವಾನಿಸತೊಡಗಿದರು. ಇದರಿಂದ ಅನೇಕರಿಗೆ ಉದ್ಯೋಗ ದೊರೆತದ್ದಲ್ಲದೆ ಕೇಬಲ್ ನಡೆಸುವವರ ಒಂದು ಬೃಹತ್ ಸಮೂಹವೇ ಸೃಷ್ಟಿಯಾಯಿತು. ಈ ಸಮೂಹಗಳೂ ನಿಧಾನವಾಗಿ ಸಂಘಟಿತವಾದವು. ಕೇಬಲ್ ಜಾಲಗಳಿಗೆ ಸ್ಪರ್ಧಿಯಾಗಿ ಈಚೆಗೆ ಡಿಶ್ ಟಿವಿಗಳು ಬಂದಿವೆ. ಅವುಗಳು ಯಾವ ಸ್ವರೂಪ ಪಡೆಯಬಹುದು ಎಂಬುದನ್ನು ನೋಡಬೇಕಿದೆ.<br />
ಆದರೆ ಈ ಎಲ್ಲಾ ಸಾಮಾಜಿಕ ಬದಲುಗಳ ನಡುವೆಯೇ ಟೆಲಿವಿಷನ್ ನೋಡುಗನ ಮನಸ್ಥಿತಿ ಏನಾಗಿದೆ ಎಂದು ಗಮನಿಸಬೇಕಿದೆ. ಟೆಲಿವಿಷನ್ನಿನ ಆರಂಭ ಕಾಲದಲ್ಲಿ ಸುದ್ದಿಯನ್ನ, ಕ್ರೀಡೆಯನ್ನ, ಸಿನಿಮಾ ಹಾಡುಗಳನ್ನ, ವಾರಕ್ಕೊಮ್ಮೆ ಬರುತ್ತಿದ್ದ ಧಾರಾವಾಹಿಗಳನ್ನ ನೋಡುತ್ತಾ ಇದ್ದವರಲ್ಲಿ ನೆನಪಿನ ಭಂಡಾರ ಇರುತ್ತಿತ್ತು. ವಾರದ ಹಿಂದೆ ನೋಡಿದ ಕತೆಯ ಮುಂದಿನ ಭಾಗವನ್ನು ಇಂದು ನೋಡಿ ಅರಗಿಸಿಕೊಳ್ಳುವ ತಾಳ್ಮೆ ಇತ್ತು. ವಾರಕ್ಕೊಮ್ಮೆ (ಭಾನುವಾರ ಬೆಳಿಗ್ಗೆ) ಬರುತ್ತಿದ್ದ ರಾಮಾಯಣವನ್ನು ಧಾರ್ಮಿಕ ಕೆಲಸ ಎಂಬಂತೆ ನೊಡಿದವರ ಹಾಗೆಯೇ ಇದೊಂದು ಪುರಾಣ ಕಥನ ಎಂಬಂತೆ ವಿಮರ್ಶಾತ್ಮಕವಾಗಿ ನೋಡಿದವರೂ ಇದ್ದರು. ಆ ಧಾರಾವಾಹಿಯ ರಾಮ ಮತ್ತು ಸೀತೆಯ ಪಾತ್ರಧಾರಿಗಳನ್ನ ಪಕ್ಷವೊಂದು ಬಳಸಿಕೊಂಡು, ಅವರಿಬ್ಬರೂ ವಿಧಾನಸಭೆ ಮತ್ತು ಲೋಕಸಭೆಯವರೆಗೂ ಹೋಗುವುದು ಸಾಧ್ಯವಾಯಿತು ಎಂದರೆ ಆ ದಿನಗಳಲ್ಲಿ ಟೆಲಿವಿಷನ್ ನೋಡುಗರ ನೆನಪಿನ ಶಕ್ತಿಯನ್ನು ಗ್ರಹಿಸಬಹುದು. ಕಾಲಾಂತರದಲ್ಲಿ ಈ ಸ್ಥಿತಿ ಮಾರ್ಪಡುತ್ತಾ ಬಂದಿದೆ. ಇಂದು ಟೆಲಿವಿಷನ್ ಎಂದರೆ ವಾಹಿನಿಗಳ ಮಹಾಪೂರ. ಕನ್ನಡದ್ದೇ ೧೨ ವಾಹಿನಿಗಳಿವೆ. ಅವುಗಳಲ್ಲಿ ಏಳೆಂಟು ದಿನದ ೨೪ ಗಂಟೆಯೂ ಪ್ರಸಾರವಾಗುತ್ತವೆ. ಹೀಗಾಗಿ ಕನಿಷ್ಟ ಸಂಖ್ಯೆಯ ಕನೆಕ್ಷನ್ ತೆಗೆದುಕೊಂಡವರಿಗೂ 70 ವಾಹಿನಿಗಳು ನೋಡಲು ಸಿಗುತ್ತವೆ. ಇನ್ನು ಸಂಪೂರ್ಣ ಸೌಲಭ್ಯ ಪಡೆಯುವವರಿಗೆ ನೂರಾಮುವ್ವತ್ತಕ್ಕೂ ಹೆಚ್ಚು ವಾಹಿನಿಗಳು ಇವೆ. ಯಾವುದನ್ನು ನೊಡಬೇಕು ಎಂಬ ಆಯ್ಕೆ ಈಗ ನೋಡುಗನ ಅಂಗೈಯಲ್ಲಿ ರಿಮೋಟ್ ಆಗಿ ಕೆಲಸ ಮಾಡುತ್ತಾ ಇದೆ. ಅರೆಕ್ಷಣ ನೋಡುಗನ ಮನಸ್ಸು ವಿಚಲಿತವಾದರೂ ಆತ ನೋಡುತ್ತಿರುವ ವಾಹಿನಿಯೂ ಆತನಿಗೆ ಅರಿವಾಗದಂತೆ ಬದಲಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೋಡುಗನನ್ನು ಟೆಲಿವಿಷನ್ನಿನಲ್ಲಿ ತೊಡಗುವಂತೆ ಮಾಡುವ, ಅದೇ ವಾಹಿನಿಯನ್ನು ಹೆಚ್ಚು ಕಾಲ ನೋಡುವಂತೆ ಮಾಡುವುದು ಸುಲಭ ಸಾಧ್ಯವಲ್ಲ. ಹೀಗಾಗಿ ಕಾರ್ಯಕ್ರಮ ತಯಾರಕರು ಅನೇಕಾನೇಕ ಸರ್ಕಸ್ಸುಗಳನ್ನು ಮಾಡುತ್ತಾ ತಂತಿಯ ಮೇಲಿನ ನಡಿಗೆಯನ್ನು ಮುಂದುವರೆಸಿದ್ದಾರೆ ಎಂಬುದಂತೂ ಢಾಳಾಗಿ ಕಾಣುವ ಸತ್ಯ.<br />
ಈ ಹಿನ್ನೆಲೆಯಲ್ಲಿ ನಾನು ಈ ಲೇಖನದ ಆರಂಭದಲ್ಲಿ ಹೇಳಿದ ಮಾತುಗಳನ್ನು ಪುನರ್ಮನನ ಮಾಡಿಕೊಂಡರೆ, ಕಾರ್ಯಕ್ರಮ ತಯಾರಕರ ಮನಸ್ಥಿತಿ, ಕಾರ್ಯಕ್ರಮಗಳ ತಯಾರಿಯ ಹಿಂದಿನ ಉದ್ದಿಶ್ಯ ಎಲ್ಲವೂ ಬದಲಾಗಿವೆ. ಕೇವಲ ದೂರದರ್ಶನವೊಂದೇ ಇದ್ದ ಕಾಲದಲ್ಲಿ ಕಾರ್ಯಕ್ರಮದ ತಯಾರಿಯ ಹಿಂದೆ ಪ್ರೇಕ್ಷಕನಿಗೆ ಶ್ರೇಷ್ಟವಾದುದನ್ನೇ ಕೊಡಬೇಕೆಂಬುದು ಹೆಬ್ಬಯಕೆಯಾಗಿದ್ದರೆ ಇಂದು ಶ್ರೇಷ್ಟ ಎನ್ನುವ ಸ್ಥಳದಲ್ಲಿ ಜನಪ್ರಿಯ ಸರಕು ಎಂಬುದು ಪ್ರಧಾನ ಆಶಯವಾಗಿದೆ. ಹೀಗೆ ಕಾರ್ಯಕ್ರಮವನ್ನು ನೋಡುವ ದೃಷ್ಟಿಕೋನವೇ ಬದಲಾದೊಡನೆ ಅದನ್ನು ತಯಾರಿಸುವ ಕ್ರಮಗಳಲ್ಲೂ ಬೃಹತ್ ಪಲ್ಲಟವಾಗಿದೆ. ಒಂದೊಮ್ಮೆ ವಾರ್ತೆಗಳು ಎಂಬುದು ಭಾವಪ್ರಚೋದಕವಾಗದೆ ಬರುತ್ತಾ ಇತ್ತು ಎಂಬುದನ್ನು ನೆನೆಸಿಕೊಂಡರೆ ಇಂದು ವಾರ್ತೆಗಳ ನಡುವೆಯೇ ಬ್ರೇಕಿಂಗ್ ನ್ಯೂಸ್‌ಗಳ ಭರಾಟೆ ಹೆಚ್ಚಾಗಿದೆ. ಯಾವುದೋ ಸ್ಟುಡಿಯೋದಲ್ಲಿ ಕೂತ ಸುದ್ದಿ ವಾಚಕ (ಇಂದು ಅವರನ್ನು ಸುದ್ದಿ ನಿರ್ವಾಹಕ ಎನ್ನುವುದು ಸೂಕ್ತ) ಇನ್ನೆಲ್ಲಿಯೋ ಇರುವ ತನ್ನ ವಾಹಿನಿಯ ಪ್ರತಿನಿಧಿಯೊಡನೆ ಮಾತಾಡುವಾಗಲೂ ರೋಚಕ ವಿವರವನ್ನು ಕೆದಕುತ್ತಾನೆ. ಮುಂಬೈನಲ್ಲಿ ಆತಂಕವಾದಿಗಳು ನಡೆಸಿದ ಮಾರಣಹೋಮವು ಲೈವ್ ನ್ಯೂಸ್ ಆಗಿ ಆತಂಕ ಸೃಷ್ಟಿಯನ್ನು ಹೆಚ್ಚಿಸುತ್ತದೆ. ಅಂತೆಯೇ ಯಾವುದೋ ಊರಿನಲ್ಲಿ ಯಾವನೋ ಇನ್‌ಸ್ಪೆಕ್ಟರ್‌ನನ್ನು ಯಾರೋ ಕೊಂದದ್ದು, ಅಷ್ಟೇ ರೂಕ್ಷವಾಗಿ ಸುದ್ದಿ ಚಿತ್ರವಾಗುತ್ತದೆ. ಈ ಎಲ್ಲಾ ಸುದ್ದಿಗಳನ್ನು ತೋರಿಸುವಲ್ಲಿ ರೋಚಕತೆಯಷ್ಟೇ ಮುಖ್ಯವಾಗಿ, ವಾರ್ತೆಯ ಮೂಲ ಅಗತ್ಯವಾದ ಮಾಹಿತಿ ಹಂಚಿಕೆ ಎಂಬುದು ನಗಣ್ಯ ಎಂಬಂತಾಗಿರುತ್ತದೆ. ಇದೇ ವಿಷಯದ ವಿಸ್ತರಣೆ ಎಂಬಂತೆ, ಸುದ್ದಿ ನೀಡುವವರು ಯಾವುದೇ ವ್ಯಕ್ತಿಯನ್ನು ಸಂದರ್ಶನ ಮಾಡುವಾಗಲೂ ಆಡುವ ಮಾತುಗಳು ದೊಡ್ಡ ಹಗರಣವನ್ನು ಬಯಲಿಗೆಳೆಯುವ ಪ್ರಯತ್ನ ಎಂಬಂತೆ ಅಥವಾ ಮತ್ತೊಂದು ಸ್ಕೂಪ್ ಸೃಷ್ಟಿಸಲೆಂಬಂತೆ ಇರುವುದನ್ನು ಸಹ ನಾವು ಕಾಣುತ್ತಾ ಇದ್ದೇವೆ. ಇನ್ನು ಇದನ್ನು ನೋಡುವ ಪ್ರೇಕ್ಷಕರಾದರೋ ಯಾವುದೇ ವಿವರವನ್ನು ಪೂರ್ಣಾವಧಿಗೆ ನೋಡಿ ಅರ್ಥೈಸಿಕೊಳ್ಳುವಷ್ಟು ವ್ಯವಧಾನ ಇರುವವರಲ್ಲ. ಹೀಗಾಗಿ ರೋಚಕ ವಿವರವನ್ನು ಮಾತ್ರ ಸ್ವೀಕರಿಸಿ, ಅದನ್ನೇ ಅವರಿವರ ಜೊತೆಗೆ ಮಾತಾಡುತ್ತಾ ಆನಂದ ಪಡುತ್ತಾರೆ. ಹೀಗೆ ಸುದ್ದಿಯೊಂದು ಅರ್ಧ ವೀಕ್ಷಣೆಯ ಮೂಲಕವೇ ಅವರಿವರ ಬಾಯಲ್ಲಿ ವಿಶ್ವರೂಪ ಪಡೆಯುತ್ತಾ ಸಾಗುತ್ತದೆ.<br />
ಇನ್ನು ಕಥನಗಳು ಮತ್ತು ಧಾರಾವಾಹಿಗಳ ಸ್ವರೂಪವನ್ನು ಗಮನಿಸಿದರೆ ಅಲ್ಲಿಯೂ ವಾಸ್ತವವನ್ನು ಮರೆಸಿ, ಅಲಂಕಾರವನ್ನು ವೈಭವೀಕರಿಸುವ ವಿವರಗಳೇ ಹೆಚ್ಚು. ಆ ಕಥನಗಳಲ್ಲೂ ಬಹುತೇಕವಾಗಿ ಶ್ರೀಮಂತ ಮನೆಗಳ ಅವ್ಯವಹಾರವೋ, ಅನೈತಿಕ ಸಂಬಂಧವೋ ಬೃಹತ್ ಗಾಥಾ ಎಂಬಂತೆ ಚಿತ್ರಿತವಾಗುವುದನ್ನು ನೋಡುತ್ತೇವೆ. ಇಲ್ಲಿ ಕಣ್ಣೆದುರಿಗೆ ಮೂಡುವ ಪಾತ್ರಗಳಿಗೆ ಅಗತ್ಯಕ್ಕಿಂತ ಹೆಚ್ಚು ಬಣ್ಣ ಬಳಿಯಲಾಗಿರುತ್ತದೆ. ಎಲ್ಲಾ ವಯಸ್ಸಿನ ಪಾತ್ರಗಳಿಗೂ ತುಟಿಗೆ ಮಾತ್ರವಲ್ಲ ಎಲ್ಲಾ ಭಾಗಗಳಿಗೂ ಬಣ್ಣವಿರುತ್ತದೆ. ಆ ಮೂಲಕ ಕಥನವನ್ನು ಅನುಭವಿಸುವುದಕ್ಕಿಂತ ನೋಡುಗರು ಅಲಂಕಾರ ಪ್ರೀತಿಗೆ ಒಳಗಾಗುವಂತೆ ಚಿತ್ರಿಸಲಾಗುತ್ತದೆ ಎಂಬುದು ಗಮನದಲ್ಲಿರಬೇಕಾದ ಅಂಶ. ಹೀಗೆ ಸಿದ್ಧವಾದುದನ್ನ ನೊಡುವವರೂ ಸಹ ಮಧ್ಯಮವರ್ಗದ ಗೃಹಿಣಿಯರೇ. ಇಂತಹ ವಿವರಗಳನ್ನು ಟಿವಿಯಲ್ಲಿ ನೋಡಿದ ಅಭ್ಯಾಸದಿಂದಲೋ ಏನೋ ನಾಡಿನಾದ್ಯಂತ ಆಧುನಿಕ ಮಹಿಳೆಯರು ಇದೇ ಮಾದರಿಯ ಬಣ್ಣಗಳನ್ನು ತಮ್ಮ ದೇಹಗಳಿಗೂ ಹಚ್ಚಿಕೊಳ್ಳುವುದನ್ನು ಕಾಣುತ್ತೇವೆ. ಆಧುನಿಕ ಕಾಲದಲ್ಲಿ `ಸೌಂದರ್ಯ ಪ್ರಜ್ಞೆ&#8217; ಎಂದರೆ ಕೃತಕ ಅಲಂಕಾರ ಎಂಬಂತೆ ನಮ್ಮ ಜೀವನವನ್ನು `ಕಾಸ್ಮೆಟಿಕ್&#8217;ಗೊಳಿಸಿರುವುದು ಇದೇ ಟೆಲಿವಿಷನ್ ಎಂಬ ಅದ್ಭುತ.<br />
ಧಾರಾವಾಹಿಗಳಿಗೆ ಮತ್ತು ಸುದ್ದಿ ಚಿತ್ರಗಳಿಗೆ ಹೇಳುವ ಮಾತನ್ನು ರಿಯಾಲಿಟಿ ಷೋ ಎಂಬ ಆಟಗಳಿಗೂ ಹಿಗ್ಗಿಸಬಹುದು. ಇಲ್ಲಿ ಹಾಡಲು ಬರುವ ಪುಟ್ಟ ಮಕ್ಕಳೂ ಅದೇ ರೀತಿಯಲ್ಲಿ `ಅಲಂಕೃತ&#8217;ರು. ಆ ಹಾಡಿನ ಕಾರ್ಯಕ್ರಮಕ್ಕೆ ಬರುವ ತೀರ್ಪುಗಾರರೂ ಸಾಲಂಕೃತರು. ಅಪರೂಪಕ್ಕೆ ಯಾರಾದರೂ ಸಹಜವಾಗಿಯೇ ಟಿವಿಯಲ್ಲಿ ಕಂಡರೆ ಅದು ಜನಪ್ರಿಯತೆ ಕಡಿಮೆ ಇರುವ ಕಾರ್ಯಕ್ರಮವೇ ಆಗಿರುತ್ತದೆ ಎನ್ನಬಹುದು. ಇನ್ನು ನೃತ್ಯದ ರಿಯಾಲಿಟಿ ಷೋಗಳ ಬಗ್ಗೆಯಂತೂ ಹೆಚ್ಚು ಹೇಳಲೇ ಬೇಕಿಲ್ಲ. ಅಲ್ಲಿ ಪ್ರೇಕ್ಷಕರು ಎಂದು ತೋರಿಸಲಾಗುವ ಪುಟ್ಟ ಗುಂಪು ಸಹ `ಅಲಂಕೃತ&#8217; ಆಗಿರುತ್ತದೆ. ಇನ್ನು ಪೇಟೆ ಹುಡುಗಿಯರು ಹಳ್ಳಿಗೆ ಹೋಗುವ ಸಾಹಸ ಇತ್ಯಾದಿಗಳಲ್ಲೂ ಸಹ ಇದೇ ಕೃತಕ ವಾತಾವರಣ. ಬಹುತೇಕ ರಿಯಾಲಿಟಿ ಷೋಗಳಲ್ಲಿ ಇರುವುದು ಇದೇ ಗುಣ. ಇನ್ನು ಹಾಸ್ಯದ ಕಾರ್ಯಕ್ರಮ ನಡೆಸಿಕೊಡುವವರು ಕೂಡ ವಯಸ್ಸಿಗೆ ಮೀರಿದಂತೆ ಬಣ್ಣ ಹಚ್ಚಿಕೊಂಡವರೇ ಆಗಿರುವುದನ್ನು ಸಹ ಕಾಣಬಹುದು. ತೆರೆಯ ಮೇಲೆ ಕಾಣುವ ವ್ಯಕ್ತಿ ಆರೋಗ್ಯಪೂರ್ಣವಾಗಿ ಕಾಣಬೇಕು ಎನ್ನುವುದಕ್ಕಿಂತ ಅವರು ಯುವಕಂತೆ ಕಾಣಬೇಕು ಎನ್ನುವುದೇ ಟಿವಿ ಕಾರ್ಯಕ್ರಮಗಳ ಅೋಷಿತ ಮಾದರಿಯಾಗಿದೆ. ಅದನ್ನು ನಮ್ಮ ಸಮಾಜವೂ ಪಾಪ ಯಥಾವತ್ ಅನುಸರಿಸುತ್ತಿದೆ. (ಇಲ್ಲಿ ತಾವು ಇದ್ದಂತೆ ಬರುತ್ತಿದ್ದ ಸುವರ್ಣ ನ್ಯೂಸ್ನ ರಂಗನಾಥ್ ಅವರು ಸಹ ಕಾಲಾಂತರದಲ್ಲಿ ಬಣ್ಣ ಬಣ್ಣದ ಷರಟು ಮತ್ತು ಬಣ್ಣ ಹಚ್ಚಿದ ಮುಖದ ಜೊತೆಗೆ ಬರುವಂತಾದುದನ್ನು ನೊಡುಗರು ನೆನಪಿಸಿಕೊಳ್ಳಬಹುದು.)<br />
ಈ ಎಲ್ಲಾ ವಿವರಗಳ ನಡುವೆ ನಮ್ಮ ಸಮಾಜ ಮತ್ತದರ ನೇಯ್ಗೆಯು ಸಂಕುಚಿತಗೊಳ್ಳುತ್ತಾ ಇರುವುದನ್ನೂ ಗಮನಿಸಬಹುದು. ಆತಂಕದಲ್ಲಿ ಬದುಕುವ ಮನಸ್ಸುಗಳಿಗೆ ಅಕ್ಕ ಪಕ್ಕದ ವಿವರಗಳನ್ನು ನೋಡುವ ಮಧ್ಯಮವರ್ಗಕ್ಕೆ ಈಗ ಕಾಣುವುದು ಮಾಲ್ಗಳು ಮತ್ತು ಬ್ಯೂಟಿಪಾರ್ಲರ್ ಮಾತ್ರ. ಹೀಗಾಗಿ ಸಾಮಾಜಿಕ ಹೋರಾಟಗಳು ಬಹುತೇಕ ನಿರ್ಜೀವವಾಗಿವೆ. ಹೋರಾಟಗಳನ್ನೂ ಸಹ ಮಾಧ್ಯಮಗಳೇ ನಿರ್ದೇಶಿಸುತ್ತಿವೆ. ಈಚೆಗೆ ನಡೆದ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಮಾಧ್ಯಮಗಳಿಂದಾಗಿಯೇ ಸ್ಟಾರ್ ಸ್ಟೇಟಸ್ ಸಿಕ್ಕದ್ದನ್ನು ನಾವು ಗಮನಿಸಬಹುದು. ಹಾಗೆಯೇ ಈಚೆಗೆ ಲೋಕಾಯುಕ್ತರು ನೀಡಿದ ವರದಿ ಮತ್ತು ತದನಂತರದ ಸರ್ಕಾರ ಬದಲಿ, ರಾಜೀನಾಮೆ ಪ್ರಕರಣಗಳಿಗೂ ಜೀವ ಬಂದದ್ದು ಮಾಧ್ಯಮಗಳಿಂದಲೇ. ಹೀಗಾಗಿ ಇಂದು ನಾವು ಸಮಾಜವೇ ಸೃಷ್ಟಿಸದ ಬದುಕಿನ ಕ್ರಮಕ್ಕೆ ಬದಲಾಗಿ ಮಾಧ್ಯಮಗಳಿಂದ ನಿರ್ದೇಶಿತವಾದ ಬದುಕಿನ ಕ್ರಮವನ್ನು ಕಟ್ಟಿಕೊಂಡಿದ್ದೇವೆ. ಒಟ್ಟಾರೆಯಾಗಿ ಆಧುನಿಕ ಬದುಕು ಎಂದರೆ ಟಿವಿ ಪ್ರಣೀತ ಅದ್ಭುತಗಳ ಸರಮಾಲೆ ಎನ್ನಬಹುದು.<br />
ಈ ಬಗ್ಗೆ ಅದಾಗಲೇ ಹಲವು ಕಡೆಗಳಲ್ಲಿ ಮಾತಾಡಿದ್ದೇನೆ, ಬರೆದಿದ್ದೇನೆ. ಈಗ ಮತ್ತೊಮ್ಮೆ ಕೇಬಲ್ ದಿನದ ಅಂಗವಾಗಿ ನನಗೆ ಅನ್ನ ನೀಡುತ್ತಿರುವ ಮಾಧ್ಯಮವನ್ನು ಕುರಿತು, ಈ ಮಾಧ್ಯಮವೇ ತಂದಿತ್ತಿರುವ ಅವಡಗಳನ್ನು ಕುರಿತು ನೆನೆಯುವಂತಾಯಿತು. ಈ ಅವಕಾಶ ಕೊಟ್ಟ ಕೇಬಲ್ ಬಂಧುಗಳಿಗೆ ನಮಿಸುತ್ತಾ, ಶುಭಾಶಯ ಕೋರುತ್ತಾ ಟೆಲಿವಿಷನ್ ಎಂಬ ಅಧ್ಭುತವು ಮುಂಬರುವ ದಿನಗಳಲ್ಲಿ ಪಡೆದುಕೊಳ್ಳಬಹುದಾದ ಹೊಸ ರೂಪಗಳಿಗೆ ಕಾಯುತ್ತೇನೆ.<br />
* * *</p>
<br />Filed under: <a href='http://bsuresha.wordpress.com/category/%e0%b2%9f%e0%b3%86%e0%b2%b2%e0%b2%bf%e0%b2%b5%e0%b2%bf%e0%b2%b7%e0%b2%a8%e0%b3%8d/'>ಟೆಲಿವಿಷನ್</a>  <a rel="nofollow" href="http://feeds.wordpress.com/1.0/gocomments/bsuresha.wordpress.com/210/"><img alt="" border="0" src="http://feeds.wordpress.com/1.0/comments/bsuresha.wordpress.com/210/" /></a> <a rel="nofollow" href="http://feeds.wordpress.com/1.0/godelicious/bsuresha.wordpress.com/210/"><img alt="" border="0" src="http://feeds.wordpress.com/1.0/delicious/bsuresha.wordpress.com/210/" /></a> <a rel="nofollow" href="http://feeds.wordpress.com/1.0/gofacebook/bsuresha.wordpress.com/210/"><img alt="" border="0" src="http://feeds.wordpress.com/1.0/facebook/bsuresha.wordpress.com/210/" /></a> <a rel="nofollow" href="http://feeds.wordpress.com/1.0/gotwitter/bsuresha.wordpress.com/210/"><img alt="" border="0" src="http://feeds.wordpress.com/1.0/twitter/bsuresha.wordpress.com/210/" /></a> <a rel="nofollow" href="http://feeds.wordpress.com/1.0/gostumble/bsuresha.wordpress.com/210/"><img alt="" border="0" src="http://feeds.wordpress.com/1.0/stumble/bsuresha.wordpress.com/210/" /></a> <a rel="nofollow" href="http://feeds.wordpress.com/1.0/godigg/bsuresha.wordpress.com/210/"><img alt="" border="0" src="http://feeds.wordpress.com/1.0/digg/bsuresha.wordpress.com/210/" /></a> <a rel="nofollow" href="http://feeds.wordpress.com/1.0/goreddit/bsuresha.wordpress.com/210/"><img alt="" border="0" src="http://feeds.wordpress.com/1.0/reddit/bsuresha.wordpress.com/210/" /></a> <img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=210&amp;subd=bsuresha&amp;ref=&amp;feed=1" width="1" height="1" />]]></content:encoded>
			<wfw:commentRss>http://bsuresha.wordpress.com/2011/08/10/%e0%b2%9f%e0%b3%86%e0%b2%b2%e0%b2%bf%e0%b2%b5%e0%b2%bf%e0%b2%b7%e0%b2%a8%e0%b3%8d-%e0%b2%8e%e0%b2%82%e0%b2%ac-%e0%b2%85%e0%b2%a6%e0%b3%8d%e0%b2%ad%e0%b3%81%e0%b2%a4%e0%b2%b5%e0%b3%82-%e0%b2%ae/feed/</wfw:commentRss>
		<slash:comments>0</slash:comments>
	
		<media:content url="" medium="image">
			<media:title type="html">bsuresha</media:title>
		</media:content>
	</item>
		<item>
		<title>ಮಕ್ಕಳ ಚಿತ್ರಗಳು: ಒಂದು ಅಧ್ಯಯನ</title>
		<link>http://bsuresha.wordpress.com/2011/08/06/%e0%b2%ae%e0%b2%95%e0%b3%8d%e0%b2%95%e0%b2%b3-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%97%e0%b2%b3%e0%b3%81-%e0%b2%92%e0%b2%82%e0%b2%a6%e0%b3%81-%e0%b2%85%e0%b2%a7%e0%b3%8d%e0%b2%af/</link>
		<comments>http://bsuresha.wordpress.com/2011/08/06/%e0%b2%ae%e0%b2%95%e0%b3%8d%e0%b2%95%e0%b2%b3-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%97%e0%b2%b3%e0%b3%81-%e0%b2%92%e0%b2%82%e0%b2%a6%e0%b3%81-%e0%b2%85%e0%b2%a7%e0%b3%8d%e0%b2%af/#comments</comments>
		<pubDate>Sat, 06 Aug 2011 07:20:14 +0000</pubDate>
		<dc:creator>bsuresha</dc:creator>
				<category><![CDATA[ಚಲನಚಿತ್ರ]]></category>
		<category><![CDATA[ಮಕ್ಕಳ ಸಿನಿಮಾ Children's films]]></category>
		<category><![CDATA[ಸಿನಿಮಾ]]></category>

		<guid isPermaLink="false">http://bsuresha.wordpress.com/?p=208</guid>
		<description><![CDATA[ನಿರ್ಮಾಪಕ/ ನಿರ್ದೇಶಕ/ ನಾಟಕಕಾರ ಬಿ.ಸುರೇಶ ಅವರೊಂದಿಗೆ ಸಂದರ್ಶನ ಯಾವುದನ್ನು ಮಕ್ಕಳ ಚಿತ್ರಗಳೆಂದು ಗುರುತಿಸಬಹುದು? ಹಾಗೂ ಮಕ್ಕಳ ಚಿತ್ರಗಳ ವ್ಯಾಪ್ತಿಯೇನು? -೯ ವರ್ಷದ ಮಗುವಿನಿಂದ ಹಿಡಿದು ೯೦ ವರ್ಷದ ಮುದುಕರವರೆಗಿನ ವ್ಯಕ್ತಿಗಳ ಒಳಗಿರುವ ಮಗುವಿಗೆ ಆನಂದವನ್ನುಂಟು ಮಾಡುವ ಚಿತ್ರಗಳೇ ಮಕ್ಕಳ ಚಿತ್ರಗಳು. ಮಕ್ಕಳ ಅಭಿರುಚಿಗೆ ತಕ್ಕಂತ ಚಿತ್ರವೇ ಮಕ್ಕಳ ಚಿತ್ರಗಳು. ಕನ್ನಡದಲ್ಲಿ ಬಂದಂತಹ ಮಕ್ಕಳ ಚಿತ್ರಗಳಲ್ಲಿ ಮಕ್ಕಳ ಚಿತ್ರಗಳು ಎಂದು ಕರೆಯಿಸಿಕೊಳ್ಳುವ ಚಿತ್ರಗಳು ಯಾವುವು ಇಲ್ಲ ಎಂದೇ ಹೆಳಬಹುದು. ಯಾಕೆಂದರೆ ನಮ್ಮಲ್ಲಿ ಮಕ್ಕಳ ಚಿತ್ರದ ಹೆಸರಲ್ಲಿ ತಯಾರಾದ ಚಿತ್ರಗಳೆಲ್ಲವೂ [...]<img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=208&amp;subd=bsuresha&amp;ref=&amp;feed=1" width="1" height="1" />]]></description>
			<content:encoded><![CDATA[<p>ನಿರ್ಮಾಪಕ/ ನಿರ್ದೇಶಕ/ ನಾಟಕಕಾರ ಬಿ.ಸುರೇಶ ಅವರೊಂದಿಗೆ ಸಂದರ್ಶನ</p>
<p>ಯಾವುದನ್ನು ಮಕ್ಕಳ ಚಿತ್ರಗಳೆಂದು ಗುರುತಿಸಬಹುದು? ಹಾಗೂ ಮಕ್ಕಳ ಚಿತ್ರಗಳ ವ್ಯಾಪ್ತಿಯೇನು?<br />
-೯ ವರ್ಷದ ಮಗುವಿನಿಂದ ಹಿಡಿದು ೯೦ ವರ್ಷದ ಮುದುಕರವರೆಗಿನ ವ್ಯಕ್ತಿಗಳ ಒಳಗಿರುವ ಮಗುವಿಗೆ ಆನಂದವನ್ನುಂಟು ಮಾಡುವ ಚಿತ್ರಗಳೇ ಮಕ್ಕಳ ಚಿತ್ರಗಳು. ಮಕ್ಕಳ ಅಭಿರುಚಿಗೆ ತಕ್ಕಂತ ಚಿತ್ರವೇ ಮಕ್ಕಳ ಚಿತ್ರಗಳು.<br />
ಕನ್ನಡದಲ್ಲಿ ಬಂದಂತಹ ಮಕ್ಕಳ ಚಿತ್ರಗಳಲ್ಲಿ ಮಕ್ಕಳ ಚಿತ್ರಗಳು ಎಂದು ಕರೆಯಿಸಿಕೊಳ್ಳುವ ಚಿತ್ರಗಳು ಯಾವುವು ಇಲ್ಲ ಎಂದೇ ಹೆಳಬಹುದು. ಯಾಕೆಂದರೆ ನಮ್ಮಲ್ಲಿ ಮಕ್ಕಳ ಚಿತ್ರದ ಹೆಸರಲ್ಲಿ ತಯಾರಾದ ಚಿತ್ರಗಳೆಲ್ಲವೂ ಮುಗ್ಧತೆಯಿಂದ ಪ್ರೌಢತೆಯ ಕಡೆಗೆ ಸಾಗುತ್ತವೆ. ಯಾವಾಗ ಚಿತ್ರಗಳು ಮುಗ್ಧತೆಯನ್ನು ಬಿಟ್ಟು ಪ್ರೌಢತೆಯ ಕಡೆಗೆ ಸಾಗುತ್ತವೆಯೋ ಆಗ ಅವುಗಳನ್ನು ಮಕ್ಕಳ ಚಿತ್ರಗಳು ಎಂದು ಗುರುತಿಸಲು ಸಾಧ್ಯವಿಲ್ಲ.</p>
<p>ಈ ನಿಟ್ಟಿನಲ್ಲಿ ಗಮನಿಸುವುದಾದರೆ ಚಾರ್ಲಿ ಚಾಪ್ಲಿನ್‌ನ ಚಿತ್ರಗಳು ಇಂದಿಗೂ ಎಲ್ಲಾ ವಯಸ್ಸಿನ ಮಕ್ಕಳನ್ನೂ ಹಿಡಿದಿಟ್ಟುಕೊಂಡು ಚಿತ್ರ ನೋಡುವಂತೆ ಮಾಡುತ್ತವೆ ಎಂಬುದನ್ನು ಗಮನಿಸಬಹುದು. ಅವುಗಳು ನಿಜವಾದ ಮಕ್ಕಳ ಚಿತ್ರಗಳು. ಅಲ್ಲಿ ಮಕ್ಕಳ ಅಭಿನಯ ಇಲ್ಲದಿದ್ದರೂ ಆ ಚಿತ್ರಗಳನ್ನು ಇಂದಿನ ಮಕ್ಕಳೂ ಇಷ್ಟಪಡುತ್ತಾರೆ. ಕುಳಿತು ನೋಡುತ್ತಾರೆ. ಈ ದೃಷ್ಟಿಯಿಂದ ವಾಲ್ಟ್ ಡಿಸ್ನಿಯ ಟಾಮ್ &amp; ಜೆರ್ರಿ, ಮಿಕ್ಕಿ ಮೌಸ್ ಚಿತ್ರಗಳನ್ನು ಕೂಡಾ ಮಕ್ಕಳ ಚಿತ್ರಗಳೆಂದು ಪರಿಗಣಿಸಬಹುದು.</p>
<p>೧೯೨೦ರಲ್ಲಿ ಚಿತ್ರಗಳಿಗೆ ಮಾತು ಸಿಕ್ಕಿತು. ಭಾಷೆ (ಧ್ವನಿ) ಮಾಧ್ಯಮವಾಗಿ ಚಿತ್ರಗಳಲ್ಲಿ ಬಳಕೆಯಾಗುತ್ತಿದ್ದಂತೆ ಅದಕ್ಕೆ ಪ್ರಾದೇಶಿಕತೆ ಲಭಿಸಿತು. ಆದರೆ ಮಕ್ಕಳ ಚಿತ್ರಗಳು ಯಾವುದೇ ಹಂಗಿಗೂ ಒಳಗಾಗದೇ ಎಲ್ಲರಿಗೂ ಸಮಾನ ಮನರಂಜನೆ ನೀಡುತ್ತದೆ. ಮಕ್ಕಳ ಚಿತ್ರಗಳಿಗೆ ಯಾವುದೇ ಚೌಕಟ್ಟು ಇಲ್ಲ. ಆದರೆ ಅದರೊಳಗೆ ಭಾಷೆ ಬಂದ ಕೂಡಲೇ ಚೌಕಟ್ಟು ಬರುತ್ತದೆ. ಅಂದರೆ ಅಲ್ಲಿ ಪ್ರಾದೇಶಿಕತೆ ನೆಲೆಯೂರುತ್ತದೆ.</p>
<p>ಮಕ್ಕಳ ಚಿತ್ರಗಳಿಗೆ ಇರಬೇಕಾದ ಬದ್ಧತೆಯೇನು?<br />
ಮಕ್ಕಳಿಗಾಗಿಯೇ ಮಕ್ಕಳ ಚಿತ್ರ ತೆಗೆಯಬೇಕೆಂಬ ಬದ್ಧತೆ ಮಕ್ಕಳ ಚಿತ್ರ ತಯಾರಕರಿಗಿರಬೇಕು. ಆಗ ಮಾತ್ರ ಮಕ್ಕಳ ಚಿತ್ರಗಳನ್ನು ತಯಾರಿಸಲು ಸಾಧ್ಯ. ಒಬ್ಬ ಮಕ್ಕಳ ಚಿತ್ರ ತಯಾರಿಸುತ್ತೇನೆಂದರೆ ಅವನ ಮನಸ್ಸು ಮಕ್ಕಳ ಮನಸ್ಸಿನಂತೆ ನಿಷ್ಕಲ್ಮಷವಾಗಿರಬೇಕು. ಅವನಲ್ಲಿ ಮಗುವಿನಂತಹ ಮುಗ್ಧತೆಯಿರಬೇಕು.<br />
ಚಿತ್ರ ನೋಡುವ ಮಕ್ಕಳು ಹೆಚ್ಚು ಹೊತ್ತು ಏಕಾಗ್ರತೆಯಿಂದ ಒಂದೆಡೆ ಇರುವುದಿಲ್ಲ. ಈ ಮಾತನ್ನು ಮಕ್ಕಳ ಮನಸ್ಸನ್ನು ಕುರಿತು ಸಂಶೋಧನೆ ಮಾಡಿರುವ ಮಕ್ಕಳ ಮನಶ್ಶಾಸ್ತ್ರ ತಜ್ಞರು (ಪೆಡಗಾಗಿ) ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಮಕ್ಕಳ ಚಿತ್ರ ೧೨ರಿಂದ ೧೫ ನಿಮಿಷಗಳು ಇದ್ದರೆ ಒಳ್ಳೆಯದು. ಅಕಸ್ಮಾತ್ ಪೂರ್ಣಾವಧಿ ಕಥಾ ಚಿತ್ರವನ್ನೇ ಮಾಡಿದರೂ ಅಲ್ಲಿ ಪ್ರತೀ ೧೨-೧೫ ನಿಮಿಷಕ್ಕೆ ಮಗುವಿನ ಮನಸ್ಸನ್ನು ಮರಳಿ ತೊಡಗಿಸುವ ತಿರುವು ಮತ್ತು ನಿರಾಳ ಅವಧಿ ಇರುವಂತೆ ಚಿತ್ರವನ್ನು ಕಟ್ಟಬೇಕಾಗುತ್ತದೆ. ಇಂತಹ ಬದ್ಧತೆಯನ್ನು ಮತ್ತು ಎಚ್ಚರವನ್ನು ಇಟ್ಟುಕೊಂಡು ಮಾಡಿದ ಮಕ್ಕಳ ಚಿತ್ರಗಳು ಬಹುಕಾಲ ಬಾಳುತ್ತವೆ.</p>
<p>ಮಕ್ಕಳ ಚಿತ್ರಗಳಲ್ಲಿ ಬೇರೆ ಬೇರೆ ವಿಧಗಳು ಅಥವಾ ಪ್ರಕಾರಗಳು ಇದೆಯಾ?<br />
ಹೌದು. ಮಕ್ಕಳ ಚಿತ್ರಗಳಲ್ಲಿ ನಾನು ಗುರುತಿಸುವ ಮೂರು ಬಗೆಯ ಚಿತ್ರಗಳಿವೆ.<br />
೧. ಮಕ್ಕಳಿಂದ ಮಕ್ಕಳಿಗಾಗಿ ತಯಾರದ ಚಿತ್ರ.<br />
೨. ದೊಡ್ಡವರು ಮಕ್ಕಳಿಗಾಗಿ ತಯಾರಿಸಿದ ಚಿತ್ರ.<br />
೩. ಮಕ್ಕಳ ಮೂಲಕ ದೊಡ್ಡವರಿಗಾಗಿ ತಯಾರಾದ ಚಿತ್ರ.<br />
ಈ ಮೂರು ಬಗೆಯವುಗಳಲ್ಲದೆ ಅದಾಗಲೇ ಪ್ರಚಲಿತವಾದ ಸಾಮಾಜಿಕ, ಐತಿಹಾಸಿಕ, ವೈಜ್ಞಾನಿಕ, ಸಾಹಸಮಯ ಇತ್ಯಾದಿ ಪ್ರಬೇಧಗಳು ಸಹ ಇವೆ. ಇವುಗಳಲ್ಲಿ ಯಾವ ರೀತಿಯ ಚಿತ್ರ ತಯಾರಿಸುತ್ತೇವೆ ಎಂಬುದನ್ನು ಚಿತ್ರ ತಯಾರಕ ಮೊದಲು ತೀರ್ಮಾನಿಸಬೇಕಾಗುತ್ತದೆ.<br />
ಭಾರತದಲ್ಲಿ ಮಕ್ಕಳಿಂದ ದೊಡ್ಡವರಿಗೆ ನೀತಿ ಪಾಠ ಹೇಳುವ ಚಿತ್ರಗಳೇ ಮಕ್ಕಳ ಚಿತ್ರಗಳೆಂಬ ಹೆಸರಲ್ಲಿ ಬಹುಸಂಖ್ಯೆಯಲ್ಲಿ ತಯಾರಾಗುತ್ತಿದೆ. ಮಕ್ಕಳು ಮಕ್ಕಳಿಗಾಗಿ ತಯಾರಿಸುವ ಚಿತ್ರಗಳು ಈವರೆಗೆ ಭಾರತದಲ್ಲಿ ತಯಾರಾಗಿಯೇ ಇಲ್ಲ ಎನ್ನಬಹುದು. ಈಚೆಗೆ ಬಾಲನಟ ಮಾ. ಕಿಶನ್ ಒಂದು ಪ್ರಯತ್ನ ಮಾಡುತ್ತಿದ್ದಾರೆ. ಅದು ಸಹ ಮಕ್ಕಳಿಂದ ದೊಡ್ಡವರಿಗೆ ಎಂಬಂತೆಯೇ ಇತ್ತು ಎನ್ನುವುದು ವಿಷಾದದ ಸಂಗತಿ. ಪ್ರಾಯಶಃ ಆ ಬಾಲಕನಲ್ಲಿ ಇದ್ದಿರಬಹುದಾದ ಮುಗ್ಧತೆಗಿಂತ ಅವನ ಸುತ್ತ ಇದ್ದವರ ಹಿರಿತನವೇ ಚಿತ್ರ ತಯಾರಿಕೆಯಲ್ಲಿ ಹೆಚ್ಚು ಕೆಲಸ ಮಾಡಿದಂತೆ ಕಾಣುತ್ತದೆ.<br />
ಮುಂಬರುವ ದಿನಗಳಲ್ಲಿ ನಮ್ಮ ಪ್ರಾಥಮಿಕ ಶಾಲೆಯಲ್ಲಿಯೇ ಸಿನಿಮಾ ಕಲಿಕೆಯನ್ನು ಕುರಿತ ಪಾಠಗಳನ್ನು ಅಳವಡಿಸಬೇಕೆಂಬ ಪ್ರಯತ್ನಗಳಾಗುತ್ತಿವೆ. ಹಾಗಾದಾಗ ಮಕ್ಕಳಿಂದ ಮಕ್ಕಳಿಗಾಗಿ ತಯಾರಾದ ಚಿತ್ರಗಳು ನಮ್ಮ ದೇಶದಲ್ಲಿಯೂ ತಯಾರಾಗಬಹುದು.</p>
<p>ಮಕ್ಕಳ ಚಲನಚಿತ್ರ ಇತರ ಚಲನಚಿತ್ರಗಳಿಗಿಂತ ಭಿನ್ನವೇ ಹೇಗೆ?<br />
ಕಲೆ ಮಾಧ್ಯಮಗಳನ್ನು ಹುಡುಕುವಂತಿರಬೇಕು. ಮುಗ್ಧತೆಯಿಂದ &#8211; ಮುಗ್ಧತೆಯನ್ನು ಕಳೆದುಕೊಂಡು, ಬಳಿಕ ಮತ್ತೆ ಮುಗ್ಧತೆಯನ್ನು ಹುಡುಕುವುದು ಎಲ್ಲಾ ಕಲೆಗಳ ಅಭ್ಯಾಸ. ಇದನ್ನು ನಾವು ಪಿಕಾಸೋ, ಡಾಲಿ ಮುಂತಾದ ಕಲಾವಿದರ ಮಾತುಗಳಲ್ಲಿ ಗಮನಿಸಬಹುದು. ‘ಮರಳಿ ಮುಗ್ಧರಾಗುವ ಪ್ರಕ್ರಿಯೆ’ ಎಲ್ಲಾ ಕಲಾವಿದರಿಗೂ ದಕ್ಕುವುದಿಲ್ಲ. ಆದರೆ ಆ ಪ್ರಯತ್ನ ನಿರಂತರ ಜಾರಿಯಲ್ಲಿ ಇರುತ್ತದೆ.<br />
ಭಾರತದಲ್ಲಿ ಈ ವರೆಗೂ ‘ನಿಜವಾದ’ ಮಕ್ಕಳ ಚಿತ್ರಗಳು ಬರಲಿಲ್ಲ ಎಂಬುದೇ ದೊಡ್ಡ ಬೇಸರ. ಸೆನ್ಸಾರ್ ಮಂಡಳಿಯೂ ಕೂಡ ಅಯ್ಯೋ ಪಾಪ ಎಂಬಂತೆ ಅನೇಕ ಚಿತ್ರಗಳಿಗೆ ಮಕ್ಕಳ ಚಿತ್ರಗಳಿಗೆ ನೀಡಬೇಕಾದ ‘ಸಿ ಸರ್ಟಿಫಿಕೇಟ್ ’ ನೀಡುತ್ತಿದೆ. ಇದಕ್ಕೆ ಈ ದೇಶದಲ್ಲಿ ಮಕ್ಕಳ ಬಗ್ಗೆ ಆಲೋಚಿಸಿ ಸಿನಿಮಾ ಮಾಡುವವರ ಸಂಖ್ಯೆ ಕಡಿಮೆ ಎಂಬುದು ಮತ್ತು ಅಂತಹ ಸಿನಿಮಾ ತಯಾರಕನಿಗೆ ಸರ್ಕಾರ ನೀಡುವ ಸೌಲಭ್ಯಗಳಾದರೂ ಸಿಕ್ಕು ಆತ ಉಳಿದುಕೊಳ್ಳಲಿ ಎಂಬ ಅನುಕಂಪ ಪ್ರಧಾನ ಕಾರಣವಾಗಿರುತ್ತದೆ. ಅದಲ್ಲದೆ ಮುಂದೆಯಾದರೂ ಆ ತಯಾರಕ ಹೊಸ ಸ್ಪೂರ್ತಿ ಪಡೆದು ‘ನಿಜವಾದ’ ಮಕ್ಕಳ ಚಿತ್ರಗಳನ್ನು ತಯಾರಿಸಬಹುದು ಎಂಬ ದೂರಲೋಚನೆಯಿಂದಲೂ ಸರ್ಟಿಫಿಕೇಟ್ ನೀಡಿರಹುದು.</p>
<p>ಮಕ್ಕಳು ಚಲನಚಿತ್ರದಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಇರಬೇಕಾದ ಅರ್ಹತೆಯೇನು?<br />
ಮಕ್ಕಳು ಚಲನಚಿತ್ರದಲ್ಲಿ ತೊಡಗಿಸಿಕೊಳ್ಳುವ ಯಾರಿಗೆ ಆದರೂ ಇಂತಹದ್ದೇ ಆದ ಅರ್ಹತೆಗಳು ಇರಬೇಕೆಂದೆನಿಲ್ಲ. ಪಾತ್ರಗಳ ಆಧಾರದ ಮೇಲೆ ಮಕ್ಕಳನ್ನು ಆಯ್ಕೆ ಮಾಡುತ್ತಾರೆ. ಅವರವರ ತಂತ್ರಜ್ಞಾನದ ಅರಿವನ್ನು ಆಧರಿಸಿ ತಂತ್ರಜ್ಞರ ಆಯ್ಕೆ ಆಗುತ್ತದೆ. ಚಿತ್ರತಯಾರಕರಿಗೆ ತಾವು ಮಾಡುತ್ತಿರುವ ಚಿತ್ರ ಕುರಿತು ವಿಶೇಷ ಪ್ಯಾಷನ್ ಇರಬೇಕು ಎಂಬುದಷ್ಟೇ ಬಹುಮುಖ್ಯ.</p>
<p>ರಾಜ್ಯ ಸರಕಾರ ಮಕ್ಕಳ ಚಿತ್ರಗಳ ಬಗ್ಗೆ ತಳೆದ ಧೋರಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?<br />
ನಮ್ಮ ರಾಜ್ಯ ಸರಕಾರ ಮಕ್ಕಳ ಚಿತ್ರಗಳಿಗೆ ೨೫ ಲಕ್ಷ ರೂ.ಗಳ ಸಬ್ಸಿಡಿ ನೀಡುತ್ತಿದೆ. ಆದರೆ ಮಕ್ಕಳ ಚಿತ್ರ ತಯಾರಿಸುವ ವ್ಯಕ್ತಿಗೆ ಈ ಸಬ್ಸಿಡಿಯಿದೆ ಎಂಬ ಕಾರಣಕ್ಕೆ ಮಕ್ಕಳ ಚಿತ್ರ ತಯಾರಿಸುತ್ತೇನೆ ಎಂಬ ಆಲೋಚನೆ ಬರಲೇಬಾರದು. ಒಂದು ವೇಳೆ ಆ ಆಲೋಚನೆ ಬಂದರೆ ಆತ ಮಕ್ಕಳ ಚಿತ್ರ ತಯಾರಿಸಲು ಅಸಾಧ್ಯ. ಆಗ ಆ ಹಣಕ್ಕಾಗಿಯೇ ಚಿತ್ರ ತಯಾರಿಸಲು ನಿರ್ಮಾಪಕರು ರೆಡಿಯಾಗುತ್ತಾರೆ. ಅಲ್ಲಿ ೫ ಲಕ್ಷ ಲಾಭ ಇಟ್ಟುಕೊಂಡು ಉಳಿದ ಹಣದಲ್ಲಿ ಚಿತ್ರ ತಯಾರಿಸಲು ತೊಡಗುತ್ತಾರೆ. ಹಾಗಾದಾಗ ಅಂತಹ ಚಿತ್ರಗಳು ಅನೇಕ ರಾಜೀ ಸೂತ್ರಗಳಿಗೆ ಒಳಗಾಗಿ ಅಸಡ್ಡಾಳ ಚಿತ್ರವಾಗಿ ಬಿಡುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳ ಚಿತ್ರ ತಯಾರಕ ಸಬ್ಸಿಡಿಯಾಗಲಿ ಅಥವಾ ಇನ್ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಹಾಗೇ ಆದ ಕೂಡಲೇ ಚಿತ್ರ ತಯಾರಿಕೆಯ ಉದ್ದೇಶವೇ ಭ್ರಷ್ಟಗೊಳ್ಳುತ್ತವೆ. ಗಡಿಗಳ ಒಳಗೇ ಸೀಮಿತಗೊಳ್ಳುತ್ತದೆ. ಆದರೆ ಮಕ್ಕಳ ಜಗತ್ತು ಗಡಿಗಳಿಲ್ಲದ ಸ್ಥಿತಿ. ಅಲ್ಲಿ ಹೀರೊ, ವಿಲನ್ ಯಾರೂ ಇಲ್ಲ. ಅಲ್ಲಿ ಎಲ್ಲರೂ ಸಮಾನರು. ಇಂತಹ ಆಮಿಷಗಳು ಮಾರುಕಟ್ಟೆ ತುಂಬಾ ಇರುವುದರಿಂದಲೇ ಇಂದು ಮಕ್ಕಳ ಚಿತ್ರಗಳು ಬರುತ್ತಿಲ್ಲ.</p>
<p>ಮಕ್ಕಳ ಚಿತ್ರ ನಿರ್ಮಾಣದ ವಿವಿಧ ಘಟ್ಟಗಳನ್ನು ವಿವರಿಸುವಿರಾ?<br />
ಮಕ್ಕಳ ಚಿತ್ರಗಳಿಗೆ ವಿಶೇಷವಾಗಿ ಬೇರೆ ಬೇರೆ ಘಟ್ಟಗಳು ಎಂದೇನಿಲ್ಲ. ಎಲ್ಲಾ ಚಿತ್ರಗಳಂತೆ ಇಲ್ಲಿಯೂ ಚಿತ್ರ ತಯಾರಿಸುತ್ತಾರೆ. ಕತೆ, ಚಿತ್ರಕತೆ, ಸಂಭಾಷಣೆ, ಚಿತ್ರೀಕರಣ ಪೂರ್ವ ಸಿದ್ಧತೆ, ಚಿತ್ರೀಕರಣ, ಚಿತ್ರೀಕರಣಾ ನಂತರದ ಡಬ್ಬಿಂಗ್, ರಿರೆಕಾರ್ಡಿಂಗ್, ಸಂಕಲನ, ಮೊದಲ ಪ್ರತಿ ತೆಗೆಯುವುದು ವರೆಗಿನ ಎಲ್ಲಾ ಕೆಲಸಗಳು ಯಾವ ಸಿನಿಮಾ ಮಾಡಿದರೂ ಅದೇ ಆಗಿರುತ್ತದೆ.</p>
<p>ಕನ್ನಡ ಚಲನಚಿತ್ರ ಇಂಡಸ್ಟ್ರಿಯಲ್ಲಿ ಮಕ್ಕಳ ಚಿತ್ರಗಳ ಸೋಲಿಗೆ ಅಥವಾ ಕಡಿಮೆ ಸಂಖ್ಯೆಗೆ ಕಾರಣವೇನು?<br />
ಮಕ್ಕಳ ಚಿತ್ರಗಳ ಸಂಖ್ಯೆ ತೀರಾ ಕಡಿಮೆ. ಅದಕ್ಕೆ ಇಂತಹದ್ದೇ ಕಾರಣ ಅಂತ ನೀಡಲು ಸಾಧ್ಯವಿಲ್ಲ. ಆದರೆ ನಮ್ಮ ಮಕ್ಕಳ ಚಿತ್ರಗಳಿಗಿರುವ ದೊಡ್ಡ ಸಮಸ್ಯೆ ಎಂದರೆ ಮುಗ್ದತೆಯನ್ನು ಕಳೆದುಕೊಂಡದ್ದು ಹಾಗೂ ನಾವು ಭ್ರಷ್ಟರಾದದ್ದು. ಪ್ರಾಯಶಃ ಅದೇ ಕಾರಣದಿಂದ ನಮ್ಮಲ್ಲಿ ‘ನಿಜವಾದ’ ಮಕ್ಕಳ ಚಿತ್ರಗಳು ಬರುತ್ತಿಲ್ಲ. ಆದರೆ ಮಕ್ಕಳ ಚಿತ್ರ ಎಂಬ ಹಣೆಪಟ್ಟಿ ಹೊತ್ತ ಕನಿಷ್ಟ ಐದಾರು ಚಿತ್ರಗಳು ಪ್ರತೀವರ್ಷ ನಮ್ಮಲ್ಲಿ ತಯಾರಾಗುತ್ತಿವೆ. ಅವುಗಳೆಲ್ಲವೂ ಸರ್ಕಾರದ ಸಬ್ಸಿಡಿ ಪಡೆಯಲು ತಯಾರದ ಚಿತ್ರಗಳು ಎಂಬುದು ಸಹ ಸತ್ಯ.<br />
ಈವರೆಗೆ ನಮ್ಮಲ್ಲಿ ‘ನಿಜವಾದ’ ಮಕ್ಕಳ ಚಿತ್ರಗಳು ಬರಲೇ ಇಲ್ಲ. ಅಂದರೆ ಪೂರ್ಣ ಪ್ರಮಾಣದ ಮಕ್ಕಳ ಚಿತ್ರಗಳು ಎಂದು ಯಾವುದನ್ನು ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ‘ಚಿನ್ನಾರಿಮುತ್ತಾ’ದಲ್ಲಿ ಮಕ್ಕಳ ಬಗ್ಗೆ ಹೇಳುತ್ತಾ ಬಳಿಕ ಶಿಕ್ಷಣ, ಮೌಲ್ಯ ಎಂದು ಹೇಳುತ್ತಾ ಮಕ್ಕಳು ಹೇಗಿರಬೇಕು ಎಂದು ದೊಡ್ಡವರಿಗೆ ಉಪದೇಶ ನೀಡುವ ಕತೆ ಇದೆ. ಆದ್ದರಿಂದ ಅದು ಮಕ್ಕಳಿಂದ ದೊಡ್ಡವರಿಗಾಗಿ ತಯಾರಿಸಿದ ಚಿತ್ರ.<br />
ಇಂತಹುದೇ ಮಾತನ್ನು ನಮ್ಮಲ್ಲಿ ತಯಾರಾಗುತ್ತಿರುವ ಬಹುತೇಕ ಸೋಕಾಲ್ಡ್ ಮಕ್ಕಳ ಚಿತ್ರಗಳಿಗೆ ಅಪ್ಲೈ ಮಾಡಿ ಹೇಳಬಹುದು. ಈ ಚಿತುಗಳಿಗೆ ‘ಚಿನ್ನಾರಿಮುತ್ತಾ’ದಲ್ಲಿನ ಹಾಡುಗಳಿಗೆ ಇರುವಷ್ಟೂ ಮಕ್ಕಳನ್ನು ತಲುಪುವ ಶಕ್ತಿ ಇಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.</p>
<p>ಮಕ್ಕಳ ಚಿತ್ರಗಳಿಗೆ ಸಾಮಾಜಿಕ ನೆಲೆಯಲ್ಲಿ ಎಷ್ಟರಮಟ್ಟಿಗೆ ಸ್ಥಾನಮಾನ ದೊರಕಿದೆ?<br />
ಮಕ್ಕಳ ಚಿತ್ರಗಳಿಗೆ ಯಾವತ್ತೂ ಒಳ್ಳೆಯ ಬೇಡಿಕೆಯಿದೆ. ಒಂದು ಒಳ್ಳೆಯ ಉದಾಹರಣೆ ಎಂದರೆ ಚಾರ್ಲಿ ಚಾಪ್ಲಿನ್‌ನ ಚಿತ್ರಗಳು ಹಾಗೂ ಮಿಕ್ಕಿ ಮೌಸ್, ಡೋನಾಲ್ಡ್ ಡಕ್ ಅಂತಹ ಚಿತ್ರಗಳು. ಈ ಚಿತ್ರಗಳಿಗೆ ಇಂದೂ ಪ್ರೇಕ್ಷಕರಿದ್ದಾರೆ. ಅವು ಪ್ರದರ್ಶನ ಕಾಣುತ್ತಲೇ ಇರುತ್ತವೆ. ಇನ್ನು ಭಾರತದ ಸಂದರ್ಭದಲ್ಲಿ ‘ಮೀನಾಳ ಕಾಗದ’ದಂತಹ ಚಿತ್ರಗಳು ತಯಾರಾಗಿವೆ. ಸಂತೋಷ್ ಶಿವನ್ ತಯಾರಿಸಿದ ‘ಹಾಲೋ’ ‘ಮಲ್ಲಿ’ ತರಹದ ಚಿತ್ರಗಳಿವೆ. ಇವೆಲ್ಲವೂ ಪೂರ್ಣ ಪ್ರಮಾಣದಲ್ಲಿ ಎಲ್ಲಾ ವಯಸ್ಸಿನವರ ಒಳಗಿರುವ ಮಕ್ಕಳಿಗೆ ತಾಗುವ ಚಿತ್ರಗಳು. ಇವುಗಳಿಗೆಲ್ಲಾ ಎಲ್ಲಾ ಕಾಲಕ್ಕೂ ಒಳ್ಳೆಯ ಬೇಡಿಕೆ ಇರುತ್ತದೆ. ಚಿತ್ರ ಬಿಡುಗಡೆಯಾದ ಬಳಿಕ ನಿರ್ಮಾಪಕರಿಗೆ ಒಳ್ಳೆಯ ಹಣವನ್ನು ಗಳಿಸಿ ಕೊಟ್ಟಿದೆ.<br />
ನನ್ನ ಅಭಿಪ್ರಾಯವನ್ನು ಮತ್ತೆ ಸ್ಪಷ್ಟ ಪಡಿಸುವಾದದರೆ ಮಕ್ಕಳ ಚಿತ್ರ ತಯಾರಿಸುವ ಮೊದಲು ಚಿತ್ರ ತಂಡಕ್ಕೆ ಹಣ ಮತ್ತು ಲಾಭದ ವಿಷಯ ಮನಸ್ಸಿನಲ್ಲಿ ಸುಳಿಯಲೇಬಾರದು. ಹಾಗಾದಾಗ ಮಾತ್ರ ‘ನಿಜವಾದ’ ಮಕ್ಕಳ ಚಿತ್ರ ನಿರ್ಮಾನ ಆಗುತ್ತದೆ.</p>
<p>ಮಾರುಕಟ್ಟೆ ದೃಷ್ಠಿಯಿಂದ ಅಥವಾ ಇತರ ಉದ್ದೇಶಗಳಿಂದ ಮಕ್ಕಳ ಚಿತ್ರಗಳಲ್ಲಿ ಏನಾದರೂ ಬದಲಾವಣೆ ಮಾಡಲಾಗಿದೆಯೇ?<br />
ಮಕ್ಕಳ ಚಿತ್ರಗಳನ್ನು ತಯಾರಿಸುವಾಗ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರ ತಯಾರಿಸಬಾರದು. ಸ್ವಚ್ಛ ಮನಸ್ಸುಗಳು ಮಕ್ಕಳಿಗಾಗಿ ಕತೆಯನ್ನು, ಸ್ವಚ್ಛವಾಗಿ ಕಟ್ಟಬೇಕು.<br />
ನೀವು ಕೇಳುವ ವಿವರಗಳಿಗೆ ಸಂಬಂಧಿಸಿದಂತೆ ಅನೇಕ ಬದಲಾವಣೆ ಆಗಿದೆ. ಅದರಲ್ಲಿ ಕೇಂದ್ರ ಸರ್ಕಾರ ಮಕ್ಕಳಿಗಾಗಿ ಚಿತ್ರ ತಯಾರಿಸಲು ಒಂದು ಸಂಸ್ಥೆಯನ್ನು ಬಹುಕಾಲದಿಂದ ಸ್ಥಾಪಿಸಿರುವುದು, ನಮ್ಮ ರಾಜ್ಯ ಸರ್ಕಾರ ಮಕ್ಕಳ ಚಿತ್ರಗಳಿಗೆ ಹೆಚ್ಚಿನ ಸಬ್ಸಿಡಿ ಕೊಡುತ್ತಾ ಇರುವುದು, ಮುಂತಾದ ಸೌಲಭ್ಯಗಳು ಸಿಕ್ಕಿವೆ. ಆದರೆ ಈ ಸೌಲಭ್ಯಗಳ ಲಾಭ ಪಡೆದವರಿಂದ ‘ನಿಜವಾದ’ ಮಕ್ಕಳ ಚಿತ್ರ ತಯಾರಾಗುವ ಕೆಲಸ ಆಗಬೇಕಿದೆ. ಆಗ ಪ್ರೇಕ್ಷಕರನ್ನು ಅಂತಹ ಚಿತ್ರಗಳು ತಾವೇ ಹುಡುಕಿಕೊಳ್ಳುತ್ತವೆ.</p>
<p>ಮಕ್ಕಳ ಚಿತ್ರಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವೇ?<br />
ಯಾವುದೇ ಚಿತ್ರಗಳ ಉದ್ದೇಶ ಸಮಾಜದಲ್ಲಿ ಬದಲಾವಣೆ ತರುವುದಲ್ಲ. ಅವು ಮನರಂಜನೆ ನೀಡುತ್ತವೆ ಅಷ್ಟೆ. ಆದರೆ ಹಾಗೆ ಕತೆ ಹೇಳುವಾಗಲೇ ಅವು ಮನಸ್ಸುಗಳ ಮೇಲೆ ಪರಿಣಾಮ ಬೀರುತ್ತವೆ. ಈ ಪರಿಣಾಮಗಳು ನಿಧಾನವಾಗಿ ಬದಲಾವಣೆಯನ್ನು ತರಬಹುದು. ಆದರೆ ಚಿತ್ರ ತಯಾರಿಸುವವ ತಾನು ಸಮಾಜವನ್ನು ತಿದ್ದುತ್ತೇನೆ ಎಂದು ಕತೆ ಹೇಳಲು ಹೊರಟ ಕೂಡಲೇ ಆತ ‘ಭ್ರಷ್ಟ’ ಆಗುತ್ತಾನೆ. ಆಗ ಆತ ಕಟ್ಟುವ ಚಿತ್ರಗಳು ‘ಏಕಲವ್ಯ’ ಮಾದರಿಯ ಚಿತ್ರ ಆಗುತ್ತದೆ.<br />
ಮಕ್ಕಳ ಚಿತ್ರಗಳು ಆದರ್ಶ ಪ್ರಾಯವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳು ಗಾಂಧಿ, ನೆಹರೂ ಅವರ ಹಾಗೆ ಆದರ್ಶ ಪ್ರಾಯರಾಗಿರಬೇಕು ಎಂದು ಹೆತ್ತವರೂ ಬಯಸುತ್ತಾರೆ. ಆದರೆ ಮಕ್ಕಳಿಗೆ ಇದಾವುದರ ಅವಶ್ಯಕತೆ ಇಲ್ಲ. ಅವರಿಗೆ ಹೀಗೆ ಇರಬೇಕು ಎಂದು ಯಾಕೆ ಹೇಳಬೇಕು? ಅವರಿಗೆ ಹೇಗೆ ಬೇಕೋ ಹಾಗೆ ಇರಲು ಬಿಡಬೇಕು. ಆಗ ಮಾತ್ರ ಅವರ ಪ್ರತಿಭೆ ಹೊರಬರಲು ಸಾಧ್ಯ. ಅವರ ಜಗತ್ತಿನಲ್ಲಿ ಇದು ಒಳ್ಳೆಯದು ಅದು ಕೆಟ್ಟದ್ದು ಎಂದು ಇಲ್ಲ. ಅವರಿಗೆ ಎಲ್ಲವೂ ಒಂದೇ. ಹಾಗೆಯೇ ಸಿನಿಮಾದಲ್ಲಿಯೂ ಆದರ್ಶಗಳು ಬಂದ ಕೂಡಲೇ ಅದು ಮುಗ್ಧತೆಯನ್ನು ಕಳೆದುಕೊಂಡು, ಪ್ರಬುದ್ಧತೆಯ ಕಡೆಗೆ ಸಾಗುತ್ತದೆ. ಪ್ರಬುದ್ಧತೆಯ ಕಡೆಗೆ ಸಾಗುವ ಚಿತ್ರಗಳು ಮಕ್ಕಳ ಚಿತ್ರವಾಗಿ ಉಳಿಯುವಲ್ಲಿ ವಿಫಲವಾಗುತ್ತವೆ. ಆಗ ಅವುಗಳನ್ನು ಮಕ್ಕಳ ಚಿತ್ರಗಳು ಎಂದು ಕರೆಯಲು ಆಗುವುದಿಲ್ಲ. ಈ ಮಾತನ್ನು ನನ್ನ ಸಂಸ್ಥೆಯೇ ತಯಾರಿಸಿದ ‘ಗುಬ್ಬಚ್ಚಿಗಳು’ ಚಿತ್ರಕ್ಕೂ ಹೇಳಬಹುದು.<br />
ಅಂತಹ ಚಿತ್ರಗಳನ್ನು ಸರ್ಕಾರಗಳಿಂದ ಒತ್ತಾಯ ತಂದು ಅನೇಕ ಮಕ್ಕಳಿಗೆ ತೋರಿಸಬಹುದಾದರೂ, ಆ ಚಿತ್ರ ನೋಡಿದ ಮಕ್ಕಳಿಗೆ ಮತ್ತೆ ಮಕ್ಕಳಾಗಿ ಉಳಿಯಲು ಆ ಚಿತ್ರಗಳು ಪ್ರೇರೇಪಿಸುವುದಿಲ್ಲ ಎಂಬುದನ್ನು ಮರೆಯುವಂತಿಲ್ಲ.</p>
<p>ಬಾಲಕಾರ್ಮಿಕ ಪದ್ಧತಿ ಎಂಬ ನೆಲೆಯಲ್ಲಿ ಮಕ್ಕಳ ಚಿತ್ರಗಳಿಗೆ ಕಾನೂನಿನಿಂದ ಏನಾದರೂ ಸಮಸ್ಯೆ ಎದುರಾಗಿದೆಯೇ?<br />
ನನಗೆ ತಿಳಿದಿರುವ ಮಟ್ಟಿಗೆ ಇಷ್ಟರವರೆಗೆ ಅಂತಹ ಸಮಸ್ಯೆ ಎದುರಾಗಿಲ್ಲ. ಅಲ್ಲದೇ ಮಕ್ಕಳು ಒಂದು ನಿಯಮಿತ ಸಮಯದಲ್ಲಿ ಮಾತ್ರ ಇಲ್ಲಿ ಅಭಿನಯಿಸಲು ಬರುವುದರಿಂದ ಅವರಿಗೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ. ಆದ್ದರಿಂದ ಕಾನೂನಿನಿಂದಲೂ ಸಮಸ್ಯೆಗಳು ಉಂಟಾಗುವುದಿಲ್ಲ.</p>
<p>ಮಕ್ಕಳಿಗೆ ನೀಡುವ ಸಂಭಾವನೆ, ಅವರ ಬೇಡಿಕೆಗಳು, ಅಗತ್ಯತೆಗಳ ಬಗ್ಗೆ ಸ್ವಲ್ಪ ತಿಳಿಸುವಿರಾ?<br />
ಮಕ್ಕಳಿಗೆ ಅಂತಹ ದೊಡ್ಡ ಬೇಡಿಕೆಗಳೇನು ಇರುವುದಿಲ್ಲ.</p>
<p>ಮಕ್ಕಳು ಚಲನಚಿತ್ರಗಳಲ್ಲಿ ಅಭಿನಯಿಸುವುದರಿಂದ ಅವರ ಭವಿಷ್ಯಕ್ಕೆ ಅಥವಾ ಅವರ ಶಾಲಾ ಚಟುವಟಿಕೆಗಳಿಗೆ ತೊಂದರೆ ಬಂದಾಗ ನಿಭಾವಣೆ ಹೇಗೆ?<br />
ಮಕ್ಕಳು ಚಲನಚಿತ್ರಗಳಲ್ಲಿ ಅಭಿನಯಿಸುವುದು ರಜೆಯ ಸಂದರ್ಭಗಳಲ್ಲಿ. ಅಥವಾ ಒಂದು ವಾರ ತರಗತಿಗಳಿಗೆ ಗೈರು ಹಾಜರಾದರೆ ಅಷ್ಟೇನೂ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಯಾವುದೇ ಒಬ್ಬ ಬಾಲ ನಟ ನಿರಂತರವಾಗಿ ಸಿನಿಮಾ ಅಭಿನಯವನ್ನೇ ವೃತ್ತಿಯಾಗಿಸಿಕೊಂಡಾಗ ಅಂತಹ ಹುಡುಗ ಬಹುಬೇಗ ಇನ್ನಿತರ ಮಕ್ಕಳ ಜೊತೆಗೆ ಬರೆಯಲಾಗದ ಮನಸ್ಥಿತಿಗೆ ತಲುಪುತ್ತಾನೆ. ಇದು ಅಂತಹ ಮಗುವಿನ ಭವಿಷ್ಯಕ್ಕೆ ಮಾರಕವಾಗಬಹುದು.</p>
<p>ಮಕ್ಕಳ ದೃಷ್ಟಿಯಿಂದ ಹಲವೆಡೆ ಬಾಲಭವನಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಮಕ್ಕಳ ಚಿತ್ರಗಳಿಗೆ ಯಾವ ರೀತಿಯ ಸಹಕಾರ ಸಿಗುತ್ತಿದೆ?<br />
ಬಾಲಭವನಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಮಕ್ಕಳ ಚಿತ್ರಗಳಿಗೆ ಹೇಳಿಕೊಳ್ಳುವಂತಹ ದೊಡ್ಡ ಪ್ರಯೋಜನಗಳು ಆಗಲಿಲ್ಲ. ಇಲ್ಲಿ ಮಕ್ಕಳ ಚಿತ್ರಗಳನ್ನು ತೋರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಷ್ಟೇ. ಎಲ್ಲಾ ಸರ್ಕಾರೀ ವ್ಯವಸ್ಥೆಗಳೂ ಬಹಳ ಒಳ್ಳೆಯ ಉದ್ದೇಶಕ್ಕೆ ಆರಂಭವಾಗುತ್ತವೆ. ಕಾಲಾಂತರದಲ್ಲಿ ಅವು ಕೇವಲ ಸರ್ಕಾರೀ ವ್ಯವಸ್ಥೆಗಳಾಗಿ ಉಳಿದು, ಸಮಾಜದಿಂದ ಸ್ವತಃ ‘ನಿಷಿದ್ಧ’ವಾದ ಸ್ಥಿತಿಯನ್ನು ತಲುಪಿಬಿಡುತ್ತವೆ. ಆಯಾ ಬಾಲಭವನಗಳಲ್ಲಿ ನಿಷ್ಠ ಅಧಿಕಾರಿಗಳು ಬಂದಾಗ ಮಾತ್ರ ಒಂದಷ್ಟು ಒಳ್ಳೆಯ ಚಟುವಟಿಕೆ ಕಾಣಲು ಸಾಧ್ಯ. ಅದು ಬಹಳ ಅಪರೂಪ.</p>
<p>ಪ್ರೇಕ್ಷಕರನ್ನು ಮಕ್ಕಳ ಚಿತ್ರಗಳ ಕಡೆಗೆ ಆಕರ್ಷಿತರಾಗುವಂತೆ ಮಾಡಲು ಏನಾದರೂ ಹೊಸ ಆಲೋಚನೆಗಳಿವೆಯೇ?<br />
ಒಳ್ಳೆಯ ಅಂದರೆ ‘ನಿಜವಾದ’ ಮಕ್ಕಳ ಚಿತ್ರಗಳಿಗೆ ಪ್ರೇಕ್ಷಕರನ್ನು ಆಕರ್ಷಿಸುವ ಗುಣ ಇರುತ್ತವೆ. ಅವುಗಳಿಗೆ ಬೇರೆ ಯಾವ ಹೊಸ ತಂತ್ರಗಳು ಬೇಕಾಗಿಲ್ಲ.</p>
<p>ಮಕ್ಕಳ ನಿಭಾವಣೆಯಲ್ಲಿ ನಿರ್ದೇಶಕರಿಗಿರುವ ಸವಾಲುಗಳೇನು?<br />
ನಿರ್ದೇಶಕ ಹಡಗಿಗೆ ಕ್ಯಾಪ್ಟನ್ ಇದ್ದ ಹಾಗೆ. ಅವನೇ ಅಲ್ಲಿ ಫೈನಲ್. ನಿರ್ಮಾಪಕ ಹಣ ಹೂಡುತ್ತಾನಾದರೂ ನಿರ್ದೇಶಕನ ಪಾತ್ರ ಚಿತ್ರ ತಂಡದಲ್ಲಿ ಮುಖ್ಯ. ಮಕ್ಕಳನ್ನು ನಿಭಾಯಿಸುವುದೇ ಒಮದು ದೊಡ್ಡ ಸವಾಲು. ಚಿತ್ರತಂಡವೊಂದು ತಾನು ಆರಿಸಿದ ಕತೆಗೆ ತಕ್ಕ ಪಾತ್ರಧಾರಿಗಳನ್ನು ಹುಡುಕಿ, ಅಂತಹವರ ಜೊತೆಗೆ ಹಲವು ಕಾಲ ಕಳೆದು, ನಂತರ ಚಿತ್ರೀಕರಣ ಆರಂಭಿಸಿದರೆ ಅಂತಹ ತಂಡಕ್ಕೆ ಏನೂ ದೊಡ್ಡ ಸಮಸ್ಯೆ ಉಂಟಾಗಲಿಕ್ಕಿಲ್ಲ.</p>
<p>ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಮಕ್ಕಳ ಚಿತ್ರಗಳಿಗೆ ಪ್ರೋತ್ಸಾಹ ಹೇಗಿದೆ?<br />
ಕರ್ನಾಟಕದಲ್ಲಿಯಂತೂ ಮಕ್ಕಳ ಚಿತ್ರಗಳಿಗೆ ಭಾರೀ ಎನ್ನಬಹುದಾದ ಸಬ್ಸಿಡಿ ಸಿಗುತ್ತಿದೆ. ಭಾರತ ಸರ್ಕಾರವೂ ಸಹ ಅತ್ಯುತ್ತಮ ಮಕ್ಕಳ ಚಿತ್ರಕ್ಕೆ ವಿಶೇಷ ಬಹುಮಾನ ಕೊಟ್ಟು ಪ್ರಶಸ್ತಿಯ ಹೆಸರಲ್ಲಿ ಹಣಸಹಾಯ ಮಾಡುತ್ತಾ ಇದೆ. ಈ ಸಹಾಯಗಳು ಈಗ ಏನಿವೆ, ಅವೇ ಅಜೀರ್ಣ ಎಂಬಷ್ಟಾಗಿದೆ. ನಮ್ಮ ತಯಾರಕರು ‘ನಿಜವಾದ’ ಮಕ್ಕಳ ಚಿತ್ರ ತಯಾರಿಸುವ ಕಡೆ ಒಲವು ತೋರಿಸಬೇಕಾಗಿದೆ ಅಷ್ಟೆ.</p>
<p>ಮಾರುಕಟ್ಟೆಯಲ್ಲಿ ಮಕ್ಕಳ ಚಿತ್ರಗಳಿಗೆ ಪ್ರೋತ್ಸಾಹ ಹೇಗಿದೆ?<br />
ಯಾವುದೇ ಮಾರುಕಟ್ಟೆ ಲಾಭದಾಯಕ ಸಾಮಗ್ರಿಯನ್ನು ಪ್ರೋತ್ಸಾಹಿಸುತ್ತದೆ. ಸಧ್ಯಕ್ಕೆ ನಮ್ಮಲ್ಲಿ ತಯಾರಾಗುತ್ತಿರುವ ಸೋಕಾಲ್ಡ್ ಮಕ್ಕಳ ಚಿತ್ರಗಳು ಮಕ್ಕಳನ್ನು ಸೆಳೆಯುತ್ತಿಲ್ಲ. ಹೀಗಾಗಿ ಇಂತಹ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಇದೆ. ಪ್ರೇಕ್ಷಕರಿಲ್ಲದ ಸಿನಿಮಾ ಲಾಭ ಗಳಿಸುವುದೂ ಅಸಾಧ್ಯ. ಹೀಗಾಗಿ ಮಾರುಕಟ್ಟೆ ಇಂತಹ ನಷ್ಟವನ್ನು ಸಧ್ಯದ ಸ್ಥಿತಿಯಲ್ಲಿ ಪ್ರೋತ್ಸಾಹಿಸಲು ಸಾಧ್ಯವಿಲ್ಲ. ನಮ್ಮ ಮಕ್ಕಳ ಚಿತ್ರ ತಯಾರಕರು ‘ನಿಜವಾದ’ ಮಕ್ಕಳ ಚಿತ್ರವನ್ನು ತಯಾರಿಸಿದಾಗ ಚೀನಾದಲ್ಲಿ, ಜಪಾನಿನಲ್ಲಿ, ಅಮೇರಿಕಾದಲ್ಲಿ, ಇರಾನಿನಲ್ಲಿ ಇರುವಂತೆ ಇಲ್ಲಿಯೂ ಮಕ್ಕಳ ಚಿತ್ರಗಳಿಗೆ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಆಗ ಅದಕ್ಕಾಗಿ ಬದಲೀ ವ್ಯವಸ್ಥೆಗಳೂ ಬರಬಹುದು.<br />
ಮಕ್ಕಳ ಚಲನಚಿತ್ರೋತ್ಸವ ನಡೆಸಲು ಏನೆಲ್ಲಾ ಕ್ರಮ ಕೈಗೊಳ್ಳಬೇಕು?<br />
ಯಾವುದೇ ಉತ್ಸವ ನಡೆಸುವಾಗ ಯಾವ ಯಾವ ಎಚ್ಚರಿಕೆಗಳನ್ನು, ಕ್ರಮಗಳನ್ನು ಸಿದ್ಧತೆಗಳನ್ನು ಮಾಡುತ್ತೇವೋ ಮಕ್ಕಳ ಚಿತ್ರಗಳ ಉತ್ಸವಕ್ಕೂ ಅದೇ ರೀತಿಯ ಎಚ್ಚರ, ಕ್ರಮ ಸಿದ್ಧತೆ ಮಾಡಬೇಕು. ಅಂತಿಮವಾಗಿ ಒಂದು ಸಮಾಜದ ಮಕ್ಕಳು ಆ ಉತ್ಸವದಲ್ಲಿ ‘ಮಕ್ಕಳದ್ದೇ’ ಚಿತ್ರಗಳನ್ನು ನೋಡುವಂತಹ ಅವಕಾಶ ಒದಗಬೇಕು. ಆಗ ಮತ್ತಷ್ಟು ‘ನಿಜವಾದ’ ಮಕ್ಕಳ ಚಿತ್ರ ತಯಾರಿಕೆ ಆಗುತ್ತದೆ.</p>
<p>ಕಮರ್ಷಿಯಲ್ ಚಿತ್ರ ಮತ್ತು ಆರ್ಟ್ ಫಿಲ್ಮ್ ಇದಕ್ಕಿರುವ ವ್ಯತ್ಯಾಸಗಳೇನು? ಮಕ್ಕಳ ಚಿತ್ರಗಳನ್ನು ಯಾವ ಚಿತ್ರಗಳು ಎಂದು ಭಾವಿಸಬಹುದು?<br />
ಈ ಜಗತ್ತಲ್ಲಿ ತಯಾರಾಗುವ ಎಲ್ಲಾ ಚಿತ್ರಗಳೂ ಕಮರ್ಷಿಯಲ್ ಆದಂತಹವೇ. ಸಿನಿಮಾ ತಯಾರಿಕೆಗೆ ಹಣ ಹೂಡಲಾಗಿದೆ ಎಂದಾದಮೇಲೆ ಅದರ ಲಾಭ-ನಷ್ಟದ ಲೆಕ್ಕ ಎಂದಾದರೂ ಹಾಕಲೇ ಬೇಕಲ್ಲವೇ? ಇನ್ನೂ ತಯಾರಾಗುವ ಎಲ್ಲಾ ಚಿತ್ರಗಳೂ ತಮ್ಮ ಮಟ್ಟಿಗೆ ಕಲಾತ್ಮಕವೇ! ನೀವು ಹೇಳುತ್ತಿರುವ ವ್ಯತ್ಯಾಸ ಮಾಧ್ಯಮಗಳು ಮಾಡಿದ ವರ್ಗೀಕರಣ. ಅದು ಸರಿಯಲ್ಲ. ಸಿನಿಮಾದಲ್ಲಿ ಇರುವುದು ಎರಡೇ ಬಗೆ. ಒಂದು ಜನ ನೋಡುವ ಸಿನಿಮಾ ಮತ್ತೊಂದು ಜನ ನೋಡದೆ ಇರುವ ಸಿನಿಮಾ. ಮಕ್ಕಳ ಚಿತ್ರಗಳನ್ನೂ ಸಹ ಹೀಗೆಯೇ ಗುರುತಿಸಬಹುದು. ಹಾಗೆಂದು ಅತಿ ಹೆಚ್ಚು ಜನ ನೋಡಿದ ಸಿನಿಮಾಗಳೇ ಒಳ್ಳೆಯ ಸಿನಿಮಾ ಎಂದೇನಲ್ಲಾ. ಯಾವುದೋ ಒಂದು ಬಗೆಯ ಸಿನಿಮಾಗೆ ಅತಿ ಕಡಿಮೆ ಪ್ರೇಕ್ಷಕ ಗಣ ಇರಬಹುದು. ಆದರೆ ಆ ಪ್ರೇಕ್ಷಕ ಗಣ ಗುಣಗ್ರಾಹಿ ಆಗಿದ್ದಾಗ ಮಾತ್ರ ಆ ವರ್ಗದ ಸಿನಿಮಾ ಆ ಪ್ರೇಕ್ಷಕರಿಗೆ ತಲುಪುತ್ತದೆ. ಗಿರೀಶ್ ಕಾಸರವಳ್ಳಿಯವರಿಗೆ ಅವರದ್ದೇ ಪ್ರೇಕ್ಷಕ ವರ್ಗ ಇರುವಂತೆ ಮತ್ತೊಬ್ಬ ಅತೀ ಜನಪ್ರಿಯ ತಾರೆಗೆ ಅವರದ್ದೇ ಪ್ರೇಕ್ಷಕ ವರ್ಗ ಇರುತ್ತದೆ. ಈ ವರ್ಗ, ಆ ವರ್ಗದ ಒಳಗೆ ಸುಳಿಯಲೂ ಬಹುದು. ಆದರೆ ಅಂತಿಮವಾಗಿ ಯಾವ ಸಿನಿಮಾಗೆ ಬಹುಕಾಲ ನೆನಪಿನ ಕೋಶದಲ್ಲಿ ನಿಲ್ಲುವ ಶಕ್ತಿ ಇದೆಯೋ ಅದು ಒಳ್ಳೆಯ ಸಿನಿಮಾ ಆಗುತ್ತದೆ. ಯಾವುದೇ ಸಿನಿಮಾ ವಾಣಿಜ್ಯದ ದೃಷ್ಟಿಯಿಂದ ಎಷ್ಟು ಬೃಹತ್ ಮೊತ್ತ ಸಂಗ್ರಹಿಸಿತು ಎನ್ನುವುದಕ್ಕಿಂತ ಅದು ಎಷ್ಟು ಕಾಲ ಜನ ಮಾನಸದಲ್ಲಿ ಉಳಿಯಿತು ಎಂಬುದು ಮುಖ್ಯ. ಈ ಮಾತನ್ನು ನೇರವಾಗಿ ಮಕ್ಕಳ ಚಿತ್ರಕೂ ಆರೋಪಿಸಿ ನೋಡಬಹುದು. ಆ ದೃಷ್ಟಿಯಿಂದಲೇ ಚಾರ್ಲಿ ಚಾಪ್ಲಿನ್ನನ ಪ್ರಯೋಗ, ವಾಲ್ಟ್ ಡಿಸ್ನಿಯ ಪ್ರಯೋಗ, ಸತ್ಯಜಿತ್ ರಾಯ್ ಅವರು ಮಾಡಿದ ಒಂದೆರಡು ಮಕ್ಕಳ ಚಿತ್ರಗಳು, ಶಂಕರ್‌ನಾಗ್ ಮಾಡಿದ ‘ಸ್ವಾಮಿ’ ತರಹದ ಚಿತ್ರಗಳು ಬಹುಕಾಲ ನಮ್ಮ ನೆನಪಿನ ಕೋಶದಲ್ಲಿ ಉಳಿದಿವೆ. ಈಗಲೂ ಹೊಸ ಪ್ರೇಕ್ಷಕರನ್ನು ಸಂಪಾದಿಸುತ್ತಿವೆ ಎನ್ನಬಹುದು.</p>
<br />Filed under: <a href='http://bsuresha.wordpress.com/category/%e0%b2%9a%e0%b2%b2%e0%b2%a8%e0%b2%9a%e0%b2%bf%e0%b2%a4%e0%b3%8d%e0%b2%b0/'>ಚಲನಚಿತ್ರ</a>  <a rel="nofollow" href="http://feeds.wordpress.com/1.0/gocomments/bsuresha.wordpress.com/208/"><img alt="" border="0" src="http://feeds.wordpress.com/1.0/comments/bsuresha.wordpress.com/208/" /></a> <a rel="nofollow" href="http://feeds.wordpress.com/1.0/godelicious/bsuresha.wordpress.com/208/"><img alt="" border="0" src="http://feeds.wordpress.com/1.0/delicious/bsuresha.wordpress.com/208/" /></a> <a rel="nofollow" href="http://feeds.wordpress.com/1.0/gofacebook/bsuresha.wordpress.com/208/"><img alt="" border="0" src="http://feeds.wordpress.com/1.0/facebook/bsuresha.wordpress.com/208/" /></a> <a rel="nofollow" href="http://feeds.wordpress.com/1.0/gotwitter/bsuresha.wordpress.com/208/"><img alt="" border="0" src="http://feeds.wordpress.com/1.0/twitter/bsuresha.wordpress.com/208/" /></a> <a rel="nofollow" href="http://feeds.wordpress.com/1.0/gostumble/bsuresha.wordpress.com/208/"><img alt="" border="0" src="http://feeds.wordpress.com/1.0/stumble/bsuresha.wordpress.com/208/" /></a> <a rel="nofollow" href="http://feeds.wordpress.com/1.0/godigg/bsuresha.wordpress.com/208/"><img alt="" border="0" src="http://feeds.wordpress.com/1.0/digg/bsuresha.wordpress.com/208/" /></a> <a rel="nofollow" href="http://feeds.wordpress.com/1.0/goreddit/bsuresha.wordpress.com/208/"><img alt="" border="0" src="http://feeds.wordpress.com/1.0/reddit/bsuresha.wordpress.com/208/" /></a> <img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=208&amp;subd=bsuresha&amp;ref=&amp;feed=1" width="1" height="1" />]]></content:encoded>
			<wfw:commentRss>http://bsuresha.wordpress.com/2011/08/06/%e0%b2%ae%e0%b2%95%e0%b3%8d%e0%b2%95%e0%b2%b3-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%97%e0%b2%b3%e0%b3%81-%e0%b2%92%e0%b2%82%e0%b2%a6%e0%b3%81-%e0%b2%85%e0%b2%a7%e0%b3%8d%e0%b2%af/feed/</wfw:commentRss>
		<slash:comments>1</slash:comments>
	
		<media:content url="" medium="image">
			<media:title type="html">bsuresha</media:title>
		</media:content>
	</item>
		<item>
		<title>ಕನ್ನಡ ಪರಿಸರ ನಿರ್ಮಾಣ &#8211; ಸಾಧ್ಯತೆಗಳು ಹಾಗೂ ಸವಾಲುಗಳು</title>
		<link>http://bsuresha.wordpress.com/2011/08/06/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%aa%e0%b2%b0%e0%b2%bf%e0%b2%b8%e0%b2%b0-%e0%b2%a8%e0%b2%bf%e0%b2%b0%e0%b3%8d%e0%b2%ae%e0%b2%be%e0%b2%a3-%e0%b2%b8%e0%b2%be%e0%b2%a7%e0%b3%8d/</link>
		<comments>http://bsuresha.wordpress.com/2011/08/06/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%aa%e0%b2%b0%e0%b2%bf%e0%b2%b8%e0%b2%b0-%e0%b2%a8%e0%b2%bf%e0%b2%b0%e0%b3%8d%e0%b2%ae%e0%b2%be%e0%b2%a3-%e0%b2%b8%e0%b2%be%e0%b2%a7%e0%b3%8d/#comments</comments>
		<pubDate>Sat, 06 Aug 2011 07:13:32 +0000</pubDate>
		<dc:creator>bsuresha</dc:creator>
				<category><![CDATA[ಇಂದಿನ ಚಿಂತೆ!]]></category>
		<category><![CDATA[ವಿಶ್ವಕನ್ನಡ ಸಮ್ಮೇಳನ]]></category>

		<guid isPermaLink="false">http://bsuresha.wordpress.com/?p=205</guid>
		<description><![CDATA[ಬೆಳಗಾವಿ ವಿಶ್ವಕನ್ನಡ ಸಮ್ಮೇಳನದಲ್ಲಿ ೧೨ ಮಾರ್ಚ್ ೨೦೧೧ ರಂದು ಮಂಡಿಸಲಾದ ಪ್ರಬಂಧ (ಲೇಖನ ಬರೆದ ದಿನಾಂಕ : ೭ ಮಾರ್ಚ್ ೨೦೧೧ ರಿಂದ ೧೧ ಮಾರ್ಚ್ ೨೦೧೧) ಮೊದಲಿಗೆ ವೇದಿಕೆಯ ಮೇಲಿರುವ ವಿದ್ವಜ್ಜನರಿಗೆ, ಸಭೆಯಲ್ಲಿರುವ ಸಜ್ಜನರಿಗೆ ಎಲ್ಲಾ ಕನ್ನಡ ಮನಸ್ಸುಗಳಿಗೆ ನಮಸ್ಕಾರಗಳು. ಎರಡನೆಯ ವಿಶ್ವಕನ್ನಡ ಸಮ್ಮೇಳನದ, ಬೆಳಗಾವಿಯ ಈ ಮಂಟಪದಲ್ಲಿ ನಿಮ್ಮಂತಹ ಸಹೃದಯರ ಎದುರಿಗೆ ನನ್ನ ಅಭಿಪ್ರಾಯ ಮಂಡಿಸಲು, ಚರ್ಚಿಸಲು ಅನುವು ಮಾಡಿಕೊಟ್ಟ ಎಲ್ಲರಿಗೆ ವಂದನೆಗಳು. ನಿಮ್ಮೆದುರಿಗೆ ಇಂದು ‘ಕನ್ನಡ ಪರಿಸರ ನಿರ್ಮಾಣ &#8211; ಸಾಧ್ಯತೆಗಳು ಹಾಗೂ [...]<img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=205&amp;subd=bsuresha&amp;ref=&amp;feed=1" width="1" height="1" />]]></description>
			<content:encoded><![CDATA[<p>ಬೆಳಗಾವಿ ವಿಶ್ವಕನ್ನಡ ಸಮ್ಮೇಳನದಲ್ಲಿ ೧೨ ಮಾರ್ಚ್ ೨೦೧೧ ರಂದು ಮಂಡಿಸಲಾದ ಪ್ರಬಂಧ</p>
<p><em>(ಲೇಖನ ಬರೆದ ದಿನಾಂಕ : ೭ ಮಾರ್ಚ್ ೨೦೧೧ ರಿಂದ ೧೧ ಮಾರ್ಚ್ ೨೦೧೧)</em></p>
<p><strong><span style="text-decoration:underline;">ಮೊದಲಿಗೆ</span></strong></p>
<p>ವೇದಿಕೆಯ ಮೇಲಿರುವ ವಿದ್ವಜ್ಜನರಿಗೆ, ಸಭೆಯಲ್ಲಿರುವ ಸಜ್ಜನರಿಗೆ ಎಲ್ಲಾ ಕನ್ನಡ ಮನಸ್ಸುಗಳಿಗೆ ನಮಸ್ಕಾರಗಳು. ಎರಡನೆಯ ವಿಶ್ವಕನ್ನಡ ಸಮ್ಮೇಳನದ, ಬೆಳಗಾವಿಯ ಈ ಮಂಟಪದಲ್ಲಿ ನಿಮ್ಮಂತಹ ಸಹೃದಯರ ಎದುರಿಗೆ ನನ್ನ ಅಭಿಪ್ರಾಯ ಮಂಡಿಸಲು, ಚರ್ಚಿಸಲು ಅನುವು ಮಾಡಿಕೊಟ್ಟ ಎಲ್ಲರಿಗೆ ವಂದನೆಗಳು. ನಿಮ್ಮೆದುರಿಗೆ ಇಂದು ‘<strong>ಕನ್ನಡ ಪರಿಸರ ನಿರ್ಮಾಣ &#8211; ಸಾಧ್ಯತೆಗಳು ಹಾಗೂ ಸವಾಲುಗಳು’</strong> ಎಂಬ ವಿಷಯದ ಬಗ್ಗೆ ನನ್ನ ಪ್ರಬಂಧವನ್ನು ಮಂಡಿಸುತ್ತಾ ಇದ್ದೇನೆ.</p>
<p>ಈ ವಿಷಯವನ್ನು ಅದಾಗಲೇ ಅನೇಕರು ಅನೇಕ ಕಡೆಗಳಲ್ಲಿ ಚರ್ಚಿಸಿದ್ದಾರೆ. ಬರೆದಿದ್ದಾರೆ. ಅವೆಲ್ಲವುಗಳಲ್ಲಿ ನನ್ನ ಕಿವಿಗೆ ತಾಗಿದ ಮತ್ತು ಕಣ್ಣಿಗೆ ಒದಗಿದ ವಿವರಗಳು ಅತ್ಯಲ್ಪ. ಹೀಗಾಗಿ ನನ್ನ ಅರಿವಿನ ಪರಿಧಿಗೆ ದಕ್ಕಿದ ವಿವರಗಳನ್ನು ಇಟ್ಟುಕೊಂಡು ಈ ಪ್ರಬಂಧ ಸಿದ್ಧಪಡಿಸಿದ್ದೇನೆ. ಒಪ್ಪಿಸಿಕೊಳ್ಳಿ</p>
<p><strong><span style="text-decoration:underline;"> </span></strong></p>
<p><strong><span style="text-decoration:underline;">ಪ್ರವೇಶ</span></strong><strong></strong></p>
<p>ಪರಿಸರವನ್ನು ಕಾಪಾಡುವುದೇ ಬೃಹತ್ ಕಷ್ಟವಾಗಿದೆ ಎಂದು ಇಡೀ ಜಗತ್ತು ಮಾತಾಡುತ್ತಾ ಇರುವ ಕಾಲಘಟ್ಟದಲ್ಲಿ ನಾವು ಕನ್ನಡ ಪರಿಸರ ನಿರ್ಮಾಣವನ್ನು ಕುರಿತು ಮಾತಾಡುವುದು ಸುಲಭವೇನಲ್ಲ. ಈ ಸಂದರ್ಭದಲ್ಲಿ ಪರಿಸರ ಎಂದರೆ ಏನೆಂಬ ಪ್ರಶ್ನೆಗೆ ಉತ್ತರ ಹುಡುಕಿ, ಅಲ್ಲಿ ಕನ್ನಡ ಪರಿಸರ ಹೇಗಿರಬೇಕೆಂದು ನಾವು ಸ್ಪಷ್ಟ ಪಡಿಸಿಕೊಳ್ಳಬೇಕಾಗಿದೆ.</p>
<p>ಪರಿ ಎಂಬುದೇ ಒಂದು ಗಡಿ. ಯಾವುದೇ ಗಡಿಯ ಒಳಗೆ ಇರುವ ಜಗತ್ತನ್ನು ಆ ಜಗತ್ತಿನ ಪರಿಸರ ಎಂದು ಗುರುತಿಸುತ್ತೇವೆ. ಹಾಗಾದರೆ ಕನ್ನಡದ ಪರಿಸರವನ್ನು ಗುರುತಿಸುವುದು ಹೇಗೆ? ೧೯೫೬ರಲ್ಲಿ ಆದ ಭಾಷಾವಾರು ಪ್ರಾಂತ್ಯ ವಿಂಗಡಣೆ ಎಂಬುದು ಕರ್ನಾಟಕಕ್ಕೆ ಮಾತ್ರ ಗಡಿಗಳನ್ನು ಬರೆದಿದೆ. ಹೀಗಾಗಿ ಕನ್ನಡ ಪರಿಸರ ಎಂದರೆ ಕರ್ನಾಟಕದ ಗಡಿಯ ಒಳಗಿನ ವಿವರ ಎಂದರೆ ಅದು ಬೃಹತ್ ಸುಳ್ಳಾಗುತ್ತದೆ. ಕನ್ನಡಿಗರು ಕೇವಲ ಕರ್ನಾಟಕದಲ್ಲಿ ಇಲ್ಲ. ವಿಶ್ವದಾದ್ಯಂತ ಹರಡಿಕೊಂಡಿದ್ದಾರೆ. ರೆಕ್ಕೆ ಬಲಿತ ಹಕ್ಕಿಗೆ ಗಡಿಗಳ ಹಂಗಿಲ್ಲ. ಅದು ಹಾರುತ್ತಲೇ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಕನ್ನಡದಂತಹ ಎರಡುಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಭಾಷೆಯೂ ಹಾಗೆಯೇ. ಅದರ ವಿಸ್ತಾರ ಜಗತ್ತಿನ ಎರಡೂ ಮಗ್ಗುಲುಗಳಲ್ಲಿ ವಿಕಸಿತಗೊಂಡಿದೆ. ಹೀಗಾಗಿ ಕನ್ನಡ ಮಾತಾಡುವ ಯಾವುದೇ ಎರಡು ಜೀವಗಳು ಅದೆಲ್ಲಿಯೇ ಇದ್ದರೂ ಅದು ಕನ್ನಡದ ಪರಿಸರ ಎನ್ನಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಇದು ಬರೀ ಕನ್ನಡ ಸಮ್ಮೇಳನವಲ್ಲ, ವಿಶ್ವಕನ್ನಡ ಸಮ್ಮೇಳನ! ಕನ್ನಡಿಗನ ವಿಶ್ವವನ್ನು ನಾವು ನೋಡಬೇಕಾಗಿದೆ. ಕನ್ನಡಿಗ ಕಟ್ಟಿಕೊಂಡಿರುವ ಪರಿಸರವನ್ನು ಗಮನಿಸಬೇಕಿದೆ.</p>
<p>ಈ ಹಿನ್ನೆಲೆಯಲ್ಲಿ ಕನ್ನಡ-ಕನ್ನಡಿಗ ಎಂಬ ಪರಿಸರವನ್ನು ಹೀಗೆ ಗುರುತಿಸಬಹುದು.</p>
<p>೧. ಕರ್ನಾಟಕದ ಗಡಿಯ ಒಳನಾಡು.</p>
<p>೨. ಕರ್ನಾಟಕದ ಗಡಿನಾಡು.</p>
<p>೩. ಕರ್ನಾಟಕದ ಗಡಿಯಾಚೆಗಿನ ಕನ್ನಡಿಗನ ನಾಡು.</p>
<p>೪. ಈ ದೇಶದ ಗಡಿಯ ಒಳಗೆ ಅನೇಕ ಕಡೆ ಖಲಾಸಿಗಳನ್ನೂರಿದ ಕನ್ನಾಡಿಗನ ನಾಡು.</p>
<p>೫. ದೇಶದಾಚೆಗಿನ ಕನ್ನಾಡಿಗನ ನಾಡು.</p>
<p>ಈ ಎಲ್ಲಾ ನಾಡುಗಳನ್ನೂ ಪ್ರತ್ಯೇಕವಾಗಿ ಗಮನಿಸುತ್ತಾ ಕನ್ನಡ ಪರಿಸರಕ್ಕೆ ಸಧ್ಯದ ಸಮಕಾಲೀನ ಎಂದು ಗುರುತಿಸಲಾಗುವ ಕಾಲಘಟ್ಟದಲ್ಲಿ ಇರುವ ಸಮಸ್ಯೆಗಳು, ಬಿಕ್ಕಟ್ಟುಗಳು ಮತ್ತು ಅವುಗಳ ಪರಿಹಾರಕ್ಕೆ ಇರುವ ಮಾರ್ಗೋಪಾಯಗಳನ್ನು ಗುರುತಿಸುವ ಪ್ರಯತ್ನ ಮಾಡಬೇಕಿದೆ.</p>
<p>ಈ ವಿವರಗಳಲ್ಲದೆ ಕನ್ನಡ ಎಂಬ ನುಡಿಗಟ್ಟು ಸ್ವತಃ ಅನೇಕ ಆವರಣಗಳಲ್ಲಿ ಸುಳಿದು ಅನೇಕ ಸೊಗಡಾಗಿ ನಮ್ಮ ಎದುರಿಗಿದೆ. ಈ ಸೊಗಡುಗಳಿಗೆ ಕಾರಣವಾದದ್ದು ಕನ್ನಡದ ಸೋದರ ಭಾಷೆಗಳು. ಈ ಕೊಡು ಕೊಳುವಿಕೆಯಿಂದಲೇ ಕನ್ನಡಕ್ಕೆ ಜೀವಂತಿಕೆ. ಈ ಹಿನ್ನೆಲೆಯಲ್ಲಿ ನಮ್ಮ ಸೋದರ ಭಾಷೆಗಳ ಪರಿಸರವನ್ನೂ ಗಮನಿಸುವುದು ಅಗತ್ಯ.</p>
<p>ಇವುಗಳ ಜೊತೆಗೆ ಆಳುವ ಅಥವಾ ಅಧಿಕಾರದ ಅಥವಾ ಯಜಮಾನ ಭಾಷೆಗಳು ಸಹ ಕನ್ನಡದ ಮೇಲೆ ಕಾಲದಿಂದ ಕಾಲಕ್ಕೆ ಸವಾರಿ ಮಾಡುತ್ತಲೇ ಇವೆ. ಈ ಭಾಷೆಗಳಿಂದ ಕನ್ನಡಕ್ಕೆ ಆಗಿರುವ ಆಮದುಗಳಿಂದಾಗಿಯೂ ಕನ್ನಡದ ಪರಿಸರದಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಇವುಗಳನ್ನೂ ನಮ್ಮ ಕನ್ನಡ ಪರಿಸರ ನಿರ್ಮಾಣದ ಸಂದರ್ಭದಲ್ಲಿ ಗುರುತಿಸಬೇಕಿದೆ.</p>
<p>ಸೊಗಡು ಮತ್ತು ಯಜಮಾನ ಭಾಷೆಗಳ ಜೊತೆಗೆ ಆಧುನಿಕ ಕಾಲಘಟ್ಟದಲ್ಲಿ ನಮ್ಮೆದುರಿಗೆ ಆಧುನಿಕ ತಂತ್ರಜ್ಞಾನ ಮತ್ತು ಆಧುನಿಕ ಬದುಕು ಅನೇಕ ಹೊಸ ಸವಾಲುಗಳನ್ನು ತಂದಿಟ್ಟಿದೆ. ಇದರಿಂದಾಗಿಯೂ ಕನ್ನಡದ ಪರಿಸರದಲ್ಲಿ ತಲ್ಲಣಗಳು-ತವಕಗಳು ಹುಟ್ಟಿಕೊಂಡಿವೆ. ಅವುಗಳನ್ನೂ ಸಹ ನಾವು ಗುರುತಿಸಿ, ಆ ತಲ್ಲಣಗಳನ್ನು ತಪ್ಪಿಸುವತ್ತ ಯೋಚಿಸಬೇಕಿದೆ.</p>
<p>ಈ ವರ್ಗೀಕರಣಗಳ ಆಚೆಗೆ ನಮ್ಮ ಬರಹದ ಭಾಷೆ ಮತ್ತು ಮಾತು ಕಟ್ಟುವ ಭಾಷೆಯ ನಡುವೆ ಅನೇಕ ಅಂತರಗಳು ಕಳೆದ ಕೆಲವು ದಶಕಗಳಲ್ಲಿ ಆಗಿವೆ. ಇದಕ್ಕೆ ಕಾರಣಗಳು ಭಿನ್ನ. ಆ ಕಾರಣಗಳನ್ನು ಗಮನಿಸುತ್ತಾ ಆಧುನಿಕ ಕಾಲಘಟ್ಟಕ್ಕೆ ಹೊಂದುವ ಭಾಷಾ ಅಧ್ಯಯನದತ್ತಲೂ ನೋಡಬೇಕಿದೆ.</p>
<p>ಈ ಎಲ್ಲಾ ವರ್ಗೀಕರಣಗೊಂಡ ಜಗತ್ತನ್ನು ಪ್ರತ್ಯೇಕವಾಗಿ ನೋಡುತ್ತಾ ‘ಕನ್ನಡ ಪರಿಸರ’ವನ್ನು ತಿಳಿಯುವ ಪ್ರಯತ್ನ ಮಾಡೋಣ.</p>
<p><strong><em>(ಈ ಹಾದಿಯಲ್ಲಿ ಈ ಪ್ರಬಂಧವು ಅನೇಕ ಜ್ಞಾನಶಿಸ್ತುಗಳಲ್ಲಿ ಇಣುಕಿ ನೋಡಬೇಕಿದೆ. ಹಾಗಾಗಿ ಇದು ಸುದೀರ್ಘ ಎನಿಸಿದರೆ ಮತ್ತು ಇನ್ನಿತರ ಬಂಧುಗಳ ವಿಷಯಗಳ ಒಳಗೆ ಹಣಿಕಿಕ್ಕಿದರೆ ಕ್ಷಮೆ ಇರಲಿ.)</em></strong></p>
<p>·           <strong></strong></p>
<p><strong><span style="text-decoration:underline;">ವಿದೇಶಿ ಕನ್ನಡಿಗರು</span></strong><strong></strong></p>
<p>ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ಎಷ್ಟಿದೆಯೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಜನ ದೇಶದಿಂದಾಚೆಗೆ ಕನ್ನಡವನ್ನು ಕೊಂಡೊಯ್ದಿದ್ದಾರೆ. ಅನ್ನದ ಅಗತ್ಯ ಈ ನಮ್ಮ ಕನ್ನಡ ಬಂಧುಗಳನ್ನು ಸಮುದ್ರ ದಾಟಲು ಪ್ರೇರೇಪಿಸಿದೆ ಎಂಬುದು ಸತ್ಯವಾದರೂ ಈ ಬಂಧುಗಳು ತಾವಿರುವ ಜಗತ್ತಿನಲ್ಲಿ ಕನ್ನಡವನ್ನು ಉಳಿಸಿಕೊಳ್ಳಲು ಅತೀವ ಆಸಕ್ತಿ ತೋರುತ್ತಾ ಇದ್ದಾರೆ. ಇದಕ್ಕೆ ಕನ್ನಡದ ಅಸ್ಮಿತೆಯೊಂದೇ ಕಾರಣವಲ್ಲ. ಕನ್ನಡ ಸಂಸ್ಕೃತಿಗೆ ಇರುವ ಶಕ್ತಿಯನ್ನು ಅವರು ಸ್ವತಃ ಅರಿತವರು. ಹೀಗಾಗಿ ಅದೇ ಸಂಸ್ಕೃತಿಯ ಧಾರೆ ತಮ್ಮ ಮುಂದಿನ ತಲೆಮಾರಿಗೆ ಸಾಗಬೇಕು ಎಂಬುದು ಅವರ ಆಶಯ. ಇದಕ್ಕಾಗಿಯೇ ಮಧ್ಯಪ್ರಾಚ್ಯವೋ, ಅಮೇರಿಕಾ ಖಂಡವೋ, ಯೂರೋಪಿನ ಯಾವುದೋ ಮೂಲೆಯಲ್ಲಿರುವ ಕನ್ನಡಿಗ ತನ್ನ ಸುತ್ತ ಇರುವ ತನ್ನ ಸೊಲ್ಲರಿಮೆಗಳನ್ನು ಸೇರಿಸಿಕೊಂಡು ಸಂಘ ಕಟ್ಟಿಕೊಳ್ಳುತ್ತಾನೆ. ಆ ಸಂಘಟನೆಗಳಲ್ಲಿ ಕೆಲವೇ ಗಂಟೆಗಳಾದರೂ ಕೇಳುವ ತನ್ನ ಭಾಷೆಯನ್ನು ಆತ ಆನಂದಿಸುತ್ತಾನೆ. ಈ ಕನ್ನಡಿಗನಿಗೆ ತನ್ನ ಕನ್ನಡ ಪರಿಸರವನ್ನು ನಿರಂತರವಾಗಿ ಕಾಯ್ದುಕೊಳ್ಳುವ ಅವಸರವಿದೆ. ಹುಕಿ ಇದೆ. ಅದಕ್ಕಾಗಿ ಹಲವು ದೇಶಗಳಲ್ಲಿರುವ ಕನ್ನಡಿಗರು ತಾವು ಕಟ್ಟಿಕೊಂಡ ಸಂಘಗಳ ನೆರವು ಪಡೆದು ತಮ್ಮ ಮುಂದಿನ ತಲೆಮಾರಿಗೆ ಕನ್ನಡವನ್ನು ಕಲಿಸುವ ಪ್ರಯತ್ನ ಮಾಡುತ್ತಾ ಇದ್ದಾರೆ. ಈ ಚಟುವಟಿಕೆ ಪ್ರತೀ ದೇಶದಲ್ಲಿಯೂ ವಿಭಿನ್ನವಾಗಿ ಆಗುತ್ತಿದೆ. ಇದರಿಂದಾಗಿ ಅಲ್ಲಿನ ಹೊಸ ತಲೆಮಾರಿಗೆ ಕನ್ನಡದ ಪರಿಚಯ ಆಗುತ್ತಿದೆಯಾದರೂ ಕನ್ನಡವು ಒಂದು ಭಾಷೆಯಾಗಿ ಹಾಗೂ ಸಂಸ್ಕೃತಿಯಾಗಿ ತಲುಪುತ್ತಿಲ್ಲ. ಇದು ಅಲ್ಲಿನ ‘ಕನ್ನಡಿಗ’ನಿಗೆ ಆತಂಕವನ್ನು ಹುಟ್ಟಿಸುತ್ತಿದೆ. ತನ್ನ ಮುಂದಿನ ತಲೆಮಾರು ಮತ್ಯಾವುದೂ ಸಂಸ್ಕೃತಿಯಲ್ಲಿ ಕಳೆದು ಹೋದರೆ ತನ್ನ ಪರಂಪರೆಯ ಮುಂದುವರಿಕೆ ನಿಲ್ಲುತ್ತದೆ ಎಂಬ ಪ್ರಶ್ನೆ ಆತನನ್ನು ಕಾಡುತ್ತದೆ. ಹೀಗಾಗಿಯೇ ಆತ ತನ್ನ ಮುಂದಿನ ತಲೆಮಾರಿಗೂ ಕನ್ನಡವು ಹರಿಯಲಿ ಎಂದು ಬಯಸುತ್ತಾನೆ. ಇಂತಲ್ಲಿ ಇರುವ ಸಮಸ್ಯೆಗಳನ್ನು ಸರಳವಾಗಿ ಹೀಗೆ ಕ್ರೋಢೀಕರಿಸಬಹುದು ಇಂತಿವೆ.</p>
<p>೧. ಕನ್ನಡಿಗರು ಒಂದೆಡೆ ಸೇರುವುದಕ್ಕೆ ಬೇಕಾದ ಆವರಣದ ಕೊರತೆ.</p>
<p>೨. ಮುಂದಿನ ತಲೆಮಾರಿಗೆ ಕನ್ನಡ ಕಲಿಸುವುದಕ್ಕೆ ಬೇಕಾದ ಪಠ್ಯದ ಕೊರತೆ.</p>
<p>೩. ಕನ್ನಡ ಮಾತು ಬಲ್ಲ ಮಕ್ಕಳಿಗೆ ಕನ್ನಡ ಶಿಕ್ಷಣ ಕ್ರಮ ಮತ್ತು ಕನ್ನಡ ಮಾತೂ ಬಾರದ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸಲು ಬಳಸಬೇಕಾದ ಪಠ್ಯಕ್ರಮ.</p>
<p>೩. ಕನ್ನಡವನ್ನು ಕಲಿತ ಮಕ್ಕಳಿಗೆ ಕನ್ನಡ ಶಿಕ್ಷಣ ಮುಂದುವರೆಸಲು ಇರುವ ಸೌಲಭ್ಯಗಳ ಕೊರತೆ.</p>
<p><strong><span style="text-decoration:underline;">ಪರಿಹಾರ ಅಥವಾ ಮಾರ್ಗೋಪಾಯಗಳು </span></strong><strong></strong></p>
<p>೧. ಕನ್ನಡಿಗರು ಮತ್ತು ಕರ್ನಾಟಕ ಸರ್ಕಾರವು ವಿದೇಶಗಳಲ್ಲಿರುವ ಕನ್ನಡಿಗರಿಗೆ ಧನಸಹಾಯದ ಮೂಲಕ ಕನ್ನಡ ಭವನಗಳನ್ನು ಕಟ್ಟಲು ಮುಂದಾಗಬೇಕು. ಇದಕ್ಕಾಗಿ ಕನಾಟಕದಲ್ಲಿ ಅದಾಗಲೇ ನೋಂದಣಿ ಆಗಿರುವ ವಿದೇಶಿ ಕನ್ನಡ ಸಂಘಗಳನ್ನು ಮತ್ತು ಆಯಾ ದೇಶದ ಶಿಕ್ಷಣ ಸಂಸ್ಥೆಗಳನ್ನು ಸೇರಿಸಿ, ಉತ್ತರದಾಯಿತ್ವ ಇರುವ ಸಂಸ್ಥೆಗಳಿಗೆ ಹಣದ ನಿರ್ವಹಣೆಯ ಜವಾಬ್ದಾರಿ ವಹಿಸಬೇಕು.</p>
<p>೨. ವಿದೇಶಿ ನೆಲದಲ್ಲಿರುವ ಕನ್ನಡಿಗರ ಮುಂದಿನ ತಲೆಮಾರುಗಳಿಗೆ ಕನ್ನಡ ಕಲಿಸಲು ಪ್ರತ್ಯೇಕ ಪಠ್ಯವನ್ನು ರಚಿಸಬೇಕು. ಇಲ್ಲಿ ಪ್ರಾಥಮಿಕ ಹಂತದ ಶಿಕ್ಷಣದ ಅಗತ್ಯಗಳನ್ನು ಪೂರೈಸುವ ಪಠ್ಯ ಮತ್ತು ಅದಾಗಲೇ ಪ್ರೌಢರಾದವರಿಗೆ ಕನ್ನಡ ಕಲಿಸುವುದಕ್ಕೆ ಪ್ರತ್ಯೇಕ ಪಠ್ಯ ರಚನೆ ಆಗಬೇಕಿದೆ.</p>
<p>೩. ಅದಾಗಲೇ ಕನ್ನಡ ಕಲಿತ ಮಕ್ಕಳು ತಮ್ಮ ಕನ್ನಡ ಕಲಿಕೆಯನ್ನು ಮುಂದುವರೆಸಲು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇರುವಂತೆ ಜಾಣ, ಕಾವಾ, ರತ್ನ ಮುಂತಾದ ಹಂತಗಳ ಪರೀಕ್ಷೆಯನ್ನು ವಿದೇಶದಲ್ಲಿ ಇರುವ ಮಕ್ಕಳಿಗೂ ಮಾಡಲು ಇರಬಹುದಾದ ಸಾಧ್ಯತೆಗಳನ್ನು ಕುರಿತು ಆಲೋಚಿಸಬೇಕಿದೆ.</p>
<p>೪. ಈ ಮಕ್ಕಳಿಗೆ ಕನ್ನಡ ಕಲಿಸಲು ‘ಸರಿಯಾದ’ ಸಂಪನ್ಮೂಲ ವ್ಯಕ್ತಿಗಳನ್ನು ಸಿದ್ಧಪಡಿಸುವುದು ಅಗತ್ಯ. ವಿದೇಶಿ ನೆಲದಲ್ಲಿ ವಾರಾಂತ್ಯದಲ್ಲಿ ಒಂದೋ ಎರಡೋ ತರಗತಿಗಳ ಮೂಲಕ ಪಠ್ಯವನ್ನು ಬೋಧಿಸಿ, ಮಕ್ಕಳನ್ನು ಕನ್ನಡ ಪರಿಸರಕ್ಕೆ ತರುವ ಉಪಧ್ಯಾಯರಿಗೆ ಇರಬೇಕಾದ ಸಿದ್ಧತೆಯೇ ಬೇರೆ. ಅಂತಹ ಸಿದ್ಧ ಉಪನ್ಯಾಸಕರನ್ನು ಒದಗಿಸಿ, ಕನ್ನಡಿಗರ ಅಗತ್ಯ ಪೂರೈಸುವುದು ಕನ್ನಡ ಸರ್ಕಾರದ ಆದ್ಯತೆಯ ಕೆಲಸ ಆಗಬೇಕಿದೆ.</p>
<p>·           <strong></strong></p>
<p><strong><span style="text-decoration:underline;">ದೇಶದೊಳಗೆ ವಿಭಿನ್ನ ರಾಜ್ಯಗಳಲ್ಲಿ ನೆಲೆಯೂರಿದ ಕನ್ನಾಡಿಗರು</span></strong><strong></strong></p>
<p>ಈ ಕನ್ನಡಿಗರ ಅಗತ್ಯಗಳು ವಿದೇಶದಲ್ಲಿರುವ ಕನ್ನಡಿಗರ ಅಗತ್ಯಕ್ಕಿಂತ ಕೊಂಚ ಭಿನ್ನ. ಇಲ್ಲಿನ ಕನ್ನಡಿಗರನ್ನು ಚೆನ್ನೈ ಕನ್ನಡಿಗರು, ಮುಂಬೈ ಕನ್ನಡಿಗರು, ಹೈದರಾಬಾದಿ ಕನ್ನಡಿಗರು, ದೆಹಲಿ ಕನ್ನಡಿಗರು ಎಂದು ಅದಾಗಲೇ ಗುರುತಿಸುತ್ತಾ ಇದ್ದೇವೆ. ಇವರುಗಳು ತಮ್ಮ ಊರುಗಳಲ್ಲಿ ಕನ್ನಡ ಶಾಲೆಗಳನ್ನೇ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಾ ಇರುವವರು. ಆದರೆ ಆಧುನಿಕ ಕಾಲಘಟ್ಟದಲ್ಲಿ ಒಳನಾಡಿನಂತೆಯೇ ಇಲ್ಲಿನ ಕನ್ನಡ ಶಾಲೆಗಳಿಗೂ ಒಳಹರಿವು ಕಡಿಮೆಯಾಗಿದೆ. ಇದು ಆಯಾ ವ್ಯಕ್ತಿಯ ಬದುಕಿನ ಅಗತ್ಯಗಳನ್ನು ಆಧರಿಸಿ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಕನ್ನಡಿಗರು ತಮ್ಮ ಮುಂದಿನ ತಲೆಮಾರಿಗೆ ಕನ್ನಡವನ್ನು ಕಲಿಸಲು ವಾರಾಂತ್ಯಗಳನ್ನೇ ಅವಲಂಬಿಸಬೇಕಾದ ಅಗತ್ಯ ಒದಗಿ ಬಂದಿದೆ. ಈ ಅಗತ್ಯಗಳನ್ನು ಪೂರೈಸಲು ಅದಾಗಲೇ ವಿದೇಶದ ಕನ್ನಡಿಗರಿಗೆ ಎಂದು ಗುರುತಿಸಿದ ಮಾರ್ಗೋಪಾಯಗಳನ್ನು ಬಳಸಬೇಕಾಗುತ್ತದೆ.</p>
<p>ಉದಾಹರಣೆಗೆ ತೀರಾ ಈಚೆಗೆ ರಾಜಸ್ಥಾನದ ನಗರವೊಂದರಲ್ಲಿ ಇರುವ ಕನ್ನಡಿಗರು ತಮ್ಮಲ್ಲಿರುವ ಕನ್ನಡ ಕುಟುಂಬಗಳ ಸಂಖ್ಯೆ ನೂರನ್ನು ಮೀರುತ್ತಿದೆ. ಈ ಕುಟುಂಬಗಳಲ್ಲಿನ ಮಕ್ಕಳಿಗೆ ಕನ್ನಡ ಕಲಿಸಲು ದಾರಿ ಹುಡುಕಿಕೊಡಿ ಎಂದು ಕೇಳಿದ್ದಾರೆ. ಇಂತಹುದೇ ಬೇಡಿಕೆ ಚಂಡೀಗಢದಿಂದ, ಕೊಲ್ಕತ್ತಾದಿಂದ, ಸೇಲಂನಿಂದ, ಎರ್ನಾಕುಲಂನಿಂದ ಬಂದಿದೆ. ಈ ಬೇಡಿಕೆಗಳನ್ನು ಪೂರೈಸಲು ನಾವು ಸಿದ್ಧರಾಗಬೇಕಿದೆ. ಇದೇ ಬಗೆಯಲ್ಲಿ ಅದಾಗಲೇ ಕನ್ನಡ ಶಾಲೆಗಳನ್ನು ನಡೆಸುತ್ತಾ ಇರುವವರಿಗೆ ತಗ್ಗಿರುವ ಒಳಹರಿವನ್ನು ಹೆಚ್ಚಿಸಲು ಮತ್ತು ಅಲ್ಲಿರುವ ಕನ್ನಡಿಗರ ಮುಂದಿನ ತಲೆಮಾರು ಕನ್ನಡದಲ್ಲಿ ಉಳಿಯುವಂತೆ ಮಾಡಲು ಪ್ರತೀ ಮಹಾನಗರದ ಅಗತ್ಯವನ್ನು ಪ್ರತ್ಯೇಕವಾಗಿ ಗಮನಿಸಿ ಮಾರ್ಗೋಪಾಯ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ತಜ್ಷರುಗಳ ದೊಡ್ಡ ಬಣವನ್ನೇ ಹುರಿಗೊಳಿಸಿ, ಆಲೋಚನೆಗೆ ಹಚ್ಚಬೇಕಾದ ತುರ್ತು ಇಂದು ಬಂದಿದೆ.</p>
<p>·           <strong></strong></p>
<p><strong><span style="text-decoration:underline;">ಗಡಿಯಾಚೆಗಿನ ಅಥವಾ </span></strong><strong><span style="text-decoration:underline;">‘ನೆರೆಮನೆ’ಯ ಕನ್ನಡಿಗರು</span></strong></p>
<p>ಭಾಷಾವಾರು ಪ್ರಾಂತ್ಯವಿಂಗಡಣೆಯು ಎಷ್ಟು ಸರಿ, ಎಷ್ಟು ತಪ್ಪು ಎಂಬ ಪ್ರಶ್ನೆ ಬೇರೆಯದು. ಆದರೆ ಈ ವಿಂಗಡನೆಯಲ್ಲಿ ಅನೇಕ ಶುದ್ಧ ಕನ್ನಡಿಗರು ಕರ್ನಾಟಕದ ಗಡಿಯಾಚೆಗೆ ಉಳಿದಿದ್ದಾರೆ. ರಾಜ್ಯವೊಂದರ ಗಡಿಯಾಚೆಗೆ ರಾಜಕೀಯ ಕಾರಣಕ್ಕೆ ಉಳಿದಿದ್ದರೂ ಈ ಕನ್ನಡಿಗರು ತಮ್ಮ ಪರಿಸರವನ್ನು ಕನ್ನಡದ್ದಾಗಿಯೇ ಉಳಿಸಿಕೊಳ್ಳುವುದಕ್ಕೆ ಹರಸಾಹಸ ಮಾಡುತ್ತಾ ಇದ್ದಾರೆ.</p>
<p>ಈ ಗಡಿ ಭಾಗಗಳನ್ನು ಮಹಾರಾಷ್ಟ್ರದ ಗಡಿ, ಆಂದ್ರದ ಗಡಿ, ತಮಿಳುನಾಡಿನ ಗಡಿ, ಕೇರಳದ ಗಡಿ, ಗೋವಾದ ಗಡಿ ಎಂದು ಸರಳವಾಗಿ ಗುರುತಿಸಬಹುದಾದರೂ ಇಲ್ಲಿರುವ ಪ್ರತಿ ಹಳ್ಳಿ ಮತ್ತು ಕನ್ನಡದ ಕೇರಿಯ ಸಮಸ್ಯೆ ಭಿನ್ನವಾದುದು.</p>
<p>ತಮಿಳುನಾಡಿನ ಗಡಿಭಾಗದಲ್ಲಿ ಹೊಸೂರಿನಿಂದ ಸೇಲಂವರೆವಿಗೂ ಕನ್ನಡವರು ಬಹುಸಂಖ್ಯೆಯಲ್ಲಿ ವಾಸವಿದ್ದಾರೆ. ಅದರಲ್ಲಿಯೂ ಈಗ ಹೊಸೂರಿನ ಶಾಸಕರೇ ಕನ್ನಡಿಗರು. ಇವರು ತಮಿಳುನಾಡಿನ ವಿಧಾನಸಭೆಯಲ್ಲಿ ಕನ್ನಡದಲ್ಲಿಯೇ ಮಾತಾಡಿ ತಮ್ಮ ಸಮಸ್ಯೆಗಳತ್ತ ಗಮನ ಸೆಳೆದಿದ್ದಾರೆ. ಇಲ್ಲಿರುವ ಜನ ಭಾಷೆಗಳು ಅನೇಕ ಸೊಲ್ಲುಗಳ ಸಂಗಾಟದಿಂದ ತಮ್ಮದೇ ಬನಿ ಪಡೆದಿವೆ. ಅದು ಕನ್ನಡದ ಮತ್ತೊಂದು ಸೊಗಡು ಎಂಬಷ್ಟು ಭಿನ್ನವೂ ಹೌದು. ಇಂತಹ ಕನ್ನಡಿಗರನ್ನು ಕನ್ನಡ ಪರಿಸರದ ಒಳಗಡೆ ಉಳಿಸಲು ಅನೇಕ ಕೆಲಸಗಳನ್ನು ಮಾಡಬೇಕಿದೆ. ಆಂಧ್ರದ ಗಡಿ ಭಾಗದಲ್ಲಿರುವ ಕನ್ನಡದ ಬಹುಭಾಷಿಕರು ಡಂಕಣಿಕೋಟ, ಹಿಂದೂಪುರ, ಮಹಬೂಬ್‌ನಗರಗಳ ಪ್ರದೇಶದಲ್ಲಿ ಇದ್ದಾರೆ. ಇವರ ಬದುಕು ಆಂದ್ರದಲ್ಲಿ ಆದರೂ ಇವರ ಬದುಕು, ವ್ಯಾಪಾರ ವಹಿವಾಟು ಕರ್ನಾಟಕದಲ್ಲಿ. ಇವರ ಕನ್ನಡದ ಬನಿಗೂ ತನ್ನದೇ ಆದ ಛಾಪು ಇದೆ. ಇಲ್ಲಿನ ರೈತರು ಬೀಜ ಕೊಳ್ಳುವುದು, ಸಾಲ ತೆಗೆದುಕೊಳ್ಳುವುದು ಕರ್ನಾಟಕದಲ್ಲಿ. ಇವರ ಭೂಮಿ ಇರುವುದು ಆಂಧ್ರದಲ್ಲಿ. ಇವರ ಬೆಲೆಗೆ ಗ್ರಾಹಕರು ಇರುವುದು ಕರ್ನಾಟಕದಲ್ಲಿ. ಹೀಗಾಗಿ ಇಂತಹ ರೈತರು ತಮ್ಮ ಬೆಳೆಯನ್ನು ರಾಜ್ಯದಿಂದ ರಾಜ್ಯಕ್ಕೆ ಸಾಗಿಸುವುದೇ ದೊಡ್ಡ ಕಷ್ಟ. ಹೀಗಾಗಿ ಇಲ್ಲಿನ ರೈತರು ಸ್ಥಳೀಯ ಸರ್ಕಾರಗಳ ಸಹಾಯವೂ ಇಲ್ಲದೆ, ಮೂಲ ಕನ್ನಡ ಸರ್ಕಾರದವರು ಆ ಜನರನ್ನು ಹೊರನಾಡಿನವರು ಎಂದು ಗುರುತಿಸುವುದರಿಂದಾಗಿ ಅಸಡ್ಡೆಗೆ ಒಳಗಾದವರಾಗಿದ್ದಾರೆ. ಇಂತಹವರ ಸಮಸ್ಯೆಯನ್ನು ಪರಿಹರಿಸಿ, ಇವರನ್ನು ಕನ್ನಡದ ಪರಿಸರದ ಒಳಗಡೆ ಇರಿಸಬೇಕಾಗಿದೆ.</p>
<p>ಇನ್ನು ಮಹಾರಾಷ್ಟ್ರದ ಗಡಿಭಾಗಗಳಲ್ಲಿ ಪ್ರಮುಖವಾದುದು ಸೊಲ್ಲಾಪುರ ಜಿಲ್ಲೆ. ಇಲ್ಲಿನ ನಾಲ್ಕು ತಾಲ್ಲೂಕುಗಳಲ್ಲಿ ಕನ್ನಡಿಗರಿದ್ದಾರೆ. ಸೊಲ್ಲಾಪುರ, ಮೈಂದರ್ಗಿ, ಜತ್, ಅಕ್ಕಲಕೋಟ ಮುಂತಾದ ಕಡೆಗಳಲ್ಲಿ ಬಹುತೇಕರು ಕನ್ನಡಿಗರೇ. ಇಲ್ಲಿ ನಾನೂರಕ್ಕೂ ಹೆಚ್ಚು ಕನ್ನಡ ಶಾಲೆಗಳು ಮತ್ತು ಬಾಲವಾಡಿಗಳು ಇವೆ.</p>
<p>ಇವರ ಸಮಸ್ಯೆಗಳೇ ಭಿನ್ನ. ಇದನ್ನು ನಾವು ಪರಿಹಾರಿಸಲು ಹುಡುಕಬೇಕಾದ ಮಾರ್ಗಗಳೂ ಭಿನ್ನ.</p>
<p>ಈ ಮಕ್ಕಳಿಗಾಗಿ ಮಹಾರಾಷ್ಟ್ರ ಪಠ್ಯಗಳನ್ನು ನೀಡಿದೆ. ಆದರೆ ಅವು ಸಕಾಲದಲ್ಲಿ ದೊರೆಯುವುದಿಲ್ಲ. ವಿಶೇಷವಾಗಿ ಚರಿತ್ರೆ, ವಿಜ್ಞಾನ, ಗಣಿತ ಪಠ್ಯಗಳು ಮತ್ತು ಪಠ್ಯ ಕಲಿಕೆಗೆ ಪೂರಕವಾದ ಗೈಡ್‌ಗಳು ಕನ್ನಡದಲ್ಲಿ ದೊರೆಯುವುದಿಲ್ಲ. ಹೀಗಾಗಿ ಇಲ್ಲಿನ ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಅತಂತ್ರರಾಗುತ್ತಾರೆ. ಇದೇ ಕಾರಣಕ್ಕಾಗಿ ಇಲ್ಲಿನ ಹೊಸ ತಲೆಮಾರು ತಮಗೆ ಸುಲಭವಾಗಿ ಲಭ್ಯವಿರುವ ಇತರ ಭಾಷೆಗಳ ಕಡೆಗೆ ವಾಲುತ್ತಾ ಇರುವುದನ್ನು ಕಾಣುತ್ತಾ ಇದ್ದೇವೆ. ಈ ಭಾಗದಲ್ಲಿರುವ ಕನ್ನಡ ಮಕ್ಕಳ ಸಮಸ್ಯೆಯನ್ನು ಅರಿಯುವುದಕ್ಕೆ ಮತ್ತು ಪರಿಹರಿಸುವುದಕ್ಕೆ ಪ್ರತ್ಯೇಕ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.</p>
<p>ಇನ್ನು ಕೇರಳದ ಗಡಿ ಭಾಗದಲ್ಲಿರುವ ಕನ್ನಡಿಗರು. ಕಾಸರಗೋಡು ಜಿಲ್ಲೆಯಲ್ಲಿ ಶೇಕಡ ೯೦ಕ್ಕಿಂತ ಹೆಚ್ಚು ಕನ್ನಡ ಕುಟುಂಬಗಳಿವೆ. ಅವರೆಲ್ಲರೂ ಕನ್ನಡ ಶಾಲೆಗಳನ್ನೂ ನಡೆಸುತ್ತಾ ಇದ್ದಾರೆ. ಆದರೆ ಈ ಶಾಲೆಗಳಿಗೂ ಒಳಹರಿವು ಕಡಿಮೆಯಾಗುತ್ತಿದೆ. ಇಲ್ಲಿರುವ ಮಕ್ಕಳು ಸಹ ಕನ್ನಡದಿಂದ ದೂರ ಸರಿದು ಇಂಗ್ಲೀಷ್ ಅಥವಾ ಸ್ಥಳೀಯ ರಾಜಭಾಷೆಯ ಕಡೆಗೆ ವಾಲುತ್ತಾ ಇದ್ದಾರೆ.</p>
<p>ಕನ್ನಡದ ಹೊಸ ತಲೆಮಾರು ಹೊಸ ಭಾಷೆಗಳಿಗೆ ಹೋಗುತ್ತಿರುವುದಕ್ಕೆ ಪ್ರಧಾನ ಕಾರಣ ಹೊರನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರನ್ನು ನಮ್ಮಲ್ಲಿ ಮುಂದುವರಿದ ಶಿಕ್ಷಣ ಅವಕಾಶಗಳಿಗೆ ವಿಶೇಷ ಅವಕಾಶ ನೀಡಿ ತೆಗೆದುಕೊಳ್ಳದೇ ಇರುವುದು ಹಾಗೂ ಹೊರರಾಜ್ಯದ ಯಾವ ವರ್ಗದ ಪ್ರಮಾಣ ಪತ್ರವಿದ್ದರೂ ಅವರನ್ನು ನಮ್ಮಲ್ಲಿ ಆದರದಿಂದ ಗಮನಿಸದೆ ಇರುವುದು ಪ್ರಧಾನ ಕಾರಣವಾಗಿದೆ. ಇದರಿಂದಾಗಿ ಅನ್ನದ ಕಾರಣಕ್ಕಾಗಿಯೇ ಅನೇಕರು ಇತರ ಭಾಷೆಗಳಿಗೆ ವಲಸೆ ಹೋಗುತ್ತಾ ಇದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ಗಡಿಭಾಗದ ಕನ್ನಡಿಗರು ಕನ್ನಡ ಪರಿಸರದ ಒಳಗಡ ಉಳಿಸುವ ಸಲುವಾಗ ಈ ಕೆಳಗಿನ ಎಚ್ಚರಗಳನ್ನು ಮತ್ತು ಕೆಲಸಗಳನ್ನು ಆದ್ಯತೆಯ ಮೇರೆಗೆ ಮಾಡಬೇಕಿದೆ.</p>
<p><strong><span style="text-decoration:underline;"> </span></strong></p>
<p><strong><span style="text-decoration:underline;">ಮಾರ್ಗೋಪಾಯಗಳು</span></strong><strong></strong></p>
<p>೧. ಗಡಿಯಾಚೆಗಿನ ನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ನಮ್ಮಲ್ಲಿನ ವೃತ್ತಿ ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಒದಗಿಸಬೇಕು.</p>
<p>೨. ಗಡಿಯಾಚೆಗಿನಿಂದ ನಮ್ಮ ರಾಜ್ಯಕ್ಕೆ ಓಡಾಡುವ ವಿದ್ಯಾರ್ಥಿಗಳಿಗೆ ಬಸ್ಸುಗಳಲ್ಲಿ ರಹದಾರಿ ಪತ್ರವನ್ನು ನೀಡುವಾಗ ವಿಶೇಷ ರಿಯಾಯಿತಿಗಳನ್ನು ನೀಡಬೇಕು.</p>
<p>೩. ಗಡಿಯಾಚೆಗಿನ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ವಿಶೇಷ ಪ್ರೋತ್ಸಾಹಗಳನ್ನು (ನಮ್ಮಲ್ಲಿ ಯಾವ ರೀತಿಯ ಪ್ರೋತ್ಸಾಹಗಳನ್ನು ನೀಡುತ್ತಾ ಇದ್ದೇವೋ ಅವೆಲ್ಲವೂ ಆ ಮಕ್ಕಳಿಗೂ ದೊರೆಯುವಂತೆ) ನೀಡಬೇಕು.</p>
<p>೪. ಗಡಿಯಾಚೆಗಿನ ಮಕ್ಕಳಿಗೆ ಕನ್ನಡದಲ್ಲಿಯೇ ಎಲ್ಲಾ ಪಠ್ಯಗಳೂ ಸಿಗುವಂತಾಗಲೂ ವಿಶೇಷ ಅನುದಾನಗಳಷ್ಟೇ ಅಲ್ಲದೆಮ ಆಯಾ ಪಠ್ಯಗಳನ್ನು ಮುದ್ರಿಸಲು ಪ್ರಕಾಶಕರಿಗೆ ವಿಶೇಷ ಅನುದಾನಗಳನ್ನು ಒದಗಿಸಬೇಕು.</p>
<p>೫. ಗಡಿಯಾಚೆಗಿನ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಲ್ಲದೆ, ಅಂತಹ ಕನ್ನಡ ಶಾಲೆಗಳನ್ನು, ಅಂಗನವಾಡಿಗಳನ್ನು ಕನ್ನಡಿಗರು, ಕನ್ನಡ ಉದ್ಯಮಪತಿಗಳು ದತ್ತಕ ತೆಗೆದುಕೊಳ್ಳುವಂತೆ ಕನ್ನಡ ಸರ್ಕಾರಗಳು ಪ್ರೋತ್ಸಾಹ ಹಾಗೂ ಒತ್ತಾಯಗಳನ್ನು ಪ್ರತೀ ಉದ್ಯಮಿಗೂ (ಒಪ್ಪಂದ ಪತ್ರದ ಹಂತದಲ್ಲಿಯೇ) ಹೇರಬೇಕು.</p>
<p>೬. ಗಡಿಯಾಚೆಗಿನ ಊರುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಬಹುತೇಕ ಮಕ್ಕಳು ಕೂಲಿ ಕಾರ್ಮಿಕರ ಮತ್ತು ರೈತಾಪಿ ವರ್ಗದವರ ಮಕ್ಕಳಾಗಿರುತ್ತಾರೆ, ಇಂತಹ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ವಿಶೇಷ ಆರ್ಥಿಕ ಸವಲತ್ತುಗಳನ್ನು ಒದಗಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾಡಿನ ಎಲ್ಲಾ ಕನ್ನಡಿಗರು ಹಾಗೂ ಕನ್ನಡ ಸರ್ಕಾರಗಳು ಯೋಚಿಸಬೇಕು ಮತ್ತು ಇದಕ್ಕಾಗಿ ಪ್ರತ್ಯೇಕ ಆರ್ಥಿಕ ಸಹಾಯದ ಯೋಜನೆಗಳನ್ನು ರೂಪಿಸಬೇಕು. ಇಂತಹ ಆರ್ಥಿಕ ಸಹಾಯ ಮಾಡಲು ಮುಂದೆ ಬರುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಕನ್ನಡ ಸರ್ಕಾರ ವಿಶೇಷ ಆರ್ಥಿಕ ರಿಯಾಯಿತಿಯನ್ನು ಸಹ ನೀಡುವಂತಾಗಬೇಕು.</p>
<p>೭. ಇದಲ್ಲದೆ ಗಡಿಯಾಚೆಗಿನ ಕನ್ನಡ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಲು ನಮ್ಮ ಕನ್ನಡ ಸರ್ಕಾರಗಳು ವಿಶೇಷ ಮೀಸಲಾತಿಗಳನ್ನು ನೀಡಬೇಕು. ಅದರಲ್ಲಿಯೂ ಮಹಾರಾಷ್ಟ್ರದ ಗಡಿಜಿಲ್ಲೆಗಳಲ್ಲಿ ಇರುವ ಕನ್ನಡಿಗರಿಗೆ ಮತ್ತು ಆಂಧ್ರದ ಗಡಿ ಜಿಲ್ಲೆಗಳಾದ ಬೀದರ್, ಗುಲ್ಬರ್ಗಾದ ಆಸುಪಾಸಿನಲ್ಲಿರುವ ಗಡಿಜಿಲ್ಲೆಗಳ ಜನರಿಗೆ ವಿಶೇಷ ಒಳ ಮೀಸಲಾತಿಯನ್ನು ಸರ್ಕಾರ ಘೋಷಿಸಬೇಕು.</p>
<p>೮. ಗಡಿ ಭಾಗದಲ್ಲಿನ ಕನ್ನಡ ರೈತಾಪಿ ವರ್ಗಕ್ಕೆ ಮತ್ತು ಉದ್ಯಮಿಗಳಿಗೆ ನಮ್ಮ ರಾಜ್ಯದ ಒಳಗಡೆ ವ್ಯಾಪಾರ ವಹಿವಾಟು ಮಾಡುವುದಕ್ಕೆ ಸಹ ಅನೇಕ ಆರ್ಥಿಕ ಸವಲತ್ತುಗಳನ್ನು ಒದಗಿಸಬೇಕು. ಈ ಮೂಲಕ ಆ ಜನ ಬೇರೆಯ ಭಾಷೆಗಳಿಗೆ ವಲಸೆ ಹೋಗದಂತೆ ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.</p>
<p>·           <strong></strong></p>
<p><strong><span style="text-decoration:underline;">ಗಡಿನಾಡಿನ ಕನ್ನಡಿಗರು</span></strong><strong></strong></p>
<p>ಕರ್ನಾಟಕದ ಗಡಿ ತಾಲ್ಲೂಕುಗಳು ೫೪. ಅವುಗಳಲ್ಲಿ ೪೮ ತಾಲ್ಲೂಕುಗಳು ತಮ್ಮ ಗಡಿಗಳನ್ನು ಇತರ ಭಾಷೆಯ ಜನಾಂಗಗಳ ಜೊತೆಗೆ ಹಂಚಿಕೊಂಡಿವೆ. ಈ ಜನರ ಬದುಕು ನಡೆಯುವುದೇ ಬಹುಭಾಷಾ ವ್ಯವಸ್ಥೆಯಲ್ಲಿ ಏಕಕಾಲಕ್ಕೆ ಕನ್ನಡವನ್ನಲ್ಲದೆ ಇತರ ಐದಾರು ಭಾಷೆಗಳನ್ನು ಇಲ್ಲಿನ ಜನ ಆಡುತ್ತಾ ಇರುತ್ತಾರೆ. ಕಾಸರಗೋಡಿನ ಆಸುಪಾಸಿನಲ್ಲಂತೂ ಕನ್ನಡ, ತುಳು, ಬ್ಯಾರೀ, ಮಲೆಯಾಳ ಮತ್ತು ಇಂಗ್ಲೀಷನ್ನು ಸಣ್ಣ ವಯಸ್ಸಿನವರು ಕಲಿತಿರುವುದನ್ನು ಕಾಣುತ್ತಾ ಇದ್ದೇವೆ. ಇನ್ನು ಬೀದರ್, ಗುಲ್ಬರ್ಗಾ, ಬೆಳಗಾವಿ, ಬಿಜಾಪುರ, ರಾಯಚೂರಿನಂತಹ ಜಿಲ್ಲೆಗಳಲ್ಲಿ ಉರ್ದು, ತೆಲುಗು, ಮರಾಠಿ, ಕನ್ನಡ, ಲಮಾಣಿ,  ಇಂಗ್ಲೀಷುಗಳಲ್ಲದೆ ಆಯಾ ಜನಾಂಗದವರ ಪ್ರತ್ಯೇಕ ಉಪಭಾಷೆಯನ್ನು ಒಂದೇ ವಾಕ್ಯದಲ್ಲಿ ಬೆರೆಸಿ ಮಾತಾಡುವ ಜನರನ್ನು ಕಂಡಿದ್ದೇವೆ. ಬದುಕಿನ ಅಗತ್ಯಗಳೇ ಈ ಜನರಿಗೆ ಇಷ್ಟೆಲ್ಲಾ ಭಾಷೆಗಳನ್ನು ಕಲಿಸುತ್ತದೆ. ಸಂವಹನ ಆಧುನಿಕ ಬದುಕಿನ ಪ್ರಧಾನ ಅಗತ್ಯವಾಗಿದೆ. ಇದಕ್ಕಾಗಿ ಅನೇಕ ಭಾಷೆಗಳನ್ನು ಗಡಿ ಭಾಗದ ಜನ ಕಲಿತಿರುತ್ತಾರೆ.</p>
<p>ಆದರೆ ಈ ಗಡಿನಾಡಿನಲ್ಲಿನ ಕನ್ನಡ ಪರಿಸರಕ್ಕೆ ಭಾರೀ ತೊಂದರೆಗಳನ್ನು ಮಾಡಲಾಗಿದೆ. (ಈ ವಿಷಯವಾಗಿ ಅದಾಗಲೇ ನಾವು ನೀಡಿರುವ ಎರಡು ವರದಿಗಳು ಸರ್ಕಾರದ ಕಡತಗಳ ಮೂಟೆಗಳ ಜೊತೆ ಸೇರಿದೆ ಎಂಬುದನ್ನು ಇಲ್ಲಿ ನೆನೆಯಲೇಬೇಕು. ಕನ್ನಡ ನುಡಿ-ಕನ್ನಡ ಗಡಿ ಜಾಗೃತಿ ಜಾಥಾ ವರದಿ ಹಾಗೂ ಜೋಯಿಡಾ ಗಡಿನಾಡ ಕನ್ನಡಿಗರ ಸಮಾವೇಶದ ವರದಿ. ಈ ಎರಡೂ ವರದಿಗಳ ತಯಾರಿಕೆಯಲ್ಲಿ ನನ್ನದೂ ಅಳಿಲು ಸೇವೆ ಇತ್ತಾದ್ದರಿಂದ ಈ ಬಗ್ಗೆ ಅಧಿಕೃತವಾಗಿ ಮಾತಾಡಬಹುದು.) ಮೊದಲಿಗೆ ಈ ಗಡಿಭಾಗದಲ್ಲಿ ಮೂಲಭೂತ ಸೌಕರ್ಯಗಳದ್ದೇ ದೊಡ್ಡ ಕೊರತೆ. ರಸ್ತೆಗಳಿಲ್ಲ. ದವಾಖಾನೆಗಳಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಹೀಗಾಗಿ ಗಡಿಭಾಗದ ಜನ ತಮ್ಮ ಸಣ್ಣ ಅಗತ್ಯ ಪೂರೈಕೆಗೂ ನೆರೆಯ ರಾಜ್ಯದ ಮುಖ್ಯ ಪಟ್ಟಣಗಳಿಗೆ ಹೋಗಬೇಕಾಗಿ ಬಂದಿದೆ. ಇದರಿಂದಾಗಿ ಅವರ ಕನ್ನಡತನ ನಿಧಾನವಾಗಿ ಸೋರಿಹೋಗುತ್ತಿದೆ. ಇನ್ನು ಇಲ್ಲಿನ ಪ್ರಾಥಮಿಕ ಶಾಲೆಗಳಂತೂ ಕೊಟ್ಟಿಗೆಗಳ ಹಾಗಿವೆ. ಕೆಲವೆಡೆ ಮಠ &#8211; ಮಾನ್ಯಗಳ ಜನ ಸ್ವಂತ ಆಸಕ್ತಿಯಿಂದ ಒಂದಷ್ಟು ಕೆಲಸ ಮಾಡುತ್ತಾ ಕನ್ನಡಿಗರಿಗೆ ಕಿಂಚಿತ್ ಸಹಾಯ ನೀಡಿದ್ದಾರೆ. ಆದರೆ ಇದು ಸಾಲದು. ಇಲ್ಲಿನ ಬಹುತೇಕ ಶಾಲೆಗಳಲ್ಲಿ ಸರಿಯಾದ ಉಪಾಧ್ಯಾಯರಿಲ್ಲ. ಸರ್ಕಾರೀ ಶಾಲೆಗಳಲ್ಲಿನ ಪರಿಸ್ಥಿತಿಯನ್ನಂತೂ ನೀವು ಊಹಿಸಲು ಸಾಧ್ಯವಿಲ್ಲ. ಹಲವೆಡೆಗಳಲ್ಲಿ ಸೂರು ಎಂದು ಬೀಳುವುದೋ ಎಂಬಂತಿದೆ. ಇನ್ನು ಅಲ್ಲಿ ಕಲಿಯುವ ವಿದ್ಯಾರ್ಥಿಗಳು ಈ ನಾಡಿನ ಪ್ರಧಾನ ವಾಹಿನಿಗೆ ಬರಬೇಕು ಎಂದು ಬಯಸುವುದಾದರೂ ಹೇಗೆ? ಭಾಷಾವಾರು ಪ್ರಾಂತ್ಯ ವಿಂಗಡಣೆಯಾಗಿ ಇಂದಿನವರೆಗಿನ ಯಾದಿ ಹಿಡಿದರೆ ಐದು ದಶಕಗಳಿಗೂ ಹೆಚ್ಚಾಗುತ್ತದೆ. ಇಷ್ಟೂ ಕಾಲ ಈ ಗಡಿ ಭಾಗಗಳಿಂದ ಆರಿಸಿ ಬಂದ ಜನಪ್ರತಿನಿಧಿಗಳು ಏನು ಮಾಡಿದ್ದಾರೆ ಎಂಬ ಅನುಮಾನ ಹುಟ್ಟುತ್ತದೆ.</p>
<p>ಕಾರವಾರ ಜಿಲ್ಲೆಯ ಜೋಯಿಡಾದಂತಹ ತಾಲ್ಲೂಕುಗಳಲ್ಲಿ ಕನ್ನಡ ಪರಿಸರ ನಿರ್ಮಿಸಲು ಕನ್ನಡಿಗರಿಗೆ ಮೂಲಭೂತ ಸೌಲಭ್ಯ ಆದ್ಯತೆಯ ಮೇರೆಗೆ ನೀಡಬೇಕಿದೆ. ಅಲ್ಲಿ ಕಾಳಿ ಯೋಜನೆ ನಡೆದಿದೆ. ಕೈಗಾ ಅಣುಸ್ಥಾವರ ಇದೆ. ನೌಕಾನೆಲೆ ಸೀಬರ್ಡ್ ಇದೆ. ಇಷ್ಟೆಲ್ಲಾ ಯೋಜನೆಗಳು ಒಂದು ಜಿಲ್ಲೆಗೆ ಬಂದಿದ್ದರೂ ಅಲ್ಲಿನ ಬಡ ರೈತನ ಮನೆಯಲ್ಲಿ ವಿದ್ಯುತ್ ಇನ್ನೂ ಬಂದಿಲ್ಲ ಎಂಬುದು ದೊಡ್ಡ ವಿಪರ್ಯಾಸ. ಬೀದರ್ ಜಿಲ್ಲೆಯ ಗಡಿಭಾಗದಲ್ಲಿಯೂ ಇದೇ ಪರಿಸ್ಥಿತಿ. ಅಲ್ಲಿನ ಬಹುತೇಕ ಸರ್ಕಾರೀ ಶಾಲೆಗಳಲ್ಲಿ ಓದುತ್ತಾ ಇರುವ ಮಕ್ಕಳು ಬಡವರು. ಅಲ್ಲಿನ ಶ್ರೀಮಂತರು ತಮ್ಮ ಮಕ್ಕಳನ್ನು ದೂರದ ಊರುಗಳಲ್ಲಿ ರೆಸಿಡೆನ್ಷಿಯಲ್ ಶಾಲೆಗಳಿಗೆ ಕಳಿಸುತ್ತಾರೆ. ಹೀಗಾಗಿ ಈ ಬಡ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವ ಸಮಯ ಅಲ್ಲಿನ ಆಳುವ ವರ್ಗಕ್ಕೆ ಇಲ್ಲವೇ ಇಲ್ಲ. ಇದೇ ಬೆಳಗಾವಿಯ ಗಡಿಭಾಗವಾದ ನಂದಗಡದಂತಹ ಊರಿನಲ್ಲಿನ ಮಕ್ಕಳಲ್ಲಿ ಬಹುಮಂದಿಗೆ ಕನ್ನಡ ಮಾತಾಡಲು ಬರುತ್ತದೆ. ಆದರೆ ಅವರೆಲ್ಲರೂ ಸೇರಿರುವುದು ಮರಾಠಿ ಶಾಲೆಗಳಿಗೆ. ಹೀಗಾಗಿ ಅಲ್ಲಿನ ಕನ್ನಡ ಪರಿಸರ ಎಂಬುದು ಕೇವಲ ಸಂಗೊಳ್ಳಿ ರಾಯಣ್ಣನ ಹೆಸರಿಗೆ ಸೀಮಿತವಾಗಿಬಿಟ್ಟಿದೆ. ಇನ್ನು ಸವದತ್ತಿಯಂತಹ ಸ್ವಚ್ಛ ಕನ್ನಡ ಊರುಗಳಲ್ಲಿ ಇರುವ ಬಹುಸಂಖ್ಯಾತರು ಕನ್ನಡಿಗರು. ಆದರೆ ಅಲ್ಲಿನ ಮಕ್ಕಳಲ್ಲಿ ಕನ್ನಡ ಶಾಲೆಗೆ ಹೋಗುತ್ತಿರುವ ಮಕ್ಕಳ ಸಂಖ್ಯೆ ಅತ್ಯಲ್ಪ. ಹೀಗಾಗಿ ಅಲ್ಲಿನ ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ, ನಾನೇ ನಡೆಸಿದ ಸಮೀಕ್ಷೆಯಂತೆ ಹತ್ತರಲ್ಲಿ ಏಳು ಮಂದಿಗೆ ಕನ್ನಡ ಓದಲು ಸಹ ಬರುವುದಿಲ್ಲ. ಅವರೆಲ್ಲರೂ ಆಂಗ್ಲ ಮತ್ತು ಮರಾಠಿಯ ಕಡೆಗೆ ವಾಲಿಕೊಂಡಿದ್ದಾರೆ. ಇನ್ನೂ ಕೋಲಾರದ ಭಾಗಕ್ಕೆ ಬಂದರೆ ನಮಗೆ ಕಾಣುವುದು ಇದಕ್ಕಿಂತ ಭಿನ್ನ ನೋಟವೇನಲ್ಲ.</p>
<p>ಈ ಗಡಿನಾಡಿನಲ್ಲಿನ ಕನ್ನಡ ಪರಿಸರಕ್ಕೆ ಇರುವ ಸಮಸ್ಯೆಗಳನ್ನು ಹೀಗೆ ಪಟ್ಟಿ ಮಾಡಬಹುದು.</p>
<p>೧. ಇಲ್ಲಿನ ಬಹುತೇಕ ರಸ್ತೆಗಳು ಯಾವುದೇ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ.</p>
<p>೨. ಇಲ್ಲಿನ ಪ್ರಾಥಮಿಕ ವೈದ್ಯಕೀಯ ಕೇಂದ್ರಗಳಲ್ಲಿ ಯೋಗ್ಯ ಡಾಕ್ಟರುಗಳಿಲ್ಲ. ಡಾಕ್ಟರುಗಳಿರುವಲ್ಲಿ ಔಷಧಿಗಳ ಸರಬರಾಜು ಸರಿಯಾಗಿ ಆಗುತ್ತಿಲ್ಲ.</p>
<p>೩. ಇಲ್ಲಿನ ಅಂಗನವಾಡಿಗಳಲ್ಲಿನ ಕೆಲಸಗಾರರಿಗೆ ಸಂಬಳ ಸಿಕ್ಕು ಎಷ್ಟೋ ವರ್ಷಗಳಾಗಿವೆ. ಕೆಲವೆಡೆ ಮೂರು ವರ್ಷದಿಂದ ಸಂಬಳ ಸಿಗದೆ ಕೆಲಸ ಮಾಡುತ್ತಾ ಇರುವವರು ಇದ್ದಾರೆ.</p>
<p>೪. ಇಲ್ಲಿನ ಬಹುತೇಕ ಹಳ್ಳಿಗಳಲ್ಲಿ ನ್ಯಾಯಬೆಲೆ ಅಂಗಡಿ ಎಂಬುದೇ ಒಂದು ಮಹತ್ತರವಾದ ಹಾಸ್ಯದ ಸಂಗತಿಯಾಗಿದೆ.</p>
<p>೫. ಇಲ್ಲಿನ ಜನರಿಗೆ ಬಿಪಿಎಲ್ ಕಾರ್ಡ್‌ಗಳಾಗಲಿ, ಹಸಿರು ಕಾರ್ಡಾಗಲೀ, ಭಾಗ್ಯಲಕ್ಷ್ಮಿ ಯೋಜನೆಯ ಕಾರ್ಡ್ ಆಗಲಿ ಸರಿಯಾಗಿ ವಿತರಣೆ ಆಗಿಲ್ಲ.</p>
<p><em>(ಇದೇ ಸಂದರ್ಭದಲ್ಲಿ ಯೂನಿಕ್ ಐಡೆಂಟಿಫಿಕೇಷನ್ ನಂಬರ್ ಪಡೆದ ಹೆಣ್ಣು ಮಗಳೊಬ್ಬಳು, ಕಾರವಾರ ಜಿಲ್ಲೆಯ ಕುಗ್ರಾಮದಾಕೆ ಆಡಿದ ಮಾತನ್ನು ನೆನಪಿಸಿಕೊಳ್ಳಬೇಕು. ‘ತಿನ್ನೋಕ್ಕೆ ಎರಡು ರೂಪಾಯಿಗೆ ಅಕ್ಕಿ ಕೊಡ್ತೀವಿ ಅಂದೋರು ಈಗ ಇದ್ಯಾವ್ದೋ ನಂಬರ್ ಕೊಟ್ಟಿದಾರಲ್ಲಾ? ಇದನ್ನ ಇಟ್ಟುಕೊಂಡು ಏನು ಮಾಡಲಿ?’ ಎಂದು ಆ ಹೆಂಗಸು ಗೊಣಗಿದ್ದು ಪ್ರಾಯಶಃ ಈ ದೇಶದ ಆಳುವವರ್ಗಕ್ಕೆ ಕೇಳಿಸಿತೋ ಇಲ್ಲವೋ ನಾನರಿಯೆ?)</em></p>
<p>೬. ಇಲ್ಲಿನ ಸರ್ಕಾರೀ ಪ್ರಾಥಮಿಕ ಶಾಲೆಗಳ ಪರಿಸ್ಥಿತಿ ಹದಗೆಟ್ಟಿದೆ. ಬಹುತೇಕ ಕಟ್ಟಡಗಳು ಕುಸಿಯುವ ಹಂತದಲ್ಲಿವೆ. ಈ ಪ್ರಾಥಮಿಕ ಶಾಲೆಗಳಲ್ಲಿ ಇರುವ ಬೋಧನಾ ಸಲಕರಣೆಗಳಂತೂ ಶಿಥಿಲಗೊಂಡಿವೆ.</p>
<p>೭. ಇಲ್ಲಿನ ರೈತಾಪಿಗಳಿಗೆ ತಮ್ಮ ಬೆಳೆಯನ್ನು ಮಾರಲು, ಹೊಸ ಬೀಜ ಕೊಳ್ಳಲು ಹತ್ತಿರದ ಮಾರುಕಟ್ಟೆಗಳಿರುವುದು ನೆರೆಯ ರಾಜ್ಯಗಳಲ್ಲಿ. ಹೀಗಾಗಿ ಇವರೆಲ್ಲರೂ ಆ ಮಾರುಕಟ್ಟೆಯ ಕಡೆಗೆ ಮುಖ ಮಾಡಿ ನಿಂತಿರುತ್ತಾರೆ.</p>
<p>೮. ಈ ಗಡಿ ಭಾಗದಲ್ಲಿ ನಮ್ಮ ರೇಡಿಯೋಗಳು ಸಹ ಸರಿಯಾಗಿ ಬರುವುದಿಲ್ಲ. ಹೀಗಾಗಿ ಇಲ್ಲಿ ರೇಡಿಯೋ ಹೊಂದಿದವರು ನೆರೆಯ ರಾಜ್ಯದ ಭಾಷೆಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನೇ ಕೇಳುತ್ತಾ ಇರುತ್ತಾರೆ.</p>
<p>೯. ಕೋಲಾರದ ಮತ್ತು ತುಮಕೂರಿನ ಗಡಿ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಗಾಧವಾದುದು. ಇದನ್ನು ಈ ಪ್ರದೇಶ ವಿಶಿಷ್ಟ ಸಮಸ್ಯೆ ಎಂದು ಗುರುತಿಸಿ ಪರಿಹಾರ ಹುಡುಕಬೇಕಿದೆ.</p>
<p>ಹೀಗೆ ಪಟ್ಟಿ ಮಾಡುತ್ತಾ ಹೋದರೆ ಕರ್ನಾಟಕದ ಗಡಿಭಾಗದ ಸಮಸ್ಯೆಗಳ ಪಟ್ಟಿಯೇ ಬೃಹದಾಕಾರವಾಗಿ ಬಿಡಬಹುದು. ಇದನ್ನು ಪರಿಹರಿಸುವ ಹಿನ್ನೆಲೆಯಲ್ಲಿಯೇ ಗಡಿ ಅಭಿವೃದ್ಧಿ ಪ್ರಾಧಿಕಾರ ಎಂಬುದೊಂದನ್ನು ಸ್ಥಾಪಿಸಲಾಗಿದೆಯಾದರೂ ಆ ಪ್ರಾಧಿಕಾರ ಈ ನಿಟ್ಟಿನಲ್ಲಿ ಏನಾದರೂ ಮಾಡುತ್ತಿದೆಯೇ ಎಂಬುದು ಕಳೆದ ಮೂರು ವರ್ಷಗಳಿಂದ ಪ್ರಶ್ನೆಯಾಗಿಯೇ ಉಳಿದಿದೆ.</p>
<p>ಇಲ್ಲಿ ಪಟ್ಟಿ ಮಾಡಿರುವ ವಿವರವಲ್ಲದೆ ಇನ್ನೂ ಅನೇಕ ಸಮಸ್ಯೆಗಳನ್ನು ಕರ್ನಾಟಕದ ಗಡಿಭಾಗದ ಕನ್ನಡಿಗ ಎದುರಿಸುತ್ತಿದ್ದಾನೆ. ಈ ಭಾಗಗಳಲ್ಲಿ ಕನ್ನಡಿಗನ ಬದುಕು ಸುಧಾರಿಸದೆ ಕನ್ನಡ ಪರಿಸರವನ್ನು ಕಾಪಾಡುವುದು ಅಸಾಧ್ಯ.</p>
<p>·           <strong></strong></p>
<p><strong><span style="text-decoration:underline;">ಒಳನಾಡಿನ ಕನ್ನಾಡಿಗರು</span></strong><strong></strong></p>
<p>ಈ ನಮ್ಮ ಒಳನಾಡಿನ ಕನ್ನಡ ಪರಿಸರವನ್ನು ನೋಡಲು ೧. ವಿದ್ಯೆ, ೨. ಉದ್ಯೋಗ, ೩. ಬದುಕು ಎಂಬ ಮೂರು ವಿವರಗಳನ್ನು ಇಟ್ಟುಕೊಂಡು ಗಮನಿಸಬೇಕಿದೆ.</p>
<p><strong><span style="text-decoration:underline;">ವಿದ್ಯೆ </span></strong><strong><span style="text-decoration:underline;">:</span></strong> ನಮ್ಮ ವಿದ್ಯಾಭ್ಯಾಸ ಕ್ರಮಗಳ ಆಯ್ಕೆಯು ನಾವು ಕಲಿತ ಭಾಷೆಯಿಂದ ನಮಗೆ ಅನ್ನ ಹುಟ್ಟುತ್ತದೆಯೇ ಎಂದು ಗಮನಿಸಿಯೇ ನಿರ್ಧರಿಸುವ ಪರಿಸ್ಥಿತಿಗೆ ನಾವು ಬಂದಿದ್ದೇವೆ. ಮಾರುಕಟ್ಟೆ ಅರ್ಥಶಾಸ್ತ್ರವು ನಾವು ಆಯ್ಕೆ ಮಾಡುವ ವಿಧಾನವನ್ನೇ ಬದಲಿಸಿದೆ. ಇಂದು ವ್ಯಕ್ತಿಯೊಬ್ಬನ ಜ್ಞಾನ ಸಂಪಾದನೆಯನ್ನು ಅಳೆಯುವ ಮಾನದಂಡವೇ ಆತನಿಗೆ ಸಿಗುವ ಕೆಲಸದಿಂದ ಬರುವ ಆದಾಯವನ್ನು ಆಧರಿಸಿದೆ. ಇಂದು ಕನ್ನಡವನ್ನು ಕಲಿತು ಯಾವುದೋ ಶಾಲೆಯಲ್ಲಿಯೋ, ಕಾಲೇಜಿನಲ್ಲಿಯೋ ಮೇಷ್ಟರಾಗುವುದಕ್ಕಿಂತ ದೊಡ್ಡ ಕೆಲಸ ಸಿಗುವ ಅವಕಾಶ ಕಡಿಮೆ. ಅಕಸ್ಮಾತ್ ಇಂತಹ ಕೆಲಸ ಸಿಕ್ಕರು ಅದು ಖಾಯಂ ಕೆಲಸ ಆಗುವ ಸಾಧ್ಯತೆಯೂ ಕಡಿಮೆ. ಹೀಗಾಗಿ ಅಸನಾರ್ಥಿ ವಿದ್ಯಾಭ್ಯಾಸ ಕ್ರಮಕ್ಕೆ ಬಲಿಬಿದ್ದಿರುವ ಒಳನಾಡಿಗರು ಕನ್ನಡದ ಮುಂದಿನ ತಲೆಮಾರನ್ನು ಆಂಗ್ಲ ವಿದ್ಯಾಭ್ಯಾಸಕ್ಕೆ ದೂಡಿದ್ದಾರೆ. ಇದಕ್ಕೆ ಅಂಬೇಡ್ಕರ್ ಪ್ರಣೀತ ನಗರಮುಖಿ ಸಾಮಾಜಿಕ ನ್ಯಾಯದ ಹುಡುಕಾಟ ಒಂದು ಕಾರಣವಾದರೆ, ಈ ನಾಡಿನ ಪ್ರತಿಷ್ಟಿತರು ಸಹ ಆಂಗ್ಲ ಕಲಿತವನಿಗೆ ಮಾತ್ರ ಬದುಕಲು ಸಾಧ್ಯ ಎಂಬ ಭ್ರಮೆಯನ್ನು ಹುಟ್ಟಿಸಿರುವುದು ಮತ್ತೊಂದು ಕಾರಣ. ಹೀಗಾಗಿ ಇಂದು ಕನ್ನಡವನ್ನು ಪ್ರಧಾನ ಭಾಷೆಯಾಗಿ ಕಲಿಯುತ್ತಾ ಇರುವವರ ಸಂಖ್ಯೆ ಪ್ರಾಥಮಿಕ ಹಂತದಿಂದಲೇ ಇಳಿಮುಖವಾಗಿದೆ.</p>
<p>ಇನ್ನು ಕನ್ನಡವನ್ನು ಸ್ನಾತಕೋತ್ತರವಾಗಿ ಹಾಗೂ ಸಂಶೋಧಕರಾಗಿ ಕಲಿಯುವವರ ಸಂಖ್ಯೆಯ ಬಗ್ಗೆ ಹೇಳಲೇ ಬೇಕಿಲ್ಲ. ಅನೇಕ ಕಾಲೇಜುಗಳಲ್ಲಿ ಕನ್ನಡ ವಿಭಾಗಕ್ಕೆ ವಿದ್ಯಾರ್ಥಿಗಳಿಲ್ಲ ಎಂದು ಅವುಗಳನ್ನು ಮುಚ್ಚುವ ಸ್ಥಿತಿಗೆ ಬಂದಿದೆ. ಇನ್ಯಾವ ವೃತ್ತಿಪರ ಶಿಕ್ಷಣದಲ್ಲಿಯೂ ಪ್ರವೇಶ ಸಿಗದೆ ಇದ್ದವರು ಮಾತ್ರ ಈ ಕಡೆಗೆ ಬರುತ್ತಾರೆ ಎಂಬ ಪರಿಸ್ಥಿತಿ ಉಂಟಾಗಿದೆ. (ಬೆಂಗಳೂರು ವಿಶ್ವವಿದ್ಯಾಲಯದಲ್ಲಿಯೇ ಭಾಷಾವಿಜ್ಞಾನ ಕಲಿಯಲು ವಿದ್ಯಾರ್ಥಿಗಳಿಲ್ಲ. ಆ ಪಾಠವನ್ನು ಕಲಿಸುವ ಉಪನ್ಯಾಸಕರ ಸಂಖ್ಯೆಯಂತೂ ಬೆರಳೆಣಿಕೆಯದು.)</p>
<p>ವೃತ್ತಿಪರ ಶಿಕ್ಷಣ ಪಡೆಯುವವರಿಗೆ ಭಾಷೆಯನ್ನು ಕಲಿಯಲೇ ಬೇಕೆಂಬ ಒತ್ತಾಯವಿಲ್ಲ. ಹೀಗಾಗಿ ಅಲ್ಲಿಯೂ ಕನ್ನಡ ಕಲಿತವರು ಸಿಗುವುದು ವಿರಳ. ಇದಕ್ಕಾಗಿಯೇ ಸಿದ್ಧಪಡಿಸಿರುವ ಪಠ್ಯವೊಂದಿದೆ. ಅದನ್ನು ಕಲಿಯುವುದಕ್ಕೂ, ಕಲಿಸುವುದಕ್ಕೂ ಇರುವ ತೊಡಕುಗಳು ಅನೇಕ. ಎಲ್ಲಿ ಪ್ರೀತಿ ಇಲ್ಲವೋ ಅಲ್ಲಿ ಕಾನೂನು ತರಬಹುದು. ಆದರೆ ಅಂತಹ ಒತ್ತಡಗಳ ಹೇರಿಕೆಯಿಂದ ಭಾಷೆ ಕಲಿಯಲು ಬರುವವರ ಮನಸ್ಥಿತಿ ಬದಲಾಗುತ್ತದೆ ಎಂದೆನಿಸದು.</p>
<p>ಇನ್ನು ನಮ್ಮ ಮಾಧ್ಯಮಗಳಲ್ಲಿ, ವಿಶೇಷವಾಗಿ ರೇಡಿಯೋ ಮತ್ತು ಟೆಲಿವಿಷನ್ ಮಾಧ್ಯಮಗಳಲ್ಲಿ ಬಳಕೆಗೆ ಬಂದಿರುವ ಕನ್ನಡ ಎಂತಹದು ಎಂಬುದನ್ನು ಕುರಿತು ಮತ್ತೆ ಮಾತಾಡಬೇಕಿಲ್ಲ. ಇವೆಲ್ಲಾ ಕಾರಣಗಳಿಂದಾಗಿ ಇಂದು ಕನ್ನಡ ಪರಿಸರ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ.</p>
<p><strong><span style="text-decoration:underline;">ಉದ್ಯೋಗ </span></strong><strong><span style="text-decoration:underline;">:</span></strong> ಕನ್ನಡ ಕಲಿತವನಿಗೆ ಇರುವ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ಈ ನಾಡಿನಲ್ಲಿ ಆಗಾಗ ಸೃಷ್ಟಿಯಾಗುವ ಉದ್ಯೋಗಗಳಿಗೆ ಕನ್ನಡವನ್ನು ಕಲಿಯಲೇಬೇಕೆಂಬ ಒತ್ತಡವೇನೂ ಇಲ್ಲ. ಹೀಗಾಗಿ ಕನ್ನಡಿಗರಲ್ಲದ ಕರ್ನಾಟಕದವರೂ ಉದ್ಯೋಗ ಪಡೆಯುತ್ತಲೇ ಇದ್ದಾರೆ. ಇನ್ನು ಕನ್ನಡಿಗರಂತೂ ಕನ್ನಡವನ್ನು ಬಿಟ್ಟು ಇಂಗ್ಲೀಷ್‌ನ ಮೊರೆ ಹೋಗಿ ಬಿಪಿಒಗಳಿಗೆ ಸೇರುತ್ತಾ ಇದ್ದಾರೆ. ಆ ಕೆಲಸಕ್ಕೂ ದೊಡ್ಡ ಓದಿನ ಅಗತ್ಯ ಇಲ್ಲವಾದ್ದರಿಂದ ಹತ್ತನೆ ತರಗತಿಯ ಫಲಿತಾಮಶವನ್ನಾಧರಿಸಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಓದನ್ನು ಆಯ್ಕೆ ಮಾಡಿಕೊಳ್ಳುತ್ತಾ ಇದ್ದಾನೆ ಎಂಬುದನ್ನು ಗಮನಿಸಬೇಕು. ಈ ಆಯ್ಕೆಯಲ್ಲಿ ಒಂದು ಬಣ ವೃತ್ತಿಶಿಕ್ಷಣವನ್ನು ಆಯ್ದುಕೊಂಡರೆ ಮತ್ತೊಂದು ಬಣ ಯಾವ ಶಿಕ್ಷಣದ ಕಡೆಗೂ ಹೋಗದೆ ಕೇವಲ ಇಂಗ್ಲೀಷ್ ಮಾತಾಡುವುದನ್ನು ಕಲಿಸುವ ಶಿಬಿರಗಳಿಗೆ ಸೇರುತ್ತಾ ಇರುವುದನ್ನು ಕಾಣುತ್ತಾ ಇದ್ದೇವೆ.</p>
<p>ನಮ್ಮ ಹೋರಾಟಗಾರರು ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು ಎಂಬ ಮಾತಾಡುವ ಬದಲಿಗೆ ಸ್ಥಳೀಯರಿಗೆ ಉದ್ಯೋಗ ದೊರೆಯಬೇಕು ಎಂದು ಹೋರಾಡುತ್ತಾ ಇದ್ದಾರೆ. ಈ ಸ್ಥಳೀಯರಲ್ಲಿ ಅನೇಕರು ಎರಡು ದಶಕಗಳಿಂದ ಈ ಕರ್ನಾಟಕದಲ್ಲಿಯೇ ಇದ್ದರೂ ಕನ್ನಡವನ್ನು ಕಲಿಯದೆಯೇ ಬದುಕುತ್ತಾ ಇದ್ದಾರೆ ಎಂಬುದು ಮತ್ತೊಂದು ಅಚ್ಚರಿಯ ಸಂಗತಿ. ಹೀಗಾಗಿ ಇಂತಹ ‘ಬದುಕಬಲ್ಲ ಜಾಣ’ರುಗಳ ನಡುವೆ ಕನ್ನಡಿಗ ಎಂಬ ಹಪಾಪಿ ಹತಾಶನಾಗುತ್ತಾ ಇದ್ದಾನೆ.</p>
<p><strong><span style="text-decoration:underline;">ಜೀವನ </span></strong><strong><span style="text-decoration:underline;">:</span></strong> ಒಳನಾಡಿಗರ ಜೀವನ ಕ್ರಮದಲ್ಲಿ ಕಳೆದ ಎರಡು ದಶಕಗಳಲ್ಲಿ ಬೃಹತ್ ಬದಲಾವಣೆಗಳಾಗಿವೆ. ಕಳೆದ ಹತ್ತು ವರ್ಷಗಳಲ್ಲಂತೂ ಆ ಬದಲಾವಣೆ ಮಹತ್ತರವಾದುದು. ಸರಕು ಸಂಸ್ಕೃತಿಯು ಜನಪ್ರಿಯವಾದಂತೆ ವ್ಯಕ್ತಿಗಿಂತ ವ್ಯಕ್ತಿಯ ಆವರಣಕ್ಕೆ ಪ್ರಾಮುಖ್ಯ ಬಂದಿದೆ. ಹೀಗಾಗಿ ನಿಮ್ಮೆದುರಿಗೆ ನಿಂತವನ ಭಾಷೆ, ವ್ಯಕ್ತಿತ್ವಕ್ಕಿಂತ ಆತನ ಹೊರ ಆವರಣದಲ್ಲಿನ ವಿವರಗಳು ಮಾತ್ರ ಮುಖ್ಯವಾಗುತ್ತಿದೆ. ಚಾರಿತ್ರ್ಯಕ್ಕಿಂತ ಚಿತ್ರ ಮುಖ್ಯವಾದಾಗ ಆಗಬಹುದಾದ ತಲ್ಲಣಗಳಲ್ಲಿ ಮೊದಲಿನದು ಸಂಸ್ಕೃತಿ ವಿಹೀನ ಸ್ಥಿತಿ. ಇಲ್ಲಿ ಕಣ್ಣಿಗೆ ಕಾಣುವುದು ಮಾತ್ರ ಮುಖ್ಯ. ಕಂಡದ್ದು ಏನು ಅನ್ನುವುದು ಮುಖ್ಯವಾಗುವುದಿಲ್ಲ. ಇದರಿಂದಾಗಿ ನಮ್ಮ ನಡುವಿನ ಜೀವನ ಕ್ರಮದಲ್ಲಿ ದುಡ್ಡು ಇರುವವರ ಮತ್ತು ಇಲ್ಲದವರ ಬದುಕಿನ ಕ್ರಮಗಳಲ್ಲದೆ, ಅರೆಬರೆ ದುಡ್ಡುಳ್ಳ ಹಪಾಪಿಗಳ ಜೀವನ ಕ್ರಮವೊಂದು ತೆರೆದು ನಿಂತಿದೆ. ಈ ಮೂರೂ ಜೀವನ ಕ್ರಮಗಳಲ್ಲಿ ಭಾಷೆ &#8211; ಸಂಸ್ಕೃತಿಗೆ ಜಾಗ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಇವೆಲ್ಲವುಗಳಿಂದ ನಗರದೊಳಗಿನ ನಮ್ಮ ಮುಮದಿನ ತಲೆಮಾರುಗಳು ತಮ್ಮ ಎದುರಿಗೆ ಇರುವ ಎಲ್ಲಾ ಮಾಧ್ಯಮಗಳಲ್ಲಿ ಕನ್ನಡವನ್ನುಳಿದು ಇನ್ನಿತರ ಭಾಷೆಗಳಿಂದ ಮನರಂಜನೆಯನ್ನು ಪಡೆಯುತ್ತಾ ಇವೆ. ಇದರೊಂದಿಗೆ ಮಹಾನಗರಗಳಲ್ಲಿ ಆರಂಭವಾಗಿರುವ ಮಾಲ್ ಸಂಸ್ಕೃತಿಯು ನಮ್ಮನ್ನು ಮತ್ತಷ್ಟು ಭಾಷಾವಿಹೀನರನ್ನಾಗಿ ಮಾಡಿದೆ. ನಮ್ಮ ಕನ್ನಡವಿರಲಿ, ನಮ್ಮ ಇಂಗ್ಲೀಷು ಅಥವಾ ಇನ್ನಾವುದೇ ಭಾಷೆ ತನ್ನ ಮೂಲ ಸ್ವರೂಪದಲ್ಲಿ ಉಳಿದಿಲ್ಲ. ಎಲ್ಲವೂ ಎಲ್ಲಾ ಭಾಷೆಗಳ ಬೆರಕೆಯಾಗಿದೆ.</p>
<p>ಇದು ಉದಾರವಾದಿ ಆರ್ಥಿಕ ನೀತಿ ಮತ್ತು ಮಾರುಕಟ್ಟೆ ಪ್ರಣೀತ ಅರ್ಥ ಶಾಸ್ತ್ರದ ನೇರ ಪರಿಣಾಮ. ಇದನ್ನು ನಾವು ಒಂದೇ ಏಟಿಗೆ ದೂರ ಮಾಡುತ್ತೇವೆ ಎಂದೆನ್ನಲಾಗದಷ್ಟು ದೂರಕ್ಕೆ ಬಂದಿದ್ದೇವೆ. ಹಾಗಾಗಿಯೇ ಇಂದು ಉತ್ಸವಗಳು ಮತ್ತು ಜಾತ್ರೆಗಳು ಚಾಲ್ತಿಗೆ ಬಂದಿವೆ. ನಮ್ಮ ಸಮಕಾಲೀನ ಜನರನ್ನು ಸದ್ದು ಮಾಡಿಯೇ ಒಂದೆಡೆ ಸೇರಿಸುತ್ತಾ ಇದ್ದೇವೆ. ಹೀಗೆ ಸೇರಿದ ಜನರ ಜೊತೆಗೆ ಭಾಷೆ-ಸಂಸ್ಕೃತಿಯನ್ನು ಕುರಿತು ಮಾತಾಡುವುದಕ್ಕಿಂತ ಅಸಡ್ಡಾಳ ಹಾಸ್ಯವನ್ನು ಉಣಬಡಿಸುವ ಅಥವಾ ಭಾಷೆಯ ಸ್ವರೂಪವನ್ನೇ ಮರೆತ ಶಬ್ದ ಸಂಗೀತಕ್ಕೆ ಕುಣಿಯುವಂತಹ ವಾತಾವರಣ ಸೃಷ್ಟಿ ಮಾತ್ರ ಆಗುತ್ತಿದೆ.</p>
<p><strong><span style="text-decoration:underline;">ಹಾಗಾದರೆ ಹತಾಶೆಯೊಂದೇ ಉತ್ತರವೇ</span></strong><strong><span style="text-decoration:underline;">?</span></strong></p>
<p>ಖಂಡಿತಾ ಇಲ್ಲ. ಒಳನಾಡಿಗರನ್ನು ಕನ್ನಡದ ಪರಿಸರದೊಳಗೆ ಉಳಿಸಿಕೊಳ್ಳಲು ಇನ್ನುಳಿದ ಎಲ್ಲಾ ನಾಡಿಗರಿಗೆ ತೆಗೆದುಕೊಳ್ಳುವ ಎಚ್ಚರಗಳಿಗಿಂತ ಹೆಚ್ಚು ಕಾಳಜಿವಹಿಸಬೇಕಿದೆ. ಈ ನಿಟ್ಟಿನಲ್ಲಿ ಇರುವ ಮಾರ್ಗೋಪಾಯಗಳನ್ನು ಹೀಗೆ ಪಟ್ಟಿ ಮಾಡಬಹುದು.</p>
<p>೧. ನಮ್ಮ ವಿದ್ಯಾಭ್ಯಾಸ ಕ್ರಮದಲ್ಲಿ ಯಾರೂ ಯಾವುದೇ ಭಾಷೆಯನ್ನು ಕಲಿಯಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಲೇ ಬೇಕು ಎಂಬ ಶಿಕ್ಷಣ ನೀತಿ ಜಾರಿಗೆ ಬರಬೇಕು.</p>
<p>೨. ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಬೇಕು.</p>
<p>೩. ಹೀಗೆ ಕನ್ನಡ ಕಲಿತ ಮಕ್ಕಳನ್ನು ಕನ್ನಡದ ಪರಿಸರದ ಒಳಗೆ ಉಳಿಸಲು ಹಳಗನ್ನಡ ಕಾವ್ಯವಾಚನದಿಂದ ಹಿಡಿದು ಸುಗಮ ಸಂಗೀತದವರೆಗಿನ ಎಲ್ಲಾ ಕಾವ್ಯಗಳ ಅನುಸಂಧಾನವಾಗುವ ಮಾರ್ಗದಿಂದ ಕನ್ನಡ ಸಂಸ್ಕೃತಿಯ ಒಳಗೆ ಉಳಿಸಲು ನಿರಂತರ ಕ್ರಿಯಾಶೀಲತೆಯಿಂದ ತೊಡಗಬೇಕು.</p>
<p>೪. ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಎನ್ನುವ ಬದಲಿಗೆ ಕನ್ನಡಿಗರಿಗೆ ಆದ್ಯತೆ ಎಂಬ ಕಾನೂನು ಅಥವಾ ಸುಗ್ರೀವಾಜ್ಞೆ ತರಬೇಕು. ಯಾವುದೇ ಕೆಲಸಕ್ಕೆ ಸೇರುವವರಿಗೆ ಕನಿಷ್ಟ ಏಳನೆಯ ತರಗತಿಯ ಕನ್ನಡ ಪಠ್ಯವನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ತಾಕೀತು ಮಾಡಬೇಕು.</p>
<p>೫. ಅದಾಗಲೇ ನಮ್ಮ ನಡುವೆ ಇರುವ ಕನ್ನಡೇತರರನ್ನು ಕನ್ನಡದ ಪರಿಸರದ ಒಳಗೆ ತರಲು ಅನುವಾಗುವಂತೆ ಎಲ್ಲಾ ಬಡಾವಣೆಗಳಲ್ಲಿ ಹಾಗೂ ವಸತಿ ಸಮ್ಮುಚ್ಛಯಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಬೇಕು. ಇಲ್ಲಿ ಕನ್ನಡ ಕಲಿಸಲು ಕನ್ನಡ ಸ್ನಾತಕೋತ್ತರ ಪದವೀಧರರನ್ನು ಶೃತಿಗೊಳಿಸಬೇಕು.</p>
<p>೬. ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಕನ್ನಡ ಪಾಠ ಮಾಡುವ ಎಲ್ಲಾ ಉಪಾಧ್ಯಾಯರಿಗೆ ವರ್ಷಕ್ಕೊಮ್ಮೆ ಬದಲಾಗುತ್ತಿರುವ ಕಾಲಮಾನದಲ್ಲಿ ಕನ್ನಡ ಕಲಿಸುವ ಬಗೆಗಳನ್ನು ಕುರಿತು ಕಮ್ಮಟಗಳನ್ನು ನಿರಂತರವಾಗಿ ನಡೆಸಬೇಕು.</p>
<p>೭. ನಮ್ಮ ಎಲ್ಲಾ ಮಾಧ್ಯಮಗಳಲ್ಲಿ ದುಡಿಯುತ್ತಾ ಇರುವ ‘ಕನ್ನಡ’ ಬಂಧುಗಳಿಗೆ ಕನ್ನಡ ಸಂಸ್ಕೃತಿ ಶಿಬಿರವನ್ನು ನಡೆಸುವ ಮೂಲಕ ಅವರು ಆಡುವ ಬಾಷೆಯನ್ನಷ್ಟೇ ಅಲ್ಲದೆ ಅವರ ಜ್ಞಾನಕೋಶಕ್ಕೂ ಕನ್ನಡದ ಚರಿತ್ರೆಯನ್ನು ಮತ್ತು ಆಧುನಿಕ ತಂತ್ರಜ್ಞಾನೀಯ ಯುಗದಲ್ಲಿ ಕನ್ನಡವನ್ನು ಬಳಸಬೇಕಾದ ಕ್ರಮ ಕುರಿತು ಶಿಬಿರ-ಕಮ್ಮಟಗಳನ್ನು ನಿಯಮಿತವಾಗಿ ನಡೆಸಬೇಕು. ಇದು ವಿಶೇಷವಾಗಿ ಆಕಾಶವಾಣಿ ಮತ್ತು ದೂರದರ್ಶನದಂತಹ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ನಿರೂಪಕ ವರ್ಗ ಮತ್ತು ಕಾರ್ಯಕ್ರಮ ತಯಾರಿಕ ವರ್ಗಕ್ಕೆ ತುರ್ತಾಗಿ ಆಗಬೇಕಾದ ಕೆಲಸ.</p>
<p>೮. ಅದಾಗಲೇ ಕನ್ನಡವನ್ನು ಆಯ್ಕೆ ಮಾಡಿಕೊಂಡು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮತ್ತು ಅವರನ್ನು ಹೊಸ ಕಾಲಘಟ್ಟದ ಅಗತ್ಯಗಳಿಗೆ ಹೊಂದುವಂತಹ ಸಂಶೋಧನೆಗಳಲ್ಲಿ ತೊಡಗಿಸಲು ಕಮ್ಮಟಗಳನ್ನು &#8211; ಶಿಬಿರಗಳನ್ನು ನಡೆಸಬೇಕು.</p>
<p>೯. ನಮ್ಮ ನಾಡಿನ ಒಳಗೆ ಇರುವ ಎಲ್ಲಾ ಉದ್ಯಮಗಳಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆಯುವಂತಹ ‘ಉದ್ಯೋಗ ನೀತಿ’ಯೊಂದನ್ನು ಜಾರಿಗೆ ತರುವ ಪ್ರಯತ್ನಗಳಾಗುವಾಗಲೇ ಆ ಉದ್ಯಮಗಳಲ್ಲಿ ಇರುವ ಪ್ರತಿಯೊಬ್ಬ ಅಧಿಕಾರಿ ಮತ್ತು ಕಾರ್ಮಿಕನು ಇಂತಿಷ್ಟು ವರ್ಷಗಳಲ್ಲಿ ‘ಕನಿಷ್ಟ ಏಳನೆಯ ತರಗತಿಯ ಕನ್ನಡ ಪಠ್ಯವನ್ನು ಪರೀಕ್ಷೆಯಲ್ಲಿ ಪಾಸು ಮಾಡಿದಾಗ ಮಾತ್ರ ಮುಂದಿನ ಬಡ್ತಿ’ ಎಂಬಂತಹ ಸ್ಥಿತಿಯನ್ನು ಖಾಸಗಿ ಉದ್ಯಮಗಳಲ್ಲಿ ಮಾತ್ರವೇ ಅಲ್ಲದೆ ಕೇಂದ್ರ ಸ್ವಾಮ್ಯದ ಉದ್ಯಮ ಮತ್ತು ಕಛೇರಿಗಳಲ್ಲಿ ತರಬೇಕು.</p>
<p>೧೦. ಮಹಾನಗರದ ಎಲ್ಲಾ ಮಾಲ್‌ಗಳೂ ಇಂದು ಕೇವಲ ವ್ಯಾಪಾರೀ ಕೇಂದ್ರಗಳಾಗಿವೆ. ಇಲ್ಲಿ ಅಂಗಡಿ-ಮುಂಗಟ್ಟುಗಳ ಜೊತೆಗೆ ಸಿನಿಮಾ ಪ್ರದರ್ಶನ ಮಂದಿರಗಳನ್ನು ಕಟ್ಟುತ್ತಿದ್ದಾರೆ. ಇನ್ನು ಮುಂದೆ ಇಂತಹ ಪ್ರತೀ ಮಾಲ್‌ಗಳಲ್ಲಿ ಸಿನಿಮಾ ಮಂದಿರದ ಹಾಗೆ ರಂಗಮಂದಿರ, ಸಂಗೀತ ಸಭೆ ನಡೆಸುವ ಸ್ಥಳ, ಚಿತ್ರ ಪ್ರದರ್ಶನ ಸ್ಥಳವೂ ಕಡ್ಡಾಯವಾಗಿ ಇರಲೇಬೇಕು ಎಂಬಂತಹ ಕಾನೂನನ್ನು ಪರವಾನಗಿ ನೀಡುವಾಗಲೇ ಜಾರಿಗೊಳಿಸಬೇಕು. ಇಂತಹ ಮಂದಿರಗಳಲ್ಲಿ ಪ್ರತಿದಿನ ಕನ್ನಡ ಸಂಸ್ಕೃತಿಯನ್ನು ಪ್ರಕಟಪಡಿಸುವ ಅವಕಾಶಗಳು ಕಲಾವಿದರಿಗೆ ಸಿಗಬೇಕು. ಈ ಮಾಲ್‌ಗಳ ಮಾಲೀಕರೇ ಇಂತಹ ಎಲ್ಲಾ ಚಟುವಟಿಕೆಗಳನ್ನು ನಡೆಸುವವರಿಗೆ ಗೌರವಧನ ಅಥವಾ ಸಂಬಳವನ್ನು ನೀಡುವಂತಾಗಬೇಕು. ಸರಕು ಮಾರುವ ಅಂಗಡಿಯಲ್ಲಿ ಕನ್ನಡವನ್ನೇ ಸರಕಾಗಿಸುವ ಮಾರ್ಗ ಇದು. ಈ ಮೂಲಕ ಹೊಸ ತಲೆಮಾರನ್ನು ಕನ್ನಡದ ಪರಿಸರದ ಒಳಗೆ ತರುವುದಕ್ಕೆ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು.</p>
<p>೧೧. ನಮ್ಮ ಎಲ್ಲಾ ಸಾರಿಗೆಗಳಲ್ಲಿ ಕನ್ನಡವು ಪ್ರಧಾನ ಭಾಷೆಯಾಗಿ ಬಳಕೆಯಾಗಬೇಕು. ಆ ಕನ್ನಡವು ಶುದ್ಧ ಕನ್ನಡವೂ ಆಗಿರುವಂತೆ ಎಚ್ಚರ ವಹಿಸಬೇಕು.</p>
<p>೧೨. ರಸ್ತೆ ಬದಿಗಳ ಎಲ್ಲಾ ಜಾಹೀರಾತು ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಕನ್ನಡ ಬಳಸದ ಜಾಹೀರಾತು ಫಲಕಗಳಿಗೆ ಪರವಾನಗಿ ನೀಡಬಾರದು.</p>
<p>ಈ ಕೆಲವು ವಿವರಗಳಲ್ಲದೆ ಇನ್ನೂ ಅನೇಕ ಮಾರ್ಗೋಪಾಯಗಳಿವೆ. ಅವುಗಳನ್ನು ಚರ್ಚೆಯಲ್ಲಿ ವಿಸ್ತರಿಸೋಣ. ಕಾಲಕಾಲಕ್ಕೆ ಮಾರ್ಗೋಪಾಯಗಳ ಪಟ್ಟಿಯನ್ನು ನವೀಕರಿಸೋಣ.</p>
<p>·           <strong></strong></p>
<p><strong><span style="text-decoration:underline;">ಗಣಕ ಮತ್ತು ದಶಮಾಂಶ ಲೋಕದಲ್ಲಿ ಕನ್ನಡ</span></strong><strong></strong></p>
<p>ಆಧುನಿಕ ಸಮಾಜವು ಡಿಜಿಟಲ್ (ದಶಮಾಂಶ) ಜಗತ್ತನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡಿದೆ. ಇಂದು ಈ ನಾಡಿನ ಪ್ರತಿಯೊಬ್ಬನ ಕೈಯಲ್ಲಿಯೂ ಸಂಚಾರಿ ದೂರವಾಣಿ ಬಂದಿದೆ. ಪ್ರತೀ ಮನೆಯಲ್ಲೂ ಟೆಲಿವಿಷನ್ ಬಂದಿದೆ. ಪ್ರತೀ ಸಣ್ಣ ಹುಡುಗನಿಗೂ ಗಣಕಯಂತ್ರ ನಡೆಸುವುದು ಬರುತ್ತದೆ. ಆದರೆ ಈ ಗಣಕ ಯಂತ್ರ ಲೋಕದಲ್ಲಿ ಕನ್ನಡದ ಪರಿಸರ ಸರಿಯಾಗಿಲ್ಲ. ಕರ್ನಾಟಕ ಸರ್ಕಾರವಂತೂ ಆಡಳಿತವನ್ನು ಗಣಕೀಕರಣಗೊಳಿಸಲು ದಾಪುಗಾಲಿಡುತ್ತಿದೆ. ಆದರೆ ಒಂದು ಗಣಕ ಯಂತ್ರದಲ್ಲಿ ಬರುವ ಕನ್ನಡವು ಮತ್ತೊಂದು ಗಣಕ ಯಂತ್ರದಲ್ಲಿ ಕಾಣುವುದೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ. ಇನ್ನು ಹೀಗೆ ಬಳಸುವ ದಾಖಲೆಗೆ ಅದೆಂದೂ ಯಾವ ವೈರಸ್ ಬಡಿಯುತ್ತದೋ ಎಂಬ ಆತಂಕ. ಇದಕ್ಕೆ ನಾವು ವಿಂಡೋಸ್ ಎಂಬ ತಂತ್ರಾಂಶವನ್ನು ಬಳಸುತ್ತಾ ಇರುವುದು ಪ್ರಧಾನ ಕಾರಣ. ಪ್ರಾಯಶಃ ಉತ್ತರ ಪ್ರದೇಶ ಸರ್ಕಾರದಂತೆ ಆಡಳಿತ ಯಂತ್ರಕ್ಕೆ ಲಿನಕ್ಸ್‌ನಂತಹ ಪುಕ್ಕಟೆಯಾಗಿ ದೊರೆಯುವ ತಂತ್ರಾಂಶ ಬಳಸುವುದು ಮತ್ತು ತಮಿಳುನಾಡು ಸರ್ಕಾರದಂತೆ ಯೂನಿಕೋಡ್ ಎಂಬ ಭಾಷೆಯ ಬಳಕೆಯನ್ನು ಸಾರ್ವತ್ರೀಕರಣಗೊಳಿಸುವುದು ಇಂದು ಸರಿಯಾದ ಮಾರ್ಗ. ಆ ನಿಟ್ಟಿನಲ್ಲಿ ಅನೇಕ ವರದಿಗಳು ಸರ್ಕಾರಕ್ಕೆ ತಲುಪಿವೆ. ಆದರೆ ಆಗಿರುವ ಕೆಲಸಗಳು ತೀರಾ ಕಡಿಮೆ.</p>
<p>ಗಣಕಲೋಕದಲ್ಲಿ ಕನ್ನಡದ ಏಕೀಕರಣವಾಗುವಾಗಲೇ ಸಂಚಾರಿ ದೂರವಾಣಿಗಳಲ್ಲೂ ಕನ್ನಡವನ್ನೇ ಬಳಸುವಂತೆ ಎಲ್ಲಾ ಖಾಸಗಿ ಸಂಚಾರಿ ದೂರವಾಣಿ ನಿರ್ವಹಣಾ ಸಂಸ್ಥೆಗಳಿಗೆ ಮತ್ತು ಸಂಚಾರಿ ದೂರವಾಣಿ ತಯಾರಕರಿಗೆ ಸರ್ಕಾರವೇ ಒತ್ತಡ ಹೇರಬೇಕಾಗಿದೆ. ಬ್ಲಾಕ್‌ಬೆರ್ರಿಯಂತಹ ಸಂಚಾರಿ ದೂರವಾಣಿಯ ಮೂಲಕ ನಮ್ಮ ಪೋಲೀಸ್ ಇಲಾಖೆಯು ಕೆಲಸ ಮಾಡುತ್ತಿದೆ. ಆದರೆ ಈ ಬ್ಲಾಕ್‌ಬೆರ್ರಿಯಲ್ಲಿ ಕನ್ನಡವೇ ಬಾರದು. ಹೀಗಾಗಿ ನಮ್ಮ ಪೋಲೀಸರು ಕನ್ನಡಕ್ಕೆ ಬದಲಾಗಿ ಇಂಗ್ಲೀಷ್ ಭಾಷೆಯನ್ನೇ ಬಳಸುತ್ತಾ ಇರುವುದನ್ನು ಬೆಂಗಳೂರಿನಂತಹ ನಗರಿಯಲ್ಲಿ ಕಾಣಬಹುದು. ಇದನ್ನು ಸರಳವಾಗಿ ತಪ್ಪಿಸಬಹುದು. ನಮ್ಮ ಅಧಿಕಾರ ವರ್ಗವು ಕನ್ನಡವಿಲ್ಲದ ಸಂಚಾರಿ ದೂರವಾಣಿಗಳನ್ನು ಬಳಸಲಾಗದು ಎಂಬ ಒಂದು ಆದೇಶ ಕೊಟ್ಟರೆ ತಮ್ಮ ಆದಾಯ ತಪ್ಪುತ್ತದೆ ಎಂಬ ಹೆದರಿಕೆಯಿಂದಲೇ ಈ ಎಲ್ಲಾ ಸಂಚಾರಿ ದೂರವಾಣಿಗಳ ತಯಾರಕರು ಮಣಿಯುತ್ತಾರೆ ಮತ್ತು ಕನ್ನಡ ತಂತ್ರಾಂಶಗಳನ್ನೊಳಗೊಂಡ ಸಂಚಾರಿ ದೂರವಾಣಿಗಳು ಬರುತ್ತವೆ.</p>
<p>ಇದೆಲ್ಲಾ ಆಗುವಷ್ಟರಲ್ಲಿ ಯೂನಿಕೋಡ್‌ನಲ್ಲಿ ಕನ್ನಡದ ಬಳಕೆಗೆ ಅನೇಕ ತೊಂದರೆಗಳಿವೆ. ಅವುಗಳೆಲ್ಲವನ್ನೂ ಅದಾಗಲೇ ಅನೇಕರು ಪಟ್ಟಿ ಮಾಡಿ ನೀಡಿದ್ದಾರೆ. ಆ ಲೋಪ ದೋಷಗಳನ್ನು ತಿದ್ದುವ ಕೆಲಸ ಕೂಡಲೇ ಆಗಬೇಕು. ಅದರೊಂದಿಗೆ ಕಾಮನ್ ಪ್ಲಾಟ್‌ಫಾರಂ ಕನ್‌ವರ‍್ಷನ್ ಸಾಫ್ಟ್‌ವೇರ್ ಎಂದು ಕರೆಯಲಾಗುವ, ಯಾವ ತಂತ್ರಾಂಶ ಬಳಸಿಯೇ ಯೂನಿಕೋಡ್‌ನಲ್ಲಿ ಬರೆದದ್ದು ಅಷ್ಟೇ ಸರಳವಾಗಿ ಮತ್ತೊಂದು ಗಣಕ ಯಂತ್ರದಲ್ಲಿ ಕಾಣುವಂತಾಗುವ ತಂತ್ರಾಂಶ ಅಭಿವೃದ್ಧಿಯ ಕೆಲಸ ಆಗಬೇಕು.</p>
<p>ಇವುಗಳು ಆಗುವಾಗಲೇ ಕನ್ನಡದ ಸ್ಪೆಲ್ ಚೆಕ್ಕರ್‌ಗಳು ಮತ್ತು ವ್ಯಾಕರಣ ಪರೀಕ್ಷಕ ತಂತ್ರಾಮಶಗಳನ್ನು ಸಹ ಆಧುನಿಕ ಕಾಲಕ್ಕೆ ಹೊಂದುವಂತೆ ಅಭಿವೃದ್ಧಿ ಪಡಿಸಬೇಕಾಗುತ್ತದೆ. ಇವುಗಳ ಜೊತೆಗೆ ಗಣಕಗಳಲ್ಲಿ ತಂತ್ರಾಂಶದ ಜೊತೆಗೆ ಅಡಕವಾಗಿರುವಂತೆ ಕನ್ನಡ ನುಡಿಕೋಶಗಳು ಲಭ್ಯವಿರಬೇಕು. ಇದಕ್ಕಾಗಿ ಯಾವ ನುಡಿಕೋಶವನ್ನು ಬಳಸಬೇಕು ಮತ್ತು ಆ ನುಡಿಕೋಶವು ಆಧುನಿಕ ಕಾಲಘಟ್ಟಕ್ಕೆ ಹೊಂದುವಂತೆ ಮಾಡಲು ಏನೆಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಜ್ಞರಿಂದ ಪರೀಕ್ಷಿಸಿ ಸಿದ್ಧಪಡಿಸಬೇಕು.</p>
<p>ಇವುಗಳ ಜೊತೆಗೆ ಕನ್ನಡದ ಎಲ್ಲಾ ಕೃತಿಗಳ, ಶಾಸನಗಳ, ಲಿಪಿ ಮಾದರಿಗಳ ಕಾರ್ಪಸ್ ಸಹ ದಶಮಾಂಶ ಪದ್ಧತಿಯಲ್ಲಿ ದೊರೆಯುವಂತೆ ಆಗಬೇಕು. ಇದು ಕನ್ನಡ ಪರಿಸರವನ್ನು ಗಣಕಲೋಕದಲ್ಲಿ ಗಟ್ಟಿಗೊಳಿಸಲು ಸಹಾಯಕವಾಗುತ್ತದೆ.</p>
<p>ಇವುಗಳ ಜೊತೆಗೆ ಕನ್ನಡವನ್ನು ಗಣಕದಲ್ಲಿ ಬಳಸಲು ಆಡಳಿತ ಸಿಬ್ಬಂದಿಗೆ ಮಾತ್ರವೇ ಅಲ್ಲದೆ ಪ್ರಾಥಮಿಕ ಶಾಲೆಯಲ್ಲಿಯೇ ಕನ್ನಡದ ಬಳಕೆಯನ್ನು ಮಕ್ಕಳಿಗೆ ಅಭ್ಯಾಸ ಮಾಡಿಸುವಂತಹ ಚಟುವಟಿಕೆಗಳು ಆಗಬೇಕು.</p>
<p>ಇವೆಲ್ಲವೂ ನಮ್ಮೆದುರಿಗೆ ಇರುವ ಅಗತ್ಯಗಳು. ಇವುಗಳೆಲ್ಲವನ್ನೂ ಪೂರೈಸಲು ಸಮರೋಪಾದಿಯಲ್ಲಿ ಕನ್ನಡಿಗರು ಕೆಲಸ ಮಾಡಬೇಕಿದೆ. ಪ್ರಾಯಶಃ ತಂತ್ರಾಂಶ ಅಭಿವೃದ್ಧಿಯಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಕರ್ನಾಟಕದ ಅನೇಕ ಉದ್ದಿಮೆಗಳನ್ನು ಈ ನಿಟ್ಟಿನಲ್ಲಿ ತೊಡಗಿಸಿದರೆ ಗಣಕಲೋಕದ ಕನ್ನಡದಲ್ಲಿಯೂ ಏಕೀಕರಣ ಆಗುವುದು ಸಾಧ್ಯ.</p>
<p>·           <strong></strong></p>
<p><strong><span style="text-decoration:underline;">ನಮ್ಮ ಶಿಕ್ಷಣ ಪದ್ಧತಿ ಮತ್ತು ಕನ್ನಡದ ಪರಿಸರ</span></strong><strong></strong></p>
<p>ಇಂದು ನಮ್ಮ ಸ್ನಾತಕೋತ್ತರ ಶಿಕ್ಷಣದಲ್ಲಿ ಅನೇಕ ಹೊಸ ಆಲೋಚನೆಗಳು ಪ್ರವೇಶವಾಗಿವೆ. ಅದರಲ್ಲಿಯೂ ಭಾಷೆಯ ಅಧ್ಯಯನದಲ್ಲಿ ಹೊಸ ಸಂಶೋಧನೆಗಳು ಆಗುತ್ತಿವೆ. ಆದರೆ ಇವುಗಳು ಪ್ರಾಥಮಿಕ ಶಿಕ್ಷಣ ಲೋಕದಲ್ಲಿ ಕನ್ನಡ ಕಲಿಸುತ್ತಿರುವವರಿಗೆ ತಿಳಿಯುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಪ್ರಾಥಮಿಕ ಹಂತದ ಕನ್ನಡ ಶಿಕ್ಷಣ ಕ್ರಮವನ್ನು ಆಧುನಿಕ ಕಾಲಘಟ್ಟಕ್ಕೆ ಹೊಂದುವಂತೆ ಮಾರ್ಪಡಿಸುವುದು ನಮ್ಮೆದುರಿಗೆ ಇರುವ ದೊಡ್ಡ ಸವಾಲು. ಇದಕ್ಕಾಗಿ ಪ್ರತೀ ವರ್ಷವೂ ನಮ್ಮ ಪ್ರಾಥಮಿಕ ಶಿಕ್ಷಣದ ಕನ್ನಡ ಉಪಧ್ಯಾಯರಿಗೆ ಬೇಸಿಗೆ ಶಿಬಿರಗಳನ್ನು ಹಿರಿಯ ಕನ್ನಡ ವಿದ್ವಾಂಸರಿಂದ ನಡೆಸಬೇಕು. ಆ ಮೂಲಕ ನಮ್ಮ ಶಿಕ್ಷಕರು ಕನ್ನಡವನ್ನು ಭಾಷೆಯಾಗಿ ಅರಿಯುವ ಕ್ರಮಗಳನ್ನು ಆಧುನಿಕ ವಿಜ್ಞಾನದ ಜೊತೆಗೆ ಕಲಿಯುವುದು ಸಾಧ್ಯವಾಗಬೇಕು. ಆಗ ನಮ್ಮ ಮುಂದಿನ ತಲೆಮಾರುಗಳು ಶಾಲೆಯಲ್ಲಿಯೇ ಹೊಸ ಕಾಲಘಟ್ಟವನ್ನು ತಮ್ಮ ಭಾಷೆಯ ಮೂಲಕ ಎದುರಿಸುವುದು ಸಾಧ್ಯವಾಗುತ್ತದೆ. ಇದಕ್ಕೆ ಭಾಷೆಯನ್ನು ಪಾರಂಪರಿಕ ಕ್ರಮದಲ್ಲಿ ಮಾತ್ರ ನೋಡುವ, ಕಲಿಸುವ ಅಭ್ಯಾಸವನ್ನು ಬಿಟ್ಟುಕೊಟ್ಟು, ಆಧುನಿಕ ಜ್ಞಾನ ಶಿಸ್ತುಗಳ ಮೂಲಕ ಕನ್ನಡ ಲೋಕಕ್ಕೆ ನಮ್ಮ ಶಿಕ್ಷಕರನ್ನು ಕರೆದೊಯ್ಯಬೇಕಿದೆ. ಇದು ಎಷ್ಟು ಶೀಘ್ರವಾಗಿ ಸಾಧ್ಯವಾಗುವುದೋ ಅಷ್ಟೂ ಬೇಗ ನಮ್ಮ ಮುಂದಿನ ತಲೆಮಾರು ಆಧುನಿಕ ಯುಗದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕನ್ನಡದ ಜೊತೆಗೆ ಬದುಕುವುದು ಸಾಧ್ಯವಾಗುತ್ತದೆ.</p>
<p>ಇದೇ ಸಂದರ್ಭದಲ್ಲಿ ನಮ್ಮ ಮಕ್ಕಳು ಯಾವುದೇ ಭಾಷೆಯನ್ನು ಯಾವುದೇ ಶಾಲೆಯಲ್ಲಿ ಕಲಿಯುತ್ತಾ ಇರಲಿ, ಆದರೆ ಅವರು ಆಡುವಾಗ ಬಳಸುವ ಭಾಷೆಯನ್ನು ಕನ್ನಡವಾಗಿಯೇ ಉಳಿಸಬೇಕದ್ದು ಮುಖ್ಯವಾಗಿದೆ. ಭಾಷೆಯೊಂದು ಪ್ರತೀ ವ್ಯಕ್ತಿಯೊಡನೆ ಅವನ ಬಾಲ್ಯಕಾಲದ ಆಟದ ಮೂಲಕವೇ ಅರಳುತ್ತದೆ. ಈ ನಿಟ್ಟಿನಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಬದುಕಿನ ಅಗತ್ಯಕ್ಕಾಗಿ ಕಲಿಯುತ್ತಿರುವ ಹುಡುಗರಿಗೂ ಆಟೋಟಗಳು ಕನ್ನಡದಲ್ಲಿ ಇರುವಂತಹ ವಾತಾವರಣ ಮೂಡಿಸಬೇಕಿದೆ. ನಮ್ಮ ಮಕ್ಕಳು ಜಗತ್ತಿನ ಎಲ್ಲಾ ಭಾಷೆಗಳನ್ನೂ ಕಲಿಯಲಿ. ಆದರೆ ಕನ್ನಡದಲ್ಲಿ ಆಡಲಿ. ಕನ್ನಡದಲ್ಲಿ ಬದುಕಲಿ ಎಂಬುದು ನಮ್ಮ ಶಿಕ್ಷಣ ವ್ಯವಸ್ಥೆಯ ಧ್ಯೇಯ ವಾಕ್ಯವಾಗುವಂತೆ ಈ ಕನ್ನಾಡಿನ ಎಲ್ಲಾ ಪೋಷಕರು ಒತ್ತಾಯ ತರಬೇಕಾಗಿದೆ.</p>
<p>·           <strong></strong></p>
<p><strong><span style="text-decoration:underline;">ಕನ್ನಡ ಮತ್ತು ಆಧುನಿಕ ವಿಜ್ಞಾನ</span></strong><strong></strong></p>
<p>ಯಾವುದೇ ಭಾಷೆಯನ್ನು ಆಧುನಿಕ ವಿಜ್ಞಾನಕ್ಕೆ ಒಗ್ಗಿಸಿಕೊಳ್ಳದೇ ಹೋದಾಗ ವಿಭಿನ್ನ ಜ್ಞಾನ ಶಿಸ್ತುಗಳಿಗೆ ಆ ಭಾಷೆ ಹೊಂದಿಕೊಳ್ಳುವುದಿಲ್ಲ. ಇಲ್ಲಿ ನಮ್ಮ ಪರಂಪರೆ ಹಾಗಿತ್ತು-ಹೀಗಿತ್ತು ಎಂದು ಕೊಂಡಾಡುತ್ತಾ ಕೂರುವ ಮಡಿವಂತ ಸ್ಥಿತಿಗಿಂತ, ನಾವು ಭಾಷೆಯನ್ನು ಬಲಸುವ ಕ್ರಮವನ್ನು ಮುಕ್ತಗೊಳಿಸಬೇಕಿದೆ. ಕನ್ನಡವನ್ನು ಸಂಸ್ಕೃತದ ಮರಿ ಮಾಡುವುದಕ್ಕಿಂತ ಕನ್ನಡಕ್ಕಿರುವ ಸ್ವಾಯತ್ತತೆಯನ್ನು, ಸಂಸ್ಕೃತಕ್ಕಿಂತ ಪುರಾತನವಾದ ಭಾಷೆಯಿದು ಎಂಬುದನ್ನು ನೆನಪಲ್ಲಿಟ್ಟುಕೊಂಡು ಹೊಸ ಕೋನದಿಂದ ನೋಡಬೇಕಿದೆ. ಆಗ ಆಧುನಿಕ ವಿಜ್ಞಾನವನ್ನು ಕಲಿಯಲು ಬೇಕಾದ ಹಾಗೆ ನಮ್ಮ ಕನ್ನಡವನ್ನು ಬಾಗಿಸಲು ಸಾಧ್ಯವಾಗುತ್ತದೆ. ಇದಕ್ಕೆ ಅನ್ಯ ಜ್ಞಾನ ಶಿಸ್ತುಗಳಲ್ಲಿ ದುಡಿಯುತ್ತಿರುವ ಕನ್ನಡಿಗರನ್ನು ತಮ್ಮ ಜ್ಞಾನವನ್ನು ಕನ್ನಡದ ಮೂಲಕವೇ ಪ್ರಚುರ ಪಡಿಸಲು ಅನುವಾಗುವಂತೆ ಪ್ರೇರೇಪಿಸಬೇಕಿದೆ. ಅಟಾಮಿಕ್ ಫಿಸಿಕ್ಸ್‌ನಲ್ಲಿ ಸಂಶೋಧನೆ ಮಾಡುತ್ತಿರುವವರು ತಮ್ಮ ಸಂಶೋಧನೆಗಳನ್ನು ಕನ್ನಡದಲ್ಲಿಯೇ ಪ್ರಕಟಿಸಲು ಅನುವಾಗವಂತೆ ಭಾಷೆಯನ್ನು ಒಗ್ಗಿಸುವ ಪ್ರಯತ್ನ ಆಗಬೇಕಿದೆ. ಇಂತಹ ಸಣ್ಣ ಪ್ರಯತ್ನಗಳು ಆಗಿವೆ. ಅವುಗಳು ವಿಸ್ತಾರಗೊಂಡು ಜಗತ್ತಿನ ಎಲ್ಲಾ ಜ್ಞಾನಗಳೂ ಕನ್ನಡದಲ್ಲಿಯೇ ದೊರೆಯುವಂತೆ ಆದಾಗ ಮಾತ್ರ ಆಧುನಿಕ ವಿಜ್ಞಾನದ ಎಲ್ಲಾ ಹೊಸ ಗಾಳಿಗೆ ಕನ್ನಡವೂ ಕನ್ನಡದ ಪರಿಸರವು ವಿಸ್ತರಿಸಿಕೊಳ್ಳುವುದು ಸಾಧ್ಯ.</p>
<p>·           <strong></strong></p>
<p><strong><span style="text-decoration:underline;">ಕನ್ನಡದ ಉಪಭಾಷೆಗಳು ಮತ್ತು ಕನ್ನಡ ಪರಿಸರ</span></strong><strong></strong></p>
<p>ಕನ್ನಡಕ್ಕೆ ಅನೇಕ ಉಪಭಾಷೆಗಳಿವೆ. ಕರ್ನಾಟಕ ಸರ್ಕಾರವೇ ಗುರುತಿಸಿರುವ ಅನೇಕ ಸೋದರ ಭಾಷೆಗಳು ಕನ್ನಡದಷ್ಟೇ ಹಳತಾಗಿವೆ. ಈ ಎಲ್ಲಾ ಉಪಭಾಷೆಗಳು ಮತ್ತು ಸೋದರ ಭಾಷೆಗಳ ಪರಿಸರವನ್ನು ಕಾಪಾಡುವುದು ಸಹ ಕನ್ನಡಿಗರ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ನಾವು ನಮ್ಮ ಸೋದರ ಭಾಷೆಗಳನ್ನು ಪ್ರೀತಿಯಿಂದ ಗೌರವಿಸದೆ ಉಳಿದಾಗ ಕನ್ನಡಕ್ಕೆ ಆತುಕೊಳ್ಳುವ ಗೊಡೆಗಳಿಲ್ಲದಂತಹ ಪರಿಸ್ಥಿತಿ ಒದಗಬಹುದು. ಈ ಹಿನ್ನೆಲೆಯಲ್ಲಿ ನಮ್ಮ ನಾಡಿನಲ್ಲಿ ಇನ್ನೂ ಜೀವಂತವಾಗಿರುವ ಕೊಡವ, ತುಳು, ಬ್ಯಾರಿ, ಕೊಂಕಣಿ, ಉರ್ದು ಭಾಷೆಗಳಲ್ಲದೆ ಇರವ, ಹಾಲಕ್ಕಿ, ಕೊರಗ, ಹಕ್ಕಿಪಿಕ್ಕಿ, ಲಮಾಣಿ ಮುಂತಾದ ಉಪಭಾಷೆಗಳನ್ನು ಸಹ ಕನ್ನಡಿಗರು ಪೊರೆಯಬೇಕಿದೆ. ಕನ್ನಡದ ಜೀವಂತಿಕೆಗೆ ಈ ಎಲ್ಲಾ ಭಾಷೆಗಳೂ ಕಾರಣ ಎಂಬುದನ್ನು ಮರೆಯದೆ ಮುಂದುವರೆಯಬೇಕಾಗಿದೆ. ಇವುಗಳಲ್ಲಿ ಲಿಪಿ ರಹಿತ ಭಾಷೆಗಳಿಗೆ ಕನ್ನಡ ಲಿಪಿಯನ್ನು ಬಳಸಲು ಪ್ರೇರೇಪಿಸುವ ಮೂಲಕ ಕನ್ನಡದ ಪರಿಸರವನ್ನು ವಿಸ್ತರಿಸಿಕೊಳ್ಳಬೇಕಿದೆ. ಈ ಎಲ್ಲಾ ಸೋದರ ಭಾಷೆಗಳು ಹಾಗೂ ಉಪಭಾಷೆಗಳನ್ನು ಕನ್ನಡ ಕುಟುಂಬದ ಒಳಗಡೆಯೇ ಉಳಿಸಿಕೊಳ್ಳುವ ಮೂಲಕ ಅವುಗಳಲ್ಲಿ ನಿರ್ಜೀವವಾಗುತ್ತಾ ಇರುವ ಭಾಷೆಗಳಿಗೆ ಹೊಸ ಜೀವ ಕೊಡಬೇಕಿದೆ.</p>
<p>·           <strong></strong></p>
<p><strong><span style="text-decoration:underline;">ಒಟ್ಟಂದದ ನೋಟ</span></strong><strong></strong></p>
<p>ಕನ್ನಡವೂ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆ ಎಂಬ ಮಾತನ್ನಾಡುತ್ತಾ ಉಳಿಯುವುದು ಆಧುನಿಕ ಕಾಲಮಾನದಲ್ಲಿ ಅಪಾಯಕಾರಿ ಆಗಬಹುದು. ಈ ಭಾಷೆಯ ಪ್ರಾಚೀನತೆಯನ್ನು ಸಾಬೀತು ಪಡಿಸುವ ಕೆಲಸಗಳ ಜೊತೆಗೆ ಆಧುನಿಕ ಕಾಲಕ್ಕೆ ಈ ಭಾಷೆಯನ್ನು, ಭಾಷಿಕರನ್ನು ಶೃತಿಗೊಳಿಸುವುದು ಸಧ್ಯದ ಪ್ರಧಾನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಎದುರಿಗೆ ಇರುವ ಎಲ್ಲಾ ಸವಾಲುಗಳನ್ನೂ ಪರಿಹರಿಸುವ ಇಚ್ಛಾಶಕ್ತಿಯನ್ನು ಎಲ್ಲಾ ಕನ್ನಡಿಗರೂ ಬೆಳೆಸಿಕೊಳ್ಳಬೇಕಿದೆ. ಆ ಮೂಲಕ ಈ ನಾಡನ್ನಾಳುವ ಸರ್ಕಾರಗಳು ನಿಧಾನಿಯಾದಾಗ ಎಚ್ಚರಿಸಿ, ಕನ್ನಡದ ಕೆಲಸಗಳನ್ನು ತ್ವರಿತವಾಗಿ ಆಗುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.</p>
<p>ಇಲ್ಲವಾದಲ್ಲಿ ಅದಾಗಲೇ ವಿಶ್ವಸಂಸ್ಥೆಯು ಹೊರಡಿಸಿರುವ ಸಾಯುತ್ತಿರುವ ಭಾಷೆಗಳ ಪಟ್ಟಿಗೆ ಕನ್ನಡ ಮತು ಕನ್ನಡದ ಪರಿಸರವೂ ಸೇರಿಹೋಗುತ್ತದೆ ಎಂಬುದನ್ನು ನಾವು ಮರೆಯಬಾರದು.</p>
<p>ಇದಿಷ್ಟೂ ಸಧ್ಯಕ್ಕೆ ಈ ಪ್ರಬಂಧ ಮಂಡಕ ಗುರುತಿಸಿರುವ ವಿವರ, ಇದಲ್ಲದೆ ಕನ್ನಡದ ಪರಿಸರ ನಿರ್ಮಾಣಕ್ಕೆ ಇರುವ ಇನ್ನೂ ಅನೇಕ ತೊಡಕುಗಳಿವೆ. ಅವುಗಳನ್ನು ಈ ನಾಡಿನ ಪ್ರತಿಯೊಬ್ಬ ಕನ್ನಡಿಗನು ಸೇರಿಸುತ್ತಾ, ಅವುಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಸಹ ಕಂಡುಕೊಳ್ಳಬೇಕಿದೆ.</p>
<p>ಇಷ್ಟೆಲ್ಲಾ ವಿಷಯ ಮಂಡಿಸಲು ಅವಕಾಶ ನೀಡಿದ್ದಕ್ಕಾಗಿ ಮತ್ತೊಮ್ಮೆ ತಮಗೆಲ್ಲರಿಗೂ ವಂದಿಸುತ್ತಾ ವಿರಮಿಸುತ್ತೇನೆ!</p>
<p>* * *</p>
<p><strong>- ಬಿ.ಸುರೇಶ, </strong></p>
<p><strong>ಮೀಡಿಯಾಹೌಸ್</strong><strong>, ೧೧೬೨, ೨೨ನೇ ಅಡ್ಡರಸ್ತೆ, ೨೩ನೇ ಮುಖ್ಯರಸ್ತೆ, </strong></p>
<p><strong>ಬನಶಂಕರಿ ೨ನೇ ಹಂತ</strong><strong>, ಬೆಂಗಳೂರು &#8211; ೫೬೦ ೦೭೦, </strong></p>
<p><strong>ಮಿಂಚೆ</strong><strong>: </strong></p>
<p><strong>ಆಕರಗಳು</strong><strong>:</strong></p>
<p><em>೧</em><em>. ಕನ್ನಡ ನುಡಿ-ಗಡಿ ಜಾಗೃತಿ ಜಾಥಾದ ವರದಿ</em></p>
<p><em>೨</em><em>. ಜೋಯಿಡಾ ಗಡಿ ಕನ್ನಡಿಗರ ಸಮಾವೇಶದ ವರದಿ</em></p>
<p><em>೩</em><em>. ಅರುಹು-ಕುರುಹು ತ್ರೈಮಾಸಿಕದ ಅಕ್ಟೋಬರ್-ಡಿಸೆಂಬರ್ ಸಂಚಿಕೆ ಹಾಗೂ ಜನವರಿ-ಮಾರ್ಚ್ ಸಂಚಿಕೆ</em></p>
<p><em>೪</em><em>. ಪ್ರಜಾವಾಣಿ ದೈನಿಕದ ೬ ಮಾರ್ಚ್ ೨೦೧೧ರ ವಿಶೇಷ ಸಾಪ್ತಾಹಿಕ ಪುರವಣೆ</em></p>
<p><em>೫</em><em>. ಸಾಧನಾ ಪತ್ರಿಕೆಯ ೨೭ ಮತ್ತು ೩೨ನೇ ಸಂಚಿಕೆಯಲ್ಲಿನ ಲೇಖನಗಳು.</em></p>
<p><strong> </strong></p>
<br />Filed under: <a href='http://bsuresha.wordpress.com/category/%e0%b2%87%e0%b2%82%e0%b2%a6%e0%b2%bf%e0%b2%a8-%e0%b2%9a%e0%b2%bf%e0%b2%82%e0%b2%a4%e0%b3%86/'>ಇಂದಿನ ಚಿಂತೆ!</a>  <a rel="nofollow" href="http://feeds.wordpress.com/1.0/gocomments/bsuresha.wordpress.com/205/"><img alt="" border="0" src="http://feeds.wordpress.com/1.0/comments/bsuresha.wordpress.com/205/" /></a> <a rel="nofollow" href="http://feeds.wordpress.com/1.0/godelicious/bsuresha.wordpress.com/205/"><img alt="" border="0" src="http://feeds.wordpress.com/1.0/delicious/bsuresha.wordpress.com/205/" /></a> <a rel="nofollow" href="http://feeds.wordpress.com/1.0/gofacebook/bsuresha.wordpress.com/205/"><img alt="" border="0" src="http://feeds.wordpress.com/1.0/facebook/bsuresha.wordpress.com/205/" /></a> <a rel="nofollow" href="http://feeds.wordpress.com/1.0/gotwitter/bsuresha.wordpress.com/205/"><img alt="" border="0" src="http://feeds.wordpress.com/1.0/twitter/bsuresha.wordpress.com/205/" /></a> <a rel="nofollow" href="http://feeds.wordpress.com/1.0/gostumble/bsuresha.wordpress.com/205/"><img alt="" border="0" src="http://feeds.wordpress.com/1.0/stumble/bsuresha.wordpress.com/205/" /></a> <a rel="nofollow" href="http://feeds.wordpress.com/1.0/godigg/bsuresha.wordpress.com/205/"><img alt="" border="0" src="http://feeds.wordpress.com/1.0/digg/bsuresha.wordpress.com/205/" /></a> <a rel="nofollow" href="http://feeds.wordpress.com/1.0/goreddit/bsuresha.wordpress.com/205/"><img alt="" border="0" src="http://feeds.wordpress.com/1.0/reddit/bsuresha.wordpress.com/205/" /></a> <img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=205&amp;subd=bsuresha&amp;ref=&amp;feed=1" width="1" height="1" />]]></content:encoded>
			<wfw:commentRss>http://bsuresha.wordpress.com/2011/08/06/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%aa%e0%b2%b0%e0%b2%bf%e0%b2%b8%e0%b2%b0-%e0%b2%a8%e0%b2%bf%e0%b2%b0%e0%b3%8d%e0%b2%ae%e0%b2%be%e0%b2%a3-%e0%b2%b8%e0%b2%be%e0%b2%a7%e0%b3%8d/feed/</wfw:commentRss>
		<slash:comments>0</slash:comments>
	
		<media:content url="" medium="image">
			<media:title type="html">bsuresha</media:title>
		</media:content>
	</item>
		<item>
		<title>ಬಿ.ಸುರೇಶ ಅವರ `ಪ್ರೀತಿಯೆಂಬ ಅಚ್ಚರಿ!&#8217;</title>
		<link>http://bsuresha.wordpress.com/2011/02/20/%e0%b2%ac%e0%b2%bf-%e0%b2%b8%e0%b3%81%e0%b2%b0%e0%b3%87%e0%b2%b6-%e0%b2%85%e0%b2%b5%e0%b2%b0-%e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf%e0%b2%af%e0%b3%86%e0%b2%82%e0%b2%ac-%e0%b2%85/</link>
		<comments>http://bsuresha.wordpress.com/2011/02/20/%e0%b2%ac%e0%b2%bf-%e0%b2%b8%e0%b3%81%e0%b2%b0%e0%b3%87%e0%b2%b6-%e0%b2%85%e0%b2%b5%e0%b2%b0-%e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf%e0%b2%af%e0%b3%86%e0%b2%82%e0%b2%ac-%e0%b2%85/#comments</comments>
		<pubDate>Sun, 20 Feb 2011 13:44:27 +0000</pubDate>
		<dc:creator>bsuresha</dc:creator>
				<category><![CDATA[ಚಿತ್ರಕತೆಗಳು]]></category>
		<category><![CDATA[ಚಿತ್ರಕತೆ]]></category>

		<guid isPermaLink="false">http://bsuresha.wordpress.com/?p=189</guid>
		<description><![CDATA[ಪ್ರೀತಿ ಪ್ರೇಮ ಎಂಬ ಹೆಸರಲ್ಲಿ ಉದಯ ಟಿವಿಯಲ್ಲಿ ಪ್ರತಿ ಭಾನುವಾರ ಪ್ರಸಾರವಾಗುವ ಒಂದು ಗಂಟೆ ಅವಧಿಯ ಟೆಲಿಫಿಲ್ಮ್‌ಗಳನ್ನು ತಯಾರಿಸುತ್ತಾ ಇದ್ದೇವೆ. ಅವುಗಳಲ್ಲಿ ಒಂದು ಸತ್ಯಕತೆಯ ಸಾರಾಂಶ/ ದೃಶ್ಯಕ್ರಮ/ ಚಿತ್ರಕತೆ-ಸಂಭಾಷಣೆಯ ಪ್ರತಿ ನಿಮಗಾಗಿ. ಸಿನಿಮಾ ಬಾಷೆಯ ಕುರಿತು ಕುತೂಹಲ ಇರುವವರು ಇದನ್ನು ಓದಿ ಚರ್ಚಿಸಬಹುದು. ಈ ಮೂಲಕ ನನ್ನ ಚಿತ್ರಕತೆಗಳನ್ನು ಓದುವ ಅವಕಾಶವೂ ಅನೇಕರಿಗೆ ದೊರಕಬಹುದು.
ಇಲ್ಲಿರುವ ಕತೆಯ ಹೆಸರು ‘ಪ್ರೀತಿ ಎಂಬ ಅಚ್ಚರಿ!’ ಇದೊಂದು ನಾನೇ ನೋಡಿದ ಘಟನೆ. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಈ ಕತೆಯಲ್ಲಿ ಬರುವ ಪ್ರಮುಖ ಪಾತ್ರಧಾರಿಗಳು ನನಗೆ ಪರಿಚಿತರಾದರು. ಅವರು ಹೇಳಿದ ವಿವರಗಳಿಗೆ ನಮ್ಮ ಒಂದಷ್ಟು ಒಗ್ಗರಣೆ ಬೆರೆಸಿ ಕತೆ ಆಗಿಸಿದ್ದೇವೆ.<img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=189&amp;subd=bsuresha&amp;ref=&amp;feed=1" width="1" height="1" />]]></description>
			<content:encoded><![CDATA[<p><strong>ಕಥಾ ಸಾರಾಂಶ</strong></p>
<p>ಅನು ಮತ್ತು ಸರ್ವೋತ್ತಮ ಪ್ರೀತಿಸಿ ಮದುವೆಯಾದವರು. ಅವರದು ಅನ್ಯೋನ್ಯ ದಾಂಪತ್ಯ. ಇವರು ಮದುವೆಯಾಗುವ ಕಾಲದಲ್ಲಿ ಇವರನ್ನು ವಿರೋಧಿಸಿದ್ದ ಅವರಿಬ್ಬರ ಮನೆಯವರುಗಳ ಬೆಂಬಲವಿಲ್ಲದೆಯೇ ಈ ದಂಪತಿಗಳು ನಗುನಗುತ್ತಾ ತಮ್ಮ ಸಣ್ಣ ಆದಾಯದಲ್ಲಿಯೇ ನೆಮ್ಮದಿಯಾಗಿ ಬದುಕುತ್ತಿರುವವರು. ಕೆಲಸ ಮುಗಿಸಿ ಬರುವ ಗಂಡನಿಗಾಗಿ ರುಚಿರುಚಿಯಾದ ಅಡಿಗೆ ಮಾಡಿಟ್ಟು, ಅವನು ಬಂದೊಡನೆ ಅವನೊಂದಿಗೆ ಸರಸದ ಮಾತಾಡುತ್ತಲೇ ತಮ್ಮ ಪ್ರೇಮ ಪ್ರಕರಣದ ಘಟನೆಗಳನ್ನು ನೆನೆಸಿಕೊಳ್ಳುತ್ತಾ ಅನು-ಸರ್ವೋತ್ತಮ ಇಬ್ಬರೂ ಅಪರೂಪದ ಜೋಡಿಗಳಾಗಿ ಬದುಕುತ್ತಾ ಇದ್ದವರು. ಸರ್ವೋತ್ತಮನಿಗೆ ತಾನು ದುಡಿಯುತ್ತಿರುವ ಟ್ರಾನ್ಸ್‌ಪೋರ್ಟ್ ಆಫೀಸಿನಲ್ಲಿ ಸಣ್ಣ ಸಂಬಳದ ಕೆಲಸ. ಆತ ತನ್ನ ಮಡದಿಗೆ ಆ ಕೆಲಸದ ವಿವರಗಳನ್ನು ಹೇಳುತ್ತಲೇ ತಾನೊಬ್ಬ ದೊಡ್ಡ ಹೀರೋ ಎಂದು ಭಾವಿಸಿಕೊಂಡು ಬದುಕುತ್ತಾ ಇದ್ದಾನೆ. ಇಂತಹ ದಂಪತಿಗಳು ಒಂದು ರಾತ್ರಿ ವಿಚಿತ್ರ ಆಘಾತಕ್ಕೆ ಸಿಕ್ಕಿಬೀಳುತ್ತಾರೆ. ಕೆಮ್ಮುವ ಅನುವಿಗೆ ಜೊತೆಯಲ್ಲಿ ರಕ್ತವೂ ಬಾಯಿಂದ ಸುರಿದಾಗ ಡಾಕ್ಟರಲ್ಲಿಗೆ ಹೋಗುತ್ತಾರೆ. ಡಾಕ್ಟರ್ ಅನುವಿಗೆ ಬ್ಲಡ್ ಕ್ಯಾನ್ಸರ್ ಆಗಿದೆ ಎಂದು ತಿಳಿಸುತ್ತಾರೆ. ಅವರ ಪ್ರೀತಿಯ ನೆಲೆಯಲ್ಲಿ ಇದು ದೊಡ್ಡ ವಿಷಯ ಅಲ್ಲ ಎಂದು ಭಾವಿಸಿ ಔಷಧೋಪಚಾರಕ್ಕೆ ಸರ್ವೋತ್ತಮ ಮತ್ತು ಅನು ಸಿದ್ಧವಾಗುತ್ತಾರೆ.</p>
<p><span id="more-189"></span><br />
ಆದರೆ ಅನುವಿನ ಆಸ್ಪತ್ರೆಯ ಖರ್ಚುಗಳನ್ನು ನಿಭಾಯಿಸಲಾಗದ ಸರ್ವೋತ್ತಮ ನಿಧಾನವಾಗಿ ಅನುವಿನಿಂದ ವಿಮುಖನಾಗ ತೊಡಗುತ್ತಾನೆ. ಅವಳೊಂದಿಗೆ ತಾನು ಪ್ರತಿಭಾರಿಯೂ ಆಸ್ಪತ್ರೆಗೆ ಹೋಗುತ್ತಿದ್ದವನು ಅದರಿಂದ ತಪ್ಪಿಸಿಕೊಳ್ಳಲು ಆರಂಭಿಸುತ್ತಾನೆ. ಈ ನಡುವೆ ಅನು ಸಹ ಮೊದಲಿನಷ್ಟು ಉತ್ಸಾಹ ಇಲ್ಲದವಳಾಗುತ್ತಾಳೆ. ಅವಳಿಗೆ ನೀಡುವ ಕೆಮೊಥೆರಪಿಯಲ್ಲಿ ಅವಳ ಮುಖವೂ ಸಹ ಕಪ್ಪಿಡುತ್ತಾ ಹೋಗುತ್ತದೆ. ಕೂದಲು ಉದುರ ತೊಡಗುತ್ತದೆ. ಅದಕ್ಕಾಗಿ ಅವಳು ತಲೆಗೆ ಬಟ್ಟೆ ಕಟ್ಟಿಕೊಂಡು ಓಡಾಡಲು ಆರಂಭಿಸುತ್ತಾಳೆ. ಈ ನಡುವೆ ಅದೇ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ನಿಂದಲೇ ನರಳುತ್ತಾ ಇರುವ ರೋಗಿ ವಿಶ್ವಾಸ್‌ನ ಪರಿಚಯ ಅನುವಿಗೆ ಆಗುತ್ತದೆ. ಅವರಿಬ್ಬರೂ ಒಂದೇ ದೋಣಿಯ ಪಯಣಿಗರು. ಆದರೆ ಅನುವಿಗೆ ಬೆಳೆದಿದ್ದ ನೆಗೆಟಿವ್ ಮೈಂಡ್‌ಸೆಟ್‌ಗಿಂತ ಭಿನ್ನವಾಗಿ ವಿಶ್ವಾಸ್ ಪಾಸಿಟಿವ್ ಆಗಿರುವವನು. ಆತನ ಮಾತು ಕೇಳುತ್ತಾ ನಗು ಮರೆತಿದ್ದ ಅನುವಿನ ಮುಖದಲ್ಲೂ ನಗು ಸುಳಿಯತೊಡಗುತ್ತದೆ. ಇದೇ ಸಮಯದಲ್ಲಿ ಒಂದು ದಿನ ಪರಊರಿಗೆ ಕೆಲಸದ ಮೇಲೆ ಹೋಗುತ್ತೇನೆ ಎಂದು ಹೊರಟ ಸರ್ವೋತ್ತಮ ಮತ್ತೆ ಮರಳುವುದೇ ಇಲ್ಲ. ತಂದೆ-ತಾಯಿಯನ್ನೂ ಬಿಟ್ಟು ಪ್ರೀತಿಸಿದವನ ಜೊತೆಗೆ ಬಂದಿದ್ದ ಅನು ದಿಢೀರನೆ ಒಂಟಿಯಾಗುತ್ತಾಳೆ. ಆಸ್ಪತ್ರೆಯ ಖರ್ಚು, ಮನೆಯ ಖರ್ಚು ನಿಭಾಯಿಸಲಾಗದೆ ಒದ್ದಾಡುತ್ತಾಳೆ.<br />
ಆಸ್ಪತ್ರೆಯಲ್ಲಿ ಅವಳಿಗೆ ಸಿಗುವ ವಿಶ್ವಾಸ ತನ್ನ ಮಡದಿ ತನ್ನಿಂದ ಡಿವೋರ್ಸ್ ತೆಗೆದುಕೊಂಡದ್ದನ್ನು ದೊಡ್ಡ ಜೋಕ್ ಎಂಬಂತೆ ಹೇಳುತ್ತಾನೆ. ಅನು ಅವನ ತಮಾಷೆಗೆ ನಗಲಾಗದೆ ತನ್ನ ಗಂಡನೂ ಸಹ ತನ್ನಿಂದ ದೂರ ಸರಿದ ವಿಷಯ ತಿಳಿಸುತ್ತಾಳೆ. ತಾವು ಪ್ರೀತಿಸಿ ಮದುವೆಯಾದವರೂ ಎಂಬುದೇ ಸುಳ್ಳಾಯಿತು ಎನ್ನುತ್ತಾಳೆ. ತನ್ನ ತಂದೆ-ತಾಯಿಯನ್ನೂ ಬಿಟ್ಟು ತಾನು ಇಂತಹವನ ಜೊತೆಗೆ ಬಂದು ತಪ್ಪು ಮಾಡಿದೆ ಎಂದು ಕೊರಗುತ್ತಾಳೆ. ಅವಳನ್ನು ತಮಾಷೆಯ ಮೂಲಕವೇ ವಿಶ್ವಾಸ ಸಂತೈಸುತ್ತಾನೆ.<br />
ಅವಳ ಆಸ್ಪತ್ರೆಯ ಖರ್ಚಿನ ಬಿಲ್ಲು ಕಟ್ಟಲು ಹೋದವಳಿಗೆ ಯಾರೋ ಅದನ್ನು ಕಟ್ಟಿದ್ದಾರೆ ಎಂದು ತಿಳಿದು ಅನುವಿಗೆ ಅಚ್ಚರಿಯಾಗುತ್ತದೆ. ಯಾರದು ಎಂದು ತಿಳಿಯುವ ಅವಳ ಪ್ರಯತ್ನಕ್ಕೆ ಉತ್ತರ ಸಿಗುವುದಿಲ್ಲ.<br />
ನಿಧಾನವಾಗಿ ತನ್ನ ಮನೆಯ ಬಾಡಿಗೆಯನ್ನೂ ಯಾರೋ ಕಟ್ಟಿದ್ದಾರೆ, ತಾನು ದಿನಸಿ ತರುತ್ತಿದ್ದ ಅಂಗಡಿಗೂ ಯಾರೋ ದುಡ್ಡು ಕೊಟ್ಟಿದ್ದಾರೆ ಎಂದು ತಿಳಿದು ಅನುವಿಗೆ ಮತ್ತೆ ಅಚ್ಚರಿಯಾಗುತ್ತದೆ.<br />
ಆಸ್ಪತ್ರೆಯಲ್ಲಿ ಸಿಗುವ ವಿಶ್ವಾಸನಿಗೆ ತನ್ನ ಅಚ್ಚರಿಯನ್ನು ಹೇಳುತ್ತಾಳೆ. ಅವನು ಅದನ್ನು ಸಹ ತಮಾಷೆ ಎಂಬಂತೆ ಮಾತಾಡುತ್ತಾನೆ.<br />
ದಿನಗಳೆದಂತೆ ತನ್ನ ಬಿಲ್ಲು ಕಟ್ಟುತ್ತಾ ಇರುವವನು ವಿಶ್ವಾಸ ಎಂದು ಅನುವಿಗೆ ತಿಳಿಯುತ್ತದೆ. ಅನು ಸಿಟ್ಟಾಗುತ್ತಾಳೆ. ತಾನೇ ವಿಶ್ವಾಸನ ಬಳಿಗೆ ಸಾಗಿ ನೀವು ನನ್ನನ್ನ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಾ ಇದ್ದೀರಾ ಎಂದೆಲ್ಲಾ ಜಗಳವಾಡುತ್ತಾಳೆ.<br />
ಮನೆಗೆ ಬಂದು ದುಃಖದಲ್ಲಿ ಮಲಗಿದ್ದವಳಿಗೆ ತಾನು ವಿಶ್ವಾಸನನ್ನು ಬಯ್ಯಬಾರದಿತ್ತೇ ಎಂಬ ಅನುಮಾನ ಕಾಡುತ್ತದೆ. ಆದರೂ ಮುಗುಮ್ಮಾಗಿಯೇ ಇರುತ್ತಾಳೆ.<br />
ಕೆಲದಿನದ ನಂತರ ಆಸ್ಪತ್ರೆಯಲ್ಲಿ ವಿಶ್ವಾಸ ಎದುರಿಗೆ ಸಿಕ್ಕು ಅವರಿಬ್ಬರ ನಡುವೆ ಜಗಳವೇ ಆಗಿಲ್ಲ ಎಂಬಂತೆ ತಮಾಷೆ ಮಾಡುತ್ತಾ ಮಾತಾಡುತ್ತಾನೆ. ಅನು ಅವನನ್ನು ನೀವ್ಯಾಕೆ ಹಾಗೆ ಮಾಡಿದಿರಿ ಎಂದು ಕೇಳುತ್ತಾಳೆ. ವಿಶ್ವಾಸ ಯಾವತ್ತಿದ್ದರೂ ಸಾಯೋನಿಗೆ ದುಡ್ಡಿನ ಅವಶ್ಯಕತೆ ಇರೋಲ್ಲ ಅಲ್ವಾ ಎಂದು ಆ ಮಾತನ್ನೂ ಅತ್ಯಂತ ಸರಸವಾಗಿ ಹೇಳುತ್ತಾನೆ. ತನಗೆ ಉಪಯೋಗ ಆಗದೆ ಉಳಿದಿದ್ದ ಹೆಚ್ಚುವರಿಯನ್ನು ನಿಮ್ಮ ಲೆಕ್ಕಕ್ಕೆ ಜಮಾ ಮಾಡಿ ದುಡ್ಡು ಕಾಪಾಡುವ ವರಿಯಿಂದ ತಪ್ಪಿಸಿಕೊಂಡೆ ಎಂದು ನಗುತ್ತಾನೆ. ಅನು ಬಯ್ಯುತ್ತಾ ಬುಟ್ಟಿಗೆ ಹಾಕಿಕೊಳ್ಳುವ ಆರೋಪ ಮಾಡಿದ್ದನ್ನು ಸಹ ತಮಾಷೆ ಮಾಡುತ್ತಾನೆ. ಸಾಯೋನಿಗೆ ಜಗತ್ತಿನ ಎಲ್ಲರ ಮೇಲೆ ಪ್ರೀತಿ ಇರುತ್ತೆ ಅಂತಾನೆ. ಹಾಗೆಯೇ ನಿಮ್ಮ ಮೇಲೂ ಪ್ರೀತಿ ಇದೆ. ಆ ಪ್ರೀತಿ ಮಲಗುವ ಮನೆಯಲ್ಲಿ ಕೊನೆಯಾಗುವಂತಹುದಲ್ಲ ಎನ್ನುತ್ತಾನೆ. ಅನುವಿಗೆ ಅವನ ಮಾತು, ತಮಾಷೆ ಮತ್ತಷ್ಟು ಅಚ್ಚರಿಗಳನ್ನು ನೀಡುತ್ತದೆ.<br />
ಅನು ತನ್ನ ಮನೆಯಲ್ಲಿ ಅವನ ಮಾತುಗಳ ಆನಂದದಲ್ಲಿ ಇರುವಾಗಲೇ ಅವಳಿಗೊಂದು ಕಾಗದ ಬರುತ್ತದೆ. ಆ ಕಾಗದವು ಅವಳಿಗೆ ಯಾವುದೋ ಕಂಪೆನಿಯಲ್ಲಿ ಕೆಲಸ ಸಿಕ್ಕಿದೆ ಎಂದು ತಿಳಿಸುತ್ತದೆ. ತನ್ನ ಅನಾರೋಗ್ಯದ ಕಾಲದಲ್ಲಿ ತನಗಾಗಿ ಕೆಲಸಕ್ಕೆ ಅರ್ಜಿ ಹಾಕಿದವರು ಯಾರು ಎಂಬ ಗೊಂದಲದಲ್ಲಿ ಇರುವವಳಿಗೆ ಇದು ವಿಶ್ವಾಸನದೇ ಕೆಲಸ ಎನಿಸುತ್ತದೆ.<br />
ಮತ್ತೆ ಆಸ್ಪತ್ರೆಯಲ್ಲಿ ವಿಶ್ವಾಸನನ್ನ ಭೇಟಿ ಮಾಡಿ ಯಾಕೆ ಹೀಗೆ ಎನ್ನುತ್ತಾಳೆ. ನನಗೆ ಡೇಟ್ ಕೊಟ್ಟಿದ್ದಾರೆ. ಸಾವು ಈ ವರ್ಷದ ಒಳಗೆ ಬರಲಿದೆ. ನನ್ನ ಕೆಲಸವನ್ನ ನಿಮಗೆ ಕೊಡಬಹುದು ಎಂದು ನಾನೇ ಬರೆದೆ ಎನ್ನುತ್ತಾನೆ. ಅನು ಅಚ್ಚರಿಯಲ್ಲಿರುವಾಗಲೇ ಅವಳ ಖಾಯಿಲೆ ಬಹುತೇಕ ಗುಣವಾಗಿದೆ ಎನ್ನುವ ಡಾಕ್ಟರ್. ಅನು ಮತ್ತೆ ವಿಶ್ವಾಸನೊಂದಿಗೆ ಮಾತಾಡಲೆಂದು ನೋಡುವಾಗ ಆತ ಕಾಣುವುದಿಲ್ಲ. ಆತನನ್ನು ಹುಡುಕುತ್ತಾ ಹೋಗುವ ಅನು.<br />
ವಿಶ್ವಾಸ ಅವನ ಮನೆಯಲ್ಲಿ ಸಿಗುತ್ತಾನೆ. ದೊಡ್ಡ ಮನೆಯಲ್ಲಿ ಒಬ್ಬಂಟಿಯಾಗಿರುವ ವಿಶ್ವಾಸ. ಅನು ಇನ್ನು ಮುಂದೆ ತಾನೂ ಈ ಮನೆಯಲ್ಲಿಯೇ ಇರುತ್ತೇನೆ ಎನ್ನುತ್ತಾಳೆ. ಯಾಕಾಗಿ ಎನ್ನುವ ವಿಶ್ವಾಸನಿಗೆ ನಮ್ಮಿಬ್ಬರಲ್ಲಿ ಮೊದಲು ಯಾರು ಹೋಗುತ್ತಾರೋ ತಿಳಿಯದು. ಅಲ್ಲಿಯವರೆಗೆ ನಗುನಗುತ್ತಾ ಬದುಕೋಕ್ಕೆ ಕಂಪೆನಿ ಬೇಕು ಅಲ್ವಾ ಎನ್ನುತ್ತಾಳೆ. ವಿಶ್ವಾಸ ಅಚ್ಚರಿಯಲ್ಲಿ ಉಳಿಯುತ್ತಾನೆ.<br />
ಅನು ವಿಶ್ವಾಸನ ಆರೈಕೆ ಮಾಡುತ್ತಲೇ ತನ್ನ ಕೆಲಸಕ್ಕೂ ಹೋಗಲು ಆರಂಭಿಸುತ್ತಾಳೆ.<br />
ಒಂದು ದಿನ ವಿಶ್ವಾಸನ ಖಾಯಿಲೆ ತೀರಾ ಉಲ್ಬಣಗೊಂಡಾಗ ಆತನ ಸೇವೆ ಮಾಡುವ ಅನುವಿಗೆ ನೀವು ನನ್ನ ಸೇವೆ ಯಾಕೆ ಮಾಡುತ್ತಿದ್ದೀರಿ? ನನ್ನನ್ನ ಬುಟ್ಟಿಗೆ ಹಾಕಿಕೊಳ್ತಾ ಇದ್ದೀರಾ ಎಂದು ಕೇಳುವ ವಿಶ್ವಾಸನ ತಮಾಷೆಯ ಮಾತಿಗೆ ಅಷ್ಟೇ ತಮಾಷೆಯಾಗಿ ಯಾಕಾಗಬಾರದು ನನ್ನ ಗಂಡ ನನ್ನಿಂದ ದೂರ ಹೋದ, ನಿಮ್ಮ ಮನೆಯಾಕೆ ನಿಮ್ಮಿಂದ ದೂರ ಸರಿದಿದ್ದಾಳೆ. ನಾವಿಬ್ಬರೂ ಜೊತೆಯಾಗಿ ಬದುಕಬಹುದಲ್ಲಾ ಎನ್ನುವ ಅನು. ಜನ ನೂರು ಮಾತಾಡ್ತಾರಲ್ಲ ಎನ್ನುವ ವಿಶ್ವಾಸನಿಗೆ ಅರಿಸಿನದ ಕೊನೆ ಕಟ್ಟು ನನ್ನ ಕೊರಳಿಗೆ ಇದನ್ನು ಕಟ್ಟಿ ಜನರ ಮಾತೂ ತಪ್ಪುತ್ತದೆ ಎನ್ನುತ್ತಾಳೆ. ವಿಶ್ವಾಸ ಅಚ್ಚರಿಯಲ್ಲಿ ಉಳಿಯುತ್ತಾನೆ.<br />
ಮಾರನೆಯ ದಿನ ಆಸ್ಪತ್ರೆಯಲ್ಲಿ ಡಾಕ್ಟರ್ ಎದುರಿಗೆ ಅನು-ವಿಶ್ವಾಸ ಹಾರ ಬದಲಿಸಿಕೊಳ್ಳುತ್ತಾರೆ. ಇಬ್ಬರೂ ನಗುತ್ತಾ ಹೊರಡುವಾಗ ‘ಅವರಿಬ್ಬರೂ ಸುಖವಾಗಿದ್ದರೂ ಸಾಯುವ ವರೆಗೆ’ ಎಂಬ ಶೀರ್ಷಿಕೆ ಬರುತ್ತದೆ.<br />
* * *</p>
<p>ಬಿ.ಸುರೇಶ ಅವರ<br />
<strong>ಪ್ರೀತಿ ಎಂಬ ಅಚ್ಚರಿ!</strong><br />
<strong>ದೃಶ್ಯ ಕ್ರಮ</strong><br />
<span style="text-decoration:underline;"><strong>ದೃಶ್ಯ ೧/ ಹಗಲು-ರಾತ್ರಿ/ ಒಳಾಂಗಣ/ ಅನು ಮನೆ</strong></span><br />
ಮನೆಯೊಳಗೆ ಸೋತವಳಂತೆ ಕುಳಿತಿರುವ ಅನುವಿನ ಚಿತ್ರಿಕೆಗಳು.<br />
ಅವಳು ವಾಂತಿ ಮಾಡಿಕೊಳ್ಳುವಾಗ ಬೀಳುವ ರಕ್ತ.<br />
ಯಾರೇ ಬಾಗಿಲು ಬಡಿದರೂ ತೆಗೆಯದೇ ಮನೆಯ ಒಳಗೆ ಕುಳಿತಿರುವ ಅನು.<br />
ಹಸಿವಾದಾಗ ಖಾಲಿ ಪಾತ್ರೆಗಳನ್ನು ನೋಡುತ್ತಾ, ನೀರು ಕುಡಿಯುತ್ತಾ ಸಮಯ ಕಳೆವ ಅನು.<br />
ಯಾರ‍್ಯಾರೋ ಬಾಗಿಲು ಬಡಿದರೂ ತೆಗೆಯದೇ ಮನೆಯೊಳಗೇ ಕುಳಿತಿರುವ ಅನು. (ಮನೆಯ ಮಾಲೀಕ/ ಮಾಲೀಕನ ಮಡದಿ/ ಹಾಲಿನಾಕೆ/ ದಿನಸಿ ಅಂಗಡಿಯವರು ಹೀಗೇ ನಾಲ್ಕೈದು ಜನ ವಿಭಿನ್ನ ಸಮಯಗಳಲ್ಲಿ ಮನೆಯ ಬಾಗಿಲು ಬಡಿಯುತ್ತಾರೆ)<br />
ಇಂತಹ ಅನೇಕ ಚಿತ್ರಿಕೆಗಳ ಮೇಲೆ ಆರಂಭಿಕ ಶೀರ್ಷಿಕೆಗಳು ಬರುತ್ತವೆ.<br />
ಅಂತಿಮವಾಗಿ ಅನುವಿನ ಬಳಿಗೆ ಸಾಗುವ ಕ್ಯಾಮೆರಾ. ಅನು ಸೋತವಳಂತೆ ಹಾಸಿಗೆಯಲ್ಲಿ ಮುದುಡಿ ಮಲಗಿದ್ದಾಳೆ.<br />
<span style="text-decoration:underline;"><strong>ದೃಶ್ಯ ೨/ ಹಗಲು/ ಹೊರಾಂಗಣ/ ರಸ್ತೆ</strong></span><br />
ಸರ್ವೋತ್ತಮ ಅನುವಿಗೆ ಐ ಲವ್ ಯೂವ್ ಅನ್ನುತ್ತಾನೆ. ಅನು ನಾಚುತ್ತಾಳೆ. ಪಾರ್ಕಿನ ಪಕ್ಕದ ಬೀದಿಯಲ್ಲಿ ನಡೆಯುವ ಈ ಮಾತುಗಳಲ್ಲಿ ನಮ್ಮನೆಯೋರು ಒಪ್ಪಲ್ಲ ಎನ್ನುವ ಅನು. ಸರ್ವೋತ್ತಮ ಯಾರೊಪ್ಪದಿದ್ದರೂ ನಾನು ಅವಳ ಕೈ ಬಿಡುವುದಿಲ್ಲ ಎನ್ನುತ್ತಾನೆ. ಪ್ರೀತಿ ಯಾವತ್ತಿದ್ದರೂ ಗೆಲ್ಲುತ್ತೆ ಎನ್ನುತ್ತಾನೆ. ಅನು ಸಂಭ್ರಮದಲ್ಲಿ ಉಳಿಯುತ್ತಾಳೆ.<br />
<span style="text-decoration:underline;"><strong>ದೃಶ್ಯ ೨ಎ</strong></span><br />
ಅನು ಮನೆಯಲ್ಲಿ ಸಂಕಟ ಪಡುತ್ತಾಳೆ. ವಾಂತಿ ಮಾಡಿದವಳಿಗೆ ರಕ್ತ ಹೋಗುತ್ತದೆ. ಸಂಕಟದಿಂದ ಕುಸಿದು ಕೂರುವವಳ ಬಳಿಗೆ ಸಾಗುವ ಕ್ಯಾಮೆರಾ<br />
<span style="text-decoration:underline;"><strong>ದೃಶ್ಯ ೩/ ಹಗಲು/ ಹೊರಾಂಗಣ/ ಹೋಟೆಲ್</strong></span><br />
ತನ್ನ ತಂದೆ ಈ ಮದುವೆಗೆ ಒಪ್ಪಲಿಲ್ಲ ಎನ್ನುವ ಅನು. ನಮ್ಮ ಮನೆಯಲ್ಲೂ ಅದೇ ಕತೆ ಎನ್ನುವ ಸರ್ವೋತ್ತಮ. ಹಾಗಾದರೆ ಈಗೇನು ಎನ್ನುವ ಅನು. ಇನ್ನೇನು ನನಗೆ ಕೆಲಸ ಇದೆ. ನಿನಗೂ ಕೆಲಸ ಇದೆ. ಮನೆಯವರ ಮಾತು ಕೇಳೋದ್ಯಾಕೆ ಮದುವೆ ಆಗೋಣ ಎನ್ನುವ ಸರ್ವೋತ್ತಮ. ಅನು ಯಾವಾಗ ಎನ್ನುತ್ತಾಳೆ. ಮುಂದಿನ ತಿಂಗಳು ಸಂಬಳ ಬಂದ ತಕ್ಷಣ ಎನ್ನುವ ಸರ್ವ.<br />
<span style="text-decoration:underline;"><strong>ದೃಶ್ಯ ೩ಎ</strong></span><br />
ಅನು ಮನೆಯಲ್ಲಿ ಮಂಚದ ಮೇಲೆ ಮಲಗಿದ್ದಾಳೆ. ಅವಳಿಗೆ ಸಂಕಟವಾಗುತ್ತದೆ. ಮರಳಿ ಅವಳ ಸಮೀಪಕ್ಕೆ ಸಾಗುವ ಕ್ಯಾಮೆರಾ<br />
<span style="text-decoration:underline;"><strong>ದೃಶ್ಯ ೪/ ಹಗಲು/ ಹೊರಾಂಗಣ/ ರಸ್ತೆ</strong></span><br />
ಅನುವಿನ ಗೆಳತಿ ಈ ವಯಸ್ಸಿಗೆ ಮದುವೇನಾ ಎಂದು ರೇಗಿಸುತ್ತಾಳೆ. ಅನು ತನ್ನ ಸಮಜಾಯಿಷಿ ಹೇಳುತ್ತಾಳೆ. ಆದರೂ ಅಪ್ಪ-ಅಮ್ಮನನ್ನೂ ಬಿಟ್ಟು ಯಾವುದೋ ಹುಡುಗನ ಹಿಂದೆ ಹೋಗ್ತೀನಿ ಅಂತೀಯಲ್ಲಾ ನಾಳೆ ಅವನು ಕೈ ಕೊಟ್ಟರೆ ಆಸರೆ ಯಾರು ಎನ್ನುವ ಗೆಳೆತಿ. ಅನುವಿಗೆ ತನ್ನ ಪ್ರೀತಿಯ ಬಗ್ಗೆ ವಿಶೇಷ ನಂಬಿಕೆ ಇದೆ.<br />
<span style="text-decoration:underline;"><strong>ದೃಶ್ಯ ೪ಎ</strong></span><br />
ರಾತ್ರಿ ತನ್ನ ಮನೆಯಲ್ಲಿ ಸಂಕಟ ಪಡುವ ಅನು<br />
<span style="text-decoration:underline;"><strong>ದೃಶ್ಯ ೫/ ಹಗಲು/ ಹೊರಾಂಗಣ/ ದೇವಸ್ಥಾನದಲ್ಲಿ</strong></span><br />
ಅನು ಮತ್ತು ಸರ್ವ ಹಾರ ಬದಲಿಸಿಕೊಳ್ಳುತ್ತಾರೆ. ಜೊತೆಯಲ್ಲಿರುವ ಗೆಳತಿಗೆ ಸಿಹಿ ತಿನ್ನಿಸುತ್ತಾರೆ. ಮುಂದೆ ಎನ್ನುವ ಗೆಳತಿ. ಸರ್ವ ತಾನು ಮನೆ ನೋಡಿದ್ದೇನೆ ಎನ್ನುತ್ತಾನೆ.<br />
<span style="text-decoration:underline;"><strong>ದೃಶ್ಯ ೬/ ಹಗಲು/ ಹೊರಾಂಗಣ/ ಅನು ಮನೆ</strong></span><br />
ಹೊಸ ಮನೆಗೆ ಬರುವ ದಂಪತಿಗಳನ್ನು ತಾವೇ ಆರತಿ ಮಾಡಿ ಕರೆದುಕೊಳ್ಳುವ ಮನೆಯ ಮಾಲೀಕರ ಮಡದಿ. ಮಾಲೀಕರ ಮಡದಿ ಮಂಜುಳಮ್ಮನಿಗೆ ಈ ಹುಡುಗರನ್ನು ಕಂಡರೆ ಸಂತೋಷ ಅನ್ನುವುದಕ್ಕಿಂತ ಕೇಳಿದಷ್ಟು ಅಡ್‌ವಾನ್ಸ್ ಕೊಟ್ಟಿದ್ದಾರೆ ಎಂಬ ಸಂತಸ. ಇಬ್ಬರೂ ಸರಿಯಾಗಿ ಬಾಡಿಗೆ ಕೊಟ್ಟ್‌ಕೊಂಡಿರಿ ಎನ್ನುತ್ತಾರೆ.<br />
<span style="text-decoration:underline;"><strong>ದೃಶ್ಯ ೭/ ಹಗಲು/ ಒಳಾಂಗಣ/ ಅನು ಮನೆ</strong></span><br />
ಹೊಸ ಮನೆಯಲ್ಲಿ ನವದಂಪತಿಗಳ ಸರಸ. ನಾಳೆಯಿಂದ ಕೆಲಸಕ್ಕೆ ಹೋಗಬೇಕಲ್ಲಾ ಎಂಬ ಚಿಂತೆ. ರಜೆ ಹಾಕಿದರೆ ಸಂಪಾದನೆ ಸಾಲುವುದಿಲ್ಲ ಎಂಬ ಮಾತು. ಆಗಲೇ ಕೆಮ್ಮುವ ಅನು. ಗಾರ್ಮೆಂಟ್ ಫ್ಯಾಕ್ಟರಿಯ ಧೂಳಿನಿಂದ ನನಗೆ ಸಿಕ್ಕ ಬಳುವಳಿ ಎಂದು ತಮಾಷೆ ಮಾಡುವ ಅನು. ಸರ್ವ ಕೂಡ ಆರಾಮಾಗುತ್ತಾನೆ.<br />
<span style="text-decoration:underline;"><strong>ದೃಶ್ಯ ೮/ ಮಾಂಟಾಜ್</strong></span><br />
ನವದಂಪತಿಗಳು ಅವಸರದಿಂದ ಫ್ಯಾಕ್ಟರಿಗೆ ಹೋಗುವುದು. ರಸ್ತೆಯ ಮೂಲೆಯಲ್ಲಿ ಗಂಡನಿಗೆ ಕಾಯುತ್ತಾ ನಿಂತವಳಿಗೆ ಸಿಗುವ ಸರ್ವ. ತರಕಾರಿ ಕೊಳ್ಳುವುದು. ಮನೆಯಲ್ಲಿ ಇಬ್ಬರೂ ಸೇರಿ ಅಡಿಗೆ ಮಾಡುವುದು. ಆಗಾಗ ಕೆಮ್ಮುವ ಅನು ನೀರು ಕುಡಿಯುವುದು. ಅವರಿಬ್ಬರ ಸಂಸಾರ ಕುರಿತಂತೆ ಗೆಳತಿಯ ತಮಾಷೆ. ಪ್ರೀತಿ ಇದ್ದಾಗ ಯಾವುದೂ ಕಷ್ಟ ಅಲ್ಲ ಎನ್ನುವ ಅನು.<br />
<span style="text-decoration:underline;"><strong>ದೃಶ್ಯ ೮ಎ</strong></span><br />
ತನ್ನ ಮಾತು ಸ್ವತಃ ಸುಳ್ಳಾಯಿತು ಎಂದು ದುಃಖಿಸುವ ಅನು<br />
<span style="text-decoration:underline;"><strong>ದೃಶ್ಯ ೯/ ರಾತ್ರಿ/ ಒಳಾಂಗಣ/ ಅನು ಮನೆ</strong></span><br />
ಮನೆಯಲ್ಲಿ ಗಂಡನ ತಮಾಷೆಯ ನಡುವೆ ಮನೆಗೆಲಸ ಮಾಡುತ್ತಿರುವ ಅನುವಿಗೆ ಭಯಂಕರ ಕೆಮ್ಮು ಬರುತ್ತದೆ. ಈ ಬಾರಿ ರಕ್ತ ಕಾರಿಕೊಳ್ಳುತ್ತಾಳೆ. ಗಾಬರಿಯಾಗುವ ಸರ್ವ. ಅವನಿಗೆ ಸ್ವತಃ ಧೈರ್ಯ ಹೇಳುವ ಅನು. ಡಾಕ್ಟರ್ ಬಳಿ ಹೋಗುವ ತೀರ್ಮಾನ<br />
<span style="text-decoration:underline;"><strong>ದೃಶ್ಯ ೧೦/ ಹಗಲು/ ಒಳಾಂಗಣ/ ಆಸ್ಪತ್ರೆ</strong></span><br />
ಆಸ್ಪತ್ರೆಯಲ್ಲಿ ಅನುವನ್ನು ಪರೀಕ್ಷಿಸಿರುವ ಡಾಕ್ಟರ್ ಸರ್ವನಿಗೆ ಮಾತಾಡುತ್ತಾ ಇದು ಬ್ಲಡ್ ಕ್ಯಾನ್ಸರ್ ಎನ್ನುತ್ತಾರೆ. ಇದನ್ನು ವಾಸಿ ಮಾಡಬಹುದು. ಸಮಯ ಬೇಕಾಗುತ್ತದೆ ಎನ್ನುತ್ತಾರೆ.<br />
<span style="text-decoration:underline;"><strong>ದೃಶ್ಯ ೧೧/ ಹಗಲು/ ಒಳಾಂಗಣ/ ಅನು ಮನೆ</strong></span><br />
ತನ್ನ ಮಡದಿಗಾಗಿ ದುಃಖಿಸುವ ಸರ್ವನಿಗೆ ಅನು ಧೈರ್ಯ ಹೇಳುತ್ತಾಳೆ. ಔಷಧಿಗಳನ್ನು ತೆಗೆದುಕೊಂಡರೆ ಎಲ್ಲವೂ ಸರಿಹೋಗುತ್ತದೆ ಎನ್ನುವ ಅನು.<br />
<span style="text-decoration:underline;"><strong>ದೃಶ್ಯ ೧೨/ ಹಗಲು/ ಹೊರಾಂಗಣ/ ರಸ್ತೆ</strong></span><br />
ಔಷಧಿಗಳನ್ನು ಕೊಂಡು ತರುವ ಸರ್ವ, ರಸ್ತೆಯಲ್ಲಿ ನಿಂತ ಅನುವಿಗೆ ನೀಡುತ್ತಾನೆ. ಇವತ್ತು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿಯೂ ರಕ್ತ ಬಂದು ಕೆಲಸ ಮಾಡಲಾಗಲಿಲ್ಲ. ನನ್ನ ಕೆಲಸ ಹೊಯಿತು ಎನ್ನುವ ಅನು. ಮುಂದೆ ಎಂದು ಗಾಬರಿಯಾಗುವ ಸರ್ವ. ನೋಡೋಣ ಯಾವುದಾದರೂ ದಾರಿ ಇರುತ್ತೆ ಎನ್ನುವ ಅನು.<br />
<span style="text-decoration:underline;"><strong>ದೃಶ್ಯ ೧೩/ ಹಗಲು/ ಒಳಾಂಗಣ/ ಅನು ಮನೆ</strong></span><br />
ಮನೆಯಲ್ಲಿ ಹಾಲು ದಿನಸಿ ತರಲು ದುಡ್ಡು ಸಾಲುತ್ತಿಲ್ಲ ಎಂಬ ಮಾತಾಡುವ ಸರ್ವ. ಅನು ಎರಡು ದಿನ ಕಡಿಮೆ ತಿಂದರಾಯಿತು ಎನ್ನುತ್ತಾಳೆ. ಆದರೆ ಎಷ್ಟು ದಿನ ಹೀಗೆ ಎನ್ನುವ ಸರ್ವ. ಪ್ರೀತಿ ಇರುವವರಿಗೆ ಇನ್ಯಾವುದೂ ಕಷ್ಟ ಆಗಬಾರದು ಅಲ್ವಾ? ಎನ್ನುವ ಅನು. ಸರ್ವ ಮಾತಿಲ್ಲದೆ ಹೊರಗೆ ಹೋಗುತ್ತಾನೆ.<br />
<span style="text-decoration:underline;"><strong>ದೃಶ್ಯ ೧೩ ಎ</strong></span><br />
ಅನು ಕೆಮ್ಮುತ್ತಾ ತಮಗೆ ಪ್ರೀತಿ ಇದ್ದದ್ದೇ ಸುಳ್ಳಾ ಹಾಗಾದ್ರೆ ಎನ್ನುತ್ತಾಳೆ. ಆಗಲೇ ಮತ್ಯಾರೋ ಬಾಗಿಲು ಬಡಿದು ಅವಳನ್ನು ಕೂಗುತ್ತಾರೆ. ಉತ್ತರಿಸದೆ ಹೆದರಿಕೆಯಿಂದಲೇ ಹೊರಗಿನ ದಿಕ್ಕಲ್ಲಿ ನೋಡುವ ಅನು. ಹೊರಗೆ ಮನೆಯ ಮಾಲೀಕರಾದ ಮಂಜುಳಮ್ಮ ಅನುವನ್ನು ಮತ್ತೆ ಮತ್ತೆ ಕೂಗುತ್ತಾ ಇದ್ದಾರೆ. ಈ ಗಂಡ &#8211; ಹೆಂಡತಿ ಅದೆಲ್ಲಿ ನಾಪತ್ತೆ ಆದರು ಎಂದವರು ಗೊಣಗುತ್ತಾ ಸಾಗುತ್ತಾರೆ. ಅನು ಅವರಿರುವವರೆಗೆ ಕೆಮ್ಮು ತಡೆದಿದ್ದವಳು ನಿರಾಳವಾಗಿ ಕೆಮ್ಮುತ್ತಾಳೆ. ನಿಟ್ಟುಸಿರಿಟ್ಟು ನೀರು ಕುಡಿಯುತ್ತಾಳೆ. ಮತ್ತೆ ನೆನಪಿಗೆ ಜಾರುತ್ತಾಳೆ.<br />
<span style="text-decoration:underline;"><strong>ದೃಶ್ಯ ೧೪/ ಆಸ್ಪತ್ರೆ – ಡಾಕ್ಟರ್ ಛೇಂಬರ್</strong></span><br />
ಆಸ್ಪತ್ರೆಗೆ ಒಬ್ಬಳೇ ಬಂದಿರುವ ಅನು ಡಾಕ್ಟರ್ ಬಳಿ ತಮ್ಮ ಆದಾಯ ಔಷಧಿ ಕೊಳ್ಳಲು ಸಾಲುತ್ತಿಲ್ಲ ಎನ್ನುತ್ತಾಳೆ. ಡಾಕ್ಟರ್ ಯಾವುದಾದರೂ ದಾನಿಯನ್ನು ಹುಡುಕಿ ಎನ್ನುತ್ತಾರೆ. ತನಗೆ ಈ ಊರಲ್ಲಿ ಯಾರ ಪರಿಚಯವೂ ಇಲ್ಲ ಎನ್ನುವ ಅನು. ಸಿಗ್ತಾರೆ ನೀನು ಆ ಬಗ್ಗೆ ಚಿಂತಿಸಬೇಡಮ್ಮಾ ಎನ್ನುವ ಡಾಕ್ಟರ್.<br />
<span style="text-decoration:underline;"><strong>ದೃಶ್ಯ ೧೪ಎ/ ಆಸ್ಪತ್ರೆ ಕಾರಿಡಾರ್</strong></span><br />
ಕಾರಿಡಾರ್‌ನಲ್ಲಿ ಬೇಸರದಿಂದ ನಡೆಯುವ ಅನುವಿಗೆ ಢೀ ಕೊಡುವ ವಿಶ್ವಾಸ್. ತಮಾಷೆ ಮಾಡುತ್ತಾನೆ. ಅನು ಅವನತ್ತ ಅಸಡ್ಡೆಯಿಂದ ನೋಡಿ ಹೊರಡುತ್ತಾಳೆ.<br />
<span style="text-decoration:underline;"><strong>ದೃಶ್ಯ ೧೫/ ಹಗಲು/ ಒಳಾಂಗಣ/ ಅನು ಮನೆ</strong></span><br />
ಮನೆಯೊಳಗೆ ಬರುವ ಅನುವಿಗೆ ಸಿಗುವುದೆಲ್ಲಾ ಖಾಲಿ ಪಾತ್ರೆಗಳು. ಅವಳು ಹಾಗೆ ತಡಕುವಾಗಲೇ ಅವಳಿಗೊಂದು ಪತ್ರ ಸಿಗುತ್ತದೆ. ತೆಗೆದು ನೋಡುವ ಅನು. ಸರ್ವ ಪತ್ರ ಬರೆದಿದ್ದಾನೆ. ತಾನು ಅವಳನ್ನು ಪ್ರೀತಿಸಿದೆ. ಮದುವೆಯಾದೆ. ಆದರೆ ಈಗ ಅವಳನ್ನು ನೋಡಿಕೊಳ್ಳುವಷ್ಟು ಚೈತನ್ಯ ತನಗಿಲ್ಲ. ನನ್ನ ಆದಾಯದಲ್ಲಿ ಅವಳ ಖಾಯಿಲೆಗೆ ಔಷಧಿ ತರುವುದು ಸಹ ಸಾಧ್ಯವಿಲ್ಲ. ಹೀಗಾಗಿ ತಾನು ಅನುವಿನಿಂದ ದೂರಕ್ಕೆ ಸಾಗುತ್ತಾ ಇದ್ದೇನೆ ಎಂದು ಬರೆದಿದ್ದಾನೆ. ಆ ಪತ್ರ ನೋಡಿ ಕಣ್ಣೀರಾಗುವ ಅನು. ದಿಕ್ಕು ತೋಚದಂತೆ ಅಳುತ್ತಾಳೆ.<br />
<span style="text-decoration:underline;"><strong>ದೃಶ್ಯ ೧೬/ ಹಗಲು/ ಒಳಾಂಗಣ/ ಅನು ಮನೆ</strong></span><br />
ಅನು ಮನೆಗೆ ಬಂದಿರುವ ಅವಳ ಗೆಳತಿ “ಅವಸರದಲ್ಲಿ ಮದುವೆಗೆ ಸಿದ್ಧವಾದಾಗಲೇ ನಾನು ಹೇಳಿದ್ದೆ. ಈಗೇನು ಮಾಡ್ತೀಯಾ?” ಎನ್ನುತ್ತಾಳೆ. ದಿಕ್ಕು ತೋಚದಂತೆ ಕುಳಿತಿರುವ ಅನುವಿಗೆ ಅಪ್ಪ-ಅಮ್ಮನನ್ನು ಸಂಪರ್ಕಿಸುವುದು ಅವಮಾನದ-ಸೋಲಿನ ಸಂಗತಿ. ಗೆಳತಿ ಅವಳಿಗೆ ಕೊಂಚ ದುಡ್ಡು ಕೊಟ್ಟು, ಮತ್ತೆ ಫ್ಯಾಕ್ಟಿರಿಯಲ್ಲಿ ಯಾವುದಾದರೂ ಕೆಲಸ ಸಿಗುತ್ತಾ ನೋಡ್ತೀನಿ ಎನ್ನುತ್ತಾಳೆ. ಅನು ಅವಳಿಗೆ ಉತ್ತರಿಸದ ಸ್ಥಿತಿಯಲ್ಲಿ ಬಿಮ್ಮನೆ ಕುಳಿತೇ ಇದ್ದಾಳೆ.<br />
<span style="text-decoration:underline;"><strong>ದೃಶ್ಯ ೧೬ಎ</strong></span><br />
ಅದೇ ಸ್ಥಿತಿಯಲ್ಲಿ ಕುಳಿತಿರುವ ಅನುವಿಗೆ ಎಚ್ಚರವಾಗುವಂತೆ ಮತ್ತೆ ಬಾಗಿಲ ಸದ್ದು. ಮಂಜುಳಮ್ಮ ಆವಳಿಗಾಗಿ ತಂದಿರುವ ಪಾಯಸದ ಕುರಿತು ಕೂಗುತ್ತಾರೆ. ಅನುಮಾನದಿಂದ ಕಿಟಕಿಯ ಸಂದಿಯಿಂದ ನೋಡುವ ಅನು. ಬಾಡಿಗೆ ಕೊಡದೆ ಇರುವವರಿಗೆ ಪಾಯಸ ಯಾಕೆ ಎನ್ನುವ ಅನು. ಬಾಡಿಗೆ ಬಂತಲ್ಲೇ ಹುಡುಗಿ ಎನ್ನುವ ಮಂಜುಳಮ್ಮ. ಅಚ್ಚರಿಯಲ್ಲಿ ಉಳಿಯುವ ಅನು.<br />
ಬಾಗಿಲು ತೆಗೆದು ಪಾಯಸ ಪಡೆಯುತ್ತಾ ಬಾಡಿಗೆ ಕೊಟ್ಟವರಾರು ಎನ್ನುತ್ತಾಳೆ. ಯಾರೋ ಆಸ್ಪತ್ರೆಯವರು ಬಂದಿದ್ದ್ರು. ಹಾಲಿನ ದುಡ್ಡು, ದಿನಸಿ ಅಂಗಡಿಯೋರ‍್ದು, ಬಾಡಿಗೆ ಬಾಕಿ ಎಲ್ಲಾ ಕೊಟ್ಟು ಹೋದ್ರು ಎನ್ನುತ್ತಾರೆ. ಬೆರಗಾಗುವ ಅನು.<br />
<span style="text-decoration:underline;"><strong>ದೃಶ್ಯ ೧೭/ ಹಗಲು/ ಒಳಾಂಗಣ/ ಆಸ್ಪತ್ರೆ</strong></span><br />
ಡಾಕ್ಟರನ್ನ ಭೇಟಿ ಮಾಡಿ ನಿಮ್ಮ ಸಹಾಯಕ್ಕೆ ಥ್ಯಾಂಕ್ಸ್ ಎನ್ನುವ ಅನುವಿಗೆ ಸಹಾಯ ಮಾಡಿದವನು ನಾನಲ್ಲ, ವಾರ್ಡ್ ನಂಬರ್ ೬ರಲ್ಲಿ ಇರುವವರು ಎನ್ನುವ ಡಾಕ್ಟರ್.<br />
<span style="text-decoration:underline;"><strong>ದೃಶ್ಯ ೧೭ಎ/ ಆಸ್ಪತ್ರೆ –ಕಾರಿಡಾರ್ ಮತ್ತು ವಾರ್ಡ್</strong></span><br />
ವಾರ್ಡ್ ೬ ಅನ್ನು ಹುಡುಕುತ್ತಾ ಸಾಗುವ ಅನುವಿಗೆ ಮತ್ತೆ ಢೀ ಕೊಡುವ ವಿಶ್ವಾಸನ ತಮಾಷೆ. ಅನು ಸಿಟ್ಟಿನಿಂದ ಆತನನ್ನು ನೋಡುತ್ತಾಳೆ. ವಾರ್ಡ್ ೬ರಲ್ಲಿ ಯಾರೂ ಇಲ್ಲ. ಇಲ್ಲಿದ್ದವರು ಯಾರು ಎನ್ನುವ ಅನುವಿಗೆ ಅಲ್ಲಿದ್ದ ನರ್ಸ್ ಈಗ್ತಾನೆ ನಿನಗೆ ಡ್ಯಾಷ್ ಹೊಡದ್ರು ಅಂತ ಬೈದ್ಯಲ್ಲಾ ಅದೇ ವ್ಯಕ್ತಿ ಎನ್ನುತ್ತಾಳೆ. ಬೆರಗಾಗುವ ಅನುವಿಗೆ ಆತನ ಹೆಸರು ವಿಶ್ವಾಸ್ ಎಂದು ತಿಳಿಯುತ್ತದೆ. ಆತನನ್ನು ಹುಡುಕಿಕೊಂಡು ಹೋಗುತ್ತಾಳೆ.<br />
ಕಾರಿಡಾರಿನಲ್ಲಿ ಮತ್ಯಾರಿಗೋ ಡಿಕ್ಕಿ ಹೊಡೆದು ತಮಾಷೆ ಮಾಡುತ್ತಾ ಮಾತಾಡುತ್ತಿರುವ ವಿಶ್ವಾಸ್. ಅನು ಆತನ ಬಳಿಗೆ ಬಂದು ಥ್ಯಾಂಕ್ಸ್ ಎನ್ನುತ್ತಾಳೆ. ಡಿಕ್ಕಿ ಹೊಡೆದಿದ್ದಕ್ಕಾ ಎನ್ನುವ ವಿಶ್ವಾಸ್. ಅಲ್ಲ ನನಗೆ ದುಡ್ಡು ಕೊಟ್ಟು ಸಹಾಯ ಮಾಡಿದ್ದಕ್ಕೆ ಎನ್ನುವ ಅನು. ಆತ ಅದ್ಯಾವ ದೊಡ್ಡ ವಿಷಯ ಬಿಡಿ ಎಂದು ಎಲ್ಲಿಗೋ ಹೊರಟು ಬಿಡ್ತಾನೆ.<br />
ಡಾಕ್ಟರ್ ಆತನಿಗೆ ಬೋನ್‌ಮ್ಯಾರೋ ಕ್ಯಾನ್ಸರ್ ಇದೆ ಆದರೆ ಎಲ್ಲರೊಂದಿಗೂ ನಗ್ತಾ ಎಲ್ಲರಿಗೂ ಸಹಾಯ ಮಾಡ್ತಾ ಇರ‍್ತಾನೆ ಎನ್ನುತ್ತಾರೆ. ಅನುವಿಗೆ ಆತನ ಬಗ್ಗೆ ಗೌರವ ಮತ್ತು ಅನುಕಂಪ ಶುರುವಾಗುತ್ತದೆ. ಡಾಕ್ಟರ್ ‘ಅನುವಿಗೆ ಖಾಯಿಲೆ ವಾಸಿಯಾಗುವ ಅವಕಾಶ ಇದೆ. ಆತನಿಗಿಲ್ಲ. ಆತ ಇನ್ನಾರು ತಿಂಗಳು ಇರ‍್ತಾನೆ ಅಷ್ಟೆ’ ಎನ್ನುತ್ತಾರೆ. ಅನುವಿಗೆ ಈ ಮಾತು ಕೇಳಿ ಅಯ್ಯೋ ಅನಿಸುತ್ತದೆ.<br />
<span style="text-decoration:underline;"><strong>ದೃಶ್ಯ ೧೮/ ಹಗಲು/ ಅನುಮನೆ</strong></span><br />
ಮನೆಗೆ ಬರುವ ಅನುವಿಗೆ ಕಾಯುತ್ತಾ ಇರುವ ಗೆಳತಿ. ಫ್ಯಾಕ್ಟರಿಯಲ್ಲಿ ಅವಳಿಗಾಗಿ ಮಾತಾಡಿದೆ ಸಮಯ ಬೇಕು ಎಂದಿದ್ದಾರೆ ಎನ್ನುತ್ತಾ ಅನುವಿನ ತಂದೆ-ತಾಯಿ ಸಿಕ್ಕಿದ್ದನ್ನು ಅವರು ಅನುವಿನ ಮುಖವನ್ನು ನೋಡುವುದಿಲ್ಲ ಎಂದಿದ್ದನ್ನು ತಿಳಿಸುತ್ತಾಳೆ. ಮತ್ತೆ ಸರ್ವೋತ್ತಮ ಸಿಕ್ಕಿದ್ದ ಎನ್ನುತ್ತಾಳೆ. ಎಲ್ಲಿ ಎನ್ನುವ ಅನುವಿಗೆ ಮರಳಿ ಪ್ರೀತಿ ದೊರೆಯುತ್ತದೆ ಎಂಬ ಸಂತೋಷವಿದೆ. ಅವನೀಗ ಊರಿಂದೂರಿಗೆ ತಿರುಗುವ ಯಾವುದೋ ಆಟೋಮೋಬೈಲಿನ ಕೆಲಸ ಮಾಡುತ್ತಾ ಇದ್ದಾನೆ. ತುಂಬಾ ಸೋತುಹೋಗಿದ್ದಾನೆ ಎನ್ನುತ್ತಾಳೆ. ಅವನ ಕಂಪೆನಿ ವಿಳಾಸ ಕೊಡು ಪತ್ರ ಬರೆಯುತ್ತೇನೆ ಎನ್ನುವ ಅನು. ಮುಂದಿನ ಸಲ ಅವನು ಸಿಕ್ಕಾಗ ತಗೋತೀನಿ ಎನ್ನುತ್ತಾಳೆ. ಆದರೆ ಅವನಾಸೆಯನ್ನು ಅನು ಬಿಡುವುದೇ ಒಳ್ಳೆಯದು ಎನ್ನುತ್ತಾಳೆ.<br />
<span style="text-decoration:underline;"><strong>ದೃಶ್ಯ ೧೯/ ಹಗಲು/ ಒಳಾಂಗಣ/ ಆಸ್ಪತ್ರೆ</strong></span><br />
ಅನುವನ್ನು ಪರೀಕ್ಷಿಸುವ ಡಾಕ್ಟರ್ ಅವಳ ಖಾಯಿಲೆ ಬಹುತೇಕ ವಾಸಿಯಾಗುತ್ತಾ ಇದೆ ಎಂದು ತಿಳಿಸುತ್ತಾರೆ. ಅನುವಿಗೆ ಸಂತಸ. ಹತ್ತಿರದಲ್ಲಿರುವ ವಿಶ್ವಾಸ ರೇಗಿಸುತ್ತಾನೆ. ಬೇಗ ನಮಗೆಲ್ಲಾ ಸ್ವೀಟ್ ಕೊಡ್ಬೇಕು ಕಣ್ರೀ ಎನ್ನುತ್ತಾನೆ. ನನ್ನ ದೇಹದ ಖಾಯಿಲೆ ವಾಸಿಯಾದರೆ ಸಾಕಾಗೋದಿಲ್ಲ ಸ್ವಾಮಿ, ಜೇಬಿನ ಖಾಯಿಲೆಗೂ ಔಷಧಿ ತಗೋತೀನಿ. ಆಮೇಲೆ ಸಿಹಿ ಕೊಡ್ತೀನಿ ಎನ್ನುವ ಅನುವಿನ ದನಿಯಲ್ಲಿ ವಿಷಾದವಿದೆ.<br />
<span style="text-decoration:underline;"><strong>ದೃಶ್ಯ ೨೦/ ಅನುಮನೆ</strong></span><br />
ಮನೆಗೆ ಬರುವಾಗ ತನ್ನ ಗೆಳತಿಗೆ ವಿಶ್ವಾಸನ ಕುರಿತು ತಿಳಿಸುತ್ತಾ ಬರುವ ಅನು. ಗೆಳತಿ ಇದೇನೋ ಹೊಸ ಕತೆ ಶುರುವಾಗ್ತಾ ಇದ್ಯಲ್ಲೇ ಎಂದು ರೇಗಿಸುತ್ತಾಳೆ. ಇಬ್ಬರೂ ಮನೆಯೊಳಗೆ ಬಂದಾಗ ಮತ್ತೊಂದು ಅಚ್ಚರಿ ಕಾದಿದೆ. ಅನುವಿಗೆ ಪತ್ರವೊಂದು ಬಂದಿದೆ. ಆ ಪತ್ರವು ಅವಳಿಗೆ ಯಾವುದೋ ಕಂಪೆನಿಯಲ್ಲಿ ಕೆಲಸ ಕೊಟ್ಟಿರುವ ಬಗ್ಗೆ ತಿಳಿಸುತ್ತದೆ. ಅನು ಅಚ್ಚರಿಯಲ್ಲಿ ಉಳಿಯುತ್ತಾಳೆ. ತಾನು ಅರ್ಜಿ ಸಹ ಹಾಕದೆ ಇಂತಹದೊಂದು ಪತ್ರ ಬಂದಿದೆಯಲ್ಲಾ ಎಂದು ಆಲೋಚಿಸುವಾಗ ಇದೂ ಸಹ ವಿಶ್ವಾಸನದೇ ಕೆಲಸ ಎನಿಸುತ್ತದೆ. ಗೆಳತಿ ಅವನ್ಯಾರೇ ಅವನು? ಅವನ್ಯಾಕೇ ನಿನಗೆ ಕೆಲಸ ಕೊಡಿಸಬೇಕು ಎನ್ನುತ್ತಾಳೆ. ವಿಚಾರಿಸುವೆ ಎನ್ನುವ ಅನು.<br />
<span style="text-decoration:underline;"><strong>ದೃಶ್ಯ ೨೧/ ಆಸ್ಪತ್ರೆ</strong></span><br />
ಆಸ್ಪತ್ರೆಯಲ್ಲಿ ವಿಶ್ವಾಸ್ ಇಲ್ಲ. ಆತನನ್ನು ಮನೆಗೆ ಷಿಫ್ಟ್ ಮಾಡಲಾಗಿದೆ ಎಂದು ತಿಳಿಯುತ್ತದೆ. ವಿಳಾಸ ಪಡೆದು ಸಾಗುವ ಅನು<br />
<span style="text-decoration:underline;"><strong>ದೃಶ್ಯ ೨೨/ ವಿಶ್ವಾಸ್ ಮನೆ</strong></span><br />
ದೊಡ್ಡ ಮನೆಯಲ್ಲಿ ಒಂಟಿಯಾಗಿರುವ ವಿಶ್ವಾಸ್. ಸಾಯುವವನಿಗೆ ಕೆಲಸದ ಅಗತ್ಯ ಇರಲಿಲ್ಲ. ಅದಕ್ಕೇ ತನ್ನ ಕೆಲಸವನ್ನು ನಿಮಗೆ ಕೊಡಬಹುದೆಂದು ಕಂಪೆನಿಗೆ ಬರೆದೆ ಎನ್ನುವ ವಿಶ್ವಾಸ್. ಸ್ವತಃ ಆತನೇ ಆ ಕಂಪೆನಿಯ ಮಾಲೀಕ ಎಂಬುದು ಗೊತ್ತಿರುವ ಅನು ಅವನ ಉದಾರತೆಗೆ ಥ್ಯಾಂಕ್ಸ್ ಹೇಳುತ್ತಾಳೆ. ಥ್ಯಾಂಕ್ಸ್ ಎಲ್ಲಾ ಬೇಡ ತನಗಾಗಿ ತನ್ನ ಮನೆಯಲ್ಲಿ ಒಂದಿಷ್ಟು ತಿಳಿ ಸಾರು ಮಾಡಿಕೊಡಿ ಎನ್ನುತ್ತಾನೆ. ಅನು ಧಾರಾಳವಾಗಿ ಎಂದು ಒಪ್ಪಿಕೊಳ್ಳುತ್ತಾಳೆ.<br />
ಆತನಿಗೆ ಊಟ ಬಡಿಸುವಾಗ ಯಾಕೆ ಆತ ಒಬ್ಬಂಟಿ ಎನ್ನುತ್ತಾಳೆ. ಅನುವಿನ ಗಂಡ ಅವಳಿಗೆ ಕಾಯಿಲೆ ಎಂದು ತಿಳಿದೊಡನೆ ಓಡಿಹೋದ ಹಾಗೆ ತನ್ನ ಹೆಂಡತಿಯೂ ತನ್ನನ್ನು ಬಿಟ್ಟು ಹೋದಳು ಎನ್ನುವ ವಿಶ್ವಾಸನ ಮಾತು ಕೇಳಿ ಅನುವಿಗೆ ಅಚ್ಚರಿಯಾಗುತ್ತದೆ. ಇನ್ನು ನಾನು ಆಸ್ಪತ್ರೆಯಲ್ಲಿದ್ದರೂ ಒಂದೇ ಇಲ್ಲಿದ್ದರೂ ಒಂದೇ ಅಂತ ಡಾಕ್ಟರ್ ಹೇಳಿದ್ರು, ಆದರೆ ಇಲ್ಲಿರೋದು ಇನ್ನೂ ಬೋರ್ ಎನ್ನುವ ವಿಶ್ವಾಸ್‌ಗೆ ತಾನು ದಿನ ಬಂದು ಅಡಿಗೆ ಮಾಡಿಟ್ಟು ಹೋಗುವುದಾಗಿ ತಿಳಿಸುವ ಅನು.<br />
<span style="text-decoration:underline;"><strong>ದೃಶ್ಯ ೨೩/ ರಾತ್ರಿ/ ಅನುಮನೆ</strong></span><br />
ಮನೆಗೆ ಗೆಳತಿಯ ಜೊತೆಗೆ ಬರುವ ಅನು. ಗೆಳತಿಗೆ ಹೊಸ ಕೆಲಸದ ಅನುಭವ ಹೇಳುತ್ತಾಳೆ. ವಿಶ್ವಾಸ್‌ನಿಂದಾಗಿ ಮುಗಿದು ಹೋಗಿದ್ದ ಬದುಕಿಗೆ ಹೊಸ ವಿಶ್ವಾಸ ಬಂತು ಎನ್ನುತ್ತಾಳೆ. ಆದರೆ ಆತ ಅಷ್ಟು ದೊಡ್ಡ ಮನೆಯಲ್ಲಿ ಒಬ್ಬಂಟಿ ಎನ್ನುತ್ತಾ ತಾನು ಅವನಿಗೆ ನಿತ್ಯ ಅಡಿಗೆ ಮಾಡಿ ಕೊಂಡೊಯ್ಯುತ್ತಾ ಇದ್ದೇನೆ ಎನ್ನುತ್ತಾಳೆ. ಗೆಳತಿಗೆ ವಿಶ್ವಾಸ ಮತ್ತು ಅನು ಸಂಬಂಧ ಯಾವ ಕಡೆಗೆ ಸಾಗುತ್ತಿದೆ ಎಂಬ ಅನುಮಾನ.<br />
<span style="text-decoration:underline;"><strong>ದೃಶ್ಯ ೨೪/ ವಿಶ್ವಾಸ್ ಮನೆ</strong></span><br />
ವಿಶ್ವಾಸನಿಗೆ ಊಟ ಬಡಿಸುತ್ತಾ, ಅವನ ಮನೆಯನ್ನು ಸ್ವಚ್ಛ ಗೊಳಿಸುತ್ತಾ ಮಾತಾಡುವ ಅನು ಈ ಮನೆಯಲ್ಲಿ ಒಬ್ಬಂಟಿಯಾಗಿರುವುದಕ್ಕಿಂತ ಇನ್ಯಾರನ್ನಾದರೂ ಮದುವೆ ಆಗೋದ್ತಾನೆ ಎನ್ನುತ್ತಾಳೆ. ವಿಶ್ವಾಸ ನಗ್ತಾ, ಸಾಯುವವನಿಗೆ ಸಂಗಾತಿ ಯಾಕ್ರೀ? ಇಷ್ಟರ ಮೇಲೆ ನಾನು ಓಕೆ ಅಂದರೂ ನಾಳೆ ವಿಧವೆ ಆಗೋಕ್ಕೆ ಯಾವ ಹೆಣ್ಣು ಮಗಳು ಒಪ್ಕೋತಾಳ್ರೀ ಎನ್ನುತ್ತಾನೆ. ಅನು ಅವನನ್ನೇ ಅನುಕಂಪದಿಂದ ನೋಡುತ್ತಾಳೆ.<br />
<span style="text-decoration:underline;"><strong>ದೃಶ್ಯ ೨೫/ ಅನು ಮನೆ</strong></span><br />
ಮನೆಗೆ ಬರುವ ಅನುವಿಗೆ ಅನಾಮಧೇಯ ಪತ್ರ ಬಂದಿದೆ. ಅದರಲ್ಲಿ ಅವಳ ಮತ್ತು ವಿಶ್ವಾಸನ ಸಂಬಂಧ ಕುರಿತು ಮಾತಿದೆ. ಜೊತೆಯಲ್ಲಿರುವ ಮಂಜುಳಮ್ಮ ಇದು ನಿನ್ನ ಗಂಡನದೇ ಕಿತಾಪತಿ ಎನ್ನುತ್ತಾರೆ. ತಾನು ಸಾಕಾಕ್ಕಾಗ್ಲಿಲ್ಲ. ಈಗ ಹೊಟ್ಟೆ ಉರ‍್ಕೋತಾ ಇದಾನೆ ಎನ್ನುತ್ತಾರೆ. ಗೆಳತಿಯೂ ಸಹ ಹೌದು ಎನ್ನುತ್ತಾಳೆ. ಅನು ದುಃಖಿತಳಾಗಿ ಕುಳಿತಾಗ ನಾಳೆ ನಾನು ಬರ‍್ತೀನಿ ನಿನ್ನ ಜೊತೆ ಆ ವಿಶ್ವಾಸನ ಮನೆಗೆ ಎನ್ನುವ ಮಂಜುಳಮ್ಮ.<br />
<span style="text-decoration:underline;"><strong>ದೃಶ್ಯ ೨೬/ ವಿಶ್ವಾಸನ ಮನೆ</strong></span><br />
ವಿಶ್ವಾಸನ ಮನೆಗೆ ಅನುವಿನ ಜೊತೆಯಲ್ಲಿ ಬರುವ ಮಂಜುಳಮ್ಮ ಮತ್ತು ಗೆಳತಿ. ಅನುವಿಗೆ ಬರುತ್ತಿರುವ ಅನಾಮಧೇಯ ಪತ್ರಗಳ ಕುರಿತು ಹೇಳುತ್ತಾರೆ. ಇದಕ್ಕೆ ಇರುವುದು ಒಂದೇ ಪರಿಹಾರ ಎನ್ನುವ ಮಂಜುಳಮ್ಮ ಅವರಿಬ್ಬರಿಗೂ ಮದುವೆ ಎನ್ನುತ್ತಾರೆ. ಬೆರಗಾಗುವ ವಿಶ್ವಾಸ. ಅನುವಿನ ಅಭಿಪ್ರಾಯ ಕೇಳುತ್ತಾನೆ. ಸುಮ್ಮನಿರುವ ಅನುವಿನ ಕೈ ಹಿಡಿದು ನಡೆಯಿರಿ ಹೊರಡೋಣ ಎನ್ನುತ್ತಾನೆ.<br />
<span style="text-decoration:underline;"><strong>ದೃಶ್ಯ ೨೭/ ಆಸ್ಪತ್ರೆ</strong></span><br />
ಡಾಕ್ಟರ್ ಬಳಿಗೆ ಬಂದು ನಾವು ಮದುವೆ ಆಗಬಹುದೇ ಎನ್ನುವ ವಿಶ್ವಾಸನಿಗೆ ಧಾರಾಳವಾಗಿ ಎನ್ನುವ ಡಾಕ್ಟರ್. ಆಗ ಹೊರಗಿರುವ ಅನುವನ್ನು ಕರೆಯುವ ವಿಶ್ವಾಸ. ಅವಳನ್ನು ಕಂಡು ಡಾಕ್ಟರ್ ಸ್ವತಃ ಅಚ್ಚರಿ ಪಡುತ್ತಾರೆ. ಅನು ಜೊತೆಗೆ ಇರುವ ಇತರರು ಅವರಿಗೆ ಹಾರ ಇತ್ಯಾದಿ ಕೊಡ್ತಾರೆ. ಅವರೆಲ್ಲರ ಸಮ್ಮುಖದಲ್ಲಿ ಅನು ಮತ್ತು ವಿಶ್ವಾಸ ಮದುವೆ ಆಗ್ತಾರೆ.<br />
ಕೈ ಹಿಡಿದು ಸಾಗುವವರ ಎದುರಿಗೆ ಬರುವ ಸರ್ವೋತ್ತಮ. ಅವನನ್ನು ನೋಡಿ ಅನುವಿಗೆ ಅಚ್ಚರಿ. ಸರ್ವೋತ್ತಮ ತಾನೇ ಸಿಹಿ ಕೊಡುತ್ತಾನೆ. ವಿಶ್ವಾಸ ಮತ್ತು ಅನು ಸಿಹಿ ತಿನ್ನುವಾಗ ಅಂತಿಮ ಶೀರ್ಷಿಕೆ ಕಾಣಿಸುತ್ತದೆ.<br />
“ಅವರಿಬ್ಬರೂ ಸುಖವಾಗಿದ್ದರು!&#8230; ಸಾಯುವ ವರೆಗೆ!”</p>
<p>* * *<br />
ಬಿ.ಸುರೇಶ ಅವರ<br />
<span style="text-decoration:underline;"><strong>ಪ್ರೀತಿ ಎಂಬ ಅಚ್ಚರಿ!</strong></span><br />
<strong>(ಚಿತ್ರಕತೆ ಸಂಭಾಷಣೆ ಪ್ರತಿ)</strong><br />
ಕತೆ/ ಚಿತ್ರಕತೆ : ಬಿ.ಸುರೇಶ<br />
ಸಂಭಾಷಣೆ : ಕೇಶವಚಂದ್ರ<br />
<span style="text-decoration:underline;"><strong>ದೃಶ್ಯ-೧/ಹಗಲು-ರಾತ್ರಿ/ಒಳಗೆ-ಹೊರಗೆ/ಅನು ಮನೆ</strong></span><br />
-ಸಬ್ಜೆಕ್ಟೀವಲ್ಲಿ ಕ್ಯಾಮೆರಾ ತೀರಾ ಕೆಳ ಮಧ್ಯಮ ವರ್ಗದ ಮನೆಯೊಂದನ್ನ ರಿವೀಲ್ ಮಾಡುತ್ತಾ ಸಾಗಿ [ಹ್ಯಾಂಡೆಲ್ಡ್ ಆದರೆ ಚೆನ್ನ] ಮನೆಯ ಕೋಣೆಯೊಂದರ ಮೂಲೆಯಲ್ಲಿ ತಲೆ ತಗ್ಗಿಸಿ ಮುದುರಿ ಕುಳಿತಿರುವ ಹೆಂಗಸೊಬ್ಬಳು ಕಾಣ್ತಾಳೆ. ಅವಳ ಮುಖ ಕಾಣ್ತಿಲ್ಲ.<br />
-ಮನೆಯಾಚೆ ಯಾರೋ ಒಬ್ಬಾತ ಬಂದು ಬಾಗಿಲು ಬಡೀತಾನೆ<br />
-ಒಳಗೆ ಅನು ಮುದುಡಿದ್ದ ಮುಖ ಮೇಲೆತ್ತುತ್ತಾಳೆ [ರಿವೀಲ್] ಅವಳ ಮುಖದಲ್ಲಿ ಗಾಬರಿ ಇದೆ.<br />
-ವಿವಿಧ ಆಂಗಲ್‌ಗಳಿಂದ ಅವಳ ಹೆದರಿದ ಮುಖದ ಅನಾವರಣ<br />
-ಆತ ಬಾಗಿಲು ಬಡಿಯೋದು ಮುಂದುವರೆಯುತ್ತೆ<br />
-ಅನೂಗೆ ಕೆಮ್ಮು ಉಕ್ಕಿ ಬರಲು ಶುರುವಾಗತ್ತೆ, ಆದರೆ ಅವಳು ತನ್ನ ಬಾಯನ್ನು ತಾನೇ ಅದುಮಿಕೊಂಡು ಮನೆಯಲ್ಲಿ ತಾನಿಲ್ಲ ಎನಿಸಿಕೊಳ್ಳುವ ಯತ್ನ ಮಾಡ್ತಿದ್ದಾಳೆ<br />
-ಬಾಗಿಲು ಬಡಿಯುತ್ತಿದ್ದವನು ರೋಸಿದಂತೆ ಕೋಪದಲ್ಲೇ ಅಲ್ಲಿಂದ ತೆರಳುತ್ತಾನೆ<br />
-ಅನು ಉಕ್ಕಿ ಬರುತ್ತಿದ್ದ ಕೆಮ್ಮನ್ನು ಕೈಯಲ್ಲಿ ಬಾಯಿ ಮುಚ್ಚಿ ತಡೆಯುತ್ತಿದವಳು, ಬಾಗಿಲು ಬಡಿಯೋದು ನಿಂತದ್ದು-ನಿಶ್ಯಬ್ದವಾದದ್ದು ಗಮನಿಸಿ ತನ್ನ ಬಾಯಿ ಮುಚ್ಚಿದ್ದ ಕೈಯ್ಯನ್ನು ತೆಗೆಯುತ್ತಾಳೆ, ಕೈ ನೋಡ್ತಾಳೆ<br />
-ಕೈಯಲ್ಲಿ ಲಾಲಾರಸದೊಡನೆ ಜಿನುಗಿದ್ದ ರಕ್ತ ಕಾಣುತ್ತದೆ<br />
-ಆಕೆಯ ಕಣ್ಣಲ್ಲಿ ಆತಂಕ, ಗಾಬರಿ, ತುಟಿಗಳಲ್ಲಿ ನಡುಕ ಅಗಲೇ ಮತ್ತ್ಯಾರೋ ಕಾಲಿಂಗ್ ಬೆಲ್ಲ್ ಮಾಡಿದ ಶಬ್ದಕ್ಕೆ ಮತ್ತೆ ಬೆಚ್ಚಿದಂತೆ ನೋಡ್ತಾಳೆ<br />
-ಹೊರಗೆ ಹಾಲಿನ ಕ್ಯಾನ್ ಹಿಡಿದವಳ್ಯಾರೋ ಬೆಲ್ಲ್ ಮಾಡ್ತಾ ಇದ್ದಾಳೆ<br />
-ಅನು ಸುಮ್ಮನೆ ಬಾಗಿಲ ಕಡೆಗೆ ನೋಡ್ತಾ ಇದ್ದಾಳೆ, ಮತ್ತೆ ಶುರುವಾಗುವ ಕೆಮ್ಮು, ಮತ್ತೆ ಕೈಯಿಂದ ಬಾಯಿಗೆ ಬೀಗ, ಹಿನ್ನಲೆಯಲ್ಲಿ ಬೆಲ್ಲಿನ ಶಬ್ದ<br />
-ಬೆಲ್ಲ್ ಮಾಡ್ತಿದ್ದಾಕೆ ಮನೆಯಲ್ಲಿ ಯಾರೂ ಇಲ್ಲವೆಂದು ವಾಪಸ್ ಬಂದ ದಾರಿ ಹಿಡಿಯುತ್ತಾಳೆ.<br />
-ಅನು ಬಚ್ಚಲು ಮನೆಗೆ ಬಂದು ಕೆಮ್ಮುತ್ತಾಳೆ<br />
-ಬಾಯಿಂದ ಉದುರುವ ರಕ್ತದ ಕಫ಼<br />
-ಅನು ತುಟಿಗಳ ನಡುಕ.<br />
-ಮತ್ತೆ ಇನ್ನ್ಯಾರೋ ಹೊರಗೆ ಬಾಗಿಲು ಬಡೀತಾರೆ<br />
-ಅನು ಅದರ ಬಗ್ಗೆ ಗಮನಕೊಡದೆ ಕೂತಿದ್ದಾಳೆ<br />
-ಶೆಟ್ಟರಂಗಡಿಯ ಹುಡುಗನಂತೆ ಕಾಣುವಾತನೊಬ್ಬ ಬಂದು ಬಾಗಿಲು ಬಡೀತಾನೆ<br />
-ಆಗಲೂ ಇನ್ನ್ಯಾವುದೋ ಜಾಗದಲ್ಲಿ ಹಾಗೇ ಕೂತಿದ್ದಾಳೆ<br />
-ಅಡಿಗೆ ಮನೆಗೆ ಬರುವ ಅನು, ಪಾತ್ರೆಗಳನ್ನೆಲ್ಲ ತಡಕುತ್ತಾಳೆ<br />
-ಯಾವ ಪಾತ್ರೆಗಳಲ್ಲೂ ಏನೂ ಇಲ್ಲ, ಯಾವ ಡಬ್ಬಿಗಳಲ್ಲೂ ಏನೂ ಇಲ್ಲ<br />
-ಸೂತ ಮುಖ ಹೊತ್ತು ಯಥೇಚ್ಚವಾಗಿ ನೀರು ಕುಡಿದು ಸಾಗ್ತಾಳೆ<br />
-ಕೋಣೆಯ ಹಾಸಿಗೆಯಮೇಲೆ ಸೋತವಳಂತೆ ಮುದುಡಿ ಮಲಗುತ್ತಾಳೆ, ಅವಳ ಕ್ಲೋಸ್‌ಗೆ ಸಾಗುವ ಕ್ಯಾಮೆರಾ. ಅವಳ ಕಣ್ಣಲ್ಲಿ ತುಂಬಿದ ನೀರು<br />
<span style="text-decoration:underline;"><strong>ದೃಶ್ಯ-೨/ಹಗಲು/ಹೊರಗೆ/ರಸ್ತೆ ಅಥವಾ ಪಾರ್ಕ್</strong></span><br />
-ಕೆಂಪು ಗುಲಾಬಿಯೊಂದರ ಕ್ಲೋಸಿಂದ ಓಪನ್ ಆದರೆ, ಫ಼ೋಕಸ್ ಷಿಫ಼್ಟ್ ಆದರೆ ಅದನ್ನು ಹಿಡಿದು ಸ್ಮೈಲ್ ಮಾಡ್ತಾ ಇರುವ ಯುವಕನೊಬ್ಬ ಕಾಣ್ತಾನೆ.<br />
ಯುವಕ: ಐ ಲವ್ ಯು ಅನು!&#8230;.<br />
-ಆಕೆ ನಾಚಿದವಳಂತೆ ನಂತರ ಬೆದರಿದವಳಂತೆ ಅತಿತ್ತ ತಲೆಯಾಡಿಸುತ್ತಿದ್ದಾಳೆ. [ಅವಳು ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿರುವವಳು ಎಂಬಂತೆ ಕಾಣಬೇಕು]<br />
ಯುವಕ: ಯಾಕ್ ಅನು.. ನನ್ನ್ ಕಂಡ್ರೆ ನಿನಗ್ ಇಷ್ಟ ಇಲ್ವಾ?..<br />
ಅನು: ನಾನ್ ಇಷ್ಟ ಪಟ್ರೂ.. ನಮ್ಮಪ್ಪ ಅಮ್ಮ ಈ ಪ್ರೀತೀನ್ ಒಪ್ಪಲ್ಲ..<br />
-ಆತನ ರಿಯಾಕ್ಷನ್<br />
ಅನು: ಅವರಿಗೆ ಇದೆಲ್ಲಾ ಇಷ್ಟ ಆಗಲ್ಲ.. ನಾನ್ ಹೋಗ್ತೀನಿ..<br />
-ಅವಳ ಕೈ ಹಿಡಿವ ಯುವಕ<br />
-ಆಕೆ ಬೆದರಿದಂತೆಯೇ ಅತ್ತಿತ್ತ ನೋಡ್ತಾಳೆ<br />
ಯುವಕ: ಪ್ರಯತ್ನಾನೆ ಪಡ್ದೆ ಆಗಲ್ಲ ಅಂದ್ರೆ ಹೇಗೆ ಅನು?.. ನನಗ್  ನನಗ್ ನೀನಿಲ್ದೆ ಬದ್ಕೋಕ್ಕಾಗಲ್ಲ ಅನು! ನಿಜವಾಗ್ಲೂ!<br />
ಅನು: ನನಗೂ ಹಾಗೇ ಅನ್ಸತ್ತೆ&#8230;  ಆದ್ರೆ&#8230;<br />
ಸರ್ವ: ನೀನ್ ಹೆದರ‍್ಕೋಬೇಡ.. ನಮ್ಮನೇಲೂ ಈ ಪ್ರೀತೀನ್ ಒಪ್ಕೊಳಲ್ಲ ಅಂತ ನನಗ್ ಗೊತ್ತು.. ಆದ್ರೂ ಪ್ರಯತ್ನ ಪಡ್ತೀನಿ.. ಅವರ್ ಮುಂದೆ ನಮ್ಮ್ ಪ್ರೀತಿ ವಿಷ್ಯ ಹೇಳ್ತೀನಿ.. ನಿನ್ನನ್ನ್ ಅಲ್ದೆ ನಾನ್ ಇನ್ನ್ ಯಾರನ್ನೂ ಮದ್ವೆ ಆಗಲ್ಲ ಅಂತ ಖಡಾಖಂಡಿತವಾಗ್ ಹೇಳ್ತೀನಿ.. ನೀನೂ ನಿಮ್ಮನೆಲ್ ಧೈರ್ಯವಾಗ್ ಮಾತಾಡು..<br />
ಅನು: ಇಲ್ಲ ಸರೂ.. ನಮ್ಮಪ್ಪ-ಅಮ್ಮ ಇಬ್ರೂ ಯಾವ್ ಕಾರಣಕ್ಕೂ ನಮ್ಮಿಬ್ಬರ್ ಪ್ರೀತೀನ್ ಒಪ್ಪಲ್ಲ..<br />
ಸರ್ವ: ನಂಬ್ಕೆ ಇಟ್ಕೊಂಡ್ ಟ್ರೈ ಮಾಡು.. ಒಪ್ಪಿದ್ರೆ ಸಂತೋಷ..<br />
ಅನು: ಇಲ್ದಿದ್ರೆ?..<br />
ಸರ್ವ: [ನಕ್ಕು] ಪ್ರೀತಿ ಗೆದ್ದೇ ಗೆಲ್ಲತ್ತೆ.. ನಾನಂತೂ ಹಿಡ್ದಿರೋ ಈ ನಿನ್ನ್ ಕೈ ಬಿಡಲ್ಲ.. [ಎಂದು ಅವಳ ಕೈಯನ್ನು ಗಟ್ಟಿಯಾಗಿ ಹಿಡಿಯುತ್ತಾನೆ]<br />
-ಅನು ಮುಖದಲ್ಲಿ ಸಂಭ್ರಮದ ಕಳೆ.<br />
<span style="text-decoration:underline;"><strong>ದೃಶ್ಯ-೩/ಹಗಲು/ಹೊರಗೆ/ರಸ್ತೆ ಅಥವಾ ಪಾರ್ಕ್</strong></span><br />
-ಇಬ್ಬರೂ ಮೌನವಾಗಿ ಹೆಜ್ಜೆ ಹಾಕ್ತಾ ಇದ್ದಾರೆ<br />
ಅನು: ಪ್ರೀತಿ-ಗೀತಿ ಅಂತ ಬಾಲ ಬಿಚ್ಚೋದಾದ್ರೆ.. ನಾಳೆಯಿಂದ ನೀನ್ ಕೆಲ್ಸಕ್ಕೇ ಹೋಗ್‌ಬೇಕಾಗಿಲ್ಲ ಅಂದ್ರು, ನಮ್ಮಪ್ಪ!.. [ಅವನನ್ನು ಪ್ರಶ್ನೆಯಿಂದ ನೋಡ್ತಾಳೆ]<br />
-ಆತ ಏನೂ ಮಾತಾಡ್ತಾ ಇಲ್ಲ<br />
ಅನು: ನಿಮ್ಮನೆಲ್ ಏನಂದ್ರು ಸರೂ?..<br />
ಸರ್ವ: ನಮ್ಮನೇಲೂ ಅದೇ ಕೇಸೇ.. ಪ್ರೀತಿಸ್ತೀನಿ ಅಂದಿದ್ದಕ್ಕೆ.. ಬಾರ‍್ಸ್‌ತೀನಿ ಅಂದ್ರು.. ಒದ್ದ್ ಆಚೆಗ್ ಹಾಕ್ತೀನಿ ಅಂದ್ರು..<br />
ಅನು: ಹಾಗಾದ್ರೆ ಮುಂದೆ?..<br />
-ಆತ ನೋಡಿ ಸುಮ್ಮನೆ ಸ್ಮೈಲ್ ಮಾಡ್ತಾನೆ<br />
ಅನು: ನಮ್ಮ್ ಪ್ರೀತಿ ಇಲ್ಲಿಗೇ ಕೊನೆ ಆಗ್‌ಬಿಡ್‌ಬೇಕಾ?..<br />
ಸರ್ವ: ಪ್ರೀತಿಗ್ ಕೊನೆ ಅನ್ನೋದೂ ಇಲ್ಲ.. ಅದ್ ಸಾಯೋದೂ ಇಲ್ಲ ಅನು.. ಎಲ್ಲಿವರ‍್ಗೂ ಪ್ರೇಮಿಗಳ್ ಮನ್ಸ್ ಗಟ್ಟಿಯಾಗಿರತ್ತೋ ಅಲ್ಲೀವರ‍್ಗೂ ಪ್ರೀತಿ ಸಾಯೋಲ್ಲ ಅನು!<br />
ಅನು: ಅದ್ ಹೇಗೆ?.. ಇಬ್ಬರ್ ಮನೇಲ್ ಒಪ್ಪ್‌ತಿಲ್ಲ ಅಂದ್‌ಮೇಲೆ..<br />
ಸರ್ವ: [ತಡೆದು] ಇಬ್ಬರೂ ದುಡೀತಾ ಇದ್ದೀವಿ.. ಇಬ್ಬರ‍್ಗೂ ಜೀವ್ನಕ್ಕ್ ಆಗೋಷ್ಟ್ ಸಂಪಾದ್ನೆ ಇದೆ.. ಇನ್ನೊಬ್ಬರ್ ಒಪ್ಗೆಗ್ ಯಾಕ್ ಕಾಯ್‌ಬೇಕು ನಾವು?..<br />
-ಆಕೆಯ ಅಚ್ಚರಿಯ ರಿಯಾಕ್ಷನ್<br />
ಸರ್ವ: ಮುಂದಿನ್ ತಿಂಗಳು ಸಂಬಳ ಬರ‍್ತಿದ್ದ್‌ಹಾಗೆ ನಮ್ಮ್ ಮದ್ವೆ.. ಅವತ್ತಿಂದಾನೇ ನಮ್ಮ್ ಹೊಸಾ ಸಂಸಾರ ಶುರು.. ಏನು?. ಓಕೆನಾ?..<br />
<span style="text-decoration:underline;"><strong>ದೃಶ್ಯ-೪/ಹಗಲು/ಹೊರಗೆ/ರಸ್ತೆ</strong></span><br />
ಗೆಳತಿ: ಏನೇ ಅನು ತಮಾಷೆ ಮಾಡ್ತಾ ಇದ್ದೀಯಾ?.. [ಅಚ್ಚರಿಯಲ್ಲಿ ಗೆಳತಿ ಕೇಳ್ತಾಳೆ]<br />
ಅನು: ಇಲ್ಲ.. ನಿಜಾನೇ ಹೇಳ್ತಾ ಇದ್ದೀನಿ..<br />
ಗೆಳತಿ: ನಿನ್ನ್ ವಯಸ್ಸ್ ಎಷ್ಟ್ ಅನ್ನೋದಾದ್ರೂ ಗೊತ್ತಿದ್ಯಾ ನಿಂಗೆ?<br />
ಅನು: ಕಾನೂನ್ ಪ್ರಕಾರ ಮದ್ವೆ ಆಗೋಷ್ಟಂತೂ ವಯಸ್ಸ್ ಆಗಿದೆ..<br />
ಗೆಳತಿ: ಸಮ್ಸಾರ ಮಾಡೋಕ್ಕ್ ಇಷ್ಟ್ ಸಾಕಾಗಲ್ಲ್‌ವೇ ಅನು?..<br />
ಅನು: ಮದ್ವೆ ಆಗೋದು ಅಂತ ನಿರ್ಧಾರ ಮಾಡಾಗಿದೆ.. ಇನ್ನ್ ಯಾರ್ ಏನೇ ಹೇಳ್‌ದ್ರೂ ನಾವ್ ಕೇಳೋಲ್ಲ..<br />
ಗೆಳತಿ: ಅನೂ, ಈ ವಯಸ್ಸಲ್ಲಿ.. ನೀನ್ ಅಪ್ಪ-ಅಮ್ಮನ್ನೂ ಬಿಟ್ಟು ಯಾರ‍್ನೋ ನಂಬ್ಕೊಂಡ್ ಹೋಗ್ತಾ ಇರೋದು ನನಗ್ ಯಾಕೋ ಸರಿ ಕಾಣ್ತಾ ಇಲ್ಲ ಅನು.. ದುಡುಕಿ ನಿನ್ನ್ ಲೈಫ಼್‌ನ ಅನ್ಯಾಯವಾಗ್ ಹಾಳ್ ಮಾಡ್ಕೋಬೇಡ.. ಅಕಸ್ಮಾತ್ ಅವನೇನಾದ್ರೂ ಕೈ ಕೊಟ್ರೆ?..<br />
ಅನು: ನನಗ್ ಸರ್ವೋತ್ತಮ್ ಮೇಲೆ ಪೂರ್ತಿ ನಂಬ್ಕೆ ಇದೆ.. ಅವನ್ ನನ್ನನ್ನ್ ಎಲ್ಲಾರ್‌ಗಿಂತ ಜಾಸ್ತಿ ಪ್ರೀತಿಸ್ತನೆ.. ಖಂಡಿತ ಚೆನ್ನಾಗ್ ನೋಡ್ಕೊಳ್ತನೆ.. ನೀನು ನಮ್ಮ ಮದುವೇಗ್ ಬಾ, ಸಾಕು! ಇನ್ಯಾರು ಬರದೇ ಇದ್ದರೂ ಪರವಾಗಿಲ್ಲ.<br />
-ಎನ್ನುವಾಗ ಗೆಳತಿಯ ಮುಖದಲ್ಲಿ ಇನ್ನೂ ಅನುಮಾನದ ಭಾವ<br />
<span style="text-decoration:underline;"><strong>ದೃಶ್ಯ-೫/ಹಗಲು/ಒಳಗೆ-ಹೊರಗೆ/ಅನು ಮನೆ</strong></span><br />
-ಆಗಲೇ ಬಾಗಿಲು ಬಡಿದಿದ್ದ ಮನೆಯ ಮಾಲಕಿ ಯಾರನ್ನೋ ಎದುರು ನೋಡ್ತಾ ನಿಂತಿದ್ದಾಳೆ.<br />
-ಅದೇ ವೇಳೆಗೆ ಗೇಟ್ ಮುಂದೆ ಕೊಟ್ರ ಕೊಟ್ರ ಎಂದು ಸದ್ದು ಮಾಡ್ತಾ ಬಂದು ನಿಲ್ಲುವ ಆಟೋ. ಆಟೋಯಿಂದ ಇಳಿವ ನವದಂಪತಿಗಳು. ಜೊತೆಯಲ್ಲಿ ಅನು ಗೆಳತಿ ಬೃಂದಾ ಕೂಡ ಇದ್ದಾಳೆ<br />
-ಮನೆಯ ಮಾಲಕಿ ಅವರನ್ನು ನೋಡಿ ಬಾಯಿ ಅಗಲ ಮಾಡಿ ಹಲ್ಲು ಕಿರೀತಾಳೆ<br />
-ಅವರೂ ಮಾಲಕಿಯನ್ನು ನೋಡಿ ಹಲ್ಲು ಕಿರೀತಾರೆ. ಅನು, ಸರು ಆಗ ತಾನೇ ಮದುವೆಯಾಗಿ ಬಂದಂಥಾ ಕುರುಹು ಕಾಣುವಂತಿದ್ದಾರೆ. ಅವರು ಹಾರವನ್ನು ಕೈಯಲ್ಲಿ ಹಿಡಿದಿದ್ದಾರೆ. ಅಥವಾ ಗೆಳತಿಯೂ ಹಿಡಿದಿರಬಹುದು.<br />
ಮಾಲಕಿ: ಬನ್ನಿ ಬನ್ನಿ.. ನಿಮಗೇ ಕಾಯ್ತಾ ಇದ್ದೆ.. ಬೀಗ ತೆಗೀತೀನ್ ಇರಿ.. [ಎಂದು ಕೆಳಗಿನ ಮನೆಯ ಬೀಗ ತೆಗೀತಾಳೆ]<br />
-ಅವರು ಸಂತೋಷದಿಂದ ಒಳಗೆ ಹೋಗಲಿದ್ದಾಗ<br />
ಮಾಲಕಿ: ಒಂದ್ ನಿಮ್‌ಷ ಇರ್ರಪ್ಪ.. ಈಗ್ ತಾನೇ ಮದ್ವೆ ಆಗ್ ಬರ‍್ತ ಇದ್ದೀರ.. ಮೊದಲ್ನೇ ಸಲ ಮನೆ ಒಳಗ್ ಕಾಲಿಡೋವಾಗ ಹಂಗೆ ಸಲೀಸಾಗ್ ನುಗ್ಗ್ ಹೋಗ್‌ಬಿಡೋದೇ? ಆರತಿ-ಪಾರ‍್ತಿ ಎಲ್ಲ ರೆಡಿ ಮಾಡಿದ್ದೀನಿ.. ಇರಿ.. [ಎಂದು ಹೆಳ್ತಾ ಅವಳು ಆಗಲೆ ರೆಡಿ ಮಾಡಿ ತಂದಿದ್ದ ಸೇರಿನ ಪಡಿ ಮತ್ತು ಆರತಿಯನ್ನು ತರ‍್ತಾಳೆ]<br />
-ಅವರೆಲ್ಲರ ಖುಷಿ<br />
ಮಾಲಕಿ: [ಗೆಳತಿಗೆ] ಏನಮ್ಮ ಹುಡ್ಗಿ.. ತಗೋ.. ಇದನ್ನ್ ಹೊಸ್ಲು ಮೇಲಿಡು.. [ಎಂದು ಸೇರನ್ನು ಕೊಡ್ತಾಳೆ. ಆಕೆ ಇಡುವ ಮುಂಚೆ] ನಾನ್ ಒಳಗಡೆ ಹೋಗ್‌ಬಿಡ್ತೀನ್ ಇರು.. [ಎಂದು ತಾನು ಕುಂಕುಮ ಕಲೆಸಿದ ನೀರಿನ ತಟ್ಟೆಯನ್ನು ಹಿಡಿದು ಮನೆಯೊಳಗೆ ಹೋಗ್ತಾಳೆ. ಗೆಳತಿ ಸೇರನ್ನು ಹೊಸ್ತಿಲ ಮೇಲೆ ಇಡ್ತಾಳೆ]<br />
-ಅನೂಗೆ ಖುಷಿ, ಅವಳು ಸರ್ವನ ಮುಖ ನೋಡ್ತಾಳೆ, ಆತನೂ ಹೆಮ್ಮೆಯಿಂದ ಹೇಗೆ ನಾನ್ ಹಿಡ್ದಿರೋ ಮನೆ ಮಾಲಕಿ ಎಂಬಂತೆ ನೋಡ್ತಾನೆ<br />
-ಮಾಲಕಿ ಒಳಗಿಂದ ಇಬ್ಬರನ್ನು ನಿಲ್ಲಿಸಿ ಆರತಿ ಮಾಡ್ತಾಳೆ<br />
-ನಂತರ ಅದನ್ನು ಹೊರಗೆ ಗೇಟಾಚೆ ಉದ್ದಕ್ಕೂ ಸುರಿದು ಬರ‍್ತಾಳೆ<br />
-ಮತ್ತೆ ಅಲ್ಲಿಗೆ ಹೋಗಿ<br />
ಮಾಲಕಿ: ಹುಂ.. ಈಗ್ ಬಲ್ಗಾಲಲ್ಲ್ ಸೇರನ್ನ್ ಒದ್ದು ಒಳಗ್ ನಡೀ..<br />
-ಅವರು ಹಾಗೆ ಮಾಡ್ತಾರೆ<br />
-ನಂತರ ಎಲ್ಲರೂ ಮನೆಯೊಳಕ್ಕೆ ಬರ‍್ತಾರೆ, ಗಂಡು ಹೆಣ್ಣೂ ಆಕೆಯ ಕಾಲಿಗೆ ನಮಸ್ಕರಿಸುತ್ತಾರೆ. ಆಕೆ ಆಶೀರ್ವಾದ ಮಾಡುತ್ತಾ<br />
ಮಾಲಕಿ: ನೂರ್ ವರ್ಷ ಸುಖವಾಗಿ ಸಂತೋಷವಾಗ್ ಬಾಳಿ.. ನಾನ್ ಕೇಳಿದ ಆಡ್ವಾನ್ಸ್ ಕೊಟ್ಟ್ ಹಾಗೆ.. ಬಾಡ್ಗೇನೂ ಕರೆಕ್ಟಾಗ್ ಟೈಂಗ್ ಕೊಟ್ಟ್‌ಬಿಡಿ.. ಬರ‍್ಲಾ?<br />
-ಎನ್ನುವಾಗ ಅವನು ತಲೆಯಾಡಿಸುತ್ತಾನೆ. ಆಕೆ ಸಾಗ್ತಾಳೆ<br />
ಗೆಳತಿ: ಓಹೋ.. ಅಡ್ವಾನ್ಸ್ ಸರ‍್ಯಾಗ್ ಕೊಟ್ಟಿದ್ದಕ್ಕಾ? ಇಷ್ಟೆಲ್ಲ ಉಪಚಾರ?..<br />
ಸರ್ವ: ಮತ್ತೆ.. ಹಾಗೇನಾದ್ರೂ ಗೋಲ್‌ಮಾಲ್ ಮಾಡ್ದೆ ಹೋದ್ರೆ ನಮ್ಮಂಥೋರ‍್ಗ್ ಮನೆ ಯಾರ್ ಕೊಡ್ತರೆ?<br />
ಗೆಳತಿ: ಹೇಗೋ.. ಮನೆ ಸಿಕ್ಕಿದೆ.. ನೀವ್ ಇಷ್ಟ ಪಟ್ಟ್ ಹುಡ್ಗೀನೂ ಸಿಕ್ಕಿದ್ದಾಳೆ.. ಇನ್ನ್ ನೀವ್ ಇಷ್ಟ ಪಟ್ಟ್ ಹಾಗೆ ಬದುಕೋದೊಂದೆ ಬಾಕಿ ಇರೋದು.. ಆಲ್ ದ ಬೆಸ್ಟ್..<br />
-ಅವರಿಬ್ಬರು ಪರಸ್ಪರ ಮುಖ ನೋಡ್ತಾ ತಲೆಯಾಡಿಸುತ್ತಾರೆ<br />
<span style="text-decoration:underline;"><strong>ದೃಶ್ಯ-೬/ಹಗಲು-ರಾತ್ರಿ/ಒಳಗೆ/ಅನು ಮನೆ</strong></span><br />
-ಅನು ಒಲೆ ಮೇಲೆ ಹಾಲು ಕಾಯಿಸುತ್ತಾ ಇದ್ದಾಳೆ, ಅದರತ್ತ ನೋಡದೆ ಬೇರೆಲ್ಲೋ ನೋಡ್ತಾ ಏನೋ ಯೋಚಿಸುತ್ತಿದ್ದಾಳೆ. ಆಗಲೇ ಅದೇ ಫ಼್ರೇಮಿಗೆ ಬರುವ ಸರ್ವನ ಮುಖ ಭಾಗ. ಆತ ಮೆಲ್ಲಗೆ ಅನುಳ ಕುತ್ತಿಗೆ ಬಾಗಕ್ಕೆ ಬಾಯಿಂದ ಬಿಸಿ ಗಾಳಿ ಬಿಡುತ್ತಾನೆ.<br />
-ಆಕೆ ಏನೋ ಎಂದುಕೊಂಡು ಕೈಯನ್ನು ಗಾಳಿಯಲ್ಲಿ ಒಂದೆರಡು ಬಾರಿ ತೂಗಿಸುತ್ತಾಳೆ.<br />
-ಆತ ಸ್ಮೈಲ್ ಮಾಡ್ತಾ ಮತ್ತೆ ಅದೇ ರೀತಿ ಮಾಡುವಾಗ<br />
-ಆಕೆ ಅವನೆಂದು ತಿಳಿದು ನಾಚುತ್ತಾಳೆ<br />
-ಆತ ಅವಳ ಸೊಂಟ ಬಳಸುತ್ತಾನೆ ಅವಳನ್ನು ತಬ್ಬಿ ಹಿಡಿಯುತ್ತಾನೆ. ಇಬ್ಬರ ಕಣ್ಣುಗಳ ಎಕ್ಸ್‌ಚೇಂಜ್..<br />
ಡಿಸಾಲ್ವ್<br />
-ಅವರಿಬ್ಬರೂ ಕೂತು ಊಟ ಮಾಡ್ತಾ ಇದ್ದಾರೆ [ಒಂದೇ ತಟ್ಟೆಯಲ್ಲಿ]<br />
-ಆತ ಆಕೆಗೆ ತಿನ್ನಿಸೋದು. ಅವಳು ಆತನಿಗೆ ತಿನ್ನಿಸೋದು ಅವರ ಪ್ರೀತಿಯ ಅನಾವರಣ<br />
ಡಿಸಾಲ್ವ್<br />
-ರೂಮಲ್ಲಿ ಒಬ್ಬರನ್ನೊಬ್ಬರು ನೋಡ್ತಾ ಮಂಚದ ಮೇಲೆ ಕೂತಿದ್ದಾರೆ. ಆಗ ಇದ್ದಕ್ಕಿದ್ದಂತೆ ಅವಳ ಕಣ್ಣಲ್ಲಿ ನೀರು<br />
ಸರ್ವ: ಏನಾಯ್ತು ಅನು?..<br />
ಅನು: ಅಮ್ಮ-ಅಪ್ಪ! ಅವರು ಏನ್ ಅಂದ್ಕೋತಿರ‍್ತಾರೋ! ಪಾಪ!.. [ಎಂದು ಬಿಕ್ಕಳಿಸುತ್ತಾಳೆ]<br />
ಸರ್ವ: ಇನ್ನ್ ಮೇಲ್ ನಿನಗ್ ಅಪ್ಪ-ಅಮ್ಮ ಎಲ್ಲ ನಾನೇ.. ಇದು ಸಂತೋಷವಾಗಿರ್‌ಬೇಕಾದ್ ಟೈಮು.. ಈ ಹೊತ್ತಲ್ಲಿ ಅಳ್‌ಬಾರ‍್ದು.. ಬಾ ಮಲಕ್ಕೋ.. [ಎಂದು ಮಲಗಿಕೊಳ್ಳೂವಾಗ]<br />
ಡಿಸಾಲ್ವ್<br />
-ಬೆಳಕಾಗಿದೆ ಆತ ಇನ್ನೂ ಮಲಗಿದ್ದಾನೆ. ಕಣ್ಣ್ ಬಿಟ್ಟು ನೋಡುವಾಗ ಬೆಳಕರಿದಿದ್ದು ಗೊತ್ತಾಗಿ ನೋಡ್ತಾನೆ ಪಕ್ಕದಲ್ಲಿ ಅವಳಿಲ್ಲ. ಟೈಂ ನೋಡ್ತಾನೆ ತಕ್ಷಣ ಏಳ್ತಾನೆ<br />
-ಅನು ಸ್ನಾನ ಮಾಡಿ ಆಗ ತಾನೇ ಕೂದಲು ಒರೆಸುತ್ತಾ ಹೊರಗೆ ಬರ‍್ತಾಳೆ, ಅವಳು ತನ್ನ ಜಡೆ ಕೂದಲನ್ನು ಒಮ್ಮೆ ಕೊಡೊವೊಕ್ಕೂ ಅದು ಅಲ್ಲಿಗೆ ಬರುವ ಸರ್ವನ ಮುಖದಲ್ಲಿ ತುಂತುರು ಹನಿಯಾಗಿ ಚಿಮ್ಮುತ್ತದೆ.<br />
-ಆತ ಅವಳ ನೋಡ್ತಾನೆ<br />
-ಅವಳೂ ಆತನ್ನ ನೋಡ್ತಾಳೆ<br />
-ಆತ ಅವಳಿಗೆ ಹತ್ತಿರಾಗಲು ಹವಣಿಸುವಾಗ<br />
ಅನು: [ಅವನನ್ನು ದೂರ ತಳ್ಳಿ] ಕೆಲಸಕ್ಕೆ ರಜ ಇಲ್ಲಪ್ಪಾ!.. ಹೊತಾಯ್ತು. ಹೋಗ್ ಸ್ನಾನ ಮಾಡು..<br />
ಸರ್ವ: [ಅವನು ಕೆಲಸವನ್ನು ನೆನೆದು] ಅನು.. ಇವತ್ತ್ ನಮ್ಮ್ ಮದ್ವೆ ಆಗ್ ಎರಡ್ನೇ ದಿನ.. ಇವತ್ತೇ ಕೆಲ್ಸಕ್ಕ್ ಹೋಗ್‌ಬೇಕಾ?..<br />
ಅನು: ನಮ್ಮ್ ಹಿಂದೆ ಸಪೋರ್ಟ್‌ಗೆ ಅಂತ ಯಾರೂ ಇಲ್ಲ.. ನಾವೇ ದುಡೀಬೇಕು.. ನಾವೇ ಸಂಪಾದಿಸ್ಬೇಕು ಕಣೋ!<br />
-ಆತನ ರಿಯಾಕ್ಷನ್<br />
ಅನು: ಮನೆ ಬಾಡಿಗೆ, ರೇಶನ್ನು, ಕರೆಂಟು, ನೀರು, ತರಕಾರಿ ಎಲ್ಲಾದಕ್ಕೂ ದುಡ್ಡ್ ಬೇಕು ಅಂದ್ರೆ.. ನಾವಿಬ್ರೂ ರಜ ಹಾಕ್ದೆ ಕೆಲ್ಸ ಮಾಡ್ಲೇಬೇಕು..<br />
-ಆತನೂ ಅದು ಸರಿ ಎಂಬಂತೆ ತಲೆಯಾಡಿಸುತ್ತಾನೆ<br />
ಅನು: ನಾನ್ ತಿಂಡಿ ಮಾಡ್ತೀನಿ.. ಬೇಗ್ ಸ್ನಾನ ಮಾಡ್ಕೊಂಡ್ ಬಾ.. [ಎನ್ನುತ್ತಾ ಹೊರಡುವಾಗ ಇದ್ದಕ್ಕಿದ್ದಂತೆ ಕೆಮ್ಮಲಾರಂಭಿಸುತ್ತಾಳೆ. ಒಂದೇ ಸಮನೆ]<br />
ಸರ್ವ: [ಅಚ್ಚರೀಲಿ] ಏನಾಯ್ತು ಅನು ಇದ್ದಕ್ಕಿದ್ದ್‌ಹಾಗೆ..<br />
ಅನು: [ಸಾವರಿಸಿಕೊಂಡು] ಇಷ್ಟ್ ವರ್ಷದಿಂದ ಗಾರ್ಮೆಂಟ್ಸಿನ್ ಧೂಳ್ ಕುಡ್ದಿದ್ದೀನಲ್ಲ.. ಅದ್ ಕೊಟ್ಟಿರೋ ಗಿಫ಼್ಟು ಈ ಕೆಮ್ಮು.. ಗಾಬರಿ ಆಗೋಂಥದ್ದ್ ಏನಿಲ್ಲ.. ಹೋಗು ಸ್ನಾನ ಮಾಡು.. [ಎಂದು ಸಾಗುತ್ತಾಳೆ, ಈತ ಅವಳು ಹೋದತ್ತಲೆ ನೋಡುತ್ತಾ ಸ್ವಲ್ಪ ಹೆದರಿದಂತಿದ್ದವನು ನಂತರ ಸ್ಮೈಲ್ ತಂದುಕೊಂಡು ಸ್ನಾನಕ್ಕೆ ಸಾಗ್ತಾನೆ]</p>
<p><span style="text-decoration:underline;"><strong>ದೃಶ್ಯ-೭/ಹಗಲು/ಹೊರಗೆ/ಮಾಂಟೇಜಸ್ ಹಲವು ಜಾಗ</strong></span><br />
-ಗಡಿಬಿಡಿಯಲ್ಲಿ ಮನೆಯ ಹೊರ ಬಂದು ಬೀಗ ಹಾಕಿ ಇಬ್ಬರೂ ಒಟ್ಟಿಗೆ ಹೊರಡುವುದು, ಅದನ್ನು ನೋಡುವ ಮನೆಯ ಮಾಲಕಿ ಸ್ಮೈಲ್<br />
ಡಿಸಾಲ್ವ್<br />
-ದಾರಿಯಲ್ಲಿ ಗೆಳತಿ ಬೃಂದಾ ಇಬ್ಬರಿಗೂ ಸಿಗುವುದು, ಮಾತುಕತೆ ನಗು ಇತ್ಯಾದಿ, ಅವರ ಅವಸರ ಸಾಗುತ್ತಾರೆ. ಗೆಳತಿ ಬೃಂದಾಳ ಸ್ಮೈಲ್ ಮೇಲೆ<br />
ಡಿಸಾಲ್ವ್<br />
-ರಸ್ತೆಯ ತಿರುವೊಂದರಲ್ಲಿ ಕಾಯ್ತಾ ಇರುವ ಅನು. ಅಲ್ಲಿಗೆ ಓಡಿದವನಂತೆ ಬರುವ ಸರ್ವ, ಅವರಿಬ್ಬರೂ ಅಲ್ಲಿಂದ ಕೈ ಕೈ ಹಿಡಿದುಕೊಂಡು ಸಾಗುತ್ತಾರೆ<br />
ಡಿಸಾಲ್ವ್<br />
-ಇಬ್ಬರೂ ಒಂದು ಅಂಗಡಿಯಲ್ಲಿ ಹೋಗಿ ತರಕಾರಿ ಕೊಳ್ತಾರೆ. ಇವಳು ಚೌಕಾಸಿ ಮಾಡ್ತಾಳೆ, ಅವಳನ್ನ ಆನಂದದಿಂದ ನೋಡುವ ಸರ್ವ<br />
ಡಿಸಾಲ್ವ್<br />
-ಮನೆಯಲ್ಲಿ ಅಡಿಗೆ ಮಾಡಿದ್ದಾಳೆ, ಆ ಪಾತ್ರೆಗಳನ್ನು ತಂದು ನೆಲದ ಮೇಲೆ ಇಡ್ತಾಳೆ, ಊಟ ಬಡಿಸುತ್ತಾಳೆ, ಮತ್ತೆ ಮೊದಲಿನಂತೆ ಪ್ರೀತಿಯಿಂದ ಒಂದೇ ತಟ್ಟೆಯಲ್ಲಿ ಪರಸ್ಪರರು ತಿನ್ನುತ್ತಾರೆ.<br />
-ಊಟ ಮಾಡುವಾಗ ಅವಳು ಮತ್ತೆ ಕೆಮ್ಮುತ್ತಾಳೆ<br />
-ಸರ್ವ ನೀರು ಕುಡಿಸಿ ತಲೆ ತಟ್ಟುತ್ತಾನೆ. ಅವಳ ಕಣ್ಣಲ್ಲಿ ಅವನ ಪ್ರೀತಿಯ ಬಿಂಬ<br />
ಡಿಸಾಲ್ವ್<br />
-ಗೆಳತಿಯರಿಬ್ಬರೂ ಒಂದೆಡೆ ಮಾತಾಡ್ತಾ ಇದ್ದಾರೆ<br />
ಗೆಳತಿ: ಹಾಗಾದ್ರೆ ಹ್ಯಾಪಿಯಾಗಿದ್ದೀಯ ಅನ್ನು?..<br />
ಅನು: ಇರೋದ್ರಲ್ಲೇ ಸಂತೋಷ ಪಡ್ತೀವಿ ಅನ್ನೋರ‍್ಗೆ ದುಃಖ ಇರಲ್ಲ ಬೃಂದಾ.. ನಮಗ್ ಬರೋ ಆದಾಯಕ್ಕ್ ತಕ್ಕ್ ಹಗ್ ಬದುಕ್ತಾ ಇದ್ದೀವಿ.. ಪರಸ್ಪರ ಪ್ರೀತಿಸ್ತಾ ಇದ್ದೀವಿ.. ಪ್ರೀತಿ ಇರೋವಾಗ ಯಾವ್ ಕಷ್ಟಾನೂ ದೊಡ್ಡದಲ್ಲ..<br />
ಗೆಳತಿ: ಗ್ರೇಟ್.. ನೀನ್ ಮನೆ ಬಿಟ್ಟ್ ಬಂದು ಎಲ್ಲ್ ಜೀವ್ನ ಹಾಳ್ ಮಾಡ್ಕೊಳ್ತೀಯೋ ಅಂತಿದ್ದೆ.. ಆದ್ರೆ ನೀನ್ ಚೆನ್ನಾಗಿದ್ದೀಯ.. ವೆರಿಗುಡ್.. ಈ ಸಂತೋಷ ಪ್ರೀತಿ ಯಾವಾಗ್ಲೂ ಹೀಗೆ ಇರ‍್ಲಿ..<br />
<span style="text-decoration:underline;"><strong>ದೃಶ್ಯ-೮/ರಾತ್ರಿ/ಒಳಗೆ/ಅನು ಮನೆ</strong></span><br />
-ಇಬ್ಬರೂ ಮನೆಯ ಬಾಗಿಲು ತೆಗೆದು ಒಳಗೆ ಬರ‍್ತಾರೆ. ದಣಿದಂತಿದ್ದಾರೆ. ಬಂದು ಸುಸ್ತಾದಂತೆ ಕೂರ‍್ತಾರೆ, ಅವಳು-ಅವನ ತೊಡೆಯ ಮೇಲೆ ಹಾಗೇ ಮಲಗುತ್ತಾಳೆ, ಅವನು ಅವಳ ತಲೆ ನೇವರಿಸಿ ಸ್ಮೈಲ್ ಮಾಡ್ತಾ ನೋಡಿ ಹಾಗೇ ಒರಗಿಕೊಳ್ತಾನೆ.<br />
-ಅವಳು ಪ್ರಶಾಂತವಾಗಿ ಮಲಗಿದ್ದಾಳೆ<br />
-ಅವನು ಒರಗಿದ್ದವನು ಏನೋ ನೆನೆದಂತೆ ಅವಳತ್ತ ನೋಡ್ತಾನೆ<br />
-ಅವಳು ಸಣ್ಣದಾಗಿ ಕೆಮ್ಮಲು ಆರಂಭಿಸುತ್ತಾಳೆ. ಅವನು ಮತ್ತೆ ತಲೆ ನೇವರಿಸುತ್ತಾನೆ, ಆ ಕೆಮ್ಮು ಜಾಸ್ತಿಯಾಗತ್ತೆ, ಅವಳು ಕೆಮ್ಮು ಜಾಸ್ತಿಯಾಗಿ ಎದ್ದು ಕೂರುತ್ತಾಳೆ, ಆತ ಗಾಬರಿಯಾಗುವಷ್ಟು ಸತತ ಕೆಮ್ಮುತ್ತಾಳೆ.<br />
ಸರ್ವ: ಅನು.. ಏನಾಯ್ತು.. ನೀರ್‌ಬೇಕಾ?..<br />
-ಅವಳು ಕೆಮ್ಮುತ್ತಲೇ ಹುಂ ಅಂತಾಳೆ, ಸರ್ವೋತ್ತಮ ಅಲ್ಲಿಂದ ಅಡಿಗೆ ಮನೆಯತ್ತ ಓಡುತ್ತಾನೆ. ಇವಳು ಬಿಟ್ಟು ಬಿಟ್ಟು ಕೆಮ್ಮುತ್ತಲೇ ಇದ್ದಾಳೆ. ಸರ್ವ ನೀರು ತರ‍್ತಾನೆ ಕುಡಿಸುತ್ತಾನೆ, ನೀರು ಕುಡೀವಾಗಲೂ ಆಕೆ ಕೆಮ್ಮುತ್ತಲೇ ಇದ್ದಾಳೆ<br />
ಸರ್ವ: ಸಾಕಾ? [ಅವಳು ತಲೆಯಾಡಿಸುತ್ತಾಳೆ] ಯಾಕ್ ದಿನೇ ದಿನೇ ನಿನ್ನ್ ಕೆಮ್ಮ್ ಜಾಸ್ತೀನೆ ಆಗ್ತಾ ಇದ್ಯಲ್ಲಾ?.. ಏನಾಯ್ತು?..<br />
ಅನು: ಏನೋ ಗೊತ್ತಿಲ್ಲಾ ಸರೂ.. [ಸಾವರಿಸಿ]<br />
ಸರ್ವ: ಸರಿ ಮಲಕ್ಕೋ ಈಗ.. [ಎಂದು ಮಲಗಿಸಿ ಹೊದಿಸುತ್ತಾನೆ, ಅವಳು ಮಲಗ್ತಾಳೆ. ಈತ ಅಲ್ಲೇ ಕೂತು ಯೋಚಿಸಲು ಶುರುಮಾಡ್ತಾನೆ]<br />
-ಕೆಲಕ್ಷಣ ಕಳೆದು ಮತ್ತೆ ಲೈಟಾಗಿ ಕೆಮ್ಮುತ್ತಾಳೆ. ಅವನು ನೋಡ್ತಾನೆ. ಆ ಕೆಮ್ಮು ಮೆಲ್ಲಗೆ ಇನ್‌ಕ್ರೀಸ್ ಆಗತ್ತೆ.<br />
-ಇವನು ಗಾಬರಿಯಾಗಿ ನೋಡ್ತಾನೆ, ಅವಳ ಕೆಮ್ಮು ಹೆಚ್ಚಾದಾಗ ಮತ್ತೆ ಉಳಿದ ನೀರನ್ನು ತಗೊಂಡು ಅನೂಗೆ ಕುಡಿಸುತ್ತಾನೆ, ಆಗಲೂ ಕೆಮ್ಮುತ್ತಿರುವ ಅನು ಲೋಟದೊಳಗೆ ಸ್ವಲ್ಪ ವಾಮಿಟ್ ಮಾಡಿದಂತೆ ಉಗುಳುತ್ತಾಳೆ.<br />
-ಅದರಲ್ಲಿ ಸ್ವಲ್ಪ ರಕ್ತ ಬರುತ್ತದೆ<br />
-ಸರ್ವ ಅದನ್ನು ನೋಡದೆ ಪಕ್ಕಕ್ಕಿಟ್ಟು ಅವಳ ಬಾಯಿ ಒರೆಸಲು ನೋಡುವಾಗ ಅವಳ ಕಟವಾಯಿಯಲ್ಲಿ ರಕ್ತದ ಸಣ್ಣ ಜಿನುಗು ಕಾಣತ್ತೆ<br />
ಸರ್ವ: [ಗಾಬರಿಯಾಗಿ] ಅನು.. ರಕ್ತ?..<br />
-ಅವಳೂ ಒರೆಸಿಕೊಂಡು ನೋಡ್ತಾಳೆ, ಗಾಬರಿಯಾಗಿ ಗೊತ್ತಿಲ್ಲ ಎನ್ನುವಂತೆ ತಲೆಯಾಡಿಸುತ್ತಾಳೆ<br />
-ಆತ ಒಂದು ಬಗೆಯ ಗಾಬರಿಯಲ್ಲಿ ನೋಡುವಾಗ<br />
-ಮತ್ತೆ ಕೆಮ್ಮಲಾರಂಭಿಸುವ ಅನು. ಪುನ: ನೀರು ಕೊಡಲು ನೋಡ್ತಾನೆ<br />
-ನೀರಲ್ಲಿ ರಕ್ತದ ಉಗುಳು ಕಾಣತ್ತೆ<br />
-ಸರ್ವ ಗಾಬರಿ, ಆಗಲೆ ಅವಳ ಕೆಮ್ಮು ಇನ್ನೂ ಹೆಚ್ಚಾಗಿ ನೀರು ನೀರು ಎನ್ನುವಾಗ ಅವನು ಅದೇ ನೀರನ್ನು ಅಥವಾ ಪಕ್ಕದಲ್ಲಿ ಚೊಂಬಲ್ಲಿ ತಂದಿದ್ದ ನೀರನ್ನು ಕುಡಿಸ ಹೋಗುವಾಗ ಅವಳು ಯಥೇಚ್ಛ ರಕ್ತವನ್ನೇ ವಾಂತಿ ಮಾಡ್ತಾಳೆ<br />
ಸರ್ವ: ಅನು.. [ಎಂದು ಗಾಬರೀಲಿ ಕೂಗ್ತಾನೆ] ಏಳು.. ಈಗ್ಲೇ ಆಸ್ಪತ್ರೆಗ್ ಹೋಗೋಣ ನಡಿ..<br />
ಅನು: ಇಷ್ಟೆಕ್ಕೆಲ್ಲ ಯಾಕೆ..<br />
ಸರ್ವ: ಇಷ್ಟೊಂದ್ ರಕ್ತ ಬರ‍್ತಾ ಇದೆ.. ಯಾಕೆ ಅಂತೀಯಲ್ಲ ನಡೀ ಹೋಗಣ.. [ಎಂದು ಅವಳನ್ನು ಏಳಿಸಿ ಕೆರೆದೊಯ್ತಾನೆ]<br />
ದೃಶ್ಯ-೯/ರಾತ್ರಿ/ಒಳಗೆ/ಆಸ್ಪತ್ರೆ<br />
-ಸರ್ವೋತ್ತಮ ಕಾರಿಡಾರಲ್ಲಿ ಕೂತಿದ್ದಾನೆ. ಅವನಿಗೆ ಟೆನ್ಷನ್ ಇದೆ. ಅವನು ಆತಂಕದಲ್ಲಿ ಉಗುಳು ನುಂಗ್ತಾ ಇದ್ದಾನೆ. ಅಲ್ಲಿಗೆ ಬರುವ ಡಾಕ್ಟರ್<br />
ಡಾಕ್ಟರ್: ಮಿಸ್ಟರ್ ಸರ್ವೋತ್ತಮ್.. [ಆತ ಚಕ್ಕನೆ ಎದ್ದು ನೋಡ್ತಾನೆ]<br />
ಸರ್ವ: [ಗಾಬರಿ ಆತಂಕಗಳಲ್ಲಿ] ಡಾಕ್ಟರ್.. ಏನಾಗಿದೆ ಅನೂಗೆ?.. ಯಾಕ್ ಅಷ್ಟೋಂದ್ ರಕ್ತ ಕಕ್ಕ್‌ತಾ ಇದ್ದಾಳೆ?..<br />
ಡಾಕ್ಟರ್: ಸರ್ವೋತ್ತಮ್.. ನೀವ್ ಸ್ವಲ್ಪ ಧೈರ್ಯ ತಗೋಬೇಕು..<br />
-ಎನ್ನುತ್ತಿದ್ದಂತೆ ಅಧೈರ್ಯಗೊಂಡಂತೆ ನಿಲ್ತಾನೆ.<br />
ಡಾಕ್ಟರ್: ನಿಮ್ಮ್ ಹೆಂಡ್ತಿಗೆ ಲ್ಯುಕೇಮಿಯಾ!&#8230;<br />
-ಅವನಿಗೆ ಅರ್ಥ ಆಗಿಲ್ಲ.<br />
ಡಾಕ್ಟರ್: .. ಬ್ಲಡ್ ಕ್ಯಾನ್ಸರ್..<br />
-ಸರ್ವೋತ್ತಮನಿಗೆ ದೊಡ್ಡ ಷಾಕ್<br />
ಡಾಕ್ಟರ್: ಈ ಖಾಯ್ಲೆ ಅವ್ರಿಗ್ ಬಂದು ತುಂಬ ದಿವ್ಸ ಆಗಿದೆ.. ನೀವ್ ಯಾಕ್ ಅವರನ್ನ್ ಇಷ್ಟ್ ಲೇಟಾಗ್ ಕರ‍್ಕೊಂಡ್ ಬಂದ್ರಿ?<br />
-ಅವನಿಂದ ಮಾತೇ ಹೊರಡ್ತಾ ಇಲ್ಲ<br />
ಡಾಕ್ಟರ್: ಎನೀವೇ.. ಈಗ್ಲಾದ್ರೂ ಆಸ್ಪತ್ರೆಗ್ ತೋರ‍್ಸ್‌ಬೇಕು ಅಂತ ನಿಮಗ್ ಅನ್ನಿಸ್ತಲ್ಲಾ! ಅದಕ್ಕ್ ಖುಷಿ ಪಡ್‌ಬೇಕು ಅಷ್ಟೆ.. ಬಟ್ ನೀವ್ ಗಾಬರಿ ಆಗ್‌ಬೇಕಾದ್ ಅಗತ್ಯ ಇಲ್ಲ.. ಇದೂ ವಾಸಿ ಆಗಬೋದಾದ ಖಾಯಿಲೆ!<br />
-ಆತನ ರಿಯಾಕ್ಷನ್<br />
ಡಾಕ್ಟರ್: ಟ್ರೀಟ್‌ಮೆಂಟ್ ಸರ‍್ಯಾಗ್ ತಗೋಬೇಕು ಅಷ್ಟೇ.<br />
-ಆತನ ಆತಂಕದ ರಿಯಾಕ್ಷನ್<br />
ಡಾಕ್ಟರ್: ನಿಮ್ಮ್ ಹೆಂಡ್ತೀಗೆ ನೀವೇ ಧೈರ್ಯ ಕೊಡ್‌ಬೇಕು.. ಅವರು ನಮ್ಮ ಟ್ರೀಟ್‌ಮೆಂಟ್‌ಗೆ ಕೋಆಪರೇಟ್ ಮಾಡಿದಾಗ ಮಾತ್ರಾನೆ ಅವರ್ ಫ಼ಾಸ್ಟ್ ಆಗ್ ರಿಕವರ್ ಆಗೋದು.. [ಎಂದು ಸಾಗ್ತಾನೆ. ಆತನ ಗೊಂದಲದ ರಿಯಾಕ್ಷನ್]<br />
<span style="text-decoration:underline;"><strong>ದೃಶ್ಯ-೧೦/ರಾತ್ರಿ/ಒಳಗೆ/ಅನು ಮನೆ</strong></span><br />
-ಸರ್ವೋತ್ತಮ ಕಣ್ಣಲ್ಲಿ ನೀರು ತುಂಬಿಕೊಂಡು ಕಿಟಕಿಯತ್ತ ನೊಡ್ತಾ ಇದ್ದಾನೆ, ಅಲ್ಲಿಗೆ ಬರುವ ಅನು ಅವನ ಭುಜದ ಮೇಲೆ ಕೈಯಿಟ್ಟು<br />
ಅನು: ಸರೂ..<br />
-ಆತ ತಿರುಗುತ್ತಾನೆ, ಅವನ ಕಣ್ಣಿಂದ ನೀರು ಜಾರುತ್ತದೆ<br />
ಅನು: [ತಾನೂ ಅಳುತ್ತಿದ್ದವಳು ಕಣ್ಣು ಒರೆಸಿಕೊಂಡು] ನನಗೋಸ್ಕರ ನೀನ್ ಕಣ್ಣೀರ್ ಹಾಕ್‌ಬೇಡ್ವೋ&#8230;<br />
ಸರ್ವ: [ಅವಳನ್ನು ನೋಡಿ] ಈ ಕಣ್ಣೀರ್‌ಗ್ ಮಾತ್ರಾನೆ ಅಲ್ವಾ, ಅನು, ನಮ್ಮ್ ದುಃಖಾನ ಕಡ್ಮೆ ಮಾಡೋ ಶಕ್ತಿ ಇರೋದು..<br />
ಅನು: ಸರು.. ನನಗ್ ಕ್ಯಾನ್ಸರ್ ಬಂದಿದೆ ಅಂದ್ರೆ ಏನಾಯ್ತೀಗ? ನಾನ್ ನಿನಗಿಂತ ನಾಲ್ಕ್ ದಿನ ಮುಂಚೆ ಸಾಯ್‌ಬೋದಷ್ಟೇ.. ಆದ್ರೆ.. ಅಲ್ಲೀವರ‍್ಗಾದ್ರೂ ನಾವ್ ಚೆನ್ನಾಗ್ ಬದ್ಕ್‌ಬೋದಲ್ಲ.. ಆ ಅವಕಾಶನಾದ್ರೂ ನಮಗ್ ಇದ್ಯಲ್ಲ ಸರು..<br />
ಸರ್ವ: [ಅವಳನ್ನೇ ನೋಡ್ತಾ] ಇಲ್ಲ ಅನು.. ನಿನ್ನನ್ನ್ ಬಿಟ್ಟ್ ನನಗ್ ಬದ್ಕಿರೋಕ್ಕಾಗಲ್ಲ.. ಎಂದು ಅಳುತ್ತಾನೆ. ಮಂಚದ ಮೇಲೆ ಕುಸಿದು ತಲೆಯನ್ನು ಕೈಗಳಲ್ಲಿ ಹುಡುಗಿಸುತ್ತಾನೆ.<br />
ಅನು: ಬೆನ್ನ ಹಿಂದೆ ಇದ್ದ ಸಾವು ಕಣ್ಮುಂದೆ ಬಂದಿದೆ! ಈಗ ನೀನೂ ಹೀಗಾಡಿದ್ರೆ ನಾನ್ ಹೇಗ್ ಬದುಕ್ಲೋ?..<br />
-ಅವನು ನೋಡ್ತಾನೆ<br />
ಅನು: ಈ ಕ್ಯಾನ್ಸರ್‌ಗೆ.. ನಮ್ಮ್ ಪ್ರೀತಿನ್ ಬಲಿ ತಗೊಳ್ಳೊ ಶಕ್ತಿ ಇಲ್ಲ ಸರೂ..<br />
-ಅವನಲ್ಲಿ ಏನೋ ಧೈರ‍್ಯ ಕಾಣತ್ತೆ<br />
ಅನು: ನಮ್ಮ್ ಪ್ರೀತಿ ಮುಂದೆ ಯಾವ್ ಕಾಯ್ಲೇನೂ ಏನೂ ಮಾಡೋಲ್ಲ..<br />
-ಅವನ ರಿಯಾಕ್ಷನ್<br />
ಅನು: ಸರೂ.. ನಾನ್ ಈ ಖಾಯ್ಲೆನ್ ಗೆಲ್ತೀನೋ! ಖಂಡಿತಾ! ನಿನ್ನ ಪ್ರೀತಿ ಒಂದು ಇದ್ದ್ರೆ ಸಾಕು ಕಣೋ!<br />
-ಎನ್ನುವಾಗ ಅವನೂ ನಿಡುಸುಯ್ದು ಅವಳನ್ನು ಅಪ್ಪುತ್ತಾನೆ, ಇಬ್ಬರ ಸಂತೋಷದ ಕಣ್ಣೀರು<br />
<span style="text-decoration:underline;"><strong>ದೃಶ್ಯ-೧೨/ಹಗಲು/ಹೊರಗೆ/ರಸ್ತೆ</strong></span><br />
-ಸರ್ವ ಔಷಧದ ಅಂಗಡಿಯಿಂದ ಕೆಲವು ಔಷಧಗಳನ್ನು ತೆಗೆದುಕೊಂಡು ಹೊರಡುತ್ತಾನೆ<br />
-ಅವನು ಮಾಮೂಲಿ ಅವಳಿಗಾಗಿ ಕಾಯುವ ಜಾಗದಲ್ಲಿ ಕಾದು ನಿಲ್ತಾನೆ<br />
-ಆಗಲೇ ಭಾರವಾದ ಹೆಜ್ಜೆಗಳನ್ನಿಟ್ಟು ಇತ್ತ ಬರ‍್ತಾ ಇರುವ ಅನೂನ ನೋಡ್ತಾನೆ<br />
-ಸರ್ವ ಅಚ್ಚರಿಯಲ್ಲಿ ನೋಡ್ತಾನೆ. ಅನು ಅದೆ ಫ಼್ರೇಮಿಗೆ ಬರುತ್ತಾಳೆ. ಅವಳು ತಲೆಬಗ್ಗಿಸಿರೋದನ್ನ ನೋಡಿ ತಾನೇ ತಲೆ ಎತ್ತುತ್ತಾನೆ<br />
-ಅವಳ ಕಣ್ಣಲ್ಲಿ ನೀರು ತುಂಬಿಕೊಂಡಿದೆ<br />
ಸರ್ವ: ಮತ್ತೇನಾಯ್ತು?.. ಯಾಕ್ ಅಳ್ತಾ ಇದ್ದೀಯಾ?..<br />
ಅನು : ನನ್ನ ಕೆಲಸ ಹೋಯ್ತು!<br />
ಸರ್ವ ಅಚ್ಚರಿ-ಗಾಬರಿ<br />
ಅನು: ಫ಼್ಯಾಕ್ಟ್ರೀಲೂ ಕೆಮ್ಮ್ ಬಂತು. ರಕ್ತ ವಾಂತಿ ಆಯ್ತು.. ಆ ಸೂಪರ್‌ವೈಜರ್ ಹೋಗಿ ಓನರ್‌ಗೆ ಹೇಳ್ದಾ! ಫ್ಯಾಕ್ಟರೀಲ್ಲೇ ಏನಾದ್ರೂ ಆದ್ರೆ ಖರ್ಚು ತಲೆ ಮೇಲೆ ಬರತ್ತೆ ಅಂತ ಕೆಲ್ಸದಿಂದ ತೆಗ್ದ್‌ಬಿಟ್ರು ಕಣೊ, ನನ್ನನ್ನ!&#8230;<br />
- ಎನ್ನುವಾಗ ಆತನ ಷಾಕ್<br />
- ಅನು ಅಳ್ತಾಳೆ.<br />
ಸರ್ವ: [ಪೂರ್ತಿ ಹೆದರಿದಂತೆ] ಹಾಗಾದ್ರೆ ಮುಂದೆ?.. ನನ್ನೊಬ್ಬನ್ ಸಂಬಳದಲ್ಲಿ ನಮ್ಮ್ ಜೀವ್ನ ಹೇಗಾಗತ್ತೆ ಅನೂ?..<br />
ಅನು: [ಅವಳು ಕಣ್ಣೋರೆಸಿಕೊಂಡು] ಈ ಕೆಲ್ಸ ಹೋದ್ರೇನಂತೆ.. ಇನ್ನ್ ಯಾವ್ದಾದ್ರೂ ಕೆಲ್ಸ ಹುಡುಕ್ತೀನಿ&#8230; ನಡೀ ಹೋಗೋಣ.. [ಎಂದು ಆಕೆ ಮುಂದೆ ಸಾಗುತ್ತಾಳೆ. ಆತನ ರಿಯಾಕ್ಷನ್]<br />
<span style="text-decoration:underline;"><strong>ದೃಶ್ಯ-೧೩/ಹಗಲು/ಒಳಗೆ/ಅನು ಮನೆ</strong></span><br />
[ಒಂದಷ್ಟು ದಿನಗಳು ಕಳೆದಿವೆ ಎಂಬಂತೆ]<br />
-ಸರ್ವ ತಲೆಮೇಲೆ ಕೈ ಹೊತ್ತವನಂತೆ ಕೂತಿದ್ದಾನೆ. ಅಲ್ಲಿಗೆ ಲೈಟಾಗಿ ಆಗಾಗ ಕೆಮ್ಮಾತ್ತಾ ಬರುವ ಅನು ಏನಾಯ್ತು ಎಂಬಂತೆ ನೋಡ್ತಾ<br />
ಅನು: ಸರೂ.. [ಎನ್ನುವಾಗ ಆತ ತಲೆ ಎತ್ತಿ ನೋದ್ತಾನೆ. ಆತನಿಗೆ ಅವಳನ್ನು ನೋಡುವ ಆಸಕ್ತಿಯೂ ಇಲ್ಲವೆಂಬಂತೆ ಬೇರೆಡೆಗೆ ತಿರುಗುತ್ತಾನೆ] ಯಾಕ್ ಹೀಗ್ ಕೂತಿದ್ದೀಯಾ?.<br />
ಸರ್ವ: ಜೇಬ್ ಖಾಲಿ ಆಗಿದೆ.. ಯಾವ್ ಪದಾರ್ಥ ತರೋದಕ್ಕೂ ನನ್ನ್ ಹತ್ರ ದುಡ್ಡಿಲ್ಲ.. ನನ್ನೊಬ್ಬನ್ ದುಡ್ಮೆ ಯಾವ್ದಕ್ಕೂ ಆಗ್ತಾ ಇಲ್ಲ.. ಹಾಲು. ತರಕಾರಿ, ದಿನಸಿ.. ಯಾವ್ದಕ್ಕೂ ದುಡ್ಡು ಸಾಲ್ತಾ ಇಲ್ಲ..<br />
ಅನು: ಅದಕ್ಕ್ ಯಾಕ್ ಬೇಜಾರು ಮಾಡ್ಕೊತ್ತೀಯೋ?.. ಇರೋದ್ರಲ್ಲೇ ಅಡ್ಜಸ್ಟ್ ಮಾಡಿದ್ರಾಯ್ತು ಬಿಡು..<br />
ಸರ್ವ: ಹೇಗ್ ಮಾಡೋದು?..<br />
ಅನು: ಒಂದ್ ಹೊತ್ತ್ ಊಟ ಬಿಟ್ರಾಯ್ತು ಬಿಡು..<br />
-ಎನ್ನುವಾಗ ಆತನ ರಿಯಾಕ್ಷನ್<br />
ಅನು: ಏಳು.. ಆಫೀಸಿಗ್ ಹೊರಡು.<br />
ಸರ್ವ: ಎಷ್ಟ್ ದಿನ ಅಂತ ಒಂದ್ ಹೊತ್ತ್ ಊಟ ಬಿಡೋಕ್ಕಾಗತ್ತೆ?..<br />
ಅನು: ನಮ್ಮಿಬ್ಬರಲ್ಲ್ ಪ್ರೀತಿ ಇರೋವರ‍್ಗೂ..<br />
- ಆತ ಸಂಕಟದಿಂದ ಕಣ್ಣ್ ಮುಚ್ಚುತ್ತಾನೆ.<br />
ಅನು: ಯೋಚ್ಸ್‌ಬೇಡ.. ನಮ್ಮ್ ಪ್ರೀತಿ ಆ ಹಸ್ವನ್ನ.. ಆ ಕೊರತೇನ.. ಎಲ್ಲಾನೂ ಗೆಲ್ಲತ್ತೆ.. [ಎನ್ನುವಾಗ ಇದೆಲ್ಲ ಮಾತಿಗಷ್ಟೆ ಎಂಬಂತೆ ನೋಡಿ ಅಲ್ಲಿಂದ ಏನೂ ಹೇಳದೆ ಇದ್ದು ಸಾಗ್ತಾನೆ, ಅನು ಗೊಂದಲದ ರಿಯಾಕ್ಷನ್]<br />
<span style="text-decoration:underline;"><strong>ದೃಶ್ಯ-೧೪/ಹಗಲು/ಒಳಗೆ/ಆಸ್ಪತ್ರೆ</strong></span><br />
-ಡಾಕ್ಟರ್ ಮುಂದೆ ಒಬ್ಬಳೇ ಕುಳಿತಿರುವ ಅನು, ಆತ ಪ್ರಿಸ್ಕ್ರಿಪ್ಷನ್ ಬರೆದು ಕೊಡುತ್ತಾ<br />
ಡಾಕ್ಟರ್: ಇವತ್ತ್ ಸರ್ವೋತ್ತಮ್ ಅವರ್ ಯಾಕ್ ಬರ‍್ಲಿಲ್ಲ?..<br />
ಅನು: ರಜಗಳೆಲ್ಲ ಖಾಲಿ ಆಗಿದಾವೆ ಡಾಕ್ಟರ್.. ದುಡ್ಯೋದ್ ಅವನೊಬ್ನೆ.. ಕೆಲ್ಸಕ್ಕ್ ಹೋಗ್ಲಿಲ್ಲ ಅಂದ್ರೆ ಪೇಮೆಂಟ್ ಕಟ್ ಮಾಡ್ತರೆ.. ಅದಕ್ಕೆ ನಾನೊಬ್ಬಳೆ ಬಂದೆ..<br />
-ಡಾಕ್ಟರ್ ರಿಯಾಕ್ಷನ್<br />
ಡಾಕ್ಟರ್: [ತಲೆಯಾಡಿಸಿ] ಓ.. [ಎಂದು ಏನೂ ಹೇಳೋದೋ ತೋಚದೆ] ಆಕ್ಚುಯಲೀ ನಿಮ್ಮ್ ಟ್ಯಾಬ್ಲೆಟ್ಸ್ ಚೇಂಜ್ ಮಾಡಿದ್ದೀನಿ.. ತಗೊಳ್ಳೀ.. ಇವನ್ನ ಇವತ್ತಿಂದಾನೇ ತಗೋಬೇಕು..<br />
-ಅವಳು ಅದನ್ನು ಭಾರವಾದ ಕೈಗಳಲ್ಲಿ ತಗೊಳ್ತಾಳೆ ಅವನನ್ನೇ ನೋಡ್ತಾಳೆ<br />
ಡಾಕ್ಟರ್: ಏನಾಯ್ತಮ್ಮ?.. ಯಾಕ್ ಹಾಗ್ ನೋಡ್ತಿದ್ದೀರಿ?..<br />
ಅನು: ನೀವ್ ಬರೀತಿರೋ ಮೆಡಿಸನ್ಸ್ ತಗೊಳ್ಳೋಕ್ಕೆ ನಮ್ಮ್ ಸಂಬಳ ಸಾಕಾಗ್ತಾ ಇಲ್ಲ ಡಾಕ್ಟರೇ..<br />
ಡಾಕ್ಟರ್: ಯಾರಾದ್ರೂ ಡೊನರ‍್ಸ್‌ನ ಹುಡುಕೀ..<br />
ಅನು: ಈ ಊರಲ್ಲಿ ದಾನ ಮಾಡಿ ಅಂತ ಯಾರನ್ನ ಕೇಳೋದು ಸಾರ್?&#8230;<br />
ಡಾಕ್ಟರ್: ಪ್ರಯತ್ನ ಪಡಿ.. ಮನುಷ್ಯತ್ವ ಇರೋರು ಯಾರಾದ್ರೂ ಸಿಕ್ಕೇ ಸಿಗ್ತಾರೆ.. [ಎನ್ನುವಾಗ ಆಕೆ ಇನ್ನೇನೂ ಮಾತಾಡದೆ ಪ್ರಿಸ್ಕಿಪ್ಷನ್ ಹಿಡಿದು ಎದ್ದು ಹೊರಡ್ತಾಳೆ]<br />
<span style="text-decoration:underline;"><strong>ದೃಶ್ಯ-೧೪ಎ/ಹಗಲು/ಒಳಗೆ/ಆಸ್ಪತ್ರೆ</strong></span><br />
-ಅನು ಪ್ರಿಸ್ಕಿಪ್ಷನ್ ಹಿಡಿದು ಡಾಕ್ಟರ್ ರೂಮಿಂದ ಹೊರಕ್ಕೆ ಬರುವಾಗ ಯಾರೋ ನಗ್ತಾ ಬಂದು ಅನೂಗೆ ಡಿಕ್ಕಿ ಹೊಡೀತಾನೆ. ಅವಳು ಇನ್ನೇನು ಬೀಳುವುದರಲ್ಲಿದ್ದಾಗ ಅವಳನ್ನು ಹಿಡಿದು ನಿಲ್ಲಿಸಿ<br />
ಆತ: ನೋಡ್ಕೊಂಡ್ ಹೋಗ್ರೀ.. [ನಗುತ್ತಲೇ]<br />
-ಅವಳು ಕೋಪದಿಂದ ನೋಡ್ತಾಳೆ<br />
ಆತ: ಅಯ್ಯೋ.. ನೋಡ್ಕೊಂಡ್ ಹೋಗಿ ಅಂದ್ರೆ ನುಂಗ್‌ಹಾಕ್ಕೊಂಡ್ ಹೋಗೋ ತರ ನೋಡ್ತಿದ್ದೀರಲ್ರೀ?..<br />
-ಅನು ಕೋಪದಿಂದಲೇ ನೋಡ್ತಾಳೆ<br />
ಆತ: [ಸ್ಮೈಲ್ ಮಾಡ್ತಾ] ಅನ್ಯಾಯವಾಗ್ ಬಿದ್ದು ತಲೆ ಒಡ್ಕೊಳ್ತಾ ಇದ್ರಲ್ಲ ಅಂತ ಹೇಳ್ದೆ.. ನನ್ನ್ ಮಾತಿಂದ ನಿಮಗೇನಾದ್ರೂ ಬೇಜಾರಾಗಿದ್ರೆ.. [ತಡೆದು] ಮಾಡ್ಕೊಳ್ಳೋಕ್ಕ್ ಹೋಗ್‌ಬೇಡಿ.. [ಎಂದು ಹೇಳಿ ಅಲ್ಲಿಂದ ನಗುನಗುತ್ತಲೇ ಸಾಗಿಬಿಡುತ್ತಾನೆ]<br />
-ಅನು ಇನ್ನೂ ಕೋಪದಿಂದ ನೋಡ್ತಾಳೆ, ಮತ್ತೆ ಸಾಗ್ತಾಳೆ<br />
<span style="text-decoration:underline;"><strong>ದೃಶ್ಯ-೧೫/ಹಗಲು/ಒಳಗೆ/ಅನು ಮನೆ</strong></span><br />
-ಮುಚ್ಚಿರುವ ಬಾಗಿಲನ್ನು ತೆರೆದುಕೊಂಡು ಒಳಗೆ ಬರುವ ಅನು. ಅವಳಿಗೆ ಬಿಸಿಲಿಗೂ ಸುಸ್ತಿಗೂ ತಲೆ ಸುತ್ತಿದಂತಾಗುತ್ತದೆ ಬಂದು ನೀಳಲಿದ್ದವಳು ಗೋಡೆ ಹಿಡಿದು ನಿಲ್ತಾಳೆ, ಸಾವರಿಸಿ ಹೊಟ್ಟೆ ಹಸಿವು ಎಂಬಂತೆ ಹೊಟ್ಟೆಹಿಡಿದುಕೊಂದು ಅಡಿಗೆ ಮನೆಯತ್ತ ಸಾಗುತ್ತಾಳೆ.<br />
-ಅಡಿಗೆ ಮನೆಗೆ ಬಂದು ತಿನ್ನಲು ಏನಾದರೂ ಇದೆಯಾ ಎಂದು ಮತ್ತೆ ಪಾತ್ರೆ ಪಗಡೆಗಳನ್ನೆಲ್ಲ ಹುಡುಕುತ್ತಾಳೆ ಏನೂ ಸಿಗುವುದಿಲ್ಲ. ಬೇಜಾರು ಮಾಡಿಕೊಳ್ತಾ ನೀರು ತಗೊಳ್ಳಲು ಹೋಗುವಾಗ ಷೆಲ್ಫ್ ಮೇಲೆ ಏನೋ ನೋಡಿದಂತೆ ಅಚ್ಚರಿಯಾಗ್ತಾಳೆ.<br />
-ಅಲ್ಲಿ ಒಂದು ಪತ್ರ ಕಾಣುತ್ತದೆ<br />
-ಆಕೆ ಏನೆಂದು ಆತಂಕದಿಂದ ಎತ್ಕೊಂಡು ನೋಡ್ತಾಳೆ ಓಪನ್ ಮಾಡ್ತಾಳೆ<br />
ಅನು,<br />
ನಾನೂ-ನೀನು ಪರಸ್ಪರ ಇಷ್ಟ ಪಟ್ಟು, ಪ್ರೀತ್ಸಿ ಮದ್ವೆ ಆದ್ವಿ.. ಕೊನೆವರ‍್ಗೂ ಸುಖವಾಗ್ ಬಾಳ್ತೀವಿ ಅಂದ್ಕೊಂಡ್ವಿ.. ಇರೋದ್ರಲ್ಲ್ ಅಡ್ಜಸ್ಟ್ ಮಾಡ್ಕೊಂಡ್ ಬದುಕ್‌ಬೇಕು ಅಂದ್ಕೊಡ್ವಿ.. ಆದ್ರೆ ಹಾಗಾಗ್‌ಲಿಲ್ಲ.. ನಿನಗ್ ಬಂದ್ ಖಾಯ್ಲೆ ನಮ್ಮ್ ಸುಖ ನೆಮ್ಮದಿನೆಲ್ಲ ಕಿತ್ಕೊಂಡ್‌ಬಿಡ್ತು..<br />
-ಆಕೆ ಅದುರುತ್ತಾ ನೋಡ್ತಾಳೆ<br />
ನಿನ್ನ್ ಕೆಲ್ಸ ಕಿತ್ಕೊಳ್ತು.. ನಿನ್ನ್ ಆರೋಗ್ಯ ಕಿತ್ಕೊಳ್ತು.. ನನ್ನ್ ನೆಮ್ಮದಿ ಕಿತ್ಕೊಳ್ತು.. ಯಾವತ್ತೂ ಸಾಲ ಮಾಡ್ದೆ ಇರೋ ನನ್ನನ್ನ ಎಲ್ಲಾರ್ ಹತ್ರ ದುಡ್ಡ್‌ಗೋಸ್ಕರ ಭಿಕ್ಷೆ ಬೇಡೋಹಾಗ್ ಮಾಡ್ತು..<br />
-ಅನು ಕಣ್ಣ್ ತುಂಬಿಕೊಳ್ಳತ್ತೆ<br />
ಆಗಲ್ಲ ಅನು.. ನನಗ್ ಈ ಥರದ್ ಜೀವ್ನ ಆಗಲ್ಲ.. ಗಂಜಿ ಕುಡ್‌ದ್ರೂ ಯಾರ್ ಮುಂದೆನೂ ಕೈ ಚಾಚ್ದೆ ಬದುಕ್‌ಬೇಕು ಅಂದ್ಕೊಂಡಿದ್ದೋನ್ನ.. ಎಲ್ಲಾರ್ ಮುಂದೆ ತಲೆ ತಗ್ಸೋಹಾಗ್ ಮಾಡ್‌ಬಿಡ್ತು ನಿನ್ನ್ ಖಾಯ್ಲೆ.. ದಿನಾ ದಿನಾ ಔಷಧಿ ಖರ್ಚು.. ಆಸ್ಪತ್ರೆ ಖರ್ಚ್ ಏರ್ಕೆ ಆಗ್ತಾಇದೆ.. ನಾನ್ ಎಲ್ಲಿಂದ ತರ‍್ಲಿ?..<br />
-ಅನು ಕಣ್ಣೀರು ಜಾರತ್ತೆ<br />
ಇನ್ನ್ ನನ್ನಿಂದ ಆಗಲ್ಲ ಅನು.. ಈ ಸಾಲಗಾರ್ ಜೀವ್ನ, ಈ ತೊಳಲಾಟ.. ಜಂಜಾಟ.. ನನ್ನಿಂದ ಆಗಲ್ಲ.. ಅದಕ್ಕೆ.. ನಾನ್ ನಿನ್ನನ್ನ.. ನನ್ನ್ ಪ್ರೀತೀನ್ ಬಿಟ್ಟು ದೂರ ಹೋಗ್ತಾ ಇದ್ದೀನಿ.. ನನ್ನನ್ನ್ ಕ್ಷಮ್ಸ್‌ಬಿಡು..<br />
ನಿನ್ನ<br />
ಸರು..<br />
-ಎಂದಿದ್ದ ಲೆಟರ್ರನ್ನು ಓದಿ ಪಾತಾಳಕ್ಕೆ ಇಳಿದಂತೆ ಕುಸಿದು ಹೋಗ್ತಾಳೆ, ದಿಕ್ಕೇ ತೋಚದೆ ಕೂತುಬಿಡುತ್ತಾಳೆ<br />
<span style="text-decoration:underline;"><strong>ದೃಶ್ಯ-೧೬/ಹಗಲು/ಒಳಗೆ/ಅನು ಮನೆ</strong></span><br />
-ನ್ಯೂಟ್ರಲ್‌ಯಿಂದ ಪ್ಯಾನ್ ಆದರೆ ಗೆಳತಿ ನಿಂತಿದ್ದಾಳೆ. ಅವಳು ಅತ್ತಿತ್ತ ತಲೆಯಾಡಿಸುತ್ತಾ<br />
ಗೆಳತಿ: ನೀನ್ ಎಲ್ಲಾರ‍್ನೂ ಬಿಟ್ಟ್ ಮದ್ವೆ ಆಗ್ತೀನಿ ಅಂದಾಗ್ಲೇ ನನಗ್ ಈ ಭಯ ಇತ್ತು.. ಅದಕ್ಕೇ ನಿನಗ್ ಆಗ್ಲೇ ಬಡ್ಕೊಂಡೆ.. ದುಡ್‌ಕ್‌ಬೇಡ ಅಂತ ಎಷ್ಟ್ ಹೇಳ್ದೆ.. ಆಗ್ ನನ್ನ್ ಮಾತ್ ಕೇಳ್ದೆ.. ನನ್ನ್ ಪ್ರೀತಿ ಮೇಲ್ ನನಗ್ ನಂಬ್ಕೆ ಇದೆ ಅಂದೆ.. ಈಗ್ ಏನಾಯ್ತು ಆ ನಿನ್ನ್ ಪ್ರೀತಿ?..<br />
-ಅನು ಅಳ್ತಾಳೆ<br />
ಗೆಳತಿ: [ಅವಳ ಬಳಿಗೆ ಹೋಗಿ ಸಮಧಾನಿಸುತ್ತಾ] ಈಗ್ ಅತ್ರೆ ಏನ್ ಬಂತು ಭಾಗ್ಯ.. ಹೋಗು.. ನಿಮ್ಮಪ್ಪ ಅಮ್ಮನ್ ಹತ್ರನಾದ್ರೂ ಹೋಗಿ ತಪ್ಪಾಯ್ತು ಅಂತ ಹೇಳು.. ನಿನ್ನ್ ಮನೇಗ್ ಹೋಗ್ ಸೇರ‍್ಕೋ.. ಇನ್ನಾದ್ರೂ ನೆಮ್ಮದಿಯಾಗಿರು..<br />
ಅನು: ಇಲ್ಲ ಬೃಂದಾ.. ನಾನ್ ಅಲ್ಲಿಗ್ ಹೋಗಲ್ಲ.. ಸೋತು ಅಲ್ಲೀಗ್ ಹೋದ್ರೆ ನನ್ನ್ ಬಾಳ್ ನರ‍್ಕ ಆಗ್‌ಬಿಡತ್ತೆ.. ನಾನ್ ಎಲ್ಲಿಗೂ ಹೋಗಲ್ಲ.. [ಎಂದು ಮತ್ತೆ ಅಳ್ತಾಳೆ]<br />
ಗೆಳತಿ: [ಕೆಲಕ್ಷಣ ಯೋಚಿಸಿ ಅವಳ ತಲೆ ಎತ್ತಿ] ಆಯ್ತು ನಿನ್ನಿಷ್ಟ ಬಂದ್ ಹಾಗ್ ಮಾಡು.. ಸಧ್ಯಕ್ಕೆ ಈ ದುಡ್ಡ್ ಇಟ್ಕೋ.. [ಕೊಡ್ತಾಳೆ]<br />
-ಅನು ಅಳ್ತಾ ತಗೊಳ್ತಾಳೆ<br />
ಗೆಳತಿ: ಹಾಗೇ.. ನಿನಗ್ ಬೇರೆ ಎಲ್ಲಾದ್ರೂ ಕೆಲ್ಸ ಸಿಗ್‌ಬೋದಾ ಅಂತ ನೋಡ್ತೀನಿ..  ಹುಷಾರು.. ಏನೇ ಬೇಕಾದ್ರೂ ಫೋನ್ ಮಾಡು.. [ಎಂದು ಹೊರಡುತ್ತಾಳೆ, ಅನು ದುಡ್ಡು ನೋಡ್ತಾ ಉಳೀತಾಳೆ]<br />
<span style="text-decoration:underline;"><strong>ದೃಶ್ಯ-೧೬ಎ/ಹಗಲು/ಒಳಗೆ-ಹೊರಗೆ/ಅನು ಮನೆ</strong></span><br />
-ಗೆಳತಿ ಹೋದಾಗ ಕೂತಿರುವ ಸ್ಥಿತಿಯಲ್ಲೇ ಇರುವ ಅನು ಹಾಗೇ ಕಣ್ಣು ಮುಚ್ಚಿದ್ದಾಳೆ, ‘ಅನ್ನ್‌ಪೂರ್ಣ.. ಅನ್ನ್‌ಪೂರ್ಣ’ ಎಂಬ ಮನೆಯ ಮಾಲಕಿಯ ಕೂಗಿಗೆ ಎಚ್ಚರಾಗತ್ತೆ.<br />
ಮಂಜುಳಮ್ಮ: [ಹೊರಗೆ ನಿಂತು ಕೈಯಲ್ಲಿ ಏನೋ ಬಟ್ಟಲು ಹಿಡಿದು] ಅನ್ನಪೂರ್ಣ.. ಅನ್ನಪೂರ್ಣ.. [ಕೂಗ್ತಾಳೆ] ಪಾಯ್ಸ ಮಾಡಿದ್ದೀನಿ ಬಾಗ್ಲ್ ತೆಗ್ಯಮ್ಮ..<br />
ಅನು: [ತನ್ನಲ್ಲೇ] ಪಾಯ್ಸ! [ಎಂದು ವ್ಯಂಗ್ಯವಾಗಿ ತನ್ನಲ್ಲೇ ನಗುತ್ತಾ ಕಿಟಕಿಯತ್ತ ನೋಡಿ ಇಣುಕುತ್ತಾಳೆ]<br />
-ಆಕೆ ನಿಜವಾಗಿ ಬಟ್ಟಲು ಹಿಡಿದು ನಿಂತಿರೋದು ಕಾಣತ್ತೆ<br />
ಅನು: [ಕಿಟಕಿ ತೆಗೆಯುತ್ತಾಳೆ] ಮಂಜುಳಮ್ಮಾವ್ರೇ..<br />
ಮಂಜುಳಮ್ಮ: [ಅತ್ತ ಬಂದು] ಇದ್ಯಾಕಮ್ಮ ಬಾಗ್ಲ್ ತೆಗೀದೆ ಇಲ್ಲೇ ಇಣ್ಕ್ ಹಾಕ್ತಾ ಇದ್ದೀಯಾ?.. ಪಾಯ್ಸ ತಂದಿದ್ದೀನಿ ತಗೋ..<br />
ಅನು: ಬಾಡ್ಗೆ ಕೊಡ್ದೆ ಇರೋರ‍್ಗೆ ಪಾಯ್ಸ ಬೇರೆ ಯಾಕಮ್ಮ?.. ನಾನ್ ಈಗಿರೋ ಪರಿಸ್ಥಿತೀಲಿ.. ನೀರ್ ಕುಡ್ಯೋದ್ ಒಂದೇ ಲಾಯಕ್ಕು..<br />
ಮಂಜುಳಮ್ಮ: ಅಯ್ಯೋ ಹುಡ್ಗಿ.. ಬಾಡ್ಗೆ ಬಂತಲ್ಲೇ ಆಗ್ಲೇ..<br />
-ಆಕೆ ಅಚ್ಚರೀಲಿ ನೋಡ್ತಾಳೆ<br />
ಮಂಜುಳಮ್ಮ: ಹುಂ.. ಬಾಗ್ಲ್ ತೆಗೀ ಬಾ..<br />
-ಎನ್ನುವಾಗ ಆಕೆ ಅನುಮನದಲ್ಲೇ ಸಾಗಿ<br />
-ಬಾಗಿಲು ತೆಗೀತಾಳೆ, ಮಂಜುಳಮ್ಮ ಒಳ ಬಂದು ಪಾಯಸ ಕೊಡ್ತಾಳೆ.<br />
ಅನು: [ಅದನ್ನು ಪಡೆದು] ನಮ್ಮನೆ ಬಾಡ್ಗೆ ಕೊಟ್ಟಾಯ್ತಾ?.. ಯಾರ್ ಕೊಟ್ರು?..<br />
ಮಂಜುಳಮ್ಮ: ಅದ್ಯಾರೋಪ್ಪ ಆಸ್ಪತ್ರೆಯಿಂದ ಬಂದಿದ್ದೀನಿ ಅಂದ್ರು.. ಅವರೇ ಅಂಗಡಿ ಬಾಕಿ, ಹಾಲಿನ್ ಬಾಕಿ, ಬಾಡ್ಗೆ ಎಲ್ಲಾ ಕೊಟ್ಟ್ ಹೋದ್ರು..<br />
-ಎನ್ನುವಾಗ ಆಕೆಯ ಬೆರಗಿನ ರಿಯಕ್ಷನ್<br />
<span style="text-decoration:underline;"><strong>ದೃಶ್ಯ-೧೭/ಹಗಲು/ಒಳಗೆ/ಆಸ್ಪತ್ರೆ</strong></span><br />
ಡಾಕ್ಟರ್: ನೋನೋನೋ?.. ನಾನ್ ನಿಮಗ್ ಯಾವ್ ಹೆಲ್ಪ್ ಮಾಡಿಲ್ಲ.. ನೀವ್ ಥ್ಯಾಂಕ್ಸ್ ಹೇಳ್‌ಬೇಕಾಗಿರೋದು ನನಗಲ್ಲ!<br />
ಅನು: ಮತ್ತೆ?.. ನನ್ನ್ ಮನೆ ಬಾಡ್ಗೆ, ರೇಷನ್ ಬಿಲ್ಲು.. ಇದನ್ನೆಲ್ಲ ಯಾರ್ ಕೊಟ್ರು ಡಾಕ್ಟರ್?.. ಯಾರೋ ಆಸ್ಪತ್ರೆಯಿಂದ ಬಂದ್ ಕೊಟ್ರು ಅಂದ್ರಲ್ಲ..<br />
ಡಾಕ್ಟರ್: ಅದ್ ನಿಜಾನೇ.. ಆದ್ರೆ ಅದು ನಾನಲ್ಲ.. ನಿಮಗ್ ಸಹಾಯ ಮಾಡಿದ್ ಮನುಷ್ಯ ೬ನೇ ನಂಬರ್ ವಾರ್ಡಲ್ಲಿದಾರೆ.. ಅಲ್ಲೇ ಹೋಗ್ ನೋಡಿ..<br />
-ಎನ್ನುವಾಗ ಅಚ್ಚರೀಲಿ ನೋಡ್ತಾಳೆ ಮತ್ತೆ ಅಲ್ಲಿಂದ ಹೊರಡ್ತಾಳೆ<br />
<span style="text-decoration:underline;"><strong>ದೃಶ್ಯ-೧೭ಎ/ಹಗಲು/ಒಳಗೆ/ಆಸ್ಪತ್ರೆ</strong></span><br />
-ಅನು ಆಸ್ಪತ್ರೆಯ ಕಾರಿಡಾರಲ್ಲಿ ೬ನೆ ನಂಬರ್ ವಾರ್ಡ್ ಎಲ್ಲಿದೆ ಎಂದು ಹುಡುಕುತ್ತಾ ಬರ‍್ತಾ ಇದ್ದಾಳೆ. ಆಗಾಗ ಕೆಮ್ಮುತ್ತಾ ವಾರ್ಡ್ ನಂಬರ್ ನೋಡ್ತಾ ಇರುವಾಗ ಯಾರೋ ಡಿಕ್ಕಿ ಹೊಡಿತಾರೆ, ಕೋಪದಿಂದ ನೋಡುವ ಆಕೆ<br />
-ಆತನೂ ನೋಡ್ತಾನೆ<br />
-ಪಕ್ಕದಲ್ಲೇ ಏನೋ ಮಾಡ್ತಾ ನಿಂತಿದ್ದ ನರ್ಸ್ ನೋಡ್ತಾಳೆ ನಗ್ತಾ ಅಲ್ಲೇ ತನ್ನ ಕೆಲಸ ಮುಂದುವರೆಸುತ್ತಾಳೆ<br />
ಆತ: [ನೋಡಿ ಚುಡಾಯಿಸುವಂತೆ] ಏನ್ರೀ ನೀವು.. ದಿನಾ ಬಂದ್ ನನಗೇ ಡಿಕ್ಕಿ ಹೊಡೀತೀರಲ್ರೀ?.. ನಾನೇನ್ರೀ ಮಾಡಿದ್ದೆ ನಿಮಗೆ?.. ನಿಜವಾಗ್ಲೂ ನಿಮಗ್ ಎಲ್ಲೋ ಕಣ್ಣ್ ಕುರುಡು ಅನ್ಸತ್ತೆ.. ಹೋಗಿ.. ಮೊದ್ಲು ಕಣ್ಣ್ ಟೆಸ್ಟ್ ಮಾಡ್ಸ್‌ಕೊಳ್ಳಿ..<br />
ಅನು: ನನ್ನ್ ಕಣ್ಣ್ ಚೆನ್ನಾಗೆ ಇದೆ.. ಕಣ್ಣು ಬುದ್ಧಿ ಎರಡೂ ಚೆನ್ನಾಗಿಲ್ದೆ ಇರೋದು ನಿಮಗೆ.. ಮೊದ್ಲು ನೀವ್ ಹೋಗಿ ಎರಡನ್ನೂ ಟೆಸ್ಟ್ ಮಾಡ್ಸ್‌ಕೊಂಡ್ ಬನ್ನಿ..<br />
ಆತ: [ಅದಕ್ಕೂ ಸ್ಮೈಲ್ ಮಾಡಿ] ಆಯ್ತು.. ಟೆಸ್ಟ್ ಮಾಡ್ಸ್‌ಕೊತೀನಿ?.. ಅದರ್ ಬಿಲ್ಲ್ ನೀವ್ ಕೊಡ್ತೀರಾ?.. ಹೋಗ್ರೀರೀ ಹೇಳೋಕ್ಕ್ ಬಂದ್‌ಬಿಟ್ರು.. [ಎಂದು ಸಾಗುತ್ತಾನೆ]<br />
-ಅನು ಸಿಟ್ಟಲ್ಲಿ ನೋಡಿ ಮತ್ತೆ ವಾರ್ಡ್ ನಂಬರ್ ಆರನ್ನು ಹುಡುಕುವಾಗ<br />
-ಪಕ್ಕದ್ದೇ ೬ನೆ ನಂಬರ್ ಎಂಬುದು ಗೊತ್ತಾಗತ್ತೆ.<br />
-ಅದನ್ನು ನೋಡಿ ಅವಳು ಒಳಗೆ ಹೋಗ್ತಾಳೆ<br />
-ವಾರ್ಡ್ ಒಳಗೆ ಯಾರೂ ಇಲ್ಲ, ಬೆಡ್ ಖಾಲಿ ಇದೆ,<br />
ಅವಳು ಮತ್ತೆ ಆಚೆ ಬರ‍್ತಾಳೆ<br />
ಅನು: [ಹೊರಬಂದು ಅಲ್ಲೇ ಇದ್ದ ನರ್ಸನ್ನು ಕೇಳ್ತಳೆ] ಸಿಸ್ಟರ್.. ಈ ವಾರ್ಡಲ್ಲ್ ಯಾರೋ ಇರ‍್ತಾರೆ ಅಂದ್ರು ಡಾಕ್ಟ್ರು! ಯಾರವ್ರು?.. ಈಗೆಲ್ಲಿದಾರೆ?..<br />
ಸಿಸ್ಟರ್: [ನಗ್ತಾ] ಈಗ್ತಾನೆ ನಿಮಗ್ ಡಿಕ್ಕಿ ಹೊಡ್‌ದ್ರಲ್ಲ.. ಅವರೇ ೬ನೇ ನಂಬರ್ ವಾರ್ಡಲ್ಲಿರೋರು!<br />
-ಅನು ಅಚ್ಚರಿ<br />
ಸಿಸ್ಟರ್: ವಿಶ್ವಾಸ್ ಅಂತ ಅವರ್ ಹೆಸರು.. [ಎನ್ನುತ್ತಿದ್ದಂತೆ ಅವಳು ಅತ್ತ ಓಡ್ತಾಳೆ]<br />
-ಇನ್ನೊಂದು ಕಾರಿಡಾರಿಗೆ ಅವನನ್ನೇ ಹುಡುಕುತ್ತಾ ಬರುತ್ತಾಳೆ.<br />
-ಅಲ್ಲೊಂದೆಡೆ ಮತ್ಯಾರಿಗೋ ಡಿಕ್ಕಿ ಹೊಡೆದು ‘ಹೋಗಿ ಕಣ್ಣ್ ಟೆಸ್ಟ್ ಮಾಡ್ಸ್‌ಕೊಳ್ಳಿ’ ಎಂದು ಹೇಳೋದನ್ನ ನೋಡಿ ಅಲ್ಲಿಗೆ ಓಡಿ ಬರುವ ಅನು, ಆತ ಅವರೊಂದಿಗೆ ತಮಾಷೆ ಮಾಡಿ ಹೋಗುತ್ತಿದ್ದಾಗ<br />
ಅನು: ವಿಶ್ವಾಸ್ ಅವರೇ.. [ಎನ್ನುವಾಗ ಆತ ನಿಂತು ತಿರುಗುತ್ತಾನೆ]<br />
ಆತ: ಏನ್ರೀ.. ಇನ್ನೂ ಟೆಸ್ಟ್ ಮಾಡ್ಸಿಲ್ಲ.. ಈಗ್ ಹೋಗ್ತಾ ಇದ್ದೀನಿ..<br />
ಅನು: ಐ ಯಾಮ್ ಸಾರಿ.. ನಾನ್ ಮಾತಾಡಿದ್ದ್ ತಪ್ಪು.. ನಿಮ್ಮಿಂದ ತುಂಬಾ ಉಪಕಾರ ಆಯ್ತು.. ತುಂಬಾ ಥ್ಯಾಂಕ್ಸ್..<br />
ವಿಶ್ವಾಸ್: [ನಗ್ತಾ] ಯಾಕ್ ಡಿಕ್ಕಿ ಹೊಡ್ದಿದ್ದಕ್ಕಾ?..<br />
ಅನು: ಅಲ್ಲ.. ನನಗ್ ಸಹಾಯ ಮಾಡಿದ್ದಕ್ಕೆ.. ನೀವು ನನಗೆ ದೊಡ್ಡ ಉಪಕಾರ ಮಾಡಿದೀರಿ!<br />
ವಿಶ್ವಾಸ್: ಅದೇನ್ ದೊಡ್ಡ್ ವಿಷ್ಯ ಬಿಡ್ರಿ?.. ನನ್ನ್ ಹತ್ರ ಇತ್ತು ಕೊಟ್ಟೆ.. ಅಷ್ಟೆ. ದೇರ್ ಇಸ್ ನಥಿಂಗ್ ಬಿಗ್ ಅಬೌಟ್ ದಟ್! [ಎಂದು ಸಾಗುತ್ತಾನೆ. ಅವಳು ಅವನನ್ನೇ ಬೆರಗಾಗಿ ನೋಡ್ತಾ ನಿಂತಿರುವಾಗಲೇ, ಅಲ್ಲಿಗೆ ಅಕಸ್ಮಾತ್ ಬರುವ ಡಾಕ್ಟರ್]<br />
ಡಾಕ್ಟರ್: ಅನ್ನಪೂರ್ಣ ಅವರೇ, ಆತನ ಹೆಸರು ವಿಶ್ವಾಸ್! ಆತಂಗೆ ಬೋನ್ ಮ್ಯಾರೋ ಕ್ಯಾನ್ಸರ್..<br />
-ಎಂಬ ದನಿ ಕೇಳಿ ಅತ್ತ ತಿರುಗುವ ಅನುಗೆ ಅಚ್ಚರಿ<br />
ಡಾಕ್ಟರ್: ಆದ್ರೆ ಅ ಮನುಷ್ಯ ನೋಡಿ.. ಯಾವಾಗ್ಲೂ ತನಗ್ ಏನೂ ಆಗೇ ಇಲ್ಲ ಅನ್ನೋ ಥರ.. ಎಲ್ಲಾರ್ ಜೊತೆ ತಮಾಷೆ ಮಾಡ್ಕೊಂಡು.. ಕಷ್ಟದಲ್ಲಿರೋರ‍್ಗ್ ಸಹಾಯ ಮಾಡ್ಕೊಂಡು ಜಾಲಿಯಾಗಿರ‍್ತಾರೆ..<br />
-ಅವಳಿಗೆ ಆ ಮಾತು ಕೇಳಿ ಒಂದು ಬಗೆಯ ಗೌರವ, ಅನುಕಂಪ ಎರಡೂ ಉಂಟಾಗುತ್ತದೆ<br />
ಡಾಕ್ಟರ್: ನಿಮ್ಮ್ ಕ್ಯಾನ್ಸರ್ ಕ್ಯೂರಬಲ್.. ಆದ್ರೆ ಅವರದ್ದು.. ಊಹೂಂ&#8230; ಇಂಪಾಸಿಬಲ್! [ಆಗಲ್ಲ ಎನ್ನುವಂತೆ ತಲೆಯಾಡಿಸುತ್ತಾನೆ]<br />
-ಅವಳಿಗೆ ಷಾಕ್<br />
ಡಾಕ್ಟರ್: ಅಬ್ಬಬ್ಬ ಅಂದ್ರೆ ಇನ್ನ್ ಆರ್ ತಿಂಗಳು, ಅಷ್ಟೇ!..<br />
- ಅನುಗೆ ಅವನ ಬಗ್ಗೆ ಮರುಕ ಹುಟ್ಟತ್ತೆ, ಕಣ್ಣ್ ತುಂಬಿ ಬರತ್ತೆ,<br />
- ವಿಶ್ವಾಸ್ ಯಾರೊಂದಿಗೋ ನಗ್ತಾ ಮಾತಾಡ್ತಾ ಇದ್ದಾನೆ.<br />
<span style="text-decoration:underline;"><strong>ದೃಶ್ಯ-೧೮/ಹಗಲು/ಹೊರಗೆ/ಅನು ಮನೆ</strong></span><br />
-ಮನೆಯಾಚೆ ಅನೂಗಾಗಿ ಮೊದಲೆ ಬಂದು ಕಾಯುತ್ತಾ ಇರುವ ಬೃಂದಾ. ಅನು ಬರ‍್ತಾಳೆ<br />
ಗೆಳತಿ: ಯಾಕೇ ಇಷ್ಟ್ ಹೊತ್ತಾಯ್ತು?..  [ಅವಳೇನೂ ಮಾತಾಡದೆ ಬೀಗ್ ತೆಗೀತಾಳೆ]<br />
ಅನು: ಬಾ.. [ಎಂದು ಒಳಗೆ ಕರೆದೊಯ್ತಾಳೆ]<br />
-ಇಬ್ಬರು ಒಳಗೆ ಬರುತ್ತಾರೆ<br />
ಗೆಳತಿ: ಹೇಗಿದ್ದೀಯಾ?..<br />
ಅನು: ಹಾಗೇ ಇದ್ದೀನಿ.. ಯಾರೋ ದಾನಿಗಳು ಸಹಾಯ ಮಾಡ್ತಾ ಇದಾರೆ. ಅದರಿಂದ ಸ್ವಲ್ಪ ಸುಧಾರಸ್ತಾ ಇದೀನಿ.<br />
ಗೆಳತಿ : ಯಾರೇ ಅವರೂ<br />
ಅನು : ವಿಶ್ವಾಸ್ ಅಂತ ಅವರ ಹೆಸರು!<br />
ಗೆಳತಿ : ಓ!<br />
ಅನು : ಅವರನ್ನ ನೋಡಿ ನನಗೆ ನನ್ನ ಜೀವನದ ಮೇಲೆ ವಿಶ್ವಾಸ ಬಂದಿದೆ ನೋಡು!<br />
ಎನ್ನುತ್ತಾ ಮನೆಯೊಳಗೆ ಸಾಗುತ್ತಾಳೆ. ಹಿಂಬಾಲಿಸುವ ಗೆಳತಿ<br />
ಗೆಳತಿ: [ನಿಡುಸುಯ್ದು] ಹೊಸ ಫ಼್ಯಾಕ್ಟ್ರೀಲ್ ನಿನಗ್ ಕೆಲ್ಸ ಕೊಡೋ ಬಗ್ಗೆ ಮಾತಾಡ್ದೆ.. [ಅನು ಇತ್ತ ನೋಡ್ತಾಳೆ] ಇನ್ನೂ ಸ್ವಲ್ಪ ದಿನ ಕಾಯ್‌ಬೇಕು ಅಂದಿದ್ದಾರೆ..<br />
ಅನು: ಹುಂ.. [ಮತ್ತೆ ಏನೋ ಕೆಲಸದಲ್ಲಿ ತೊಡಗುತ್ತಾಳೆ]<br />
ಗೆಳತಿ: ನಿಮ್ಮನೆಗ್ ಹೋಗಿದ್ದೆ..<br />
-ಅವಳು ತಿರುಗಿ ನೋಡ್ತಾಳೆ<br />
ಗೆಳತಿ: ನಿಂದೇನ್ ಪರಿಸ್ಥಿತಿ ಅಂತ ಕೇಳೋ ಸೌಜನ್ಯನೂ ಇಲ್ಲ ಯಾರ‍್ಗೂ.. [ವಿಷಾದದ ನಗೆ ನಗುವ ಅನು] ನಾನ್ ನಿನ್ನ್ ವಿಷ್ಯ ಮಾತಾಡ್‌ಬೇಕು ಅನ್ಣೊಷ್ಟ್ರಲ್ಲಿ.. ನೀನ್ ಅವರ್ ಪಾಲಿಗ್ ಸತ್ತ್‌ಹೋಗಿದ್ಯ ಅಂದ್‌ಬಿಟ್ರು..<br />
-ಕಣ್ಣ್ ತುಂಬಿಕೊಳ್ತಾಳೆ<br />
ಗೆಳತಿ: ಮುಂದಕ್ಕ್ ನಾನೇನೂ ಮಾತಾಡ್ಲಿಲ್ಲ.. ಬಂದ್‌ಬಿಟ್ಟೆ..<br />
ಅನು ಅಳು ಕಂಟ್ರೋಲ್ ಮಾಡ್ತಾಳೆ.<br />
ಗೆಳತಿ: [ಮತ್ತೆ ನಿಡುಸುಯ್ದು] ಇನ್ನೊಂದ್ ಷಾಕಿಂಗ್ ನ್ಯೂಸ್ ಇದೆ ನಿನಗೆ..<br />
-ನೋಡುವ ಅನು<br />
ಗೆಳತಿ: ಸರ್ವೋತ್ತಮ ಸಿಕ್ಕಿದ್ದ<br />
-ಅವಳು ಆಸೆ ಕಂಗಳಿಂದ ನೋಡ್ತಾಳೆ<br />
ಗೆಳತಿ: ಅವನೀಗ ಯಾವ್ದೋ ಆಟೋಮೊಬೈಲ್ ಕಂಪ್ನೀಲ್ ಕೆಲ್ಸ ಮಾಡ್ತಾ ಇದ್ದಾನೆ.. ಟೂರಿಂಗ್ ಜಾಸ್ತಿ ಅಂತೆ.. ತುಂಬಾ ಸೊರಗ್ ಹೋಗಿದಾನೆ ಅನು.. ನಿನಗೆ ಅನ್ಯಾಯ ಮಾಡ್ಬಿಟ್ಟೆ ಅಂತಿದ್ದಾ!<br />
-ಅವಳಿಗೆ ಪಾಪ ಎನಿಸುತ್ತೆ<br />
ಅನು: ಅವನ್ ಕಂಪ್ನಿ ಅಡ್ರೆಸ್ಸ್ ತಗೊಂಡ್ಯಾ?.. ಇದ್ರೆ ಕೊಡು.. ನಾನ್ ಅವನಿಗೊಂದ್ ಲೆಟರ್ ಬರೀತೀನಿ.<br />
ಗೆಳತಿ: ಏನಂತ ಬರೀತೀಯಾ?.. ಮತ್ತೆ ಬಾ ಅಂತನಾ?.. ಅಥವಾ ನೀನ್ ಇರೋಕಡೆ ನಾನ್ ಬರ್ತೀನಿ ಅಂತನಾ?..<br />
-ಅವಳು ನಿರುತ್ತರ.<br />
ಗೆಳತಿ: ಏನೂ ಬರ‍್ಯೋದ್ ಬೇಡ&#8230; ನಾನ್ ಅವನ್ ಅಡ್ರೆಸ್ಸ್ ಕೇಳ್‌ಲಿಲ್ಲ..<br />
ಅನು: ಯಾವ್ದಕ್ಕೂ ಇದ್ದಿದ್ರೆ ಚೆನ್ನಾಗಿರೋದು?..<br />
ಗೆಳತಿ: ಅವನ್ ಪುನಃ ನಿನ್ನ್ ಜೊತೆ ಬರ‍್ತನೆ ಅನ್ನೋ ಆಸೆ ಇಟ್ಕೊಂಡಿದ್ದೀಯಾ?.. ಬೇಡ ಅನು.. ಅವನ್ ಯೋಚ್ನೆ ಬಿಟ್ಟ್‌ಬಿಡು..<br />
ಅನು: ಬಿಟ್ಟ್‌ಬಿಟ್ಟಿದ್ದೀನಿ.. ಆದ್ರೂ ಸುಮ್ಮನೆ.. [ಅವಳು ಮುಂದೆ ಮಾತಾಡಲು ಆಗೋದಿಲ್ಲ]<br />
ಗೆಳತಿ: [ಅತ್ತಿತ್ತ ತಲೆಯಾಡಿಸಿ] ನೆಕ್ಸ್ಟ್ ಟೈಮ್ ಸಿಕ್ಕಾಗ ತಗೊಂಡ್ ಬರ್ತೀನಿ.. [ಅನು ತಲೆಯಾಡಿಸುತ್ತಾಳೆ, ಅವನನ್ನು ನೆನೆವಂತೆ ಕಣ್ಣ್ ತುಂಬಿಕೊಳ್ತಾಳೆ]<br />
<span style="text-decoration:underline;"><strong>ದೃಶ್ಯ-೧೯/ಹಗಲು/ಒಳಗೆ/ಆಸ್ಪತ್ರೆ</strong></span><br />
-ಯಾವುದೋ ರಿಪೋರ್ಟ್ ಒಂದರಿಂದ ಓಪನ್ ಆದರೆ ಅದನ್ನು ನೋಡ್ತಾ ಇರುವ<br />
ಡಾಕ್ಟರ್: ವೆರಿ ಗುಡ್ ಅನ್ನ್‌ಪೂರ್ಣ! ತುಂಬಾನೆ ಚೆನ್ನಾಗ್ ಇಂಪ್ರೂವ್ ಆಗ್ತಾ ಇದ್ದೀರ! ಗುಡ್!<br />
-ಆಕೆಗೆ ಖುಷಿಯಾಗತ್ತೆ. ಅಲ್ಲೆ ಇದ್ದ ವಿಶ್ವಾಸ್<br />
ವಿಶ್ವಾಸ್: ಪರ್ವಾಗಿಲ್ವಲ್ರೀ ನೀವು.. ಕ್ಯಾನ್ಸರ್‌ನೇ ತಿಂದ್‌ಹಾಕ್ತಾ ಇದ್ದೀರಾ.. ಇದು ಒಳ್ಳೇ ಅಚೀವ್‌ಮೆಂಟು ಕಣ್ರೀ..<br />
-ಆಕೆ ರಿಯಾಕ್ಷನ್<br />
ವಿಶ್ವಾಸ್: ಇದೇ ಖುಷೀಲಿ ನಮಗ್ ಸ್ವೀಟ್ ಕೊಡ್‌ಬೇಕು ನೀವು..<br />
ಅನು: ದೇಹಕ್ಕ್ ಅಂಟೀರೋ ಕ್ಯಾನ್ಸರ್ ಕಡ್ಮೆ ಆದ್‌ಹಾಗೆ.. ನನ್ನ್ ಜೇಬ್‌ಗ್ ಅಂಟಿರೋ ಕ್ಯಾನ್ಸರ್ರೂ ಕಡ್ಮೆ ಆಗ್‌ಬಿಟ್ರೆ, ಬರೀ ಸ್ವೀಟ್ ಯಾಕೆ ದೊಡ್ಡ್ ಪಾರ್ಟೀನೆ ಕೊಡ್‌ಬೋದು.. &#8211; ಎನ್ನುವಾಗ ಅವಳ ಮಾತಲ್ಲಿದ್ದ ವಿಷಾದವನ್ನು ಗಮನಿಸುವ ವಿಶ್ವಾಸ್<br />
ಅನು: ಬರ‍್ತೀನಿ ಡಾಕ್ಟರ್.. [ಸಾಗ್ತಾಳೆ, ಇಬ್ಬರ ರಿಯಾಕ್ಷನ್, ವಿಶ್ವಾಸ್ ಯೋಚನೆ]<br />
<span style="text-decoration:underline;"><strong>ದೃಶ್ಯ-೨೦/ಹಗಲು/ಒಳಗೆ-ಹೊರಗೆ/ಅನು ಮನೆ</strong></span><br />
ಇನ್ನೊಂದು ದಿನ<br />
-ನ್ಯೂಟ್ರಲ್‌ಯಿಂದ ಅವರನ್ನು ತೋರುವುದು, [ನೆರಳಿಂದ ಅವರನ್ನು ರಿವೀಲ್ ಮಾಡಿದರೆ ಅನು ಮತ್ತು ಬೃಂದಾ ಕಾಣ್ತಾರೆ]<br />
ಗೆಳತಿ: ಓಹೋ.. ಏನಮ್ಮ.. ಟ್ರೈನ್ ಯಾಕೋ ಯಾವ್ದೋ ಹೊಸಾ ಟ್ರ್ಯಾಕ್ ಹಿಡೀತಾ ಇರೋಹಾಗಿದೆ.. [ಎನ್ನುತ್ತಾ ಬಂದು ಗೇಟ್ ತೆಗೀತಾಳೆ] ವಿಶ್ವಾಸ್.. ಹೆಸರಿಗ್ ತಕ್ಕ್ ಹಾಗೇ.. ಚೆನ್ನಾಗ್ ವಿಶ್ವಾಸ ಗಳ್ಸ್‌ಕೊಂಡ್ ಬಿಟ್ಟಿದ್ದಾನೆ ಮೇಡಂದು..<br />
ಅನು: ಹಾಗೆನಿಲ್ಲ.. ಅವ್ರ್ ತುಂಬಾ ಒಳ್ಳೇ ಮನುಷ್ಯ..<br />
ಗೆಳತಿ: ಹೌದಮ್ಮ.. ನಾನೂ ಅದನ್ನೇ ಹೇಳಿದ್ದು.. ಒಳ್ಳೇ ಮನುಷ್ಯನ್ ಜೊತೆ.. ಒಂದ್ ಒಳ್ಳೇ ಸಂಬಂಧ.. [ಎಂದು ಛೇಡಿಸುವಾಗ]<br />
ಅನು: ಸುಮ್ಮನೆ ಬಾ ಒಳಗೆ.. [ಎಂದು ಬಾಗಿಲು ತೆಗೆಯ ಹೋದಾಗ, ಬಾಗಿಲ ಚಿಲಕ್ದ ಸಂದಿಯಲ್ಲಿ ಒಂದು ಲೆಟರ್ ಕಾಣತ್ತೆ, ಅವಳು ಅಚ್ಚರಿಯಿಂದ ನೋಡ್ತಾಳೆ, ತಗೊಳ್ತಾಳೆ]<br />
ಗೆಳತಿ: ಏನೇ ಅನು?.. ಆಗ್ಲೇ ಯಾವ್ದೋ ಲವ್ ಲೆಟರ್ ಬೇರೆ ಬಂದಿರೋಹಾಗಿದೆ?.. ಯಾರ‍್ದ್ ನೋಡು?..<br />
ಅನು: ಇದು ಲವ್ ಲೆಟರ್ ಅಲ್ಲ.. ಯಾವ್ದೋ ಕಂಪ್ನಿಯಿಂದ ಬಂದಿರೋ ಲೆಟ್ಟರ್ರು..<br />
-ಆಕೆ ಅವಳನ್ನು ಗುರಾಯಿಸಿದಂತೆ ಮಾಡಿ ಲೆಟರ್ ಕವರ್ ಓಪನ್ ಮಾಡ್ತಾಳೆ, ಓದುತ್ತಾಳೆ. ಓದುತ್ತಾ ಖುಷಿಯಾಗ್ತಾಳೆ<br />
-ಗಮನಿಸೋ ಗೆಳತಿ<br />
-ಲೆಟರ್ ಪೂರ್ತಿ ಓದಿದ ನಂತರ ಏನೋ ಗೊಂದಲವಾದಂತೆ ನಿಲ್ತಾಳೆ<br />
ಗೆಳತಿ: ಯಾಕೇ ಅನು?.. ಏನ್ ಲೆಟರ್ ಅದು?.. ಯಾಕ್ ಮುಖ ಒಂಥರ ಮಾಡ್ಕೊಂಡೆ?..<br />
ಅನು: ಈ ಲೆಟರು.. ನನಗ್ ಕೆಲ್ಸ ಸಿಕ್ಕಿದೆ ಅಂತ ಹೇಳ್ತಾ ಇದೆ.. ಆದ್ರೆ ನಾನ್ ಅಪ್ಲಿಕೇಷನ್ನೇ ಹಾಕ್ದೆ ನನಗ್ ಕೆಲ್ಸ ಹೇಗ್ ಸಿಗೋಕ್ಕ್ ಸಾಧ್ಯ?.. ನನ್ನ್ ಪರವಾಗಿ ನೀನ್ ಯಾವ್ದಾದ್ರೂ ಕಂಪನೀಗ್ ಅಪ್ಲೈ ಮಾಡಿದ್ಯಾ?..<br />
ಗೆಳತಿ: ಇಲ್ಲ್‌ವಲ್ಲೇ&#8230;<br />
ಅನು: [ಯೋಚಿಸಿ] ಹಾಗಾದ್ರೆ ೧೦೦% ಇದೂ ವಿಶ್ವಾಸ್ ಕೆಲ್ಸಾನೆ..<br />
-ಆಕೆ ಯೋಚಿಸ್ತಾ ನಿಲ್ತಾಳೆ.<br />
<span style="text-decoration:underline;"><strong>ದೃಶ್ಯ-೨೧/ಹಗಲು/ಒಳಗೆ/ಆಸ್ಪತ್ರೆ</strong></span><br />
-ಆಸ್ಪತ್ರೆಗೆ ಬರುವ ಅನು ಕೈಯಲ್ಲಿ ಕೆಲಸದ ಅಪಾಯಿಂಟ್ ಮೆಂಟ್ ಆರ್ಡರ್ ಇದೆ<br />
-೬ನೇ ನಂಬರ್ ವಾರ್ಡಿಗೆ ಬರುತ್ತಾಳೆ, ಅಲ್ಲಿ ಬೇರೆ ಯಾರೋ ಇದ್ದಾರೆ<br />
-ಅವಳಿಗೆ ಷಾಕ್<br />
ಅನು: ಇಲ್ಲ್ ಮುಂಚೆ ಇದ್ದೋರ್ ಎಲ್ಲಿ?..<br />
ಆತ: ಅವರ್ ಹೋಗ್‌ಬಿಟ್ರು..<br />
-ಎನ್ನುವಾಗ ಆಕೆಗೆ ಮತ್ತೆ ದೊಡ್ಡ ಷಾಕ್ ಅವಳು ಅಲ್ಲಿಂದ ಓಡ್ತಾಳೆ<br />
ಡಾಕ್ಟರ್ ಕ್ಯಾಬಿನ್<br />
-ಡಾಕ್ಟರ್ ಕುಳಿತಿರುವಲ್ಲಿಗೆ ಬರುವ ಅನು ಸ್ವಲ್ಪ ಭಯಮಿಶ್ರಿತ ದುಃಖದೊಂದಿಗೆ<br />
ಅನು: ಡಾಕ್ಟರ್..<br />
ಡಾಕ್ಟರ್: ಏನ್ ಅನ್ನಪೂರ್ಣ?..<br />
ಅನು: ವಿಶ್ವಾಸ್ ಎಲ್ಲಿ?..<br />
ಡಾಕ್ಟರ್: ಅವರು ಡಿಸ್‌ಚಾರ್ಜ್ ಆದ್ರು..<br />
-ಎನ್ನುವಾಗ ಅವಳ ಆತಂಕ ತಣ್ಣಗಾಗತ್ತೆ, ಸಮಾಧಾನಗೊಳ್ತಾಳೆ<br />
ಡಾಕ್ಟರ್: ಯಾಕೆ ಏನಾಯ್ತು?..<br />
ಅನು: [ಉಗುಳು ನುಂಗಿ] ಏನಿಲ್ಲ.. ನನಗೆ.. ಅವರ್ ಮನೆ ಅಡ್ರೆಸ್ಸ್ ಕೊಡ್ತೀರಾ?..<br />
ಡಾಕ್ಟರ್: ರಿಸೆಪ್ಷನ್ನಲ್ಲ್ ಕೇಳಿ ಕೊಡ್ತರೆ..<br />
ಅನು: ಥ್ಯಾಂಕ್ಸ್ ಡಾಕ್ಟರ್.. [ಎಂದು ಸಾಗ್ತಾಳೆ]<br />
-ಡಾಕ್ಟರ್ ಅವಳ ಉದ್ವೇಗ ನೋಡಿ ತನ್ನಲ್ಲೇ ವಿಷಾದದ ನಗೆ ನಗ್ತಾನೆ<br />
<span style="text-decoration:underline;"><strong>ದೃಶ್ಯ-೨೨/ಹಗಲು/ಒಳಗೆ/ವಿಶ್ವಾಸ್ ಮನೆ</strong></span><br />
-ಅನು ಬಾಗಿಲು ತೆರೆದಿರುವ ಮನೆಯೊಂದಕ್ಕೆ ಬರ್ತಾಳೆ. ಮನೆ ವಿಶಾಲವಾಗಿದೆ. ಅಲ್ಲಿ ಒಂದೆಡೆ ಕೂತು ವಿಶ್ವಾಸ್ ಯಾವುದೋ ಗೇಮ್ ಆಡ್ತಾ ಇದ್ದಾನೆ. ಅನು ಅವನತ್ತ ಬರುತ್ತಾಳೆ. ಅವನು ಬಂದವಳನ್ನು ನೋಡದೆ<br />
ವಿಶ್ವಾಸ್: ಬನ್ನಿ ಬನ್ನಿ.. ವೆಲ್‌ಕಮ್ ಟು ಮೈ ಸ್ವೀಟ್ ಹೋಮ್..<br />
-ಅನೂಗೆ ಅಚ್ಚರಿಯಾಗತ್ತೆ<br />
ವಿಶ್ವಾಸ್: ಮತ್ತೆ?.. [ಎಂದು ಗೇಮ್ ಬಿಟ್ಟು ಅತ್ತ ನೋಡ್ತಾನೆ] ಬದ್ಕೋಕ್ಕ್ ಇನ್ನ್ ಬಹಳ ದಿನ ಉಳ್ದಿಲ್ಲ.. ಆಸ್ಪತ್ರೇಲೇ ಯಾಕ್ ಸಾಯ್ತೀಯ.. ಮನೆಗ್ ಹೋಗ್ ಸಾಯಿ ಅಂದ್ರು.. [ತಮಾಷೆಯೆಂಬಂತೆಯೇ] ಅದಕ್ಕೇ ಡಿಸ್‌ಚಾರ್ಜ್ ಮಾಡ್ಕೊಂಡ್ ಬಂದ್‌ಬಿಟ್ಟೆ..<br />
-ಅನು ಕೈಯಲ್ಲಿ ಲೆಟರ್ ಹಿಡಿದಿರೋದು ನೋಡಿ<br />
ವಿಶ್ವಾಸ್: ಏನು.. ಈ ಕೆಲ್ಸ ನಿಮಗ್ ಯಾರ್ ಕೊಡ್ಸ್‌ದ್ರು ಅಂತ ಕೇಳೋಕ್ಕ್ ಬಂದ್ರಾ?.. ಹೌದು.. ಇದ್ ನಂದೇ ಕೆಲ್ಸ..<br />
ಅನು: ಯಾಕ್ ನನಗೋಸ್ಕರ ಅಪ್ಲಿಕೇಷನ್ ಹಾಕ್‌ದ್ರಿ?<br />
ವಿಶ್ವಾಸ್: ನನಗೆ ಸಾಯೋ ಡೇಟ್ ಫ಼ಿಕ್ಸ್ ಆಗಿದೆ ಅಂದ್ರಲ್ಲ.. ಸಾಯೋನಿಗ್ ಕೆಲ್ಸ ಯಾಕ್ ಬೇಕು ಹೇಳಿ? ಅದಕ್ಕೆ ನನ್ನ ಕೆಲಸ ನಿಮಗ್ ಕೊಡೊ ವ್ಯವಸ್ಥೆಮಾಡ್ದೆ.. ಏನಾದ್ರೂ ತಪ್ಪ್ ಇದ್ಯಾ ನಾನ್ ಮಾಡಿದ್ರಲ್ಲಿ?<br />
ಅನು: [ಭಾವುಕಳಾಗಿ] ಥ್ಯಾಂಕ್ಸ್! ತುಂಬಾ ಥ್ಯಾಂಕ್ಸ್! ನಿಮ್ಮ್ ಉಪಕಾರಕ್ಕೆ ತುಂಬ ಥ್ಯಾಂಕ್ಸ್.. (ಕಾಲಿಗೆ ಬೀಳುತ್ತಾಳೆ)<br />
ವಿಶ್ವಾಸ್: ಈ ಫ಼ಾರ್ಮಾಲಿಟಿ ಎಲ್ಲ ಯಾಕ್ರೀ?.. ನಿಮಗ್ ನಿಜವಾಗ್ಲೂ ನನಗ್ ಥ್ಯಾಂಕ್ಸ್ ಹೇಳ್‌ಬೇಕು ಅನ್ಸಿದ್ರೆ ನನಗ್ ತುಂಬಾ ಹೊಟ್ಟೆ ಹಸ್ವಾಗ್ತಾ ಇದೆ.. ನನಗ್ ಒಂದ್ ಸ್ವಲ್ಪ ತಿಳಿ ಸಾರು ಅನ್ನ ಮಾಡ್‌ಕೊಡ್ತೀರಾ?<br />
-ರಿಯಾಕ್ಷನ್<br />
ವಿಶ್ವಾಸ್: ನಾನೇ ಮಾಡ್ಕೋಬೋದು.. ಆದ್ರೆ ನನ್ನ್ ಕೈ ಅಡ್ಗೆ ತಿಂದು ತಿಂದು ತುಂಬಾ ಬೋರ್‌ಆಗ್‌ಬಿಟ್ಟಿದೆರೀ.. ಮಾಡ್ಕೊಡ್ತೀರಾ?..<br />
ಅನು: ಖಂಡಿತ ಮಾಡ್ಕೊಡ್ತೀನಿ..<br />
ವಿಶ್ವಾಸ್: ಹಾಗಾದ್ರೆ ಬೇಗ ಮಾಡ್ಕೊಡಿ.. ಅಡ್ಗೆ ಮನೆ ಎಲ್ಲಿದೆ ಅಂತ ತೋರ‍್ಸ್‌ತೀನಿ.. [ಎಂದು ಕರೆದೊಯ್ತಾನೆ]<br />
-ಅಡಿಗೆ ಮನೆಯಲ್ಲಿ ಎಲ್ಲವನ್ನೂ ಪರಿಚಯ ಮಾಡಿ, ವಿವರಿಸುತ್ತಾನೆ<br />
ಅನು: ಆಯ್ತು.. ಒಂದ್ ಕಾಲ್ ಗಂಟೆ ವೇಯ್ಟ್ ಮಾಡಿ. ತಂದ್‌ಬಿಡ್ತೀನಿ..<br />
ವಿಶ್ವಾಸ್: ಓಕೆ.. ಡನ್.. [ಎಂದು ಸಾಗ್ತಾನೆ]<br />
ಡಿಸಾಲ್ವ್<br />
-ಅಡಿಗೆಯನ್ನು ತಟ್ಟೆಗೆ ಬಡಿಸುತ್ತಾಳೆ ಬಿಸಿಬಿಸಿ ಅನ್ನ ಹೊಗೆ ಬರುತ್ತಿದೆ, ಆತ ಅದರ ಘಮವನ್ನು ಎಳೆಯುತ್ತಾ ಆಸ್ವಾಧಿಸುತ್ತಾನೆ. ಅವಳು ಸಾರು ಬಡಿಸುತ್ತಾಳೆ, ಅದರ ಘಮವನ್ನೂ ಎಳೆದು<br />
ವಿಶ್ವಾಸ್: ಆಹಾ! ಘಮಾನೆ ಇಷ್ಟ್ ಅಧ್ಬುತವಾಗಿದೆ.. ಇನ್ನ್ ರುಚಿ ಹೇಗಿರ‍್ಬೋದು?.. [ಎನ್ನುತ್ತಾ ಕಲೆಸಿ ತಿನ್ನುತ್ತಾನೆ] ಅದ್ಭುತವಾಗಿದೆ ರೀ.. ಅತ್ಯದ್ಭುತವಾಗಿದೆ.. ಆಹಾ.. [ಎಂದು ಚಪ್ಪರಿಸುತ್ತಾ ತಿನ್ನುತ್ತಾನೆ]<br />
-ಅವಳು ಅವನ ಆನಂದವನ್ನು ನೋಡ್ತಾ ಮನೆಯಲ್ಲೇಲ್ಲಾ ಸುತ್ತಾ ಕಣ್ಣಾಡಿಸುತ್ತಾ<br />
ಅನು: ಇಷ್ಟ್ ದೊಡ್ಡ್ ಮನೆಲಿ ನೀವ್ ಯಾಕ್ ಒಬ್ರೇ ಇದ್ದೀರಾ?..<br />
ವಿಶ್ವಾಸ್: ಹುಂ.. ಇನ್ನೂ ಒಬ್ಬರಿದ್ರು.. ಆದ್ರೆ ಅವರ್ ಈಗಿಲ್ಲ ಅಷ್ಟೇ.. [ತಿನ್ನುತ್ತಲೇ ಹೇಳ್ತಾನೆ]<br />
ಅನು: ಯಾರ್ ಅವರು?..<br />
ವಿಶ್ವಾಸ್: [ತುಂಬಾ ಕ್ಯಾಷುಯಲ್ ಆಗಿ] ನನ್ನ್ ಹೆಂಡ್ತಿ..<br />
-ಆಕೆ ಷಾಕ್ ಆಗಿ ನೋಡ್ತಾಳೆ<br />
-ಆತ ಆರಾಮವಾಗಿ ಊಟ ಮಾಡುತ್ತಲೇ ಅವಲನ್ನು ನೋಡಿ<br />
ವಿಶ್ವಾಸ್: ಇದ್ಯಾಕ್ ಇಷ್ಟೋಂದ್ ಗಾಬರಿ ಆಗ್ ನೋಡ್ತಾ ಇದ್ದೀರಾ?.. ನನ್ನ್ ಹೆಂಡ್ತೀನೂ ಸತ್ತ್‌ಗಿತ್ತ್ ಹೋದ್ಲಾ ಅಂತನಾ?.<br />
-ರಿಯಾಕ್ಷನ್<br />
ವಿಶ್ವಾಸ್: ಇಲ್ಲರೀ.. ಹಾಗೆಲ್ಲ ಅಂದ್ಕೊಳ್ಳೋಕ್ಕ್ ಹೋಗ್‌ಬೇಡಿ.. ಪಾಪ! ಅವಳೆಲ್ಲೋ ನೆಮ್ಮದಿಯಾಗಿದಾಳೆ..<br />
-ರಿಯಾಕ್ಷನ್<br />
ವಿಶ್ವಾಸ್: [ಊಟ ಮಾಡುತ್ತಲೆ] ನಿಮಗ್ ಲ್ಯುಕೀಮೀಯ ಬಂತು ಅಂದ್ ತಕ್ಷಣ.. ನಿಮ್ಮ್ ಗಂಡ ನಿಮ್ಮನ್ನ್ ಬಿಟ್ಟ್ ಓಡ್‌ಹೋಗ್ಲಿಲ್ವಾ?.. ಹಾಗೆ ನನಗ್ ಬೋನ್‌ಮ್ಯಾರೋ ಕ್ಯಾನ್ಸರ್ ಅಂತ ಗೊತ್ತಾದ್ ತಕ್ಷಣ ಅವಳೂ ಹೊರಟ್ಳು!<br />
-ಆಕೆ ಭಾವುಕಳಾಗಿ ನೋಡ್ತಾಳೆ<br />
ವಿಶ್ವಾಸ್: ಅವಳು ಮಾಡಿದ್ದು ಸರೀನೇ ಅಲ್ವಾ? ಸಾಯೋರ‍್ಜೊತೆ ಯಾರ್ರೀ ಸಂಸಾರ ಮಾಡ್ತಾ ಇರ‍್ತಾರೆ? ಅವರನ್ನ ನಾವು ಬೈಯ್ಕೋಬಾರ‍್ದು! ಅಲ್ವಾ?..<br />
-ಅವಳು ನಿರುತ್ತರೆ<br />
ವಿಶ್ವಾಸ್: ನೋಡಿ.. ಹೇಗೋ ಆಸ್ಪತ್ರೆಲ್ ಅವರಿವರ್ ಕಾಲ್ ಎಳ್ಕೊಂಡು, ನಗ್ಸ್‌ಕೊಂಡು, ಚುಡಾಯ್ಸ್‌ಕೊಂಡು ಆರಾಮಾಗಿದ್ದೆ.. ನನ್ನನ್ನ್ ಡಿಸ್‌ಚಾರ್ಜ್ ಮಾಡ್ಸಿ ಈ ನರಕಕ್ಕ್ ಹಾಕ್‌ಬಿಟ್ರು..<br />
-ರಿಯಾಕ್ಷನ್<br />
ವಿಶ್ವಾಸ್: ನೀವೇ ಹೆಳ್ರೀ.. ಈ ಮನೇಲ್ ಒಬ್ಬನೆ ಹೇಗ್ರೀ ಇರ‍್ಲಿ?.. ನನಗಂತೂ ತಲೆ ಕೆಟ್ಟ್ ಹೋಗತ್ತಪ್ಪ.. ಏನೋ ಇವತ್ತ್ ರುಚಿಯಾದ್ ಊಟ ಸಿಗ್ತು.. ನಾಳೆಯಿಂದ ಅದೂ ಇಲ್ವಾ?..<br />
ಅನು: ಯೋಚ್ನೆ ಮಾಡ್‌ಬೇಡಿ.. ನಾನ್ ಇನ್ನ್ ಮೇಲ್ ದಿನಾ ಬಂದು ನಿಮಗ್ ಅಡಿಗೆ ಮಾಡ್‌ಕೊಟ್ಟ್ ಹೋಗ್ತೀನಿ..<br />
[ಆತನ ಮುಖದಲ್ಲಿ ಮಂದಹಾಸ]<br />
<span style="text-decoration:underline;"><strong>ದೃಶ್ಯ-೨೩/ರಾತ್ರಿ/ಒಳಗೆ/ಅನು ಮನೆ</strong></span><br />
ಗೆಳತಿ: ಕಂಪ್ನಿ ಕೆಲ್ಸದ್ ಜೊತೆಗೆ ಅಡಿಗೆ ಕೆಲ್ಸಾನೂ ಮಾಡ್ತಾ ಇದ್ದೀಯಾ?..<br />
ಅನು: ಆ ಮನುಷ್ಯ ಮನೇಲ್ ಒಬ್ಬಂಟಿ.. ನಾಲ್ಕ್ ದಿನ ಬದ್ಕೋ ಜೀವ.. ಆತ ಬದುಕಿರೋವರ‍್ಗೂ ಒಳ್ಳೇ ಊಟನಾದ್ರೂ ಮಾಡ್ಲಿ ಬಿಡು..<br />
ಗೆಳತಿ : ಅದಕ್ಕೇ ಹೇಳೋದು ಹಲ್ಲಿದ್ದೋರ‍್ಗೆ ಕಡಲೇ ಇಲ್ಲ. ಕಡಲೇ ಇದ್ದೋರ‍್ಗೆ ಹಲ್ಲಿಲ್ಲ ಅಂತ. ಅಲ್ವಾ?<br />
ಅನು: ಹೂಂ. ಒಂದೊಂದು ಮನೇಲ್ಲಿ ಒಂದೊಂದು ಕತೆ!<br />
ಗೆಳತಿ : ನನಗನ್ಸೋದೇನು ಗೊತ್ತಾ? ಪ್ರೀತಿ ಅಂದ್ರೆ ಹುಡುಗ-ಹುಡುಗಿದಲ್ಲಾ ಕಣೆ! ಬದುಕಿನ ಬಗ್ಗೆ ಪ್ರೀತಿ ಇರ‍್ಬೇಕು. ಅಲ್ವಾ?<br />
ಅನು ಸುಮ್ಮನೆ ತಲೆದೂಗುತ್ತಾಳೆ.<br />
<span style="text-decoration:underline;"><strong>ದೃಶ್ಯ-೨೪/ಹಗಲು/ಒಳಗೆ/ವಿಶ್ವಾಸ್ ಮನೆ</strong></span><br />
-ಅನು ಆತ ಊಟ ಮಾಡಿದ ತಟ್ಟೆಯನ್ನು ತೊಳೆಯುತ್ತಿದ್ದಾಳೆ, ಅಲ್ಲಿಗೆ ಬರುವ ವಿಶ್ವಾಸ್<br />
ವಿಶ್ವಾಸ್: ನಿಮಗ್ ನಾನು.. ಜಸ್ಟ್ ಅಡ್ಗೆ ಮಾಡ್‌ಕೊಡೋಕ್ಕ್ ಮಾತ್ರ ಪರ್ಮೀಷನ್ ಕೊಟ್ಟಿರೋದು.. ಇದನ್ನೆಲ್ಲ ಮಾಡೋಕ್ಕ್ ನಾನು ಹೇಳಿಲ್ಲ.. ಬಿಡಿ.. ಇದೆಲ್ಲ ನನ್ನ್ ಕೆಲ್ಸ..<br />
ಅನು: ಅಟ್ ಲೀಸ್ಟ್ ನೀವೊಬ್ಬ ಕೆಲ್ಸದವರ್ನೂ ಇಟ್ಕೊಂಡಿಲ್ಲ.. ಯಾಕೆ?<br />
ವಿಶ್ವಾಸ್: ಕೆಲ್ಸದೋವ್ರು ಎಲ್ಲಾ ಕೆಲ್ಸಾನೂ ‘ಕೆಲ್ಸ’ ಅಂತ ಮಾಡ್ತರೆ.. ಅದರಲ್ಲಿ ಪ್ರೀತಿ ಇರಲ್ಲ..<br />
-ಅನು ನೋಡ್ತಾಳೆ<br />
ವಿಶ್ವಾಸ್: ಅದಕ್ಕೆ ನನ್ನ್ ಕೈಲಾಗೋ ಕೆಲಸನೆಲ್ಲ ನಾನೇ ಮಾಡ್ಕೊತೀನಿ..<br />
ಅನು: ನಿಮ್ಮ್ ಹೆಂಡ್ತಿ ಹೋದ್‌ಮೇಲೆ.. ನೀವ್ ಬೇರೆ ಮದ್ವೆ ಆಗ್‌ಬೋದಿತ್ತು.. ಅಲ್ವಾ?<br />
ವಿಶ್ವಾಸ್: [ನಕ್ಕು] ಸಾಯೋ ಮನುಷ್ಯಂಗ್ ಸಂಗಾತಿ ಯಾಕ್ರೀ?.. ಸಾವ್ ಬೆನ್ನ್ ಹಿಂದೆ ಕೂತ್ಕೊಂಡ್ ಸವಾರಿ ಮಾಡ್ತಿರೋವಾಗ.. ನನ್ನ್ ಸ್ವಾರ್ಥಕ್ಕೋಸ್ಕರ ಇನ್ನೊಬ್ಬರ್ ಜೀವ್ನ ಬಲಿ ಕೋಡೋದು ಸರೀನಾ? ನೀವೇ ಹೇಳಿ?<br />
-ಆಕೆಯ ರಿಯಾಕ್ಶನ್<br />
ವಿಶ್ವಾಸ್: ಹಾಗೂ ಒಂದ್ ಪಕ್ಷ ನಾನ್ ಒಪ್ಕೊಂಡೆ ಅಂದ್ರೂ.. ಕಟ್ಕೊಂಡ್ ನಾಲ್ಕ್ ದಿನಕ್ಕ್ ವಿಧವೆ ಆಗೋಕ್ಕೆ ಯಾರ್ರೀ ಮುಂದೆ ಬರ‍್ತರೆ?..<br />
-ಎನ್ನುವಾಗ ಅನು ಅವನನ್ನೇ ನೋಡ್ತಾ ಏನೋ ಯೋಚಿಸುತ್ತಾ ನಿಲ್ತಾಳೆ.<br />
<span style="text-decoration:underline;"><strong>ದೃಶ್ಯ-೨೫/ರಾತ್ರಿ/ಒಳಗೆ/ಅನು ಮನೆ</strong></span><br />
ಓಪನ್ ಫ಼್ರಂ ನ್ಯೂಟ್ರಲ್<br />
-ಅನು ಅಳ್ತಾ ಇದ್ದಾಳೆ, ಅವಳ ಕೈಲಿ ಒಂದು ಲೆಟರ್ ಇದೆ. ಅವಳ ಜೊತೆಯಲ್ಲಿ ಬೃಂದಾ ಮತ್ತು ಮನೆ ಮಾಲಕಿ ಮಂಜುಳಮ್ಮ ಇದ್ದಾರೆ<br />
ಮಂಜುಳಮ್ಮ: ನೀನ್ ಅಳ್‌ಬೇಡ ಸುಮ್ಮನಿರಮ್ಮ.. ಈ ಲೆಟರ್ ಬರ‍್ದಿರೋದು ಬೇರೆ ಯಾರೂ ಅಲ್ಲ.. ಆ ನಿನ್ನ್ ಓಡ್ ಹೋದ್ ಗಂಡಾನೆ..<br />
ಗೆಳತಿ: ಹೌದು ಕಣೇ ಅನು.. ಇದ್ ಅವನ್ದೇ ಕೆಲ್ಸ.. ಅವನಿಗ್ ನಿನ್ನನ್ನ್ ನೋಡ್ಕೊಳ್ಳೋ ಯೋಗ್ಯತೆನೂ ಇರ‍್ಲಿಲ್ಲ.. ಖರ್ಚಿಗ್ ತಕ್ಕ್ ಸಂಪಾದ್ನೆ ಮಾಡೋ ಆತ್ಮ ವಿಶ್ವಾಸನೂ ಇರ‍್ಲಿಲ್ಲ.. ಈಗ್ ನೀನ್ ಆ ವಿಶ್ವಾಸ್ ದಯೆಯಿಂದ ಚೆನ್ನಾಗಿದ್ದೀಯ ನೋಡು.. ಅದಕ್ಕೆ ಅವನಿಗೆ ಹೊಟ್ಟೆ ಕಿಚ್ಚ್ ಬಂದಿದೆ!<br />
ಮಂಜುಳಮ್ಮ: ಅದಕ್ಕೆ ಅವನಿಂಥಾ ಅಸಹ್ಯವಾದ್ ಲೆಟರ್ ಬರ‍್ದಿದ್ದಾನೆ.. ಅವನ್ ಮುಂಡಾ ಮೋಚ್ತು..<br />
-ಅನು ಅಳ್ತಾ ಇದ್ದಾಳೆ<br />
ಗೆಳತಿ: ಇರೋ ಸಂಬಂಧ ಉಳ್ಸ್‌ಕೊಳ್ಳೋಕ್ಕ್ ಆಗ್ದಿದ್ರೂ ಇಲ್ದೆ ಇರೋದನ್ನ ಹುಟ್ಟ್ ಹಾಕಿ ಬೆರೇವ್ರ್ ಹೆಸರಲ್ಲ್ ಲೆಟರ್ ಬರ‍್ದಿದಾನೆ.. ಕಳ್ಳ್ ಕೊರಮ.. ಅವನ್ ಇನ್ನೊಂದ್ಸಲ ನನಗ್ ಸಿಗ್ಲಿ ಸರ‍್ಯಾಗ್ ನೀರ್ ಇಳ್ಸ್‌ತೀನಿ..<br />
ಮಂಜುಳಮ್ಮ: ಏನೂ ಬೇಡ.. ಅವನ್ ಸಹವಾಸಕ್ಕೆ ಹೋಗ್‌ಬೇಡಿ.. ಏ ಅನ್ನಪೂರ್ಣ.. ನನ್ನನ್ನ್ ನಾಳೆ ಆ ವಿಶ್ವಾಸ್ ಮನೆಗ್ ಕರ‍್ಕೋಂಡ್ ಹೋಗು..<br />
ಅನು: ಯಾಕೆ?.. [ಗಾಬರಿ]<br />
ಮಂಜುಳಮ್ಮ: ನಾನ್ ಆ ಹುಡ್ಗನ್ ಜೊತೆ ಸ್ವಲ್ಪ ಮಾತಾಡ್‌ಬೇಕು..<br />
ಅನು: ನೀವ್ ಅವರ್ ಜೊತೆ ಏನ್ ಮಾತಾಡ್ತೀರಾ?..</p>
<p><span style="text-decoration:underline;"><strong>ದೃಶ್ಯ-೨೬/ಹಗಲು/ಒಳಗೆ/ಅನು ಮನೆ</strong></span><br />
ಹಾಫ಼್ ವೇ ಓಪನ್<br />
ವಿಶ್ವಾಸ್: ಲೆಟರ‍್ಸ್ ಬರ‍್ತಾ ಇದ್ಯಾ?.. [ಎನ್ನುವ ವಿಶ್ವಾಸನ ಅಚ್ಚರಿಯ ರಿಯಾಕ್ಷನ್ ಎದುರು ಮಂಜುಳಮ್ಮ, ಅನು ಮತ್ತು ಬೃಂದಾ ಇದ್ದಾರೆ.]<br />
ಮಂಜುಳಮ್ಮ: ಸುಳ್ಳ್ ಹೆಳ್ತಾ ಇಲ್ಲಪ್ಪ ನಾವು.. ನೀನೇ ನೋಡು.. [ಎಂದು ಲೆಟರ್ ಕೊಡ್ತಾಳೆ]<br />
-ಅವನು ಲೆಟರ್ ನೋಡ್ತಾನೆ<br />
-ರಿಯಾಕ್ಷನ್ಸ್<br />
-ವಿಶ್ವಾಸ್ ಅನೂನ ನೋಡ್ತಾನೆ<br />
-ಅನು ತಲೆ ತಗ್ಗಿಸಿದಂತೆ ಇದ್ದಾಳೆ<br />
ಗೆಳತಿ: ಬರೀ ಲೆಟರ್‌ಗಳ್ ಮಾತ್ರ ಅಲ್ಲ.. ಅನು ನಿಮ್ಮ್ ಕಂಪ್ನೀಲೆ ಕೆಲ್ಸ ಮಾಡ್ಕೊಂಡು ನಿಮ್ಮನೆಗ್ ಬಂದು ಹೋಗಿ ಮಾಡ್ತಾ ಇರೋದ್ರಿಂದ,. ನಿಮ್ಮ್ ಮಧ್ಯೆ ಸಂಬಂಧ ಇದೆ ಅಂತಾನೇ ಮಾತಾಡ್ತಾ ಇದಾರೆ..<br />
-ಆತನ ರಿಯಾಕ್ಷನ್<br />
ಮಂಜುಳಮ್ಮ: ಅವಳ್ಗ್ ಬಂದಿರೋ ಈ ಕೆಟ್ಟ್ ಹೆಸರನ್ನ ಹೇಗ್ ಹೋಗ್ಸೋದು ಹೇಳಿ? ಈಗಾಗ್ಲೇ ಗಂಡ ಅನ್ಸ್‌ಕೊಂಡ್ ಮನುಷ್ಯ ಬಿಟ್ಟ್ ಓಡ್ ಹೋದ ಅಂತ ಜನ ಮಾತಾಡ್ತಿದ್ದಾರೆ.. ಈಗ್ ಇದೂ ಒಂದ್ ಕಳಂಕ ಬಂದ್ ಅಂಟ್ಕೊಂಡ್ರೆ.. ಅವಳ್ ಹೇಗ್ ನೆಮ್ಮದಿಯಿಂದ ಬದುಕೋದ್ ಹೇಳಿ?..<br />
-ಆತ ಗೊಂದಲದಲ್ಲಿ ನಿಲ್ತಾನೆ<br />
ಮಂಜುಳಮ್ಮ: ಸಧ್ಯಕ್ಕ್ ಇದನ್ನ್ ಸರಿ ಮಾಡೋಕ್ಕೆ ನನಗ್ ಕಾಣ್ತಾ ಇರೋ ಪರಿಹಾರ ಒಂದೇ..<br />
-ಎಲ್ಲರ ಕುತೂಹಲ<br />
ಮಂಜುಳಮ್ಮ: ನೀವಿಬ್ರು ಮದ್ವೆ ಆಗೋದು?..<br />
-ವಿಶ್ವಾಸ್ ಷಾಕ್<br />
-ಅನು ಷಾಕ್<br />
ಗೆಳತಿ: ನನಗೂ ಅದೇ ಸರಿ ಅನ್ಸತ್ತೆ ಸಾರ್..<br />
-ರಿಯಾಕ್ಷನ್ಸ್<br />
ಮಂಜುಳಮ್ಮ: ಏನಪ್ಪ ವಿಶ್ವಾಸ.. ನಮ್ಮ್ ಹುಡ್ಗೀನ್ ಮದ್ವೆ ಆಗಿ ಅವಳ್ ಬಗ್ಗೆ ಕೆಟ್ಟ್‌ದಾಗ್ ಆಡ್ಕೊಳ್ತಿರೋ ಜನಕ್ಕೆ ಸರ‍್ಯಾದ್ ಉತ್ರ ಕೊಡ್ತೀಯಾ?..<br />
-ವಿಶ್ವಾಸ್ ಏನೂ ಉತ್ತರಿಸದೆ ಎಲ್ಲರನ್ನೂ ಇನ್ನೊಮ್ಮೆ ನೋಡ್ತಾನೆ.<br />
-ಅನು ಕೂಡ ಆತಂಕದಲ್ಲೇ ನೋಡ್ತಾಳೆ<br />
ಮಂಜುಳಮ್ಮ: ಏನಪ್ಪ ಏನಾದ್ರು ಮಾತಾಡು..<br />
ವಿಶ್ವಾಸ್: ಬರೀ ನನ್ನ್ ಅಭಿಪ್ರಾಯ ಕೇಳ್‌ಬಿಟ್ರೆ ಸಾಕಾ?.. ಅನ್ನ್‌ಪೂರ್ಣ ಅವರ್ ಏನ್ ಹೇಳ್ತರೆ ಅಂತ ತಿಳ್ಕೊಳ್ಳೋದ್ ಬೇಡ್ವಾ?.. [ಅವಳಿಗೆ] ಹೇಳಿ ಅನ್ನ್‌ಪೂರ್ಣ.. ಇವರೆಲ್ಲ ನಿಮ್ಮನ್ನ್ ಮದ್ವೆ ಆಗು ಅಂತಿದಾರೆ.. ಇದಕ್ಕ್ ನೀವೇನ್ ಹೇಳ್ತೀರಾ?..<br />
-ಅನು ಏನೂ ಹೇಳಲಾಗದೆ ತಲೆತಗ್ಗಿಸಿಬಿಡ್ತಾಳೆ<br />
-ಮಂಜುಳಮ್ಮ ಸಂತೋಷ<br />
-ಬೃಂದಾ ಸಂತೋಷ<br />
-ವಿಶ್ವಾಸ್ ಸೀದಾ ಅನುವಿನ ಬಳಿಗೆ ಬರ‍್ತಾನೆ. ಅವಳ ಕೈ ಹಿಡೀತಾನೆ<br />
-ಎಲ್ಲರ ಅಚ್ಚರಿ ರಿಯಾಕ್ಷನ್<br />
ವಿಶ್ವಾಸ್: ಬನ್ನಿ ನನ್ನ್ ಜೊತೆ.. [ಎಂದು ಕರೆದೊಯ್ತಾನೆ]<br />
-ಅನು ಎಲ್ಲಿಗೆ ಎಂಬಂತೆ ನೋಡ್ತಾಳೆ<br />
-ಎಲ್ಲರೂ ಎಲ್ಲಿಗೆ ಎಂಬ ಕುತೂಹಲದಲ್ಲಿ ನೋಡ್ತಾರೆ<br />
-ವಿಶ್ವಾಸ್ ಕೈ ಹಿಡಿದುಕೊಂಡು ಹೊರಟೇಬಿಡ್ತಾನೆ ಇವರೂ ಅವನ ಜೊತೆಯಲ್ಲಿ ಹಿಂದೆ ಸಾಗ್ತಾರೆ<br />
<span style="text-decoration:underline;"><strong>ದೃಶ್ಯ-೨೭/ಹಗಲು/ಒಳಗೆ/ಆಸ್ಪತ್ರೆ</strong></span><br />
-ಅನೂನ ಕರೆದುಕೊಂಡು ಬರುವ ವಿಶ್ವಾಸ. ಹಿಂದೆಯೇ ಏನೂ ಅರ್ಥವಾಗದೆ ಆತಂಕದಿಂದಲೇ ಅವರ ಹಿಂದೆ ಬರುವ ಮಂಜುಳಮ್ಮ ಮತ್ತು ಬೃಂದ<br />
-ಕಾರಿಡಾರಿಗೆ ಬಂದು ನಿಲ್ತಾನೆ ಆಗಲೇ ಎದುರಿಗೆ ಬರುವ ರೆಗ್ಯುಲರ್ ಡಾಕ್ಟರ್ ಅವನು ಹಾಗೆ ಕರೆದು ತರೋದನ್ನ ಅಚ್ಚರಿಯಿಂದ ನೋಡ್ತಾನೆ<br />
ಡಾಕ್ಟರ್: ಏನ್ ವಿಶ್ವಾಸ್ ಇದು.. ಅವರನ್ನ್ ಯಾಕ್ ಹಾಗ್ ಕರ‍್ಕೊಂಡ್ ಬರ‍್ತಾ ಇದ್ದೀರಾ?..<br />
ವಿಶ್ವಾಸ್: [ಅಲ್ಲಿ ಬಂದು ಅವಳ ಹಿಡಿದ ಕೈ ಬಿಟ್ಟು] ಡಾಕ್ಟರ್..<br />
-ಎನ್ನುವಾಗ ವಿಶ್ವಾಸ್ ಏನು ಹೇಳ್ತಾನೋ ಎಂಬ ಕುತೂಹಲ<br />
ವಿಶ್ವಾಸ್: ನಾನ್ ಅನೂನ್ ಮದ್ವೆ ಆಗ್‌ಬೋದಾ?..<br />
-ಎಲ್ಲರ ಖುಷಿ ಕುತೂಹಲದ ರಿಯಾಕ್ಷನ್<br />
ವಿಶ್ವಾಸ್: ನಾನ್ ಮದ್ವೆ ಆಗೋದ್ರಿಂದ ಅವರಿಗೇನೂ ಸಮಸ್ಯೆ ಆಗಲ್ಲ ಅನ್ನೋದಾದ್ರೆ ಮಾತ್ರ ಆಗ್ತೀನಿ..<br />
-ಅವಳ ರಿಯಾಕ್ಷನ್<br />
ಡಾಕ್ಟರ್: ಛೇಛೇ.. ಏನೂ ಸಮಸ್ಯೆ ಇಲ್ಲ.. ನೀವ್ ಧಾರಾಳ್‌ವಾಗ್ ಮದ್ವೆ ಆಗ್‌ಬೋದು..<br />
-ಎಲ್ಲರ ಖುಷಿ<br />
ವಿಶ್ವಾಸ್: [ನಿಡುಸುಯ್ದು] ಡಾಕ್ಟರ್.. ನಮ್ಮ್ ಪಾಲಿನ್ ನಿಜವಾದ್ ದೇವ್ರ್ ನೀವೇ.. ಅದಕ್ಕೆ.. ನಾನ್ ನಿಮ್ಮ್‌ಗಳನ್ನ ಸಾಕ್ಷಿಯಾಗಿಟ್ಕೊಂಡು ಅನೂಗ್ ತಾಳಿ ಕಟ್ಟ್‌ಬೇಕು ಅಂದ್ಕೋತೀದೀನಿ.. ನಿಮ್ಮ್ ಪರ್ಮೀಷನ್ ಇದ್ಯಾ?..<br />
-ಅವರು ತಲೆಯಾಡಿಸುತ್ತಾನೆ<br />
-ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ<br />
ಡಿಸಾಲ್ವ್<br />
-ಆಸ್ಪತ್ರೆಯ ಡಾಕ್ಟರ್‌ಗಳ ಎದುರಿಗೆ ವಿಶ್ವಾಸ್ ಅನೂಗೆ ಹಾರ ಹಾಕ್ತಾನೆ. ಎಲ್ಲರ ಚಪ್ಪಾಳೆ, ಎಲ್ಲರ ಖುಷಿ<br />
-ವಿಶ್ವಾಸ್ ತಾಳಿ ಕಟ್ತಾನೆ<br />
-ಮತ್ತೆ ಎಲ್ಲರ ಚಪ್ಪಾಳೆ<br />
-ಇಬ್ಬರಿಗೂ ಡಾಕ್ಟರ್ ಸಿಸ್ಟರ್‌ಗಳೆಲ್ಲ ವಿಷ್ ಮಾಡ್ತಾರೆ.. ಕಂಗ್ರ್ಯಾಟ್ಸ್ ಹೇಳ್ತಾರೆ. ಎಲ್ಲರಿಗೂ ಸ್ವೀಟ್ ಕೊಡ್ತಾರೆ..<br />
-ಎಲ್ಲಾ ಆದಮೇಲೆ ಇಬ್ಬರೂ ಕೈ ಕೈ ಹಿಡಿದು ಹೊರಡ್ತಾರೆ, ಅವರು ಖುಷೀಲಿ ಹೊರಡುವಾಗ ಫ಼್ರೇಂ ಫ಼್ರೀಜ಼್ ಆದರೆ ಅಲ್ಲೊಂದು ಕ್ಯಾಪ್ಷನ್<br />
<strong>“ಅವರಿಬ್ಬರೂ ಸುಖವಾಗಿದ್ದರು!&#8230; ಸಾಯುವವರೆಗೂ&#8230;!”</strong><br />
* * *</p>
<br />Filed under: <a href='http://bsuresha.wordpress.com/category/%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%95%e0%b2%a4%e0%b3%86%e0%b2%97%e0%b2%b3%e0%b3%81/'>ಚಿತ್ರಕತೆಗಳು</a>  <a rel="nofollow" href="http://feeds.wordpress.com/1.0/gocomments/bsuresha.wordpress.com/189/"><img alt="" border="0" src="http://feeds.wordpress.com/1.0/comments/bsuresha.wordpress.com/189/" /></a> <a rel="nofollow" href="http://feeds.wordpress.com/1.0/godelicious/bsuresha.wordpress.com/189/"><img alt="" border="0" src="http://feeds.wordpress.com/1.0/delicious/bsuresha.wordpress.com/189/" /></a> <a rel="nofollow" href="http://feeds.wordpress.com/1.0/gofacebook/bsuresha.wordpress.com/189/"><img alt="" border="0" src="http://feeds.wordpress.com/1.0/facebook/bsuresha.wordpress.com/189/" /></a> <a rel="nofollow" href="http://feeds.wordpress.com/1.0/gotwitter/bsuresha.wordpress.com/189/"><img alt="" border="0" src="http://feeds.wordpress.com/1.0/twitter/bsuresha.wordpress.com/189/" /></a> <a rel="nofollow" href="http://feeds.wordpress.com/1.0/gostumble/bsuresha.wordpress.com/189/"><img alt="" border="0" src="http://feeds.wordpress.com/1.0/stumble/bsuresha.wordpress.com/189/" /></a> <a rel="nofollow" href="http://feeds.wordpress.com/1.0/godigg/bsuresha.wordpress.com/189/"><img alt="" border="0" src="http://feeds.wordpress.com/1.0/digg/bsuresha.wordpress.com/189/" /></a> <a rel="nofollow" href="http://feeds.wordpress.com/1.0/goreddit/bsuresha.wordpress.com/189/"><img alt="" border="0" src="http://feeds.wordpress.com/1.0/reddit/bsuresha.wordpress.com/189/" /></a> <img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=189&amp;subd=bsuresha&amp;ref=&amp;feed=1" width="1" height="1" />]]></content:encoded>
			<wfw:commentRss>http://bsuresha.wordpress.com/2011/02/20/%e0%b2%ac%e0%b2%bf-%e0%b2%b8%e0%b3%81%e0%b2%b0%e0%b3%87%e0%b2%b6-%e0%b2%85%e0%b2%b5%e0%b2%b0-%e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf%e0%b2%af%e0%b3%86%e0%b2%82%e0%b2%ac-%e0%b2%85/feed/</wfw:commentRss>
		<slash:comments>1</slash:comments>
	
		<media:content url="" medium="image">
			<media:title type="html">bsuresha</media:title>
		</media:content>
	</item>
		<item>
		<title>ಇಂದಿನ ಮಾಧ್ಯಮಗಳಲ್ಲಿ ಕನ್ನಡದ ಸ್ಥಿತಿ ಗತಿ &#8211; ನಮ್ಮ ಮುಂದಿರುವ ಸವಾಲುಗಳು</title>
		<link>http://bsuresha.wordpress.com/2011/02/17/%e0%b2%87%e0%b2%82%e0%b2%a6%e0%b2%bf%e0%b2%a8-%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1/</link>
		<comments>http://bsuresha.wordpress.com/2011/02/17/%e0%b2%87%e0%b2%82%e0%b2%a6%e0%b2%bf%e0%b2%a8-%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1/#comments</comments>
		<pubDate>Thu, 17 Feb 2011 04:56:00 +0000</pubDate>
		<dc:creator>bsuresha</dc:creator>
				<category><![CDATA[ಇಂದಿನ ಚಿಂತೆ!]]></category>

		<guid isPermaLink="false">http://bsuresha.wordpress.com/?p=180</guid>
		<description><![CDATA[ಪ್ರವೇಶ
ಇಂದು ಮಾಧ್ಯಮ ಎಂಬುದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸಮಕಾಲೀನ ಬದುಕಿನಲ್ಲಿ ಪ್ರತೀಕ್ಷಣವೂ ಯಾವುದೋ ಮಾಧ್ಯಮವು ನಮಗೆ ಮಾಹಿತಿಗಳ ಮಹಾಪೂರವನ್ನೇ ತಂದು ಇರಿಸುತ್ತಲೇ ಇರುತ್ತದೆ. ಹೀಗಾಗಿಯೇ ಈ ಯುಗವನ್ನು ಮಾಹಿತಿ ಯುಗ ಎಂದು ಗುರುತಿಸಲಾಗಿದೆ. ಹೀಗೆ ನಮಗೆ ದೊರೆಯುವ ಮಾಹಿತಿಗಳೆಲ್ಲವೂ ನಮಗೆ ಉಪಯುಕ್ತವೇ ಎಂದೇನಲ್ಲಾ. ಆದರೂ ಆ ಮಾಹಿತಿಗಳು ಆಯಾ ವ್ಯಕ್ತಿಗೆ ಲಭ್ಯವಾಗುತ್ತಲೇ ಇರುತ್ತದೆ.<img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=180&amp;subd=bsuresha&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:left;"><span style="text-decoration:underline;"><strong>ಇಂದಿನ ಮಾಧ್ಯಮಗಳಲ್ಲಿ ಕನ್ನಡದ ಸ್ಥಿತಿ ಗತಿ &#8211; ನಮ್ಮ ಮುಂದಿರುವ ಸವಾಲುಗಳು</strong></span><br />
(- ಬಿ.ಸುರೇಶ ಸಿದ್ಧಪಡಿಸಿದ ಟಿಪ್ಪಣಿ)<br />
<span style="text-decoration:underline;"><strong>ಪ್ರವೇಶ</strong></span><br />
ಇಂದು ಮಾಧ್ಯಮ ಎಂಬುದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸಮಕಾಲೀನ ಬದುಕಿನಲ್ಲಿ ಪ್ರತೀಕ್ಷಣವೂ ಯಾವುದೋ ಮಾಧ್ಯಮವು ನಮಗೆ ಮಾಹಿತಿಗಳ ಮಹಾಪೂರವನ್ನೇ ತಂದು ಇರಿಸುತ್ತಲೇ ಇರುತ್ತದೆ. ಹೀಗಾಗಿಯೇ ಈ ಯುಗವನ್ನು ಮಾಹಿತಿ ಯುಗ ಎಂದು ಗುರುತಿಸಲಾಗಿದೆ. ಹೀಗೆ ನಮಗೆ ದೊರೆಯುವ ಮಾಹಿತಿಗಳೆಲ್ಲವೂ ನಮಗೆ ಉಪಯುಕ್ತವೇ ಎಂದೇನಲ್ಲಾ. ಆದರೂ ಆ ಮಾಹಿತಿಗಳು ಆಯಾ ವ್ಯಕ್ತಿಗೆ ಲಭ್ಯವಾಗುತ್ತಲೇ ಇರುತ್ತದೆ.<br />
<span style="text-decoration:underline;"><strong>ಮಾಧ್ಯಮಗಳು</strong></span><br />
ಮಾಧ್ಯಮಗಳಲ್ಲಿ ಅನೇಕ ಬಗೆ. ಅವುಗಳು ಕೊಡುವ ಮಾಹಿತಿಗಳೂ ಬಗೆ ಬಗೆ. ಅವುಗಳನ್ನು ಮೂಲಭೂತವಾಗಿ ಹೀಗೆ ವಿಂಗಡಿಸಬಹುದು.<br />
೧.	ಮುದ್ರಣ ಮಾಧ್ಯಮ : ಇದರಡಿಯಲ್ಲಿ &#8211; ದಿನಪತ್ರಿಕೆ, ವಾರಪತ್ರಿಕೆ, ನಿಯತಕಾಲಿಕೆಗಳು, ಸಾಹಿತ್ಯ ಪತ್ರಿಕೆಗಳು, ಆಯಾ ಗುಂಪುಗಳಿಗಾಗಿ ಹೊರಡಿಸಲಾಗುವ ಪತ್ರಿಕೆಗಳು.<br />
೨.	ದೃಶ್ಯ ಮಾಧ್ಯಮ : ಇದರಡಿಯಲ್ಲಿ – ವಿದ್ಯುನ್ಮಾನ ಮಾಧ್ಯಮಗಳು (ಟೆಲಿವಿಷನ್ ವಾಹಿನಿಗಳು ಮತ್ತು ಅಂತರ್ಜಾಲ), ರಸ್ತೆಗಳಲ್ಲಿನ ಫಲಕಗಳು, ಬಸ್ ನಿಲ್ದಾಣ-ರೈಲು ನಿಲ್ದಾಣಗಳಲ್ಲಿನ ಟೆಲಿಷನ್ ಜಾಲಗಳು, ರೈಲು, ಬಸ್ಸು ಮತ್ತು ವಿಮಾನಗಳಲ್ಲಿನ ಟೆಲಿವಿಷನ್ ವ್ಯವಸ್ಥೆಗಳು, ಸಂಚಾರಿ ದೂರವಾಣಿಯಲ್ಲಿನ ಮಾಹಿತಿ ಹಂಚುವ ವಿವರಗಳು.<br />
೩.	ಶ್ರವ್ಯ ಮಾಧ್ಯಮ : ಆಕಾಶವಾಣಿ, ಎಫ್‌ಎಂ ರೇಡಿಯೋ ಮತ್ತು ಸಮುದಾಯ ರೇಡಿಯೋವಾಹಿನಿಗಳು.<br />
ಈ ಎಲ್ಲಾ ಮಾಧ್ಯಮಗಳಲ್ಲಿ ಭಾಷೆಯ ಬಳಕೆ ಅನಿವಾರ್ಯ. ಆಯಾ ಸಮಾಜಕ್ಕೆ ಆಯಾ ಮಾಧ್ಯಮಗಳು ಮಾಹಿತಿ ಪ್ರಸಾರವನ್ನು ಮಾಡುತ್ತಲೇ ಇವೆ. ಆದರೆ ಮೇಲೆ ಸೂಚಿಸಿದ ಹಲವು ಮಾಧ್ಯಮಗಳಲ್ಲಿ ಕನ್ನಡದ ಬಳಕೆಯೇ ಸರಿಯಾಗಿ ಆಗುತ್ತಿಲ್ಲ. ಅವುಗಳು: ಸಂಚಾರಿ ದೂರವಾಣಿಗಳು ಹಾಗೂ ರೈಲು, ಬಸ್ಸು, ವಿಮಾನಗಳಲ್ಲಿನ ಟೆಲಿವಿಷನ್ ವ್ಯವಸ್ಥೆ. ಇಲ್ಲಿ ನಮ್ಮ ಭಾಷೆಯನ್ನು ಸ್ಥಾಪಿಸಲು ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಇನ್ನುಳಿದ ಮಾಧ್ಯಮಗಳಲ್ಲಿನ ಕನ್ನಡದ ಬಳಕೆಯನ್ನು ಕುರಿತು ನೋಡೋಣ.</p>
<p style="text-align:left;"><span id="more-180"></span><br />
<span style="text-decoration:underline;"><strong>ಮುದ್ರಣ ಮಾಧ್ಯಮ</strong></span><br />
ನಮ್ಮ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಕನ್ನಡವನ್ನು ನಿರಂತರವಾಗಿ ಬಳಸುತ್ತಿರುವ ಮಾಧ್ಯಮಗಳು. ಈ ಮಾಧ್ಯಮಗಳ ಮೂಲಕ ಕನ್ನಡ ಲಿಪಿಗೆ ಒಂದು ಸಾಮಾನ್ಯೀಕರಣ ದೊರೆತಿದೆ. ಆದರೆ ಕಳೆದ ಒಂದು ದಶಕದಿಂದ ಈ ಮುದ್ರಣ ಮಾಧ್ಯಮಕ್ಕೆ ಹರಿದು ಬಂದಿರುವ ಹೊಸತಲೆಮಾರಿನಲ್ಲಿ ಅನೇಕರಿಗೆ ಕನ್ನಡವು ಭಾಷೆಯಾಗಿ ಬರುವುದೇ ಇಲ್ಲ. ಈ ಮಾತಿಗೆ ಅಪವಾದ ಇರಬಹುದು. ಆದರೆ ಬಹುತೇಕರ ಮಟ್ಟಿಗೆ ಇದು ಸತ್ಯ. ಹೀಗಾಗಿ ಮುದ್ರಣ ಮಾಧ್ಯಮಗಳಲ್ಲಿ ಈಚೆಗೆ ಕಾಣಿಸಿಕೊಳ್ಳುತ್ತಿರುವ ಕನ್ನಡವು ಪಲ್ಲಟಗೊಳ್ಳುತ್ತಿದೆ. ಇದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ನಮ್ಮ ರಾಜ್ಯದಲ್ಲಿರುವ ಮಾಧ್ಯಮವನ್ನು ಕಲಿಸುವ ಕೇಂದ್ರಗಳಲ್ಲಿ ಭಾಷೆಯನ್ನು ಕಲಿಸುವ ಪಠ್ಯಗಳೇ ಇಲ್ಲ. ಆ ವಿದ್ಯಾರ್ಥಿಗಳು ತಂತ್ರಜ್ಞಾನ ಕಲಿಯುತ್ತಾರೆ. ಆದರೆ ಭಾಷೆಯನ್ನು ಕಲಿಯುವುದಿಲ್ಲ. ಹೀಗಾಗಿ ಮಾಧ್ಯಮಗಳನ್ನು ಕುರಿತು ತರಬೇತಿ ನೀಡುವ ಈ ನಡಿನ ಬಹುತೇಕ ಕೇಂದ್ರಗಳಿಂದ ಬರುವ ವಿದ್ಯಾರ್ಥಿಗಳು ಮುದ್ರಣ ಮಾಧ್ಯಮದ ಮೂಲ ಅಗತ್ಯವಾದ ಭಾಷೆ ಎಂಬುದರ ಮೇಲೆ ಹಿಡಿತ ಸಾಧಿಸದೆ ಔದ್ಯೋಗಿಕ ಕ್ಷೇತ್ರಕ್ಕೆ ಪ್ರವೇಶಿಸುತ್ತಾ ಇದ್ದಾರೆ. ಅನೇಕ ದಿನಪತ್ರಿಕೆಗಳಲ್ಲಿ ಇರುವ ಹಿರಿಯ ಪತ್ರಕರ್ತರು ಇಂತಹ ಹೊಸಬರನ್ನು ಶೃತಿಗೊಳಿಸುವ ಪ್ರಯತ್ನ ಮಾಡುತ್ತಾ ಇದ್ದಾರಾದರೂ ಇಂದು ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಳ್ಳುತ್ತಿರುವ ಕನ್ನಡವು ಭಾಷೆಯಾಗಿ ಕನ್ನಡತನವನ್ನು ಮೆರೆಯುವುದಕ್ಕಿಂತ ಆಂಗ್ಲ ಬಾಷೆಯ ಜಾಯಮಾನದಿಂದ ಕಟ್ಟಿದ ಕನ್ನಡದಂತೆ ಕಾಣುತ್ತಿದೆ. ಉದಾಹರಣೆಗೆ ಈ ದಿನದ (೧೬ ಫೆಬ್ರವರಿ ೨೦೧೧) ಮುಖಪುಟದ ಅಗ್ರ ಸುದ್ದಿಗಳನ್ನು ನೋಡಿ : “ಹೊಸ ವಿವಾದ ತರಂಗ” ಇದು ಆಂಗ್ಲದ ‘ನ್ಯೂ ಸ್ಕ್ಯಾಮ್ ಆಫ್ ಸ್ಪೆಕ್ಟ್ರಂ’ನ ನೇರ ಅನುವಾದ. ಇಂತಹ ಅನೇಕ ಉದಾಹರಣೆಗಳನ್ನು ಕನ್ನಡಿಗರು ಅದಾಗಲೇ ಗಮನಿಸಿರುತ್ತಾರೆ. ಮುದ್ರಣ ಮಾಧ್ಯಮದಲ್ಲಿ ಅನುವಾದ ಎಂಬುದು ಪ್ರಮುಖ ಕೆಲಸ. ಆದರೆ ಅಂತಹ ಅನುವಾದಕರಿಗೆ ಕನ್ನಡ ಭಾಷಾ ಬಳಕೆಯ ಜಾಯಮಾನದ ಪರಿಚಯ ಗಟ್ಟಿಯಾಗಿ ಆಗಬೇಕಿದೆ. ಇದೇ ಮಾತುಗಳನ್ನು ಮುದ್ರಣ ಮಾದ್ಯಮದಲ್ಲಿ ಬರುವ ಜಾಹೀರಾತಿನಲ್ಲಿ ಬಲಸಲಾಗುವ ಕನ್ನಡ ಕುರಿತು ಇನ್ನೂ ಗಟ್ಟಿಯಾಗಿ ಹೇಳಬಹುದು. ಕೆಲವು ಪತ್ರಿಕೆಗಳಂತೂ ಜಾಹೀರಾತುಗಳನ್ನು ಇಂಗ್ಲೀಷಿನಲ್ಲಿಯೇ ಪ್ರಕಟಿಸುತ್ತಿವೆ. ಇಂತಹ ಪತ್ರಿಕೆಗಳ ಮೇಲೆ ನೇರ ಕ್ರಮ ತೆಗೆದುಕೊಳ್ಳುವ ಕಾನೂನು ನಮ್ಮಲ್ಲಿಲ್ಲ. ಆದರೆ ಅಲ್ಲಿನ ಸಂಪಾದಕೀಯ ವಲಯ ಮತ್ತು ಆಡಳಿತ ಸಿಬ್ಬಂದಿಗೆ ಕನ್ನಡದ ಕಾಳಜಿ ಹೆಚ್ಚಾಗಬೇಕಿದೆ ಎಂಬುದಂತೂ ಸತ್ಯ.<br />
ಇಂತಹ ಬಹುರಾಷ್ಟ್ರೀಯ ಕಂಪೆನಿಗಳು ನಡೆಸುವ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ವೈರುಧ್ಯ ಎಂಬಂತೆ ಸ್ವಚ್ಛ ಕನ್ನಡವನ್ನು ಉಳಿಸುವ ಕೆಲಸವನ್ನು ಅನೇಕ ಸಾಹಿತ್ಯ ಪತ್ರಿಕೆಗಳು ಮಾಡುತ್ತಿವೆ. ಆದರೆ ಅವುಗಳನ್ನು ಕೊಂಡು ಓದುವವರ ಸಂಖ್ಯೆ ಸಣ್ಣದು. ಪ್ರಾಯಶಃ ಇಂದಿನ ದಿನಗಳಲ್ಲಿ ಸ್ವಚ್ಛ ಕನ್ನಡಿಗರು ಎಂಬ ಮಾತೇ ಅಲ್ಪಸಂಖ್ಯಾತರದ್ದಾಗಿದೆಯೇನೋ ಎಂಬ ಅನುಮಾನ ನನ್ನದು.<br />
ಅನೇಕ ಸಂಘ-ಸಂಘಟನೆಗಳು ತನ್ನ ಸದಸ್ಯರಿಗಾಗಿ ಪತ್ರಿಕೆಗಳನ್ನು ತರುತ್ತಿವೆ. ಇಲ್ಲಿ ಆಯಾ ಸಂಘಟನೆಯ ವೃತ್ತಿಪರ ಲೇಖನಕ್ಕೆ ಆದ್ಯತೆ. ಹೀಗಾಗಿ ಇಲ್ಲಿ ಕನ್ನಡವೆಂಬುದು ಕೇವಲ ಭಾಷೆಯಾಗಿ ಬಳಸಲಾಗುವ ಸಾಧನ. ಆದರೆ ಹೀಗೆ ಭಾಷೆಯನ್ನು ಬಳಸುವ ಆಯಾ ಸಂಘಟನೆಯ ಬಹುತೇಕರಿಗೆ ಕನ್ನಡ ಭಾಷೆಯ ಜ್ಞಾನ ಕಡಿಮೆ. ಹೀಗಾಗಿ ಇಂತಹ ಪತ್ರಿಕೆಗಳಲ್ಲಿ ಬರುವ ಭಾಷಾ ಬಳಕೆಯ ತಪ್ಪುಗಳು ಅತಿ ಹೆಚ್ಚು. ಇಂತಹ ಪತ್ರಿಕೆಗಳನ್ನು ಹೊರತರುತ್ತಿರುವ ಎಲ್ಲರೂ ಈ ಬಗ್ಗೆ ಗಮನ ಇಡಬೇಕಾದ್ದು ಕನ್ನಡಕ್ಕೆ ಅಗತ್ಯವಾಗಿದೆ.<br />
<span style="text-decoration:underline;"><strong>ವಿದ್ಯುನ್ಮಾನ ಮಾಧ್ಯಮಗಳು</strong></span><br />
ಇವುಗಳಲ್ಲಿ ಟೆಲಿವಿಷನ್ ವಾಹಿನಿಗಳನ್ನು ಕುರಿತು ಮೊದಲು ಮಾತಾಡಬೇಕಿದೆ. ಇಂದು ನಮ್ಮ ಟೆಲಿವಿಷನ್ನಿನಲ್ಲಿ ಸುದ್ದಿವಾಹಿನಿ, ಸಾಮಾನ್ಯ ಜನರಂಜನೆಯ ಕಾರ್ಯಕ್ರಮಗಳ ವಾಹಿನಿ ಎಂಬ ಎರಡು ಬಗೆಗಳು ಇವೆ. ಅವುಗಳಲ್ಲಿ ಜನರಂಜನೆಯ ವಾಹಿನಿಯನ್ನು ಮೊದಲು ಗಮನಿಸುವುದಾದರೆ; ಇಲ್ಲಿ ಬರುವ ಬಹುತೇಕ ನಿರೂಪಕರು (ಹಾಡಿನ ಕಾರ್ಯಕ್ರಮ ನಡೆಸಿಕೊಡುವವರು) ಕನ್ನಡವನ್ನು ಕಂಗ್ಲೀಷು ಮಾಡಿದ್ದಾರೆ. ಇವರಾಡುವ ಮಾತಿಗೆ ಇರುವ ತೂಕವೂ ಅಂತಹುದೇ. ಇಂತಹ ಕಾರ್ಯಕ್ರಮಗಳನ್ನು ನೋಡುವ ಜನರಿಗೆ ನೇರವಾಗಿ ಇವರ ಭಾಷೆ ತಲುಪುತ್ತಿದೆ. ವಿಶೇಷವಾಗಿ ಖಾಸಗಿ ವಾಹಿನಿಗಳಲ್ಲಿನ ನಿರೂಪಕ/ನಿರೂಪಕಿಯರು ಬಳಸುವ ಭಾಷೆಯನ್ನು ನಿಯಂತ್ರಿಸುವುದು ಕನ್ನಡವನ್ನು ಮುಂದಿನ ತಲೆಮಾರಿಗೆ ಸರಿಯಾಗಿ ದಾಟಿಸುವ ದೃಷ್ಟಿಯಿಂದ ಅಗತ್ಯವಾಗಿದೆ. ಈ ನಿರೂಪಕರು ಬಳಸುವ ಭಾಷೆಯಲ್ಲಿ ಕನ್ನಡಕ್ಕಿಂತ ಹೆಚ್ಚು ಇಂಗ್ಲೀಷ್ ಬಳಕೆಯಾಗುತ್ತಿದೆ ಎಂಬುದೊಂದು ವಿಷಯವಾದರೆ ಇದರೊಂದಿಗೆ ಕನ್ನಡಕ್ಕೆ ಅನೇಕ ಪದಗಳ ಆಮದು ಸಹ ಆಗುತ್ತಿದೆ. ಈ ಹೊಸ ಪದಗಳಿಂದ ಕನ್ನಡ ಭಾಷೆಗೆ ಹೊಸಪದಗಳು ಸಿಕ್ಕಿವೆ. ಇದು ಸಹ ಬಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಾದುದೇ ಆಗಿದೆ. ನಾವು ಕಂಪ್ಯೂಟರ್ ಎಂಬ ಪದಕ್ಕೆ ಗಣಕ ಯಂತ್ರ ಅನ್ನುವುದಕ್ಕಿಂತ ಅದನ್ನು ಕಂಪ್ಯೂಟರ್ ಎನ್ನುವುದೇ ಹೆಚ್ಚು ಸೂಕ್ತ. ಹಾಗೆಯೇ ಪೋಲೀಸರಿಗೆ ಆರಕ್ಷಕರು ಎನ್ನುವುದಕ್ಕಿಂತ ಪೋಲೀಸ್ ಎಂದೇ ಬಳಸುವುದು ಅನುಕೂಲ. ಭಾಷೆಯ ದೃಷ್ಟಿಯಿಂದ ನಮ್ಮಲ್ಲಿ ಅಷ್ಟು ಉದಾರತೆ ಇರಲೇಬೇಕಾಗುತ್ತದೆ. ಎಲ್ಲಾ ಪದಗಳನ್ನು ಕನ್ನಡಕ್ಕೆ ತರುತ್ತೇವೆ ಎಂದು, ಸಂಸ್ಕೃತ ಪದಗಳನ್ನು ಬಳಸುವುದಕ್ಕಿಂತ, ಅಂತಹ ಪದಗಳನ್ನು ಮೂಲ ಸ್ವರೂಪದಲ್ಲಿಯೇ ಬಳಸುವುದು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಆರೋಗ್ಯಕರ.<br />
ಇನ್ನು ಇದೇ ವಾಹಿನಿಯಲ್ಲಿ ಬರುತ್ತಿರುವ ಧಾರಾವಾಹಿಗಳಿಗೆ ಬರೋಣ. ಇಲ್ಲಿ ಕನ್ನಡವನ್ನು ಎಚ್ಚರಿಕೆಯಿಂದ ಬಳಸುವ ಬರಹಗಾರರ ಮತ್ತು ನಿರ್ದೇಶಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂತೆಯೇ ಕಲಾವಿದರಲ್ಲಿಯೂ ಕನ್ನಡ ಬಳಕೆಯ ಚಚ್ಚರಗಳು ಕ್ಷೀಣಿಸುತ್ತಿವೆ. ಹೀಗಾಗಿ ನಿರೂಪಕ/ನಿರೂಪಕಿಯರ ಸ್ಥಿತಿಯೇ ಬಹುತೇಕ ಕಲಾವಿದರದ್ದೂ ಆಗಿದೆ. ಈ ವಿಷಯ ಕುರಿತಂತೆ ಆಯಾ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥರು ವಿಶೇಷ ಕಾಳಜಿ ವಹಿಸಬೇಕಾಗಿದೆ. ಇದಲ್ಲದೆ ಈಚೆಗೆ ವಾಹಿನಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಮೂಲಕತೆಗಳನ್ನು ಸಿದ್ಧಪಡಿಸಿಕೊಳ್ಳುವ ಸಮಯವಿಲ್ಲದ ಕಾರಣ ಇತರ ಭಾಷೆಗಳಿಂದ ಎರವಲು ಕತೆಗಳನ್ನು ತೆಗೆದುಕೊಂಡು ಪುನರ್‌ನಿರ್ಮಾಣ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂತಹ ಕಾರ್ಯಕ್ರಮಗಳ ನಿರ್ದೇಶಕರು ಬಹುಮಟ್ಟಿಗೆ ಪರಭಾಷೆಯವರೇ ಆಗಿರುತ್ತಾರೆ. ಆದ್ದರಿಂದ ಕಲಾವಿದರು ಬಳಸುವ ಕನ್ನಡದ ಮೇಲೆ ಅಧಿಕಾರಸ್ಥವಾಗಿ ಮಾತಾಡುವುದು ಅಂತಹ ಪರಭಾಷಿಕರಿಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿಯೂ ನಮ್ಮ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಕಲಾವಿದರ ಕನ್ನಡಕ್ಕೆ ಸಾಕಷ್ಟು ತೊಂದರೆಗಳು ಆಗುತ್ತಿವೆ. ಈ ದೃಷ್ಟಿಯಿಂದ ಕನ್ನಡ ವಾಹಿನಿಗಳಲ್ಲಿ ತಯಾರಾಗುವ ಕಾರ್ಯಕ್ರಮಗಳಿಗೆ ಕನ್ನಡಿಗರನ್ನೇ ನಿರ್ದೇಶಕರನ್ನಾಗಿ ಆಯ್ದುಕೊಳ್ಳಬೇಕು ಎಂದು ಕನ್ನಡಿಗರೆಲ್ಲರೂ ವಾಹಿನಿಗಳ ಮೇಲೆ ಒತ್ತಡ ತರಬೇಕಾಗುತ್ತದೆ.<br />
ಇನ್ನು ಸುದ್ದಿ ವಾಹಿನಿಗಳ ವಿಷಯ. ಇಲ್ಲಿ ಸರ್ಕಾರೀ ಸುದ್ದಿವಾಹಿನಿಗಳದು ಒಂದು ಬಗೆಯಾದರೆ ಖಾಸಗಿ ಸುದ್ದಿವಾಹಿನಿಗಳಲ್ಲಿನ ಸುದ್ದಿ ಬಿತ್ತರ ಮತ್ತೊಂದು ಬಗೆ. ಇಲ್ಲಿ ಬಳಸಲಾಗುವ ಕನ್ನಡದಲ್ಲಿ ವಾಹಿನಿ ಖಾಸಗಿಯದೋ ಸರ್ಕಾರಿಯೋ ಎಂಬ ಬಗೆಯಲ್ಲಿಯೇ ವ್ಯತ್ಯಾಸಗಳಾಗುತ್ತವೆ. ಸರ್ಕಾರೀ ವಾಹಿನಿಯಲ್ಲಿನ ಸುದ್ದಿಯನ್ನು ನೋಡುವವರ ಸಂಖ್ಯೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಖಾಸಗಿ ವಾಹಿನಿಗಳ ಸುದ್ದಿ ಬಿತ್ತರವನ್ನು ಕುರಿತು ಮಾತಾಡುವುದೇ ಸೂಕ್ತ. ಇಲ್ಲಿ ಹಳಬರಿದ್ದಾರೆ. ಅವರ ಬಗ್ಗೆ ನಮ್ಮಗ್ಯಾವ ತಕರಾರೂ ಇಲ್ಲ. ಅವರು ಕನ್ನಡಿಗರು. ಆದರೆ ಹೊಸ ತಲೆಮಾರಿನ ಸುದ್ದಿ ವಾಚಕರು ಕನ್ನಡ ಬಲ್ಲವರಲ್ಲ. ಇದಕ್ಕೆ ಅದಾಗಲೇ ತಿಳಿಸಿದ ಅವರು ವಿದ್ಯಾಭ್ಯಾಸ ಕಲಿತ ಕ್ರಮವೇ ಕಾರಣವಾಗಿರುತ್ತದೆ. ಹೀಗಾಗಿ ಅಲ್ಪಪ್ರಾಣ-ಮಹಾಪ್ರಾಣಗಳು ಮಾತ್ರವೇ ಅಲ್ಲದೆ ಕನ್ನಡದ ಅನೇಕ ಶಬ್ದಗಳು ಹೊಸಬರ ಬಾಯಲ್ಲಿ ಅಪಭ್ರಂಶಗಳಾಗುತ್ತಾ ಇವೆ. ಈ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಗಳಲ್ಲಿ ಇರುವ ಹಳಬರು ಹೊಸಬರನ್ನು ಶೃತಿ ಪಡಿಸುವುದು ಅಗತ್ಯ.<br />
ಇನ್ನು ಅಂತರ್ಜಾಲ ಹಾಗೂ ಮೊಬೈಲ್ ಜಗತ್ತಿಗೆ ಬಂದರೆ, ಅಲ್ಲಿ ಕನ್ನಡದ ಬಳಕೆಗೆ ಅನೇಕ ಪ್ರಯತ್ನಗಳು ಹಲವು ದಶಕಗಳಿಂದ ಆಗುತ್ತಿವೆ. ಆದರೆ ಸಧ್ಯಕ್ಕೆ ವಿಂಡೋಸ್ ಮತ್ತು ಲೀನಕ್ಸ್ ಹೊರತು ಪಡಿಸಿ ಇನ್ನಿತರ ಕಂಪ್ಯೂಟರ್ ಭಾಷೆಗಳಾದ ಮ್ಯಾಕ್ ಮುಂತಾದವುಗಳಲ್ಲಿ ಕನ್ನಡದ ಬಳಕೆ ಆಗುತ್ತಿಲ್ಲ. ಇದಕ್ಕಾಗಿ ನಾವು ನಮ್ಮ ಕನ್ನಡ ತಂತ್ರಾಂಶಗಳನ್ನು ಸಿದ್ಧಪಡಿಸಬೇಕಿದೆ. ಪ್ರಾಯಶಃ ‘ಯೂನಿಕೋಡ್’ ಭಾಷೆಯನ್ನು ಸರ್ಕಾರವು ಸಾರ್ವತ್ರಿಕ ಬಳಕೆಗೆ ತಂದು, ಅಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿದಲ್ಲಿ ಸಾಕಷ್ಟು ಅಭಿವೃದ್ಧಿ ಆಗಬಹುದು ಎಂಬ ಸಲಹೆಗಳು ಬಂದಿವೆ. ಆ ನಿಟ್ಟಿನಲ್ಲಿ ಕೆಲಸಗಳಾಗುವುದು ಬಾಕಿ ಇವೆ. ಈ ಬದಲಾವಣೆ ಬಂದಲ್ಲಿ ನಮ್ಮ ಎಲ್ಲಾ ಸಂಚಾರಿ ದೂರವಾಣಿಗಳಲ್ಲಿಯೂ ಕನ್ನಡವನ್ನು ಬಳಕೆಗೆ ತರುವುದು ಸಾಧ್ಯವಾಗಬಹುದು. ಇಂದಿನ ತಲೆಮಾರು ಅತಿಹೆಚ್ಚು ಬಲಸುತ್ತಿರುವ ಸಂಚಾರಿ ದೂರವಾಣಿ ಹಾಗೂ ಕಂಪ್ಯೂಟರ್‌ನಲ್ಲಿ ಕನ್ನಡದ ಬಳಕೆಯನ್ನು ಸರಿಪಡಿಸುವುದು ಆದ್ಯತೆಯ ಮೇರೆಗೆ ಆಗಬೇಕಾದ ಕೆಲಸ. ಹಾಗಾದಾಗ ಮಾತ್ರ ಕನ್ನಡವನ್ನು ಹೊಸ ತಂತ್ರಜ್ಞಾನದಲ್ಲಿಯೂ ಶಾಶ್ವತವಾಗಿ ಉಳಿಸುವುದು ಸಾಧ್ಯ.<br />
<span style="text-decoration:underline;"><strong>ಶ್ರವ್ಯ ಮಾಧ್ಯಮ</strong></span><br />
ಈ ಶ್ರವ್ಯ ಮಾಧ್ಯಮದಲ್ಲಿಯೂ ಸರ್ಕಾರೀ ಆಕಾಶವಾಣಿ, ಖಾಸಗಿ ಎಫ್.ಎಂ ಮತ್ತು ಕಮ್ಯುನಿಟಿ ರೇಡಿಯೋ ಎಂಬ ಮೂರು ಬಗೆ ಇದೆ. ಇವುಗಳಲ್ಲಿ ಸರ್ಕಾರಿ ವಾಹಿನಿಯಲ್ಲಿನ ಕನ್ನಡದ ಬಳಕೆ ಅಚ್ಚುಕಟ್ಟಾಗಿದ್ದರು ಅಲ್ಲಿನ ನಿರ್ಜೀವ ಅವಧಿ (ಡೆಡೆ ಏರ್ ಟೈಂ) ಹೆಚ್ಚಾಗಿರುವುದರಿಂದ ಇಂದು ಆಕಾಶವಾಣಿ ಕೇಳುಗರ ಸಂಖ್ಯೆ ಕೇವಲ ಹಳ್ಳಿಗಳಲ್ಲಿ ಮಾತ್ರ ಇರಬಹುದು. ಇನ್ನು ನಗರ ಜೀವನದ ರೇಡಿಯೋ ಕೇಳುಗರಲ್ಲಿ ಬಹುತೇಕರು ತಮ್ಮ ವಾಹನಗಳಲ್ಲಿ ಸಾಗುವಾಗ ಎಫ್.ಎಂ. ರೇಡಿಯೋ ಕೇಳುತ್ತಾರೆ. ಇಲ್ಲಿನ ನಿರೂಪಕರದ್ದೂ ಅದಾಗಲೇ ತಿಳಿಸಿದ ಟೆಲಿವಿಷನ್ ನಿರೂಪಕರ ಸಮಸ್ಯೆಯೇ. ಈ ಎಫ್.ಎಂ. ನಿರೂಪಕರು ಯಾವುದೇ ಅರ್ಥವಿಲ್ಲದ ಮಾತುಗಳನ್ನು ಕೆಲವೇ ಕ್ಷಣಗಳಲ್ಲಿ ಆಡಬೇಕು ಎಂಬ ನಿಯಮಕ್ಕೆ ಒಳಪಟ್ಟಿರುತ್ತಾರೆ. ಹಾಗಾಗಿ ಅವರ ಮಾತುಗಳಲ್ಲಿ ಬಳಸುವ ಕನ್ನಡವೂ ಅರ್ಥ ಕಳೆದುಕೊಳ್ಳುತ್ತಾ ಇದೆ. (ಈ ಮಾತಿಗೆ ಅಪವಾದಗಳಿದೆ ಎಂಬುದನ್ನು ಮರೆಯಬಾರದು) ವಿಶೇಷವಾಗಿ ಎಫ್.ಎಂ. ರೇಡಿಯೋ ಮತ್ತು ಟೆಲಿವಿಷನ್ ನಿರೂಪಕರಿಗಾಗಿಯೇ ಕನ್ನಡ ಕಲಿಕಾ ಶಿಬಿರವನ್ನು ನಡೆಸಬೇಕಾದ ಅವಶ್ಯಕತೆ ಇಂದು ಹೆಚ್ಚಾಗಿದೆ.<br />
ಇನ್ನು ಕಮ್ಯುನಿಟಿ ರೇಡಿಯೋಗಳು. ಇಲ್ಲಿ ರೈತರಿಗೆ ಮತ್ತು ಒಂದು ಸಮುದಾಯಕ್ಕೆ ಉಪಯುಕ್ತವಾಗುವ ಸುದ್ದಿಗಳನ್ನು ಬಿತ್ತರಿಸುವ ಪ್ರಯೋಗಗಳು ಮಾತ್ರ ಆಗುತ್ತಿವೆ. ಈ ಮಾಧ್ಯಮವಿನ್ನೂ ತನ್ನ ದೈತ್ಯ ಶಕ್ತಿಯನ್ನು ಪ್ರದರ್ಶಿಸಬೇಕಿದೆ.<br />
ರಸ್ತೆ ಬದಿಯ ಫಲಕಗಳಲ್ಲಿ ಹೆಚ್ಚಾಗಿ ಕಾಣಿಸುವುದು ಜಾಹೀರಾತುಗಳು. ಈ ಜಾಹೀರಾತುಗಳು ಮುದ್ರಣ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ಜಾಹೀರಾತಿನ ತದ್ರೂಪು. ಇಲ್ಲಿಯೂ ಪ್ರಧಾನವಾಗಿ ಇರುವುದು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ ಮಾಡುವವರ ಸಮಸ್ಯೆ. ಈ ಸಮಸ್ಯೆಯನ್ನು ನೀಗಲು ಬೀದಿ ಬದಿಯ ಫಲಕಗಳಿಗೆ ಒಪ್ಪಿಗೆ ಕೊಡುವ ನಗರಸಭೆ ಮುಂತಾದ ಇಲಾಖೆಗಳು ಕನ್ನಡವು ಶುದ್ಧವಾಗಿದೆಯೇ ಎಂದು ಪರಿಶೀಲಿಸುವ ಅಭ್ಯಾಸವೊಂದನ್ನು ತರಬೇಕಿದೆ. ಇದಲ್ಲದೆ ಅನೇಕರು ಆಂಗ್ಲಭಾಷೆಯನ್ನೇ ಬಳಸಿದ ಫಲಕಗಳನ್ನು ನಮ್ಮ ನಾಡಿನ ಬೀದಿಗಳಲ್ಲಿ ಹಾಕುತ್ತಾ ಇದ್ದಾರೆ. ಇದನ್ನು ತಪ್ಪಿಸಲು ಕಾನೂನಿನ ಮೊರೆ ಹೋಗುವುದಕ್ಕಿಂತ ಸಾರ್ವಜನಿಕ ಹೋರಾಟದಿಂದ ಮಾತ್ರ ಸಾಧ್ಯ.<br />
<span style="text-decoration:underline;"><strong>ಮುಂದೆ?</strong></span><br />
ಇದು ಎಂದಿಗೂ ಸ್ಪಷ್ಟ ಉತ್ತರ ಸಿಗದ ಹಾದಿ. ಈ ಹಾದಿಯಲ್ಲಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ಅದಕ್ಕೆ ಕನ್ನಡವನ್ನು ಹಾಗೂ ಕನ್ನಡಿಗರನ್ನು ಬರುವ ಕಾಲಕ್ಕೆ ಸಿದ್ಧಗೊಳಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗಣಕಲೋಕದಲ್ಲಿ ಕನ್ನಡವನ್ನು ಸ್ಪಷ್ಟವಾಗಿ ಸ್ಥಾಪಿಸುವುದು ಹಾಗೂ ಸಂಚಾರಿ ದೂರವಾಣಿಗಳಲ್ಲಿ ಕನ್ನಡ ಭಾಷೆಯನ್ನೇ ಬಳಸುವಂತಹ ವ್ಯವಸ್ಥೆ ತರುವುದು ಮುಖ್ಯವಾದುದಾಗಿದೆ. ಅಲ್ಲಿಂದಾಚೆಗೆ ನಮ್ಮ ಪ್ರಾಥಮಿಕ ಶಾಲೆಯಿಂದ ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವುದು ಮಾತ್ರವೇ ನಮ್ಮ ಮುಂದಿನ ತಲೆಮಾರನ್ನು ಕನ್ನಡದಲ್ಲಿ ಉಳಿಸಿಕೊಳ್ಳಲು ಇರುವ ಏಕೈಕ ದಾರಿ. ಈ ದಾರಿಗೆ ಇರುವ ಎಲ್ಲಾ ಅಡ್ಡಿಗಳನ್ನೂ ನಿವಾರಿಸಿಕೊಳ್ಳಲು ನಾವೆಲ್ಲರೂ ಕೆಲಸ ಮಾಡಬೇಕಿದೆ. ಇದು ಕೇವಲ ಸರ್ಕಾರಗಳಿಂದ ಆಗುವ ಕೆಲಸವಲ್ಲ. ಸಾರ್ವಜನಿಕರು ನೇರವಾಗಿ ಈ ಕೆಲಸವನ್ನು ಕೈಗೆತ್ತಿಕೊಳ್ಳಬೇಕಿದೆ. ನಮ್ಮ ಅಸ್ಮಿತೆಯನ್ನು, ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮ ಭಾಷೆ ಉಳಿದಾಗ ಮಾತ್ರ ಸಾಧ್ಯ ಎಂಬುದನ್ನು ನಾವು ಯಾರೂ ಮರೆಯಬಾರದು.<br />
೧೬ ಫೆಬ್ರವರಿ ೨೦೧೧<br />
ಬೆಂಗಳೂರು<br />
* * *</p>
<br />Filed under: <a href='http://bsuresha.wordpress.com/category/%e0%b2%87%e0%b2%82%e0%b2%a6%e0%b2%bf%e0%b2%a8-%e0%b2%9a%e0%b2%bf%e0%b2%82%e0%b2%a4%e0%b3%86/'>ಇಂದಿನ ಚಿಂತೆ!</a>  <a rel="nofollow" href="http://feeds.wordpress.com/1.0/gocomments/bsuresha.wordpress.com/180/"><img alt="" border="0" src="http://feeds.wordpress.com/1.0/comments/bsuresha.wordpress.com/180/" /></a> <a rel="nofollow" href="http://feeds.wordpress.com/1.0/godelicious/bsuresha.wordpress.com/180/"><img alt="" border="0" src="http://feeds.wordpress.com/1.0/delicious/bsuresha.wordpress.com/180/" /></a> <a rel="nofollow" href="http://feeds.wordpress.com/1.0/gofacebook/bsuresha.wordpress.com/180/"><img alt="" border="0" src="http://feeds.wordpress.com/1.0/facebook/bsuresha.wordpress.com/180/" /></a> <a rel="nofollow" href="http://feeds.wordpress.com/1.0/gotwitter/bsuresha.wordpress.com/180/"><img alt="" border="0" src="http://feeds.wordpress.com/1.0/twitter/bsuresha.wordpress.com/180/" /></a> <a rel="nofollow" href="http://feeds.wordpress.com/1.0/gostumble/bsuresha.wordpress.com/180/"><img alt="" border="0" src="http://feeds.wordpress.com/1.0/stumble/bsuresha.wordpress.com/180/" /></a> <a rel="nofollow" href="http://feeds.wordpress.com/1.0/godigg/bsuresha.wordpress.com/180/"><img alt="" border="0" src="http://feeds.wordpress.com/1.0/digg/bsuresha.wordpress.com/180/" /></a> <a rel="nofollow" href="http://feeds.wordpress.com/1.0/goreddit/bsuresha.wordpress.com/180/"><img alt="" border="0" src="http://feeds.wordpress.com/1.0/reddit/bsuresha.wordpress.com/180/" /></a> <img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=180&amp;subd=bsuresha&amp;ref=&amp;feed=1" width="1" height="1" />]]></content:encoded>
			<wfw:commentRss>http://bsuresha.wordpress.com/2011/02/17/%e0%b2%87%e0%b2%82%e0%b2%a6%e0%b2%bf%e0%b2%a8-%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1/feed/</wfw:commentRss>
		<slash:comments>2</slash:comments>
	
		<media:content url="" medium="image">
			<media:title type="html">bsuresha</media:title>
		</media:content>
	</item>
		<item>
		<title>ದಶಮಾನ? &#8211; ಸಂಘಸುಖಗಳನ್ನರಸುತ್ತಾ!</title>
		<link>http://bsuresha.wordpress.com/2011/02/12/%e0%b2%a6%e0%b2%b6%e0%b2%ae%e0%b2%be%e0%b2%a8-%e0%b2%b8%e0%b2%82%e0%b2%98%e0%b2%b8%e0%b3%81%e0%b2%96%e0%b2%97%e0%b2%b3%e0%b2%a8%e0%b3%8d%e0%b2%a8%e0%b2%b0%e0%b2%b8%e0%b3%81%e0%b2%a4%e0%b3%8d/</link>
		<comments>http://bsuresha.wordpress.com/2011/02/12/%e0%b2%a6%e0%b2%b6%e0%b2%ae%e0%b2%be%e0%b2%a8-%e0%b2%b8%e0%b2%82%e0%b2%98%e0%b2%b8%e0%b3%81%e0%b2%96%e0%b2%97%e0%b2%b3%e0%b2%a8%e0%b3%8d%e0%b2%a8%e0%b2%b0%e0%b2%b8%e0%b3%81%e0%b2%a4%e0%b3%8d/#comments</comments>
		<pubDate>Sat, 12 Feb 2011 07:26:15 +0000</pubDate>
		<dc:creator>bsuresha</dc:creator>
				<category><![CDATA[ಸಂಘ ಸುಖ]]></category>
		<category><![CDATA[ಸಂಘಸುಖ]]></category>

		<guid isPermaLink="false">http://bsuresha.wordpress.com/?p=175</guid>
		<description><![CDATA[ಖಾಲಿಪಾತ್ರೆಯ ಎದುರು...
ಬರುವ ಆದಾಯಕ್ಕೂ ಬದುಕಿನ ಅಗತ್ಯಗಳಿಗೂ ಸಂಬಂಧವೇ ಇಲ್ಲ ಎಂಬಂತಹ ಕಾಲಘಟ್ಟದಲ್ಲಿ ಬಡ ಹೆಂಗಸೊಬ್ಬಳು ತನ್ನೆದುರಿಗೆ ಉರಿಯುತ್ತಿರುವ ಒಲೆಯ ಮೇಲೆ ಖಾಲಿ ಪಾತ್ರೆಯನ್ನಿಟ್ಟು ಕಾಯುವಂತಹ ಮನಸ್ಥಿತಿಯೇ ಬಹುತೇಕ ನಮ್ಮೆಲ್ಲರದೂ ಆಗಿದೆ. ಯಾಕೆಂದರೆ ನಮ್ಮ ಸಂಘಟನೆಗೆ ಇದು ದಶವರ್ಷ. ಕಳೆದ ಡಿಸೆಂಬರ್ ಎರಡನೆಯ ಭಾನುವಾರಕ್ಕೆ ಈ ಸಂಘಟನೆ ಹುಟ್ಟಿ ಹತ್ತು ವರ್ಷ ಆಯಿತು. ಆದರೆ ಅದನ್ನು ಯಾರೂ ಗಮನಿಸಿದಂತೆಯೇ ಕಾಣುತ್ತಿಲ್ಲ. ಆ ಬಗ್ಗೆ ಎಲ್ಲಿಯೂ ಸದ್ದಿಲ್ಲ. ನಾವು ಮಾಡಿದ ಎಲ್ಲಾ ವಿವರಗಳೂ ಮಾಧ್ಯಮದಲ್ಲಿ ಬರಲಿ ಎಂದೆನ್ನುತ್ತಲೇ ಬದುಕು ಕಂಡುಕೊಂಡಿರುವ ನಾವ್ಯಾರೂ ಈ ನಮ್ಮ ಸಂಘಟನೆಯ ಹುಟ್ಟುಹಬ್ಬ ಕುರಿತು ಮಾಧ್ಯಮಗಳ ಮೂಲಕವಾದರೂ ಮಾತಾಡಲಿಲ್ಲ. ಹೀಗ್ಯಾಕೆ ಆಯಿತೋ ಅರಿಯೇ. ಅದಕ್ಕಾಗಿ ಆತ್ಮವಿಮರ್ಶೆಯ ಮಾತನ್ನಾಡಬೇಕಾಗಿದೆ. ಹೊಸ ನಿರೀಕ್ಷೆಗಳನ್ನು ಹುಡುಕಬೇಕಿದೆ. ಯಾಕೆ ಹೀಗೆ ಎಂದು ಆಲೋಚಿಸಬೇಕಿದೆ.<img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=175&amp;subd=bsuresha&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:left;">ಸಂಘಸುಖ-ಡಿಸೆಂಬರ್ ೨೦೧೦<br />
<span style="text-decoration:underline;"><strong>ದಶಮಾನ? &#8211; ಸಂಘಸುಖಗಳನ್ನರಸುತ್ತಾ!</strong></span><br />
-	ಬಿ.ಸುರೇಶ<br />
<span style="text-decoration:underline;"><strong>ಖಾಲಿಪಾತ್ರೆಯ ಎದುರು&#8230;</strong></span><br />
ಬರುವ ಆದಾಯಕ್ಕೂ ಬದುಕಿನ ಅಗತ್ಯಗಳಿಗೂ ಸಂಬಂಧವೇ ಇಲ್ಲ ಎಂಬಂತಹ ಕಾಲಘಟ್ಟದಲ್ಲಿ ಬಡ ಹೆಂಗಸೊಬ್ಬಳು ತನ್ನೆದುರಿಗೆ ಉರಿಯುತ್ತಿರುವ ಒಲೆಯ ಮೇಲೆ ಖಾಲಿ ಪಾತ್ರೆಯನ್ನಿಟ್ಟು ಕಾಯುವಂತಹ ಮನಸ್ಥಿತಿಯೇ ಬಹುತೇಕ ನಮ್ಮೆಲ್ಲರದೂ ಆಗಿದೆ. ಯಾಕೆಂದರೆ ನಮ್ಮ ಸಂಘಟನೆಗೆ ಇದು ದಶವರ್ಷ. ಕಳೆದ ಡಿಸೆಂಬರ್ ಎರಡನೆಯ ಭಾನುವಾರಕ್ಕೆ ಈ ಸಂಘಟನೆ ಹುಟ್ಟಿ ಹತ್ತು ವರ್ಷ ಆಯಿತು. ಆದರೆ ಅದನ್ನು ಯಾರೂ ಗಮನಿಸಿದಂತೆಯೇ ಕಾಣುತ್ತಿಲ್ಲ. ಆ ಬಗ್ಗೆ ಎಲ್ಲಿಯೂ ಸದ್ದಿಲ್ಲ. ನಾವು ಮಾಡಿದ ಎಲ್ಲಾ ವಿವರಗಳೂ ಮಾಧ್ಯಮದಲ್ಲಿ ಬರಲಿ ಎಂದೆನ್ನುತ್ತಲೇ ಬದುಕು ಕಂಡುಕೊಂಡಿರುವ ನಾವ್ಯಾರೂ ಈ ನಮ್ಮ ಸಂಘಟನೆಯ ಹುಟ್ಟುಹಬ್ಬ ಕುರಿತು ಮಾಧ್ಯಮಗಳ ಮೂಲಕವಾದರೂ ಮಾತಾಡಲಿಲ್ಲ. ಹೀಗ್ಯಾಕೆ ಆಯಿತೋ ಅರಿಯೇ. ಅದಕ್ಕಾಗಿ ಆತ್ಮವಿಮರ್ಶೆಯ ಮಾತನ್ನಾಡಬೇಕಾಗಿದೆ. ಹೊಸ ನಿರೀಕ್ಷೆಗಳನ್ನು ಹುಡುಕಬೇಕಿದೆ. ಯಾಕೆ ಹೀಗೆ ಎಂದು ಆಲೋಚಿಸಬೇಕಿದೆ.</p>
<p style="text-align:left;">
ಕಳೆದ ಎರಡನೆಯ ಭಾನುವಾರ ಟಿವಿ ಸಂತೆಯನ್ನು ಆಯೋಜಿಸಲಾಗಿತ್ತು. ಉತ್ಸಾಹ ಹುಟ್ಟಿಸುವ ಅನೇಕ ಆಟಗಳು ಅಲ್ಲಿದ್ದವು. ಅನೇಕ ಧಾರಾವಾಹಿಗಳ ತಂಡಗಳು ಈ ಸಂತೆಯಲ್ಲಿ ಎಲ್ಲರೂ ಪಾಲ್ಗೊಳ್ಳಲಿ ಎಂದೇ ಚಿತ್ರೀಕರಣವನ್ನು ನಿಲ್ಲಿಸಿದ್ದವು. ಆದರೂ ಆ ಸಂತೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಕಡಿಮೆ. ಅಂದರೆ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಎರಡನೆಯ ಭಾನುವಾರವೂ ಚಿತ್ರೀಕರಣ ಇದೆ ಎಂಬುದಷ್ಟೇ ಕಾರಣವಲ್ಲ. ಚಿತ್ರೀಕರಣ ಇಲ್ಲದ ದಿನವೂ ಈ ಜನಕ್ಕೆ ಸಂಘಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉತ್ಸಾಹ ಇಲ್ಲ. (ಇದು ಎಲ್ಲರಿಗೂ ಸೇರಿಸಿ ಆಡಿದ ಮಾತಲ್ಲ. ಕೆಲವರಿಗೆ ನಿಜವಾಗಿಯೂ ಅನಿವಾರ್ಯ ಎಂಬ ಒತ್ತಡ ಬಂದಿರಬಹುದು. ಅಂತಹವರನ್ನು ಹೊರತುಪಡಿಸಿ ಈ ಮಾತುಗಳನ್ನು ಹೇಳಲಾಗಿದೆ.) ಹೀಗಾದಾಗ ಕಷ್ಟಪಟ್ಟು ಇಂತಹ ಕಾರ್ಯಕ್ರಮವನ್ನು ಯೋಜಿಸಿದವರ ಮನಸ್ಥಿತಿ ಹೇಗಿರಬಹುದು ಎಂದು ಆಲೋಚಿಸಿ.</p>
<p style="text-align:left;"><span id="more-175"></span><br />
ಇದೇ ಪರಿಸ್ಥಿತಿ ಈಚೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯು ಕರೆದಿದ್ದ ನಿರ್ಮಾಪಕರ ಸಭೆಯಲ್ಲಿಯೂ ಇತ್ತು. ಆ ಸಭೆಗೆ ಈಗ ಸಿನಿಮಾ ತಯಾರಿಸುತ್ತಾ ಇರುವ ದಿಗ್ಗಜರೆನಿಸಿಕೊಮಡವರು ಬರಲೇ ಇಲ್ಲ. ಇದ್ದ ಕೆಲವರು ತಮ್ಮದೇ ಲೋಕದಲ್ಲಿ ಇದ್ದರು. ಹೀಗಾಗಿ ಕಾರ್ಮಿಕರ ವೇತನ ಹೆಚ್ಚಿಸುವ ವಿಷಯ ಚರ್ಚಿಸಲು ಸೇರಿದ್ದ ಆ ಸಭೆಯು ಯಾವ ತೀರ್ಮಾನವೂ ತೆಗೆದುಕೊಳ್ಳದೇ ಮುಗಿದುಹೋಯಿತು. ನಮ್ಮ ಸಂಘಟನೆಯ ಪರಿಸ್ಥಿತಿ ಅದಕ್ಕಿಂತ ಭಿನ್ನವಲ್ಲ. ಬರಲಿರುವ ಏಪ್ರಿಲ್ ತಿಂಗಳಲ್ಲಿ ಟೆಲಿವಿಷನ್ ಕಾರ್ಮಿಕರ ಕನಿಷ್ಟ ವೇತನದ ಪರಾಮರ್ಶೆ ಆಗಬೇಕಿದೆ. ಆಗ ನಮ್ಮ ನಿರ್ಮಾಪಕರುಗಳೂ ಹೀಗೆಯೇ ಮಾಡುವ ಎಲ್ಲಾ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಆಲೋಚಿಸ ಬೇಕಾದ ಹಲವು ವಿಷಯಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.<br />
ನನಗೆ ಬೇಕಾದ್ದೇನು? ಸಂಘಟನೆ ಏನು ಮಾಡುತ್ತಿದೆ?</p>
<p style="text-align:left;">
ಇದು ಎಲ್ಲಾ ಸದಸ್ಯರೂ ಮತ್ತೆ ಮತ್ತೆ ಕೇಳುವ ಪ್ರಶ್ನೆ. ಈ ಪ್ರಶ್ನೆಗೆ ಸಂಘಟನೆ ಸ್ವತಃ ಉತ್ತರ ಕೊಡಲಾಗದು. ಸಂಘಟನೆಯಲ್ಲಿ ಪಾಲ್ಗೊಳ್ಳುವ ಆ ಸದಸ್ಯರೇ ಉತ್ತರ ಹುಡುಕಬೇಕು. ಸಧ್ಯದ ಮಟ್ಟಿಗೆ ಸಂಘಟನೆಯಲ್ಲಿರುವ ಎಲ್ಲರಿಗೂ ಮತ್ತೆ ಅಪಘಾತ ವಿಮೆಯ ಲಾಭ ದೊರೆಯಲಿದೆ. ಅದಾಗಲೇ ಒಂದಿಬ್ಬರೂ ಈ ಹೊಸ ವಿಮೆಯ ಪ್ರಯೋಜನವನ್ನೂ ಪಡೆದಿದ್ದಾರೆ. ಸಂಘಟನೆಯಿಮದ ಹೊರಗೆ ಉಳಿದಿರುವ ಅನೇಕರು ಒಳಗೆ ಬರಲು ಈ ಕಾರಣವೇ ಸಾಕು. ಇನ್ನುಳಿದ ಸದಸ್ಯರಾಗಿಯೂ ಸಂಘಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದವರೊಂದಿಗೆ ನೇರ ಸಂವಾದಕ್ಕೆ ಇಳಿಯಬೇಕಿದೆ. ಅಂತಹವರು ತಮ್ಮ ಅಗತ್ಯಗಳನ್ನು ನೇರವಾಗಿ ಹೇಳಬೇಕಿದೆ. ಇಂತಹವರಲ್ಲಿ ಕಾರ್ಮಿಕ ವಲಯದವರ ಸಮಸ್ಯೆ ಭಿನ್ನವಾದುದು. ಕಲಾವಿದರ ವಲಯದ ಸಮಸ್ಯೆ ಮತ್ತೂ ಭಿನ್ನವಾದುದು. ಹೀಗಾಗಿ ಈ ಎರಡೂ ವಲಯಗಳ ಸದಸ್ಯರನ್ನು ಪ್ರತ್ಯೇಕವಾಗಿ ಸೇರಿಸಿ ಮಾತಾಡಿಸುವ ಪ್ರಯತ್ನವನ್ನು ಆಯಾ ವಲಯದ ಸಂಘಟಕರು/ ಚುನಾಯಿತ ಸದಸ್ಯರು ಮಾಡಬೇಕಿದೆ.</p>
<p style="text-align:left;">
<span style="text-decoration:underline;"><strong>ಟೆಲಿವಿಷನ್ ಕಲಾವಿದರ ಸಮಾವೇಶ</strong></span><br />
ಇಂತಹದೊಂದು ಬೃಹತ್ ಸಮಾವೇಶವನ್ನು ಬರಲಿರುವ ದಿನಗಳಲ್ಲಿ ಹಮ್ಮಿಕೊಳ್ಳಲು ಸಾಧ್ಯವಾಗಬೇಕು. ಆ ದಿನ ಈ ನಾಡಿನ ಎಲ್ಲಾ ಟೆಲಿವಿಷನ್ ಕಲಾವಿದರು ಒಂದೆಡೆ ಸಿಗುವಂತಾಗಬೇಕು. ಅಂದೇ ಅವರೆಲ್ಲರ ಫೋಟೊಗಳನ್ನು ತೆಗೆದು ಪ್ರತ್ಯೇಕ ಮಾಹಿತಿ ಕೋಶ ತಯಾರಿಸಲು ಸಾಧ್ಯವಾಗಬೇಕು. ಅವರಲ್ಲಿ ಯಾರಾದರೂ ನಮ್ಮ ಸಂಗಟನೆಯ ಸದಸ್ಯರಾಗಿಲ್ಲದೆ ಇದ್ದರೂ ಪರವಾಗಿಲ್ಲ. ಅಂತಹವರನ್ನೂ ಆ ಸಮಾವೇಶದಲ್ಲಿ ಬಾಗಿಯಾಗಿ ಅನ್ನುವ ಮೂಲಕ ನಮ್ಮಲ್ಲಿನ ಎಲ್ಲಾ ಕಲಾವಿದರನ್ನು ಕುರಿತ ಬೃಹತ್ ಮಾಹಿತಿ ಕೋಶವೊಂದನ್ನು ಸಂಘಟನೆಯೇ ಹೊರತರುವಂತಾಗಬೇಕು. ಅದರಿಂದಾಗಿ ಕೇವಲ ಮಾಹಿತಿಯ ಲಾಭವಷ್ಟೇ ಅಲ್ಲದೆ ಎಲ್ಲರನ್ನೂ ಒಂದೆಡೆಗೆ ಸೇರಿಸಿದ ಅನುಕೂಲ ದೊರೆಯಲಿದೆ. ಇಂತಹ ಸಮಾವೇಶದಲ್ಲಿ ಎಲ್ಲಾ ಹಿರಿಯ ಕಿರಿಯ ಕಲಾವಿದರ ಮುಖಾಮುಖಿ ಭೇಟಿಯಾಗುತ್ತದೆ. ಆ ಮೂಲಕ ಪ್ರತಿಭೆಯನ್ನು ಪೋಷಿಸುವ ಹಲವು ಬಗೆಗಳು ಹಿರಿಯರಿಂದ ಕಿರಿಯರಿಗೆ ತಲುಪಬಹುದು. ಅಂತಹದೊಂದು ಸಮಾವೇಶ ಮಾಡಿ ಎಂದು ಈ ಮೂಲಕ ಕಲಾವಿದರ ವಲಯದ ಗೆಳೆಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.</p>
<p style="text-align:left;">
<span style="text-decoration:underline;"><strong>ನಮ್ಮ ರಾಜ್ಯಕ್ಕೆ ವಲಸೆ ಬರುತ್ತಿರುವ ನೆರೆರಾಜ್ಯಗಳ ನಿರ್ಮಾಪಕರು!</strong></span><br />
ಈಚೆಗೆ ಕರ್ನಾಟಕದ ಟೆಲಿವಿಷನ್ ಕಾರ್ಯಕ್ರಮ ತಯಾರಕರಲ್ಲಿ ಸ್ಥಳೀಯರಿಗಿಂತ ನೆರೆಯ ರಾಜ್ಯಗಳಿಂದ ಬಂದವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಸ್ಥಳೀಯರಲ್ಲಿ ಉದ್ಯಮಶೀಲತೆಯ ಕೊರತೆ ಇದೆ ಎಂದೆಲ್ಲಾ ವಾಹಿನಿಯ ಮುಖ್ಯಸ್ಥರು ಹೇಳುವುದುಂಟು. ಇದನ್ನು ದೂರ ಮಾಡುವುದು ಸಹ ನಮ್ಮ ನಿರ್ಮಾಪಕರ ವಲಯದ ಜವಾಬ್ದಾರಿಯಾಗಿದೆ. ಪ್ರಾಯಶಃ ಈ ನಾಡಿನ ಎಲ್ಲಾ ನಿರ್ಮಾಪಕರನ್ನೂ ವರ್ಷಕ್ಕೆ ಒಂದು ಭಾರಿಯಾದರೂ ಒಂದೆಡೆ ಸೇರಿಸುವುದು ಅಗತ್ಯ. ಆ ದಿನ ವಾಹಿನಿಗಳ ಮುಖ್ಯಸ್ಥರುಗಳನ್ನೂ ಅವರೆಲ್ಲರ ಜೊತೆಗೆ ಮುಖಾಮುಖಿಯಾಗಿಸುವ ಪ್ರಯತ್ನವಾದರೆ ಅದರಿಂದ ಸ್ಥಳೀಯ ನಿರ್ಮಾಪಕರಿಗೆ ತಮ್ಮ ಕೊರತೆಗಳನ್ನು ನೀಗಿಕೊಳ್ಳುವ ಹೊಸ ಮಾರ್ಗಗಳು ದೊರಕಬಹುದು. ಈ ನಿಟ್ಟಿನಲ್ಲಿ ನಿರ್ಮಾಪಕರ ವಲಯದವರು ಈ ಕೂಡಲೇ ಆಲೋಚಿಸಬೇಕಿದೆ. ತನ್ಮೂಲಕ ಹೆಚ್ಚುತ್ತಿರುವ ಪರಭಾಷಾ ನಿರ್ಮಾಪಕರ ಸಂಖ್ಯೆಯ ಮೇಲೆ ಹಿಡಿತ ಸಾಧಿಸಬಹುದು ಎಂದು ನನ್ನ ಭಾವನೆ.<br />
‘ಹಿಡಿತ’ ಎಂಬ ಮಾತನ್ನು ಸ್ವಲ್ಪ ವಿವರಿಸುತ್ತೇನೆ. ನೆರೆಯ ರಾಜ್ಯಗಳ ನಿರ್ಮಾಪಕರು ಈ ನಾಡಿಗೆ ಬರುವುದು ತಪ್ಪಲ್ಲ. ಅದು ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಅನಿವಾರ್ಯ. ಈ ನಾಡಿನ ಎಲ್ಲ ಪ್ರಜೆಗಳೂ ದೇಶದ ಯಾವುದೇ ಭಾಗದಲ್ಲಿ ಅನ್ನ ಸಂಪಾದಿಸಬಹುದು, ವ್ಯವಹಾರ ಮಾಡಬಹುದು. ಅದು ಮೂಲಭೂತ ಹಕ್ಕು. ಆದರೆ ಹೀಗೆ ನಮ್ಮ ರಾಜ್ಯಕ್ಕೆ ಬಂದ ಹೊಸಬರಿಂದಾಗಿ ಆಗಿರುವ ತೊಂದರೆಗಳನ್ನು ಗಮನಿಸಿದರೆ ಗಾಬರಿಯಾಗುತ್ತದೆ. ಮೊದಲಿಗೆ ನಮ್ಮಲ್ಲಿದ್ದ ಚಿತ್ರೀಕರಣ ತಾಣಗಳ ಬೆಲೆಗಳು ಹೆಚ್ಚಾಗಿವೆ. ಇದು ಬಹುತೇಕ ಮುಪ್ಪಟ್ಟು ಏರಿಕೆಯಾಗಿದೆ. ಇದಕ್ಕೆ ನೆರೆಯ ರಾಜ್ಯದವರು ತಮ್ಮಲ್ಲಿನ ‘ಅಭ್ಯಾಸ’ಗಳನ್ನು ಇಲ್ಲಿಗೂ ತರುತ್ತಿರುವುದು ಬಹುಮುಖ್ಯ ಕಾರಣವಾಗಿದೆ. ಈ ಕಾರಣದಿಂದಾಗಿ ಹೊಸ ನಿರ್ಮಾಪಕರಿಗೆ ಇಲ್ಲಿನ ‘ಅಭ್ಯಾಸ’ಗಳನ್ನು ಪರಿಚಯಿಸಬೇಕಿದೆ. ಈ ಪರಿಚಯಿಸುವ ಕೆಲಸವನ್ನೇ ನಾನು ಹಿಡಿತ ಎಂದು ಕರೆದಿದ್ದೇನೆ.<br />
ಇದೇ ಸಮಯದಲ್ಲಿ ಸ್ಥಳೀಯ ನಿರ್ಮಾಪಕರಿಗೆ ವಾಹಿನಿಗಳು ಹೆಚ್ಚಿನ ಅವಕಾಶ ಕೊಡುವಂತಾಗಲು ಸಹ ನಾವು ಹೊಸ ಪ್ರಯತ್ನಗಳನ್ನು ಮಾಡಬೇಕಿದೆ. ವಾಹಿನಿಗಳವರಿಗೆ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಎಂದು ಮಾತ್ರ ಹೇಳುವುದಲ್ಲದೇ, ಸ್ಥಳೀಯ ನಿರ್ಮಾಪಕರಿಗೂ ಅವಕಾಶ ನೀಡಿ ಎಂದು ಹೇಳಬೇಕಾಗುತ್ತದೆ.<br />
ಇದೆಲ್ಲವೂ ಆಗಲು ನಾವು ನಿರ್ಮಾಪಕರುಗಳೆಲ್ಲರ ಸಮಾವೇಶವನ್ನು ಮಾಡುವುದು ಅಗತ್ಯವಾಗಿದೆ. ಪ್ರಾಯಶಃ ನಮ್ಮ ನಿರ್ಮಾಪಕರ ವಲಯದ ಸದಸ್ಯರು ಈ ನಿಟ್ಟಿನಲ್ಲಿ ಬೇಗ ಕಾರ್ಯಪ್ರವೃತ್ತರಾಗುತ್ತಾರೆ ಎಂದುಕೊಳ್ಳೋಣ.<br />
<span style="text-decoration:underline;"><strong>ಇನ್ನೂ&#8230;</strong></span><br />
ಸಂಘಟನೆಯನ್ನು ಕಟ್ಟುವ ದೃಷ್ಟಿಯಿಂದ ಮಾತ್ರವೇ ಅಲ್ಲದೇ ಈ ಉದ್ಯಮದ ಒಳಗಿರುವ ಅನೇಕ ತೊಂದರೆಗಳನ್ನು ನಿವಾರಿಸಲು ಸಂಘಟನೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಟೆಲಿವಿಷನ್ ಉದ್ಯಮದಲ್ಲಿರುವ ಎಲ್ಲರೂ ನಮ್ಮ ಸಂಘಟನೆಯ ದಶಮಾನೋತ್ಸವವನ್ನು ಆಚರಿಸದೆ ಹೋದರಡ್ಡಿಯಿಲ್ಲ. ಆದರೆ ಸಂಘವನ್ನು ಉಳಿಸಿಕೊಳ್ಳಲು ಒಟ್ಟಿಗೆ ಇರಬೇಕಾದುದು ಅಗತ್ಯವಾಗಿದೆ.<br />
* * *</p>
<br />Filed under: <a href='http://bsuresha.wordpress.com/category/%e0%b2%b8%e0%b2%82%e0%b2%98-%e0%b2%b8%e0%b3%81%e0%b2%96/'>ಸಂಘ ಸುಖ</a>  <a rel="nofollow" href="http://feeds.wordpress.com/1.0/gocomments/bsuresha.wordpress.com/175/"><img alt="" border="0" src="http://feeds.wordpress.com/1.0/comments/bsuresha.wordpress.com/175/" /></a> <a rel="nofollow" href="http://feeds.wordpress.com/1.0/godelicious/bsuresha.wordpress.com/175/"><img alt="" border="0" src="http://feeds.wordpress.com/1.0/delicious/bsuresha.wordpress.com/175/" /></a> <a rel="nofollow" href="http://feeds.wordpress.com/1.0/gofacebook/bsuresha.wordpress.com/175/"><img alt="" border="0" src="http://feeds.wordpress.com/1.0/facebook/bsuresha.wordpress.com/175/" /></a> <a rel="nofollow" href="http://feeds.wordpress.com/1.0/gotwitter/bsuresha.wordpress.com/175/"><img alt="" border="0" src="http://feeds.wordpress.com/1.0/twitter/bsuresha.wordpress.com/175/" /></a> <a rel="nofollow" href="http://feeds.wordpress.com/1.0/gostumble/bsuresha.wordpress.com/175/"><img alt="" border="0" src="http://feeds.wordpress.com/1.0/stumble/bsuresha.wordpress.com/175/" /></a> <a rel="nofollow" href="http://feeds.wordpress.com/1.0/godigg/bsuresha.wordpress.com/175/"><img alt="" border="0" src="http://feeds.wordpress.com/1.0/digg/bsuresha.wordpress.com/175/" /></a> <a rel="nofollow" href="http://feeds.wordpress.com/1.0/goreddit/bsuresha.wordpress.com/175/"><img alt="" border="0" src="http://feeds.wordpress.com/1.0/reddit/bsuresha.wordpress.com/175/" /></a> <img alt="" border="0" src="http://stats.wordpress.com/b.gif?host=bsuresha.wordpress.com&amp;blog=4921211&amp;post=175&amp;subd=bsuresha&amp;ref=&amp;feed=1" width="1" height="1" />]]></content:encoded>
			<wfw:commentRss>http://bsuresha.wordpress.com/2011/02/12/%e0%b2%a6%e0%b2%b6%e0%b2%ae%e0%b2%be%e0%b2%a8-%e0%b2%b8%e0%b2%82%e0%b2%98%e0%b2%b8%e0%b3%81%e0%b2%96%e0%b2%97%e0%b2%b3%e0%b2%a8%e0%b3%8d%e0%b2%a8%e0%b2%b0%e0%b2%b8%e0%b3%81%e0%b2%a4%e0%b3%8d/feed/</wfw:commentRss>
		<slash:comments>0</slash:comments>
	
		<media:content url="" medium="image">
			<media:title type="html">bsuresha</media:title>
		</media:content>
	</item>
	</channel>
</rss>
