(ಬಿ.ವಿ.ಕಾರಂತರನ್ನು ಕುರಿತಂತೆ ಕೆಲವು ಮಾತು - ಕಾರಂತರಿಗೆ ಎಂಬತ್ತು ಎಂಬ ಹೆಸರಿನಲ್ಲಿ ಈಚೆಗೆ ಬೆಂಗಳೂರಿನಲ್ಲಿ ನಡೆದ ಉತ್ಸವದಲ್ಲಿ ಸೆಪ್ಟಂಬರ್ ೨೦ರಂದು ಆಡಿದ ಮಾತಿನ ಲೇಖನ ರೂಪ)
ನನಗೆ ಇಂದು ಉಪನ್ಯಾಸ ನೀಡು ಎಂದಿದ್ದಾರೆ. ನಾನು ಉಪನ್ಯಾಸಕ ಅಲ್ಲ. ಇನ್ನು ಭಾಷಣ ಮಾಡುವ ಕಲೆ ನನಗೆ ಸಿದ್ಧಿಸಿಲ್ಲ. ಹಾಗಾಗಿ ನಾನು ಮಾತಾಡುವುದೇ ಸೂಕ್ತ ಅಂದುಕೊಂಡಿದ್ದೇನೆ. ಮಾತು ಜಂಗಮ. ಅದಕ್ಕೆ ಲಂಘನದ ಸಾಧ್ಯತೆ ಹೆಚ್ಚು. ಹಾಗಾಗಿ ನಾನು ಮಾತನ್ನೇ ಆಡುತ್ತೇನೆ. ಈ ಮಾತುಗಳಲ್ಲಿ ಒಂದು ಕ್ರಮ ಇಲ್ಲ. ಇದು ನೆನಪಿನ ಹಾದಿ. ಇದಕ್ಕೆ ಹಿಡಿದದ್ದೇ ದಾರಿ. ಆದ್ದರಿಂದ ಇಲ್ಲಿ ಬರೆದಿರುವುದು ಚರಿತ್ರೆಯೂ ಅಲ್ಲ. ಇದು ನನ್ನ ಅನುಭವ ಮಾತ್ರ. ನನ್ನ ಅನುಭವ ನಿಮ್ಮದೂ ಆಗಬೇಕೆಂಬ ಒತ್ತಾಯವೂ ಇಲ್ಲ. ನನ್ನ ಅಭಿಪ್ರಾಯ ನಿಮ್ಮದಾಗಬೇಕೆಂಬ ಹೇರಿಕೆಯೂ ಇಲ್ಲ. ಇನ್ನು ಮಾತಿಗಿಳಿಯುತ್ತೇನೆ. ಈ ಮಾತಿಗೆ ಬಿ.ವಿ.ಕಾರಂತ್ – ಮೈ ಇಂಪ್ರೆಶನ್ಸ್ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ ಸಂಘಟಕರು. ಇದು ಮತ್ತೊಂದು ಕಷ್ಟದ ಕೆಲಸ. ನನ್ನ ಅನಿಸಿಕೆಗಳು ಅನ್ನುವುದು ನಾನು ಗ್ರಹಿಸಿದ ವಿವರಗಳಿಂದ ದಾಖಲಾಗುವಂತಹದು. ಅದು ಎಂದಿಗೂ ಪರಿಪೂರ್ಣವಲ್ಲ. ಇನ್ನು ದಾಖಲೆಗಳ ಸಮೇತ, ಅಂಕಿ-ಸಂಖ್ಯೆಗಳ ಸಹಿತ ಯಾರಾದರೂ ಬಿಟ್ಟುಹೋದ ಗುರುತುಗಳನ್ನ ಹುಡುಕುವುದು ಎಂದರೆ ಅದೊಂದು ತಜ್ಞರ ಕೆಲಸ. ಆ ಕೆಲಸ ಮಾಡಲು ನಾನು ತಜ್ಞನಲ್ಲ.
ಇನ್ನು ‘ಮೈ ಇಂಪ್ರೆಷನ್ಸ್’ ಎಂಬಲ್ಲಿ ‘ಮೈ’ ಎಂಬುದು ಕನ್ನಡವೋ-ಇಂಗ್ಲಿಷೋ ಎಂಬ ಪ್ರಶ್ನೆಯೂ ಇದೆ. ಈ ಕುರಿತು ಸಂಘಟಕರಾದ ಶ್ರೀನಿವಾಸ್ ಜಿ.ಕಪ್ಪಣ್ಣ ಅವರೊಂದಿಗೆ ಮಾತಾಡಿದಾಗ ಅವರು ಜೋಕ್ ಮಾಡಿಬಿಟ್ಟರು. ನಾನು ನಿಮ್ಮೆದುರಿಗೆ ಜೋಕ್ ಮಾಡಲಾರೆ. ಹೀಗಾಗಿ ನನ್ನ ಮಾತುಗಳ ಮೂಲಕ ಕಾರಂತರನ್ನು ಹುಡುಕುವ ಪ್ರಯತ್ನ ಮಾಡುತ್ತಾ ಇದ್ದೇನೆ. ಅಷ್ಟ. ಇನ್ನು ಕಾರಂತರ ಲೋಕಕ್ಕೇ ಹೋಗೋಣ.
(ಹಬೀಬ್ ತನ್ವೀರ್ ಭಾರತೀಯ ರಂಗಭೂಮಿಯ ಶ್ರೇಷ್ಟ ನಿರ್ದೇಶಕರು. ಈಚೆಗೆ ಅವರು ನಿಧನರಾದರು. ಸೆಪ್ಟಂಬರ್ ೧, ೧೯೨೩ರಲ್ಲಿ ರಾಯಪುರದಲ್ಲಿ ಜನಿಸಿದ ಕಾಲದಿಂದ ೨೦೦೯ರ ಜೂನ್ ೮ರ ವರೆಗೆ ಹಬೀಬ್ ಅವರ ಸೃಜನಶೀಲ ಚಟುವಟಿಕೆಯ ಮೌಲ್ಯಮಾಪನ ಅವಶ್ಯ ಎನಿಸಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.)
ಇತ್ತೀಚಿನ ಪ್ರತಿಕ್ರಿಯೆಗಳು…