(೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ೭ ಫೆಬ್ರವರಿ ೨೦೨೦, ಶುಕ್ರವಾರ ಬೆಳಗಿನ ೯.೩೦ರಿಂದ ೧೧ ಗಂಟೆವರೆಗೆ ನಡೆದ ಚಲನಚಿತ್ರ: ಕನ್ನಡ ಸಾಹಿತ್ಯ ಎಂಬ ಗೋಷ್ಟಿಯಲ್ಲಿ ಮಂಡಿಸಲಾದ ಪ್ರಬಂಧ.)
ಎಲ್ಲ ಕನ್ನಡ ಮನಸ್ಸುಗಳಿಗೆ ನಮಸ್ಕಾರಗಳು.
೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸುವ ಅವಕಾಶ ನನಗೆ ಎರಡನೆಯ ಸಲ ಒದಗಿ ಬಂದಿದೆ. ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದೆ. ಆಗ ಕಡೆಯ ನಿಮಿಷದಲ್ಲಿ ಬರಬೇಕಾದವರು ಬಾರದೆ ಹೋದುದರಿಂದ ಪ್ರೀತಿಯ ಗುರುಗಳಾದ ಚಂಪಾ ಅವರು ನನ್ನನ್ನು `ಬದಲಿ ಆಟಗಾರ’ ಎಂದು ಕರೆದಿದ್ದರು. ಮಾಧ್ಯಮ ಕುರಿತ ಗೋಷ್ಟಿಯಲ್ಲಿ ಗೌರಿ ಲಂಕೇಶ್ ಅವರ ಜೊತೆಗೆ ನಾನೂ ಸಹ ಇದ್ದೆ, ಕಿರುತೆರೆಯ ಬಗ್ಗೆ ಮಾತಾಡಿದ್ದೆ. ಈ ಸಲ ಅಪರೂಪಕ್ಕೆ ನಾನು ಬದಲಿ ಆಟಗಾರ ಅಲ್ಲ. ಅಧ್ಯಕ್ಷರಾದ ಮನು ಬಳಿಗಾರ್ ಅವರು ಖುದ್ದಾಗಿ ನನಗೆ ಕರೆ ಮಾಡಿ ಬರಲು ಸೂಚಿಸಿದರು. ಈ ಆಹ್ವಾನಕ್ಕಾಗಿ ಮನು ಬಳಿಗಾರ್ ಅವರಿಗೆ, ಸಮ್ಮೇಳನಾಧ್ಯಕ್ಷರು ಮತ್ತು ಗುರುಗಳಾದ ಎಚ್ಚೆಸ್ವಿ ಅವರಿಗೆ ಮತ್ತು ಈ ಆಯ್ಕೆಗೆ ಕಾರಣರಾದ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸಮಿತಿಗಳ ಸದಸ್ಯರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸುತ್ತೇನೆ.
ಇಲ್ಲಿ ಮಾಡುತ್ತಿರುವ ಪ್ರಬಂಧ ಮಂಡನೆಗಾಗಿ ದೊರೆವ ಗೌರವಧನವನ್ನಾಗಲಿ ನನ್ನ ಪ್ರಯಾಣದ ಖರ್ಚನ್ನಾಗಲಿ ನಾನು ಪಡೆಯುವುದಿಲ್ಲ. ಆ ಹಣವನ್ನು ಕನ್ನಡ ನಿಧಿ ಮೂಲಕ ಸದುಪಯೋಗ ಪಡಿಸಿಕೊಳ್ಳಿ ಎಂದು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಕೋರುತ್ತೇನೆ.
ಇಂದಿನ ನನ್ನ ಮಾತುಗಳನ್ನು ಮಂಡಿಸುವ ಮುಂಚೆ ಕೆಲವು ವಿಷಯಗಳನ್ನು ಹೇಳಬೇಕಿದೆ. Continue reading ‘ಕಿರುತೆರೆ – ಸಾಮಾಜಿಕ ಜವಾಬ್ದಾರಿ’
ಇತ್ತೀಚಿನ ಪ್ರತಿಕ್ರಿಯೆಗಳು…