“ತಬರನ ಕಥೆ’- ಕಥೆಯೊಂದು ಸಿನಿಮಾ ಆಗುವ ಬಗೆ….

ಬೆಳಕಿನೊಳಗಣ ಬೆಳಗು೧೫

ಕಳೆದ ಬಾರಿ ನಮ್ಮಲ್ಲಿ ತಯಾರಾಗುತ್ತಿರುವ ಸಿನಿಮಾಗಳಲ್ಲಿ “ಭ್ರಷ್ಟಾಚಾರ’ವನ್ನು ತೋರಿಸುತ್ತಿರುವ ಬಗೆಯನ್ನು ಕುರಿತು ಪ್ರಸ್ತಾಪಿಸಿದ್ದೆ. ಅದೇ ಮಾತುಗಳ ಮುಂದುವರಿಕೆಯಾಗಿ ಮತ್ತೊಂದು ಸಿನಿಮಾದ ವಿವರಗಳನ್ನಿಟ್ಟುಕೊಂಡು, ನಿಮ್ಮೊಡನೆ ನನ್ನ ಅಭಿಪ್ರಾಯ ಹಂಚಿಕೊಳ್ಳುತ್ತೇನೆ. ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ಸಾಹಿತ್ಯಲೋಕ ಕಂಡ ಅಪರೂಪದ ಕಥೆಗಾರ. ಅವರ ಕಥೆಯ ಒಳವಿವರಗಳಿಗಿಂತ ಅವರು ಬಳಸುವ ಭಾಷೆ ಮತ್ತು ಕಥನ ಕಟ್ಟಡ ನಮ್ಮನ್ನು ಒಳಗೊಳ್ಳುತ್ತದೆ. ಜೊತೆಗೆ ಪೂಚಂತೇ ಅವರಿಗಿರುವ ಆಧುನಿಕ ಜೀವನ ಕುರಿತ ವ್ಯಂಗ್ಯ ದೃಷ್ಟಿಕೋನ ಓದುಗನನ್ನು ಆವರಿಸುತ್ತದೆ. ಇವರು ಬರೆದ ಕಥೆಗಳೆಲ್ಲವೂ ಶಕ್ತಿಯುತವಾಗುವುದೇ ಲೇಖಕರ ಅತ್ಯಂತ ಮೊನಚಾದ ಜೀವನದೃಷ್ಟಿಯಿಂದ. ಇಂತಹ ಕಥೆಗಳನ್ನು ಅಕ್ಷರದಿಂದ ದೃಶ್ಯ ಮಾಧ್ಯಮಕ್ಕೆ ತರುವುದು ಬಹು ಕಷ್ಟದ ಕೆಲಸ. ಏಕೆಂದರೆ, ಸಾಮನ್ಯವಾಗಿ ಪೂಚಂತೇ ಅವರು ತಮ್ಮ ಎಲ್ಲಾ ಕಥೆಗಳಲ್ಲೂ ತಾವೇ ನಿರೂಪಕರಾಗಿ ಇದ್ದುಬಿಟ್ಟಿರುತ್ತಾರೆ. ಹೀಗಾಗಿ ಪೂಚಂತೇ ಅವರ ಬಹುಮುಖ್ಯ ಅಭಿಪ್ರಾಯಗಳು ಕಣ್ಣೆದುರು ಬಾರದ ನಿರೂಪಕನದ್ದೇ ಆಗಿ ಕಥೆಗಳಲ್ಲಿ ಬಂದಿರುತ್ತದೆ. ಇಂತಹವನ್ನು ದೃಶ್ಯಕ್ಕೆ ತರುವುದು ನಿಜಕ್ಕೂ ಸಾಹಸವೇ ಆಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ಸಾಹಿತ್ಯ ಪ್ರಕಾರವನ್ನು ಆಧರಿಸಿ ಸಿನಿಮಾ ಆಗಿರುವ ಎಲ್ಲಾ ಚಿತ್ರಗಳಲ್ಲಿಯೂ ಇದೊಂದು ಸಮಸ್ಯೆಯೇ. ಕಾದಂಬರಿ ಅಥವಾ ಕಥೆಯಲ್ಲಿ ವಾಕ್ಯವೊಂದರಲ್ಲಿ ಬಂದುಬಿಡಬಹುದಾದ ವಿವರವನ್ನ ತೆರೆಯ ಮೇಲೆ ದೃಶ್ಯವಾಗಿ ಹೇಳುವಾತ ಮೂಲರೂಪ ಕೊಟ್ಟವನಿಗಿಂತ ಒಂದು ಹೆಜ್ಜೆ ಮುಂದೆ ನಿಂತು ಯೋಚಿಸುವವನಾಗಬೇಕು. ಹಾಗಲ್ಲವಾದರೆ, ಮೂಲಕೃತಿಯೇ ಪ್ರತಿರೂಪದ ಮೇಲೆ ತನ್ನ ಛಾಯೆಯನ್ನ ಅಚ್ಚೊತ್ತಿಬಿಡುತ್ತದೆ. ಈ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಸಂದರ್ಭದಲ್ಲಿ, ಸಾಹಿತ್ಯ ಪ್ರಕಾರವನ್ನು ಆಧರಿಸಿ ತಯಾರದ ಸಿನಿಮಾಗಳಲ್ಲಿ ಶ್ರೇಷ್ಟವಾದುದು ಎಂದು ಕರೆಸಿಕೊಳ್ಳುವ ಕೆಲವೇ ಸಿನಿಮಾಗಳಲ್ಲಿ, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ “ತಬರನಕಥೆ’ಯೂ ಒಂದು.

Continue reading ‘“ತಬರನ ಕಥೆ’- ಕಥೆಯೊಂದು ಸಿನಿಮಾ ಆಗುವ ಬಗೆ….’

“ಅತಿಥಿ’ಯಾಗಿ ಬಂದ ಆತಂಕ

ಬೆಳಕಿನೊಳಗಣ ಬೆಳಗು – ೧೬

ಈಚೆಗೆ ನಮ್ಮಲ್ಲಿ ಬಿಡುಗಡೆಯಾದ “ಸಯನೈಡ್’ ಎಂಬ ಚಿತ್ರದ ಬಗ್ಗೆ ವಿಸ್ತೃತವಾದ ಪ್ರಚಾರ ಆಗುತ್ತಿದೆ. ಆ ಚಿತ್ರ ಹಿಂದಿಯಲ್ಲಿಯೂ ತಯಾರಾಗುತ್ತಿದೆ ಎಂಬುದು ಈಗ ಸುದ್ದಿಯಾಗಿದೆ. ಆದರೆ ಇದೇ ರೀತಿಯ ಚಿತ್ರಗಳು ಹಿಂದೆ ನಮ್ಮಲ್ಲಿ ತಯಾರಾಗಿಲ್ಲವೆ ಎಂಬ ಪ್ರಶ್ನೆ ಅನೇಕರಲ್ಲಿರಬಹುದು. ಖಂಡಿತಾ ಆಗಿದೆ. ಆಧುನಿಕ ಸಮಾಜದಲ್ಲಿ ಆತಂಕವಾದಿಗಳು ಆಗಮಿಸಿದ್ದರ ಜೊತೆಗೆ ಕನ್ನಡದಲ್ಲಿಯೂ ಈ ವಿವರವನ್ನು ಕುರಿತು ಚರ್ಚಿಸುವ ಅನೇಕ ಚಿತ್ರಗಳು ಬಂದಿವೆ. ಆ ದೃಷ್ಟಿಯಿಂದ ಪಿ.ಶೇಷಾದ್ರಿ ಅವರ ನಿರ್ದೇಶನದ “ಅತಿಥಿ’ ಮತ್ತು ಕೆ.ಎಸ್.ಎಲ್.ಸ್ವಾಮಿ ಅವರ ನಿರ್ದೇಶನದ “ಹರಕೆಯಕುರಿ’ ಪ್ರಮುಖ ಚಿತ್ರಗಳು ಎನ್ನಬಹುದು. ಇವುಗಳಲ್ಲಿ ಈ ಬಾರಿ ನಿಮ್ಮೊಂದಿಗೆ “ಅತಿಥಿ’ ಕುರಿತ ಕೆಲವು ಮಾತುಗಳನ್ನು ಹಂಚಿಕೊಳ್ಳುತ್ತೇನೆ.

Continue reading ‘“ಅತಿಥಿ’ಯಾಗಿ ಬಂದ ಆತಂಕ’

“ಬೇರು’ಬಿಟ್ಟ ಭ್ರಷ್ಟರು….

ಬೆಳಕಿನೊಳಗಣ ಬೆಳಗು – ೧೪

ಈ ಬೃಹತ್ ದೇಶದ ಬೃಹತ್ ಸಮಸ್ಯೆ ಎಂದರೆ ಭ್ರಷ್ಟತೆ. ಇದಕ್ಕಾಗಿ ನಮ್ಮ ಮಾಧ್ಯಮಗಳು ಮಾಡುತ್ತಿರುವ ಕೆಲಸಗಳು ಅನೇಕ. ಮಾಧ್ಯಮಗಳ ಪ್ರಯತ್ನದಿಂದಲೇ ಕರ್ನಾಟಕದಲ್ಲಿ ಲೋಕಾಯುಕ್ತ ಎಂಬುದೊಂದು ವಿಭಾಗವೇ ಆಯಿತು. ಈಗ ಅಲ್ಲಿಗೆ ಹೊಸ ಆಯುಕ್ತರು ಸಹ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಸಿನಿಮಾ ಮಾಧ್ಯಮವು ಭ್ರಷ್ಟತೆಯನ್ನು ಕುರಿತು ಹೇಳುವ ಪ್ರಯತ್ನಗಳೇನ್ನೇನು ಮಾಡಿದೆ ಮತ್ತು ಅದು ಎಷ್ಟು ಸಾಧುವಾದದ್ದು ಎಂದು ನೋಡೋಣ.

Continue reading ‘“ಬೇರು’ಬಿಟ್ಟ ಭ್ರಷ್ಟರು….’

“ಅನ್ವೇಷಣೆ’ಯ ಹಾದಿಯಲ್ಲಿ….

ಬೆಳಕಿನೊಳಗಣ ಬೆಳಗು – ೧೩

ನಮ್ಮ ಕನ್ನಡ ಚಿತ್ರರಂಗ ಎಂಬ ಮಹಾಸಾಗರದಲ್ಲಿ ಪ್ರತಿನಿತ್ಯವು ಒಂದು ಹೊಸ ಪ್ರಯೋಗ ಆಗುತ್ತಲೇ ಇದೆ. ಈ ಪ್ರಯೋಗಗಳು ಮೊದಲು ಹೊಸಅಲೆ ಅಥವಾ ಪ್ರಶಸ್ತಿ ಸಿನಿಮಾ ಎಂಬ ಹಣೆಪಟ್ಟಿಯ ಚಿತ್ರಗಳಲ್ಲಿಯೇ ಆಗುವುದು. ನಂತರ ಅದೇ ಪ್ರಯೋಗಗಳು ಪ್ರಧಾನವಾಹಿನಿಯ/ಜನಪ್ರಿಯ ಚಿತ್ರಗಳಲ್ಲಿ ಆಗುವುದನ್ನು ನಾವು ಕಾಣುತ್ತಲೇ ಬಂದಿದ್ದೇವೆ. ಒಂದೊಮ್ಮೆ ಕೃತಕ, ಅವಾಸ್ತವ, ಅಸಹಜ ವಿವರಗಳೊಡನೆ ಚಿತ್ರಿತವಾಗುತ್ತಿದ್ದ ಜನಪ್ರಿಯ ಸಿನಿಮಾಗಳಲ್ಲಿ ೮೦ರ ದಶಕದಿಂದಾಚೆಗೆ ವಾಸ್ತವ ಮತ್ತು ಸಹಜ ನಿರೂಪಣೆಯು ಬರಲು ಕಾರಣವಾದದ್ದೇ “ಹೊಸಅಲೆ’ಯ ಚಿತ್ರಗಳು ಪರಿಚಯಿಸಿದ ನಿರೂಪಣಾ ವಿಧಾನದಿಂದ. ಈ ನಿಟ್ಟಿನಲ್ಲಿ ಪ್ರಧಾನವಾಹಿನಿಯ ಜನರು “ಹೊಸಅಲೆ’ಯನ್ನು “ಜನರಿಂದ ದೂರಾಗುವ ಚಿತ್ರ ತಯಾರಿಸುತ್ತಾರೆ’ ಎಂದು ಹೀಗಳೆಯುವ ಬದಲು, “ಒಂದು ಉದ್ಯಮದ ಉಳಿವಿಗೆ ಮತ್ತೊಂದು ಪ್ರಯೋಗಶಾಲೆ’ ಎಂಬರ್ಥದಲ್ಲಿ ಸ್ವೀಕರಿಸಿ ಪೋಷಿಸಬೇಕು. ಅದು ಸಧ್ಯದ ಸ್ಥಿತಿಯಲ್ಲಿ ಆಗುತ್ತಿಲ್ಲ. ಆದರೂ ಪ್ರಯೋಗಪ್ರಿಯರು ತಮ್ಮ ಚಟುವಟಿಕೆಯನ್ನು ಬಿಟ್ಟುಕೊಟ್ಟಿಲ್ಲ. ಈ ನಿಟ್ಟಿನಲ್ಲಿ ಎಂಬತ್ತರ ದಶಕದ ಆರಂಭದ ದಿನಗಳಲ್ಲಿ ತಯಾರಾದ ನಾಗಾಭರಣ ನಿರ್ದೇಶನದ ‘ಅನ್ವೇಷಣೆ’ ಒಂದು ಅಪರೂಪದ ಪ್ರಯೋಗ. ಈ ಲೇಖನದಲ್ಲಿ ಆ ಚಿತ್ರದಲ್ಲಿ ಆದ ಪ್ರಯೋಗ ಕುರಿತಂತೆ ಒಂದಷ್ಟು ಅಭಿಪ್ರಾಯ ಹಂಚಿಕೊಳ್ಳೋಣ.

Continue reading ‘“ಅನ್ವೇಷಣೆ’ಯ ಹಾದಿಯಲ್ಲಿ….’

ಕನ್ನಡದ ಹೊಸಅಲೆಗೆ ‘ನಾಂದಿ’ ಹಾಡಿದವರು….

ಬೆಳಕಿನೊಳಗಣ ಬೆಳಗು – ೧೨

ಕನ್ನಡ ಚಲನಚಿತ್ರವನ್ನು ಕುರಿತು ಮಾತಾಡುವವರೆಲ್ಲರೂ ಸಾಮಾನ್ಯವಾಗಿ ಪಟ್ಟಾಭಿರಾಮರೆಡ್ಡಿಯವರ ‘ಸಂಸ್ಕಾರ’ ಚಿತ್ರದಿಂದ ಕನ್ನಡದಲ್ಲಿ ಹೊಸಅಲೆ ಹುಟ್ಟಿತು ಎಂದು ಹೇಳುವುದು ರೂಢಿಯಾಗಿ ಹೋಗಿದೆ. ಇದು ಸತ್ಯವಲ್ಲ. ‘ಸಂಸ್ಕಾರ’ ಚಿತ್ರ ಬರುವುದಕ್ಕೆ ಮುಂಚಿನಿಂದಲೇ ಕನ್ನಡದಲ್ಲಿ ಹೊಸಅಲೆಯೆಂದು ಗುರುತಿಸಲ್ಪಡುವಂತಹ ಅನೇಕ ಸಿನಿಮಾಗಳು ತಯಾರಾಗಿದ್ದವು. ಎನ್.ಲಕ್ಷ್ಮೀನಾರಾಯಣ್, ಎಂ.ಆರ್.ವಿಠಲ್, ಪುಟ್ಟಣ್ಣ ಕಣಗಾಲ್ ಮತ್ತು ಕೆ.ಎಸ್.ಎಲ್.ಸ್ವಾಮಿಯವರು ಇಂತಹ ಚಿತ್ರಗಳನ್ನು ತಯಾರಿಸಿದ್ದರು. ಇಲ್ಲಿ ‘ಇಂತಹ’ ಎಂದು ಹೇಳುವಾಗ ಅದು ಏನದು ಎಂಬ ಪ್ರಶ್ನೆ ಹುಟ್ಟಬಹುದು. ಅದಕ್ಕಾಗಿ ಕೆಲವು ವಿವರಗಳನ್ನು ನೀಡಿಬಿಡುತ್ತೇನೆ. ನಮ್ಮ ಚಿತ್ರರಂಗವು ಮಾರುಕಟ್ಟೆಯನ್ನು ಉದ್ದೇಶಿಸಿ ಸಿನಿಮಾ ಕಥೆಗಳನ್ನು ಹೆಣೆಯಲಾರಂಭಿಸಿದ್ದು ಬಹಳ ಹಿಂದೆ. ಆದರೆ ಹೀಗೆ ತಯಾರಾಗುತ್ತಿದ್ದ ಕನ್ನಡ ಚಿತ್ರಗಳು ಅಮೇರಿಕನ್ ಮೆಲೋಡ್ರಾಮ ಎಂದು ಕರೆಯಲ್ಪಡುವ ಒಂದು ಶೈಲಿಯ ಚಿತ್ರಗಳನ್ನು ಅನುಕರಿಸುತ್ತಿದ್ದವು. ಆ ಶೈಲಿಯ ಚಿತ್ರಗಳು ಆಯಾ ದೇಶಗಳಲ್ಲಿ ಜನಪ್ರಿಯವಾಗಿದ್ದವು ಎಂಬುದು ಇದಕ್ಕೆ ಒಂದು ಕಾರಣವಾದರೆ, ನಮ್ಮ ಕನ್ನಡ ಚಿತ್ರದ ಆರಂಭಿಕ ದಿನಗಳಲ್ಲಿ ಇಲ್ಲಿ ದುಡಿಯುತ್ತಿದ್ದ ಎಲ್ಲಾ ತಂತ್ರಜ್ಞರೂ ಪರಭಾಷಿಕರಾಗಿದ್ದರು ಎಂಬುದು ಮತ್ತೊಂದು ಕಾರಣವಾಗಿತ್ತು. ಹೀಗಾಗಿ ಕನ್ನಡ ಸಿನಿಮಾಗಳಲ್ಲಿ ವಿಚಿತ್ರವಾದ ಅಸಹಜತೆ ಮತ್ತು ಅವಾಸ್ತವಿಕತೆ ಕಾಣಿಸುತ್ತಿತ್ತು. ಸಾಮಾನ್ಯ ಚಿತ್ರ ನೋಡುಗನಿಗೆ ತೆರೆಯ ಮೇಲೆ ಚಲಿಸುವ ಮತ್ತು ಮಾತಾಡುವ ದೃಶ್ಯಗಳೇ ಪವಾಡವಾಗಿದ್ದ ಕಾಲ ಅದಾಗಿತ್ತು. ಹೀಗಾಗಿ ಅಸಹಜತೆ, ಅವಾಸ್ತವತೆ ಮತ್ತು ಕೃತ್ರಿಮ ಎನಿಸುವ ಆವರಣ ಪ್ರೇಕ್ಷಕನ ಗಮನಕ್ಕೆ ಬಂದೇ ಇರಲಿಲ್ಲ. ಇಂತಹ ಕಾಲಘಟ್ಟದಲ್ಲಿ ಯೂರೋಪ್ ದೇಶದಲ್ಲಿ ನವವಾಸ್ತವವಾದದ ಚಳವಳಿಯಿಂದ ಪ್ರೇರಿತವಾದ ಅನೇಕ ಚಿತ್ರಗಳು ತಯಾರಾದವು. ಇವು ಯಾವುದೇ ಕಥೆಯನ್ನ ಸಹಜ, ವಾಸ್ತವದ ಸ್ಥಿತಿಯಲ್ಲಿ ನೋಡುವ ಪ್ರಯತ್ನಗಳಾಗಿದ್ದವು. ವಿಟ್ಟೋರಿಯಾ ಡಿ’ಸಿಕಾ ತಯಾರಿಸಿದ ‘ಬೈಸಿಕಲ್ ಥೀವ್ಸ್’ನಂತಹ ಚಿತ್ರಗಳು ಆ ಹಿನ್ನೆಲೆಯಲ್ಲಿ ತಯಾರಾಗಿದ್ದವು. ಈ ಚಿತ್ರದ ಪ್ರಭಾವ ಜಗತ್ತಿನಾದ್ಯಂತ ಆದಂತೆ ಭಾರತದಲ್ಲಿಯೂ ಆಯಿತು. ಸತ್ಯಜಿತ್ ರಾಯ್ ಅವರ ಪ್ರಥಮ ಚಿತ್ರ ‘ಪಾಥೇರ್ ಪಾಂಚಾಲಿ’ ಆ ಪ್ರಭಾವದಲ್ಲಿಯೇ ತಯಾರಾಯಿತು. ಇದೇ ಹಾದಿಯಲ್ಲಿ ಕನ್ನಡದಲ್ಲಿಯೂ ಚಿತ್ರಗಳು ತಯಾರಾಗಲು ಪ್ರಯತ್ನಗಳಾದವು. ಎನ್.ಲಕ್ಷ್ಮೀನಾರಾಯಣ್ ಅವರು ‘ನಾಂದಿ’ ಚಿತ್ರದ ಮೂಲಕ ಕನ್ನಡದಲ್ಲಿ ನವವಾಸ್ತವವಾದದ ಪ್ರಥಮ ಚಿತ್ರ ತಯಾರಿಸಿದರು. ನಂತರ ವಿಠಲ್ ಅವರ ‘ಮಿಸ್ ಲೀಲಾವತಿ’, ಕೆ.ಎಸ್.ಎಲ್.ಸ್ವಾಮಿ ಅವರ ‘ತೂಗುದೀಪ’, ಪುಟ್ಟಣ್ಣ ಅವರ ‘ಬೆಳ್ಳಿಮೋಡ’ ಚಿತ್ರಗಳು ಬಂದವು. ಇವೆಲ್ಲವನ್ನೂ ಕನ್ನಡದ ಪ್ರೇಕ್ಷಕ ತುಂಬುಹೃದಯದಿಂದಲೇ ಸ್ವಾಗತಿಸಿದ ಹಾಗೂ ಬೆನ್ನುತಟ್ಟಿದ. ಈ ಪ್ರಯತ್ನಗಳೆಲ್ಲವೂ ಆದ ನಂತರ ಸುಮಾರು ೧೯೭೦ರ ಆಸುಪಾಸಿನಲ್ಲಿ ಬಂದದ್ದು ‘ಸಂಸ್ಕಾರ’. ಆದರೂ ಅದೇಕೋ ನಮ್ಮ ಚಲನಚಿತ್ರ ವಿಮರ್ಶಕರು ಹಾಗೂ ಇತಿಹಾಸಕಾರರು ‘ಸಂಸ್ಕಾರ’ಕ್ಕೆ ನೀಡಿದ ಮನ್ನಣೆಯನ್ನು ಅದಕ್ಕಿಂತ ಮೊದಲು ಬಂದ ಚಿತ್ರಗಳಿಗೆ ನೀಡಲಿಲ್ಲ. ಅದೇನೇ ಇರಲಿ, ನಾವು ಹಾಗೆ ಮಾಡದೆ ವಾಸ್ತವವನ್ನು ಗಮನಿಸಿ, ಒಳ್ಳೆಯ ಚಿತ್ರಗಳನ್ನು ಕುರಿತ ನಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳೋಣ.

Continue reading ‘ಕನ್ನಡದ ಹೊಸಅಲೆಗೆ ‘ನಾಂದಿ’ ಹಾಡಿದವರು….’

Next Page »